ಮೇ ೧೭, ೨೦೧೨
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ನಾನು ನನ್ನ ರಾಯಭಾರಿ ಹುದ್ದೆಗೆ ರಾಜಿನಾಮೆ ನೀಡಿದ ಮೇಲೆ ೧೯೪೩ರಲ್ಲಿ ಸ್ಯಾಂಟಿಯಾಗೊಗೆ ಮರಳಿದೆ. ಅಲ್ಲಿ ಕಂತಿನ ಮೇಲೆ ಮನೆಯೊಂದನ್ನು ಕೊಂಡುಕೊಂಡೆ. ಸುತ್ತಲೂ ಬೃಹತ್ ಮರಗಳಿಂದ ಕೂಡಿದ್ದ ಆ ಮನೆಯಲ್ಲಿ ನನ್ನ ಪುಸ್ತಕಗಳನ್ನೆಲ್ಲಾ ಜೋಡಿಸಿ ಮತ್ತೊಮ್ಮೆ ಕಷ್ಟದ ಬದುಕಿಗೆ ಅಣಿಯಾದೆ.

ನನ್ನ ದೇಶ ಹಿಂದಿನಂತೆಯೇ ಹಾಗೆಯೇ ಇತ್ತು. ಅದರ ಚಂದ, ಅಲ್ಲಿನ ಚಂದದ ಹೆಂಗಸರು, ಪ್ರಕೃತಿಯ ಮನಮೋಹಕ ರಮ್ಯತೆ, ಕ್ಲಬ್ಬುಗಳಲ್ಲಿ ಮೋಜು ಮಾಡುವ ಮಂದಿ ಒಂದೆಡೆಗಾದರೆ, ಮತ್ತೊಂದೆಡೆ ಕಿತ್ತು ತಿನ್ನುವ ಬಡತನವನ್ನೇ ಹಾಸಿ ಮಲಗಿದ್ದ ಅದೇ ಹಳ್ಳಿಗಳು, ಅದೇ ಗಣಿ ಪ್ರಾಂತ್ಯಗಳು. ಇವೆರೆಡರ ನಡುವೆ ಒಂದು ನನ್ನ ಆಯ್ಕೆಯಾಗಬೇಕಿತ್ತು. ಆಗ ನನ್ನ ಆಯ್ಕೆ ಗಣಿ ಪ್ರಾಂತ್ಯವಾಗಿತ್ತು.

ಕಾಲಿಗೆ ಚಪ್ಪಲಿಗಳಿಲ್ಲದ, ಸ್ಕೂಲುಗಳ ಮುಖವನ್ನೇ ಕಾಣದ ಇದೇ ಈ ಬಡ ಜನರು ೧೯೪೫ರಲ್ಲಿ ನನ್ನನ್ನು ಸೆನೆಟರ್ ಆಗಿ ಆಯ್ಕೆ ಮಾಡಿದರು. ಚಿಲಿಯ ಅತ್ಯಂತ ಅನಾದಾರಕ್ಕೊಳಗಾಗಿದ್ದ ತಾಮ್ರ ಮತ್ತು ನೈಟ್ರೇಟ್ ಗಣಿ ಪ್ರಾಂತ್ಯದ ಸಾವಿರಾರು ಜನರು ನನ್ನ ಪರವಾಗಿ ಮತ ಚಲಾಯಿಸಿ ಗೆಲ್ಲಿಸಿದ್ದರ ಬಗ್ಗೆ ನನಗೆ ಇಂದಿಗೂ ತುಂಬಾ ಅಭಿಮಾನವಿದೆ.

ಈ ಪಾಂಪಾ ಗಣಿಗಾರಿಕೆಯ ನೆಲದಲ್ಲಿ ಬದುಕುವುದಿರಲಿ ತಿರುಗಾಡುವುದೇ ತುಂಬಾ ಪ್ರಾಯಾಸದ ಸಂಗತಿ. ಹೆಚ್ಚೂ ಕಡಿಮೆ ಕಳೆದ ಅರ್ಧ ಶತಮಾನದಿಂದಲೂ ಅಲ್ಲಿ ಮಳೆಯಾಗಿಲ್ಲ. ಸಾಲದ್ದಕ್ಕೆ ಆ ಸುಡುವ ಮರಳಗಾಡು ಅಲ್ಲಿನ ಜನರನ್ನು ಹೈರಾಣಾಗಿಸಿದೆ. ಆ ಕಮರಿದ ಮುಖಛರ್ಯೆ, ಅವರ ಆ ಏಕಾಂತ ಹಾಗೂ ಅನಾದಾರಕ್ಕೊಳಪಟ್ಟ ಭಾವ, ಅವರ ಕಪ್ಪು ಕಣ್ಣುಗಳೊಳಗಿನ ನಿರಂತರ ಭಾವವಾಗಿಬಿಟ್ಟಿದೆ....

 ಮೋದೂರ ತೇಜ ಕಾದಂಬರಿ:ಅರುಣ್ ಜೋಳದ ಪರಿಚಯ

ಚಳ್ಳಕೆರೆ ಸಮೀಪದ ಮೋದೂರು ಗ್ರಾಮದ ದಲಿತ ಯುವಕ ದುರುಗಪ್ಪ (ಮೋದೂರು ತೇಜ) ಅವರ ‘ವೇದಾವತಿ ತೀರದಲ್ಲಿ’ ಕಾದಂಬರಿಯ ಘಟನೆಯೊಂದು ಹೀಗಿದೆ: ಹಳ್ಳಿಯೊಂದರ ಶಿಕ್ಷಿತ ದಲಿತ ಯುವಕ ಗೋವಿಂದ ತನಗಿಂತ ಮೇಲು ಜಾತಿಯ ಗೆಳೆಯನ ಮದುವೆಯ ಊಟದ ಪಂಕ್ತಿಯಲ್ಲಿ ಕೂತಿರುತ್ತಾನೆ. ಆಗ ಮೇಲ್ಜಾತಿಯ ಯಜಮಾನ ಬಂದು ಒಂದೇ ಪಂಕ್ತಿಯಲ್ಲಿ ದಲಿತರಿಗೆ ಊಟ ಹಾಕಿ ಊರ ಮಾನ ತೆಗೆಯುತ್ತಿದ್ದೀರಿ ಎಂದು ಕಿಡಿಕಾರುತ್ತಾನೆ. ಇದಕ್ಕೆ ಗೆಳೆಯರು ಸೊಪ್ಪುಹಾಕದೆ ಗೋವಿಂದನನ್ನು ಸಂತೈಸಿ ಊಟ ಮಾಡುವಂತೆ ಒತ್ತಾಯಿಸುತ್ತಾರೆ. ಗೋವಿಂದ ಅವಮಾನದಿಂದ ಬೇಯುತ್ತಾನೆ. ಊಟ ಹೊಟ್ಟೆಯೊಳಗೆ ಇಳಿಯುವುದಿಲ್ಲ. ಇದು ಬದಲುಗೊಂಡ ಗ್ರಾಮೀಣ ಬದುಕಿನಲ್ಲಿ ಜಾತಿ ಶ್ರೇಣೀಕರಣದ ಹೊಸ ಮುಖವೊಂದನ್ನು ಅನಾವರಣ ಮಾಡುತ್ತದೆ. ಇಂದಿನ ದಲಿತ ಯುವಕರ ಸಾಹಿತ್ಯ ಅಭಿವ್ಯಕ್ತಿ ಯಾವ ತೆರನಾಗಿರುತ್ತದೆ ಎನ್ನುವುದಕ್ಕೆ ಈ ಘಟನೆ ಉತ್ತರದಂತೆ ಬಂದಿದೆ.

ಹೊಸ ತಲೆಮಾರಿನ ಬರಹಗಾರ ಮೋದೂರು ತೇಜ ಅವರು ಮರದೊಳಗಳ ಕಿಚ್ಚು ಎನ್ನುವ ಕಥಾ ಸಂಕಲನ, ಬುದ್ಧನ ಮೇಲೂ ಯುದ್ಧ, ಭೂಮಿ ತೂಕದ ಪ್ರೀತಿ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಅವರ ಮೊದಲ ಕಾದಂಬರಿ ವೇದಾವತಿ ತೀರದಲ್ಲಿ. ಕಾದಂಬರಿ ಕ್ಷೇತ್ರಕ್ಕೆ ಹೆಚ್ಚು ತೆರೆದುಕೊಳ್ಳದ ಯುವ ಲೇಖಕರ ಮಧ್ಯೆ ತೇಜ ಅವರು...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ನಕ್ಷತ್ರ ಬರೆದ ಒಂದೇ ಒಂದು ಕವಿತೆ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು,...

ಪ್ರತಿಭಾ ಅನುದಿನದ ಅಂತರಗಂಗೆ೨:ದೇಹವೆಂಬುದು...

ಮೂರು ತಿಂಗಳ ಕಾಲ ನಾನು ಕನ್ನಡಿಯನ್ನು ನೋಡಿರಲಿಲ್ಲ. ಕನ್ನಡಿ ಯಾಕೆ ಬೇಕು? ಮೈಗೆಲ್ಲಾ ಬ್ಯಾಂಡೇಜ್ ಬೇರೆ. ಹಾಗಾಗಿ ಬೇರೆ ಬಟ್ಟೆಯೂ ಇರಲಿಲ್ಲ. ನರ್ಸ್ ಒಬ್ಬಳು ಬೆಡ್‌ಪ್ಯಾನ್ ಕೊಡುತ್ತಿದ್ದಳು. ಸ್ಟ್ರಾಂಗ್ ಔಷಧಿಗಳ ಪ್ರಭಾವದಿಂದಾಗಿ ತಿಂಗಳ Bleeding ರೇಜಿಗೆಯೂ ಇರಲಿಲ್ಲ. ಹಾಗಾಗುತ್ತದಂತೆ.

ನಿಜವಾಗಿ ನಾನು ಮೈಯನ್ನು ಕುರಿತ ಎಲ್ಲ inhibitionಗಳನ್ನು ಕಳೆದುಕೊಂಡಿದ್ದು...

ನಾಗರಾಜ್ ವಸ್ತಾರೆ ಬರೆದ ದಿನದ ಕವಿತೆ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು,...

 
 ಹುಬ್ಬಳ್ಳಿ ಪ್ರಹಸನ: ನಳಾ ಹೋತ ಇನ್ನರ ಯರಕೋಳೊದ ಮುಗಸ...

ಮೊನ್ನೆ ನಮ್ಮ ವೈಶಾಲಿ ಹೆಗಡೆಯವರ 'ಉರ್ಮಿಳಾನ ಸ್ನಾನ ಕಡಿಕೂ ಮುಗಿತೊ ಇಲ್ಲೊ..?' ಅನ್ನೊ ಬರಹ ಓದಿ ನನಗ ನನ್ನ ಹೆಂಡತಿ ಸ್ನಾನದ್ದ ಪುರಾಣಗಳು ನೆನಪಾದವು.

ಹಂಗ ರಾಮಾಯಣದಾಗ ಲಕ್ಷ್ಮಣ ವನವಾಸಕ್ಕ ತನ್ನ ಹೆಂಡತಿ ಉರ್ಮಿಳಾನ್ನ ಬಿಟ್ಟ ಹೋದಾಗ ಆಕಿ ಸಿಟ್ಟಿಗೆದ್ದ ೧೪ ವರ್ಷಗಟ್ಟಲೆ ಬಚ್ಚಲದಾಗ ಇದ್ದಳೊ ಇಲ್ಲಾ ಅಂವಾ ಹೋಗಬೇಕಾರ 'ಆಕಿ ಬಚ್ಚಲದಾಗ ಇದ್ದಾಳ, ಇನ್ನ ಅಕಿ ಹೊರಗ ಬರೋದ ಲೇಟಾಗತದ. ಅಷ್ಟ ಕಾಯಲಿಕ್ಕ ಆಗಂಗಿಲ್ಲಾ, ವನವಾಸಕ್ಕ ಅರ್ಜೆಂಟ್ ಹೋಗಬೇಕು' ಅಂತ  ಆಕಿಗೆ ಹೇಳದ ವನವಾಸಕ್ಕ ಹೋದನೊ ಆ ಶ್ರೀರಾಮಚಂದ್ರಗ ಗೊತ್ತ. ಇನ್ನ ಅಕಿ ಗಂಡ ಬಿಟ್ಟಹೋದಾ ಅಂತ ಶಟಗೊಂಡ ಬಚ್ಚಲದಾಗ ೧೪ ವರ್ಷಗಟ್ಟಲೇ ಏನ ಮಾಡಿದ್ಲು ಅನ್ನೊದರ ಬಗ್ಗೆ ತಲಿಕೆಡಿಸಿ ಕೊಳ್ಳಬೇಕಾದವರು ಆ ರಾಮಾಯಣ ಬರದವರು ಇಲ್ಲಾ ಆ ಊರ್ಮಿಳಾನ್ನ ಕಟಗೊಂಡ ಲಕ್ಷ್ಮಣ. ಆದ್ರ ನಾ ನಮ್ಮ ಮನ್ಯಾಗ ಒಬ್ಬಕಿ ಊರ್ಮಿಳಾನ್ನ ಕಟಗೊಂಡೇನಿ, ಆಕಿನ್ನ ಹನ್ನೆರಡ ವರ್ಷದಿಂದ ದಿವಸಾ ವನವಾಸದಗತೇನ ಅನುಭವಿಸಲಿಕತ್ತೇನಿ, ಇನ್ನ ಆಕಿ ಸ್ನಾನದ ಬಗ್ಗೆ ಒಂದ ನಾಲ್ಕ ಮಾತ ಹೇಳಿಲ್ಲಾಂದ್ರ ನನ್ನ ಮನಸ್ಸಿಗೆ ಸಮಾಧಾನನು ಆಗಂಗಿಲ್ಲಾ ಹಂಗ ನನ್ನ ಮನಸ್ಸು ಸ್ವಚ್ಛನೂ ಆಗಂಗಿಲ್ಲಾ.

ನಾ ತ್ರೇತಾಯುಗದಾಗ ಏನ್ ರಾಮನ ಪೈಕಿ ಇದ್ದೆನೋ, ರಾವಣನ ಪೈಕಿ ಇದ್ದೆನೋ, ಇಲ್ಲಾ ವಾನರ ಸೈನ್ಯದಾಗ ಸೈನಿಕ ಆಗಿದ್ದೆನೋ ಗೊತ್ತಿಲ್ಲಾ ಆದ್ರ ನಾ ಮಾಡ್ಕೊಂಡಿದ್ದ ಮಾತ್ರ ಆ ಲಕ್ಷ್ಮಣನ ಹೆಂಡತೀನ ಇರಬೇಕು ಅಂತ ನನಗ ಅನಸ್ತದ. ಅದ ಯಾಕ ಅಂದ್ರ ನನ್ನ ಹೆಂಡತಿ ಸ್ನಾನ ಮಾಡೋದು ತಾಸ ಗಟ್ಟಲೇ. ಆ ಉರ್ಮಿಳಾ ಹನಿಮೂನಗೆ ಹೋಗೊ ಹೊತ್ತಿನಾಗ ಗಂಡಾ ಅಕಿನ್ನ ಬಿಟ್ಟ ಒಬ್ಬನ ವನವಾಸಕ್ಕ ಹೋದಾ ಅಂತ ಶಟಗೊಂಡ ಬಚ್ಚಲಕ್ಕ ಹೋದರ ನನ್ನ ಹೆಂಡತಿ ಎದರಿಗೆ ನಾ ದೆವ್ವನಂಗ ಇದ್ದರು ದಿವಸಾ ನನ್ನ ಬಿಟ್ಟ ಬಚ್ಚಲಕ್ಕ ತಾಸ ಗಟ್ಟಲೆ ಒಬ್ಬಕೀನ ಹೋಗ್ತಾಳ. ಇನ್ನ ತಲಿಕೆಟ್ಟ ನಾ 'ನೀ ಬಚ್ಚಲದಾಗಿಂದ ಲಗೂನ ಹೊರಗ ಬರತೀಯೋ ಇಲ್ಲಾ ನಾ ಖರೇನ ವನವಾಸಕ್ಕ ಹೋಗಲೋ' ಅನ್ನಬೇಕ...

Font Help
Site Web
ಜನಮತ
ನಾನು ಹೀಗೆ ಇದ್ದೇನೆ
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige