Advertisement

ಹೊಸ ಹಾದಿ ಹಿಡಿದ ಬರವಣಿಗೆ…: ಎಚ್. ಗೋಪಾಲಕೃಷ್ಣ  ಸರಣಿ

ಗೆಳೆಯರ ಪರಿಚಯದ ಮೊದಲನೇ ಭೇಟಿಯಲ್ಲೇ ಅವರು ಒಬ್ಬ ಬರಹಗಾರರು ಎಂದು ತಿಳಿಯಿತು. ಆಗಲೇ ಸುಮಾರು ಕತೆಗಳು ಮತ್ತು ಹಾಸ್ಯ ಲೇಖನ ಬರೆದಿದ್ದರು. ಸುದ್ದಿ ಹಾಗೇ ನನ್ನ ಬರವಣಿಗೆಯತ್ತ ತಿರುಗಿತು. ಒಂದೋ ಎರಡೋ ಕತೆ ಬರೆದಿರುವ ಸಂಗತಿಯನ್ನು ಕೊಂಚ ನಾಚಿಕೆಯಿಂದ ಹೇಳಿಕೊಂಡೆ. ಬರಹಗಾರರಿಗೆ ಮುಖೇಡಿತನ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಅನುಭವವಾಗಿತ್ತು. ಮತ್ತು ನನಗಂತೂ ಈಗಲೂ ಅದು ಮೆದುಳಿನ ಮೇಲಿನ ಸ್ತರದಲ್ಲಿ ಅಂಟಿಕೊಂಡು ಬಿಟ್ಟಿದೆ! ಮಾತಿನ ಮಧ್ಯೆ ಅವರು ಮಿಡಲ್ ವಿಷಯ ತೆಗೆದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೩ನೇ ಬರಹ ನಿಮ್ಮ ಓದಿಗೆ

Loading

ಅಂಕಣ

Latest

ಗುರು ಮತ್ತು ಹಕ್ಕಿಗೂಡು: ಸುಕನ್ಯಾ ಕನಾರಳ್ಳಿ ಅಂಕಣ

ಗಾಂಧೀಜಿ ಒಮ್ಮೆ ಯರವಾಡ ಜೈಲಿನಲ್ಲಿದ್ದಾಗ ಒಂದು ರಾತ್ರಿ ಬರಿಯ ದುಃಸ್ವಪ್ನಗಳೇ ಬಿದ್ದು ಬೆಚ್ಚಿದ್ದಾಗ ವಿಚಾರಿಸಿದರಂತೆ. ಹಿಂದಿನ ರಾತ್ರಿಯ ಅಡಿಗೆಯನ್ನು ಒಬ್ಬ ಕೊಲೆಗಡುಕ ಅಪರಾಧಿ ಮಾಡಿದ್ದಾನೆಂದು ತಿಳಿದು ಅಂದಿನಿಂದ ರಾತ್ರಿಯ ಊಟವನ್ನೇ ಬಿಟ್ಟರಂತೆ. ನಮ್ಮ ಸೂಕ್ಷ್ಮ ಶರೀರದ ಚೈತನ್ಯ ಇನ್ನೊಬ್ಬರಿಗೂ ಅನುಭವಕ್ಕೆ ಬರುತ್ತದೆ ಎಂದು ಅರಿವಾಗುವುದು ಬ್ರಹ್ಮವಿದ್ಯೆಯೇನೂ ಅಲ್ಲ. ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

ಸಾಹಿತ್ಯ

ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ರಾಚನಿಕತೆಯ ಪ್ರಶ್ನೆ: ಎನ್.ಎಸ್.ಶ್ರೀಧರ ಮೂರ್ತಿ ಬರಹ

ಭೈರಪ್ಪನವರ ಎರಡನೆಯ ಸಾಧ್ಯತೆಯ ಕಾದಂಬರಿಗಳಲ್ಲಿ ವೈಚಾರಿಕತೆ ಬಹುಮುಖಿಯಾಗಿದೆ. ಅದರ ಕೇಂದ್ರವನ್ನು ಕೃತಿಯ ಸಂರಚನೆ ಹಿಡಿದಿಡುತ್ತದೆ. ಇಲ್ಲಿನ ಓದು ಕೂಡ ಬಹುಮುಖಿಯಾಗ ಬೇಕಾಗಿದ್ದು. ‘ತಂತುʼ ಕಾದಂಬರಿಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಇದು ತುರ್ತು ಪರಿಸ್ಥಿತಿಯ ರಾಜಕೀಯ ಕಥನ ಎನ್ನುವುದು ನಿಜ. ಅದರ ಜೊತೆಗೆ ಕೌಟಂಬಿಕ ಪ್ರಶ್ನೆಗಳಿವೆ. ತಾಯಿ-ಮಗನ ಸಂಬಂಧದ ಪರಿಶೀಲನೆ ಇದೆ. ದಾಂಪತ್ಯದಾಚೆಗೆ ಸೆಳೆಯುವ ಸಂಬಂಧವಿದೆ. ಸಂಗೀತದ ನೆಲೆ ಕೂಡ ಇದೆ. ಇದನ್ನು ಗಹನತೆಯ ಜೊತೆಗೆ ಅಲ್ಲಲ್ಲಿ ಕಾಣುವ ಜನಪ್ರಿಯ ವಿವರಗಳ ಜೊತೆಗೇ ಗ್ರಹಿಸಿಕೊಳ್ಳಬೇಕು. ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಕುರಿತು ಎನ್.ಎಸ್.‌ ಶ್ರೀಧರಮೂರ್ತಿ ಬರಹ

ಸರಣಿ

ಸುಂದರ ಕಾಡಿನ ರೋ‌ಚಕ ಕಥೆಗಳು-೨: ರೂಪಾ ರವೀಂದ್ರ ಜೋಷಿ ಸರಣಿ

ಶಾಲೆಗೆ ಹೋಗುವಾಗ, ಹಲವೆಡೆ ನಾವು ಇಂಥ ನಯನ ಮನೋಹರ "ಹೂ ರಥ" ನೋಡುತ್ತ ಹೋಗುತ್ತಿದ್ದೆವು. ಈಗಲೂ ಆ ಸುಂದರ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಹಾಗೇ ಇನ್ನೊಂದು ಚಂದದ ಹೂ ಅಂದರೆ, ಚದುರಂಗಿ. ಇದು ತೀರಾ ಪುಟಾಣಿ ಹೂಗಳ ಗೊಂಚಲು. ನಕ್ಷತ್ರದ ಆಕಾರದ ಗಾಢ ಕೇಸರಿ, ಕೆಂಪು ಹೂಗಳ ಚದುರಂಗಿ ಪೊದೆಯಾಗಿ ಬೆಳೆಯುವ ಸಸ್ಯ. ಇದರ ಸಪೂರ ಕಾಂಡಕ್ಕೆ ಸೂಕ್ಷ್ಮ ಮುಳ್ಳುಗಳಿರುತ್ತವೆ. ಇದರ ಹೂ ನೋಡಲು ಬಹಳ ಚಂದ. ರೂಪಾ ರವೀಂದ್ರ ಜೋಶಿ ಬರೆಯುವ "ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ" ಸರಣಿಯ ಹನ್ನೊಂದನೆಯ ಕಂತು

ಪ್ರವಾಸ

ಅಂಡಮಾನ್ ಪ್ರವೇಶ ಬಿಂದು ಪೋರ್ಟ್ ಬ್ಲೇರ್ ದ್ವೀಪದಲ್ಲಿ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಸಣ್ಣಗೆ ಕುಲುಕಾಡುತ್ತಿರುವ ಸಮುದ್ರ ಆಕಾಶದ ಕೆಳಗೆ ಇನ್ನೊಂದು ಅಂಚಿನಲ್ಲಿ ನಾನು ನಿಂತಿರುವ ಮಟ್ಟಕ್ಕಿಂತ ಎತ್ತರದಲ್ಲಿರುವಂತೆ ತೋರುತ್ತಿತ್ತು. ಕಣ್ಣುಗಳ ತುಂಬಾ ತುಂಬಿಹೋದ ಸಮುದ್ರ ನನ್ನ ದೇಹವನ್ನು ತುಸು ಅಲ್ಲಾಡಿಸಿದಂತಾಗಿ ಸ್ವಲ್ಪ ಪ್ರಜ್ಞೆ ಕಳೆದುಕೊಂಡಂತಾಯಿತು. ಮನುಷ್ಯನ ದೇಹದಲ್ಲಿರುವುದು ಶೇಕಡ 65% ನೀರೆ ತಾನೆ. ಪಕ್ಕದಲ್ಲಿ ನಿಂತಿದ್ದ ಸುಶೀಲ ನನ್ನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದಳು. ಅಂಡಮಾನ್-ನಿಕೋಬಾರ್‌ ದ್ವೀಪಗಳ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

ವ್ಯಕ್ತಿ ವಿಶೇಷ

ಅಜ್ಜನೂ, ಗಿಳಿಯೂ ಇಬ್ಬರೂ ವಾಪಸ್ಸು ಬರಲಿಲ್ಲ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂತೂ ಕಡಿದಾದ ಮಾರ್ಗದಲ್ಲಿ ಸಾಗಿ, ಜಾತ್ರೆಯಲ್ಲಿ ಸುತ್ತಾಡಿದೆವು. ತೇರಿನ್ನೂ ಎಳೆದಿರಲಿಲ್ಲ, ಕಾಯುವಷ್ಟು ವ್ಯವಧಾನವಿಲ್ಲದೆ ಸುಸ್ತಾಗುತ್ತಿದೆಯೆಂದು ಮತ್ತೆ ಅವರನ್ನು ಕರೆತಂದೆ. ಅರವತ್ತರ ವಯಸ್ಸಿನ ಡಾಕ್ಟರಜ್ಜನನ್ನು ಈ ರೀತಿಯಾಗಿ ನಡೆಸಿಕೊಂಡಿದ್ದಕ್ಕೆ ಮನೆ ಜನರಿಗೆಲ್ಲ ಸಿಟ್ಟು. ಅಷ್ಟು ದೂರದವರೆಗೆ ನಡೆಸಿ, ರಥೋತ್ಸವವನ್ನೂ ತೋರಿಸದೆ ಗಡಿಬಿಡಿಯಲ್ಲಿ ಕರೆದುಕೊಂಡು ಬಂದದ್ದಕ್ಕೆ ಎಲ್ಲರೂ ಬೈಯುವವರೇ. ಅಂದು ಸಮಯವಾಗುತ್ತಿದೆಯೆಂದು ಡಾಕ್ಟರಜ್ಜ ದದೇಗಲ್ಲಿಗೆ ಹೊರಟರು. ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ" ಎರಡನೆಯ ಕಂತು

ಸಂಪಿಗೆ ಸ್ಪೆಷಲ್

ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ…: ತೇಜಸ್ವಿನಿ ಹೆಗಡೆ ಬರಹ

ಮಾತಿನ ನಡುವೆ ವಿಮಲಕ್ಕ ಅಜ್ಜಿಯ ಬಳಿ "ಸರಸು, ಮಕ್ಕನೂ ಅವ್ರಿದ್ದೇ ಪ್ರಪಂಚದಲ್ಲಿ ಮುಳ್ಗಿದ್ದೋ. ಯಾರಿಗೂ ನಾನು ಬೇಡಾಗೋಯ್ದೆ ಅನ್ನಿಸ್ತು. ಬೇರೆಯವ್ಕೆ ನಾ ಇಷ್ಟ ಇದ್ನೋ ಇಲ್ಯೋ ಗೊತ್ತಿಲ್ಯೆ. ನಾ ಮೊದ್ಲಿಂದ್ಲೂ ಆ ದೇವ್ರಿಗೆ ಮಾತ್ರ ಪ್ರೀತಿ. ಅವಂಗೆ ನನ್ನ ಮೇಲೆ ರಾಶಿ ಮುತವರ್ಜಿ ಕಾಣ್ತು. ಅದ್ಕೇ ಯನ್ನ ಕಷ್ಟಕ್ಕೆ ಕೊನೆನೇ ಇಲ್ಲೆ ನೋಡು... ಇದೇ ನನ್ನ ಭಾಗ್ಯ ಅಂದ್ಕತ್ತಿ ಬಿಡು... ಎಲ್ಲ ನನ್ನ ಹಣೆಬಹರ, ಕರ್ಮ" ಎಂದು ಕಣ್ಣೀರಾಗಿದ್ದಳು. ನನಗೆ ಆಗ ಅರ್ಥವೇ ಆಗಿರಲಿಲ್ಲ. ತೇಜಸ್ವಿನಿ ಹೆಗಡೆ ಬರಹ ನಿಮ್ಮ ಓದಿಗೆ

ಈ ದಿನದ ಚಿತ್ರ

ರವಿಶಂಕರ ಪಾಟೀಲ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ರವಿಶಂಕರ ಪಾಟೀಲ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದವರಾದ ರವಿಶಂಕರ ಅವರು ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು. ಸಣ್ಣಕತೆ ಪದ್ಯ ಅವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು. “ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ಡಾ.ಲಕ್ಷ್ಮಿಕಾಂತ ಮಿರಜಕರ ಬರೆದ ಗಜಲ್ 

"ಯಾವತ್ತೂ ತಲೆಯೆತ್ತಿ ಆಕಾಶ ನೋಡದವನು ಅಮಾವಾಸ್ಯೆಯಲ್ಲಿ ಚಂದ್ರನ ಹುಡುಕಿದ್ದು ನನ್ನ ತಪ್ಪು ಸುಲಭವಾಗಿ ಗಳಿಸುವ ಭ್ರಮೆಯಲ್ಲಿ ಬದುಕಿದ್ದೆ ಮೀನು ಇರದ ಕೊಳಕ್ಕೆ ಬಲೆ ಬೀಸಿದ್ದು ನನ್ನ ತಪ್ಪು " -ಡಾ.ಲಕ್ಷ್ಮಿಕಾಂತ ಮಿರಜಕರ ಬರೆದ ಗಜಲ್ 

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ

ಕಾಲ ಕೈಕೊಡುತ್ತದೆ ಎಂದು ಸದಾ ಯೋಚಿಸುತ್ತಿದ್ದ ಹರಿಶ್ಚಂದ್ರನಿಗೆ ತನ್ನ ಮಗಳ ಹೆಸರು ‘ಸಮಯ’ವೆಂದು ತಿಳಿದಾಗ ಆಶ್ಚರ್ಯವಾಯಿತು. ಅಮೃತಾ ನೆನಪಾದಳು. ಎಲ್ಲಿದ್ದಾಳೆ? ಸಮಯಳ ಜೊತೆ ಇದ್ದಾಳೆಯೆ? ಸಮಯಳಿಗೆ ಹೇಗೆ ಗೊತ್ತಾಯಿತು ತನ್ನ ವಿಳಾಸ ಫೋನ್ ನಂಬರ್? ಅಮೃತಾ ಹೇಳಿರಬಹುದೆ? ತನ್ನಿಂದ ವಂಚಿತಳಾದವಳು. ಅವಳು ಹೇಳಿರುವುದು ಅಸಾಧ್ಯ ಎಂಬುದು ಖಾತ್ರಿ. ಒಂದುಕ್ಷಣ ಹರಿಶ್ಚಂದ್ರನ ಮುಖ ಕಪ್ಪಿಟ್ಟಿತು. ಮುಸ್ಸಂಜೆಯ ಕೆಂಪು ಬೆಳಕು ಕಿಟಕಿ ಪ್ರವೇಶಿಸಿತು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ “ಟಿಕ್ ಟಿಕ್ ಟಿಕ್ ಟಿಕ್ ಕೈಕೊಟ್ಟ ಗಡಿಯಾರ”

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ