ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ನಾವು ಗೋಡೆಯ ಇಟ್ಟಿಗೆನಮ್ಮನಿಡಿ ನಿಮ್ಮೊಟ್ಟಿಗೆ... ಎಂದೋ ಏನೋ, ಪದ್ಯವೆಂದು ಸುರು ಹಚ್ಚಿದ ಈ ಸಾಲುಗಳು ನನ್ನ ಹಳೆಯ ನೋಟ್ಬುಕ್ನಲ್ಲಿ ಈಚೆಗೆ ಸಿಕ್ಕಿದವು. ಯಾವಾಗ ಬರೆದೆನೋ ನೆನಪಿಲ್ಲ. ಏಕೆ ಮುಂದುವರೆಸಲಿಲ್ಲವೆಂಬುದೂ ಗೊತ್ತಿಲ್ಲ. ಆದರೆ ಹುಟ್ಟಿದಾಗಿನಿಂದ ಈವರೆಗೆ ನೋಡಿ ಗೊತ್ತಿರುವ- ಒಂಭತ್ತಿಂಚು ಉದ್ದ, ನಾಕೂವರೆಯಿಂಚು ಅಗಲ, ಮೂರಿಂಚು ಎತ್ತರದ ಈ ಕೆಂಗಪ್ಪು ಘನವನ್ನು ಸಮಕಾಲೀನ ನಾಗರಿಕತೆ ಈ ಮುಂದೆ ಮರೆತುಬಿಡಬಹುದೇನೋ ಎನ್ನುವ ಸಣ್ಣ ಕಳವಳ ನನ್ನನ್ನು ಈಗೀಗ ಕಾಡುತ್ತಿದೆ. ಕಡೆಗೋಲು, ರುಬ್ಬುಗಲ್ಲು, ಮಣ್ಣೊಲೆಗಳಿಗೆ ಈಗಾಗಲೇ ಗತಿ ಕಾಣಿಸಿರುವ ನಾವು ಈ ಸುಟ್ಟ ಮಣ್ಣಂಗಟ್ಟಿಗೂ ಮೋಕ್ಷ ಕಾಣಿಸಲಿಕ್ಕಿರುವುದು ಬಹುದೂರದ ಮಾತೇನಲ್ಲ. ನಮ್ಮ ಕಾಲದ ಎಲ್ಲ ಕುಟಿಲ ಕುಮ್ಮಕ್ಕುಗಳಿಗೆ ಅನಿವಾರ್ಯ ಶರಣು ಎನ್ನುತ್ತ ಈ ಕುರಿತು ಕೆಲವು ಮಾತು. ತನ್ನೊಳಗೆ ಸುರುವಿಕೊಳ್ಳುತ್ತಿರುವ ಕಾಂಕ್ರೀಟುದ್ರವ್ಯದಿಂದಲಷ್ಟೇ ದಿನೇದಿನೇ ಘನವೆನಿಸಿಕೊಳ್ಳುತ್ತಿರುವ ಊರು ಈಚೆಗೆ ಇಟ್ಟಿಗೆಯನ್ನೇ ಮರೆತಂತಿದೆ. ಕೆರೆಗಳನ್ನು ಸ್ವಾಹಾಗೈದು ಬೆಳೆಯುತ್ತಿರುವ ಈ `ನಾಗರಿಕ'ತೆಗೆ ಮಣ್ಣಿನ ನೇರ ಹಂಗೀಗ ಕಡಿದುಹೋದಂತಿದೆ. ಇಲ್ಲಿನ ಕೆರೆದಂಡೆಗಳ ಜಿಗುಟು ಮೆಕ್ಕಲು ಎಲ್ಲಿದೆ? ಸುಡುವ ಇಟ್ಟಿಗೆಗೂಡುಗಳು ಎಲ್ಲಿವೆ? ಈ ಊರಿನ ಒಟ್ಟು ವಸ್ತುವಿನಲ್ಲಿ ಬೆಂದ ಮಣ್ಣಿನ ಕೆಂಪು ಮೆಲ್ಲಗೆ ಕಂದುಕೊಂಡಿದೆ. ಸಿಮೆಂಟಿನ ಬರಡು ಬೂದಿಗೆಡೆಗೊಟ್ಟು ಸುಮ್ಮಗೆ ಸೊರಗಿದೆ.    ಇಟ್ಟಿಗೆಯ ಒಟ್ಟು ರಾಶಿ ನೋಡಿ, ಸುರುವಿದರೆ ರಾಶಿ. ಜೋಡಣೆಯಿಟ್ಟರೆ ಘಟ್ಟದ ಮೇಲೆ ಘಟ್ಟ. ಒಂದು...

 ವಿ.ಕೆ.ಮೂರ್ತಿ ಚರಿತೆ: ಮೈಸೂರು ಹುಡುಗ ಮುಂಬೈಗೆ ಹೋದ

ಅದು ಮೂರ್ತಿ ಮಿಡ್ಲ್ ಸ್ಕೂಲಿನಲ್ಲಿದ್ದ ಕಾಲ. ಮೊದಲಿಂದ ಸಂಗೀತವೆಂದರೆ ದೊಡ್ಡ ಹುಚ್ಚು. ಇವರ ಮುಂದಿನ ಮನೆ ಮಕ್ಕಳು ಸಂಗೀತ ಕಲಿಯುತ್ತಿದ್ದಿದ್ದರಿಂದ, ಅವರ ವಯೋಲಿನ್ ಟೀಚರ್ ಬಂದರೆ ಇವರೂ ಹೋಗಿ ಕೂತುಬಿಡುತ್ತಿದ್ದರು.

`ಐದಾರು ತಿಂಗಳಾದ ಮೇಲೆ ನಂಗೂ ವಯೋಲಿನ್ ಕಲಿತುಕೊಳ್ಳೋಕೆ ಆಸೆ ಅಂತ ಮನೇಲಿ ಕೇಳಿದೆ. ಮೊದಲು ಓದಿನ ಮೇಲೆ ಗಮನ ಇಡು, ಆಮೇಲೆ ಸಂಗೀತ ಅಂದರು. ಗೊತ್ತಲ್ಲಾ ಆಗೆಲ್ಲಾ. ಒಂದು ವರ್ಷದ ನಂತರ, ಆಲ್‌ರೈಟ್ ಕಲಿತುಕೋ ಅಂದರು. ನಮ್ಮ ತಂದೇನೇ ಕರ‍್ಕೊಂಡು ಹೋಗಿ ಒಂದು ವಯೋಲಿನ್ ಕೊಡಿಸಿದರು. ಅದರ ಬೆಲೆ ೩ ರುಪಾಯಿ! ಆಗೆಲ್ಲಾ ಹೆಚ್ಚಾಗಿ ಕಲ್ಕತ್ತಾದಲ್ಲಿ ವಯೋಲಿನ್‌ಗಳನ್ನು ಮಾಡೋರು, ಅದೇ ಮೈಸೂರಲ್ಲಿ ಸಿಕ್ಕುತ್ತಿತ್ತು. ನಾವು ವಯೋಲಿನ್ ಕೊಂಡಿದ್ದು ಹಾರ್ಮೋನಿಯಂ, ತಬಲಾ ಎಲ್ಲಾ ವಾದ್ಯಗಳನ್ನು ರಿಪೇರಿ ಮಾಡುತ್ತಿದ್ದ ಒಂದು ಅಂಗಡಿಯಲ್ಲಿ. ಅದೇನೂ ಅಷ್ಟು ಚೆನ್ನಾಗಿರಲಿಲ್ಲ. ಆದರೆ ಆಗ ನನಗೆ ಅದು ಒಳ್ಳೇದೋ ಅಲ್ವೋ ಅಂತೂ ಗೊತ್ತಾಗ್ತಾ ಇರಲಿಲ್ಲ! ೩ ರುಪಾಯಿ ಅಂದ. ನಮ್ಮ ತಂದೆಗೆ ಕೊಡೋಕೆ ಆಗ್ತಿದ್ದಿದ್ದೂ ಅಷ್ಟೆ. ನಮ್ಮ ಮೇಷ್ಟ್ರು ಶಂಕರಪ್ಪ ಅಂತ. ಅವರು ಸ್ಪೆಷಲ್ಲಾಗಿ ಶಿವರುದ್ರಪ್ಪನವರ ಹತ್ತಿರ ಪಾಠ ಹೇಳಿಸಿಕೊಳ್ಳಲು ಮೈಸೂರಿಗೆ ಬಂದಿದ್ದರು. ಆಗ ಶಿವರುದ್ರಪ್ಪ-ಟಾಪ್ ವಯೋಲಿನ್ ವಾದಕರಲ್ಲಿ...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು

ನಾನು ಶಾಕ್ತಪಂಥದ ಅಧ್ಯಯನಕ್ಕಾಗಿ ಅಸ್ಸಾಮಿಗೆ ಹೋಗಬೇಕಾಗಿ ಬಂದಿತು. ದಾರಿಯಲ್ಲಿ ಸಿಗುವ ಬಂಗಾಳವನ್ನು ನೋಡಲು ಯತ್ನಿಸಿದೆ. ಹಾಗೆ ತಿರುಗುವಾಗ ಬಂಗಾಳದಲ್ಲಿ ನನಗೆ ಎದ್ದುಕಂಡಿದ್ದು ಅಲ್ಲಿನ ಕೊಳಗಳು. ಅವು ಸಹಸ್ರಾರು ಸಂಖ್ಯೆಯಲ್ಲಿವೆ. ಪುಟ್ಟಕೆರೆಗಳಂತಿರುವ ಇವನ್ನು ಬಂಗಾಳಿಯಲ್ಲಿ `ಪುಖೂರ್' ಎನ್ನುತ್ತಾರೆ. ಬಂಗಾಳವನ್ನು ಹೂಗ್ಲಿಯ ನಾಡು, ಕಾಳಿಯ ನಾಡು,...

ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ

ಚಾಯ್, ಚಾಯ್, ಟಿ... ಟಿ..., ಮಸಾಲೆ ವಡೆ, ಮಸಾಲೆ...ಅಂತ ಟ್ರೈನ್ ಬಂಡಿಯ ಸ್ಟೈಲ್ ನಲ್ಲಿ ಕೂಗ್ತಾ ಇದ್ರು. ಆ ಕೂಗು ಒಂದೊಂದು ಸಾರಿ ನಿದ್ದೆ ಬರೆಸುತ್ತಿತ್ತು. ಅಂಥ ಕೂಗು ನೀವು ರೈಲಿನಲ್ಲಿಯೇ ಕೇಳಬೇಕು. ಮತ್ತೆಲ್ಲೂ ಅಲ್ಲ. ಟ್ರೈನಿ ಪಯಣವೇ ಒಂದು ದಿನ್ಯ ಅನುಭೂತಿ. ನಾನು ಎಂದಿಗೂ ಟ್ರೈನಿನ ಕುತೂಹಲಿ. ಅಲ್ಲಿ ನಡೆಯುವ ಪ್ರತಿಯೊಂದು ಘಟನೆಯು ನನಗಿಷ್ಟ. ಒಂದು ಭೋಗಿಯ ಪ್ರಯಾಣಿಕರು...

ಖೇಣಿ ಪುರಾಣ-೪ : ಬೀದರಿಗೆ ಮದುಮಗನಂತೆ ಬಂದರು

ಪತ್ರಿಕೆಗಳಲ್ಲಿ ನೈಸ್ ನ ಅಶೋಕ ಖೇಣಿ ಬೀದರಿನ ರಂಜೋಳದವರು ಎಂಬ ಸುದ್ದಿ ಕೆಲವರಲ್ಲಿ ಸಂಚಲನ ಉಂಟು ಮಾಡಿತು. ಹೀಗೆ ಉಂಟಾದ ಸಂಚಲನ ಕೇವಲ ಚರ್ಚೆಗೆ ಮಾತ್ರ ಸೀಮಿತವಾಗಲಿಲ್ಲ. ಕೆಲವರು ಫೋನ್ ಮಾಡಿ 'ಅಶೋಕ ಖೇಣಿ ಅವರ ನಂಬರ್ ಪ್ಲೀಸ್' ಎಂದು ಕೇಳಲು ಹಿಂದೇಟು ಹಾಕಲಿಲ್ಲ. ಹಾಗೆ ಫೋನಾಯಿಸಿದವರಿಗೆಲ್ಲ ನಂಬರ್ ಕೊಡುವುದು ಸಾಧ್ಯವಿರಲಿಲ್ಲ ಹಾಗೆಯೇ ಸಾಧುವೂ ಅಲ್ಲ ಎಂಬುದು...

 
 ದೆಹಲಿಯ ಚಳಿಗೆಂದು ರೇಣುಕಾ ಬರೆದದ್ದು

ಇಂದು ಬೆಳಿಗ್ಗೆ ನಿದ್ದೆಯಿಂದ ಎಚ್ಚೆತ್ತು ಕಿಟಕಿಯತ್ತ ಕಣ್ಣು ಹಾಯಿಸಿದೆ. ಪರದೆಯ ಹಿಂದೆ ಅರೆಬರೆ ಸೀಳಿನಿಂದ ಕಾಣುವ ಕಿಟಕಿಯ ಗ್ಲಾಸಿನಾಚೆಗೆ ಚೂರೂ ಜೀವವಿಲ್ಲದಂತೆ ಕಾಣುವ ಆಕಾಶ, ಮೊನ್ನೆ ಎರಡು ವಾರಗಳಾಚೆ ಇದ್ದಂಥ ಮಂಜೂ ಇಲ್ಲ, ಕಿಟಕಿಯ ಗ್ಲಾಸಿನ ಮೇಲೆಲ್ಲ ಹನಿದು ಕೆಳಗೆ ತೊಟ್ಟಿಕ್ಕುವ ಇಬ್ಬನಿ ಹನಿಯೂ ಇಲ್ಲ. ಕನ್ನಡಿಯಂತೆ ನಿಚ್ಚಳವಾಗಿರಬೇಕಿದ್ದ ಮುಂಜಾವು ಮಂಕು ಹಿಡಿದಂತಾಗಿದೆ. ದರಿದ್ರ ಮೋಡ ಮುಸುಕಿದೆ. ಮಳೆಯಾದರೆ ಛಳಿ ಕಡಿಮೆಯೆನ್ನುತ್ತಾರೆ ಇಲ್ಲಿ ಜನ. ಕೆಲವರು ಛಳಿಗಾಲ ಮುಗಿದು ಹೋಗುವ ಮೊದಲು ಮತ್ತೊಮ್ಮೆ ಒಂದು ಸೆಳಕು ಛಳಿ ತೊರಿಸಿಯೇ ಹೋಗುವುದು. ಆದರೆ ಇಂಥ ಮಗ್ರ ಹಾಕಿದ ದಿನ ಒಂದು ನಮೂನೆ ಸೋಮಾರಿತನ ಆವರಿಸಿದಂತಾಗಿ ಖುಶಿಯಾಗುವುದಿಲ್ಲ. ಆಫೀಸಿಗೆ ಹೊರಡುವಾಗ ಇವತ್ತು ಛತ್ರಿಯನ್ನು ಮರೆಯದೇ ಬ್ಯಾಗಿಗೆ ಹಾಕಿಕೊಳ್ಳಬೇಕೆಂದುಕೊಳ್ಳುತ್ತಲೇ ಎದ್ದೆ. ನನ್ನ ಕೆಲಸದವಳೇ ನನ್ನ ಹವಾಮಾನ ವರದಿಗಾರ್ತಿ. ಅವಳೇ ಇವತ್ತು ಯಾಪಾಟಿ ಮಂಜು ಕವಿದಿದೆ, ಇಬ್ಬನಿ ಸುರಿದಿದೆ ಎಂದು ಹೇಳುವವಳು ಅವಳೇ. ಛಳಿ ಎಷ್ಟೇ ಇರಲಿ ಗಡಿಯಾರದಂತೆ ತಪ್ಪದೇ ಬೆಳಿಗ್ಗೆ ಐದು ಮುಕ್ಕಾಲಿಗೆ ಬಂದು ಬಿಡುವ ಅವಳ ಲವಲವಿಕೆಯೇ ನನಗೆ ಸ್ಫೂರ್ತಿ.

ಓಹ್... ಎಷ್ಟು ಚೆಂದವಾಗಿತ್ತು ಆ ಬಿಳಿ ಬಿಳಿ ಹೊಗೆಯಂತೆ ಮಂಜು ಮುಸುಕಿದ ಮುಂಜಾವು.... ಚೆಂದದ ಛಳಿಗಾಲ ಮುಗಿದೇ ಹೋಯಿತಾ? ಎನ್ನುವ ಬೇಸರ ಬೇರೆ. ಎನೆಲ್ಲಾ ಅನಾಹುತ, ಆವಾಂತರಗಳನ್ನು ಮಂಜು ಮುಸಿಕಿನ ಬೆಳಗು ಸೃಷ್ಟಿಸಿದರೂ ಅದನ್ನು ನೋಡುವುದೇ ಒಂದು ಚೆಂದ. ಸಂಭ್ರಮ ಈ ಮನಸ್ಸಿಗೆ. ಇದನ್ನು ಕಣ್ಣಿಂದ ನೋಡಿ, ಮನಸ್ಸಿನಿಂದ ಸವಿಯಬೇಕು. ಆವಾಗಲೇ ಮಜಾ. ಛಳಿಗಾಲವೇ ಒಂದು ದರಿದ್ರ, ಒಂದು ಕಿರಿ ಕಿರಿಯೆನಿಸಿಕೊಂಡರೆ ಅದು ನಿಜಕ್ಕೂ ಕಿರಿ ಕಿರಿ ಕೊಡುತ್ತದೆ. ಸವಿದು ನೋಡಿ, ವಾಹ್... ದೆಹಲಿ ಯಾವ ಕಾಶ್ಮೀರ, ಸಿಮ್ಲಾಗೇನೂ ಕಮ್ಮಿ ಇಲ್ಲ ಅನಿಸುತ್ತದೆ. ಆದರೆ ಮಂಜು ಮುಸುಕಬೇಕು, ಸೂರ್ಯನೇ ಕಾಣದ ದಿನಗಳು. ತಣ್ಣನೇ ಆಕಾಶ, ಮುಗಿಲಿನ ಮುಸುಕಿನಲ್ಲಿ...

Font Help
Site Web
ಜನಮತ
ಬಂಗಾಳ ಎಂದರೆ ನನಗೆ ನೆನಪಾಗುವುದು
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige