ಮೇ ೧೮, ೨೦೦೮
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಡಾ. ಮೊಗಳ್ಳಿ ಗಣೇಶ್ ಕನ್ನಡದ ಕಥೆಗಾರರಾಗಿ ಹೆಸರಾದವರು. ಅವರ ಬುಗುರಿ, ನನ್ನಜ್ಜನಿಗೊಂದಾಸೆಯಿತ್ತು, ಒಂದು ಹಳೆಯ ಚಡ್ಡಿ ಇತ್ಯಾದಿ ಕಥೆಗಳು ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳಾಗಿ ಗುರುತಿಸಲ್ಪಟ್ಟಿವೆ.

ಮೊಗಳ್ಳಿ ಗಣೇಶ್ ತೊಟ್ಟಿಲು, ಕಿರೀಟ ಇತ್ಯಾದಿ ಕಾದಂಬರಿಗಳನ್ನೂ ಬರೆದಿದ್ದಾರೆ. ಆದರೆ ಅವರು ಮೊದಲು ಬರೆಯಲು ಶುರುಮಾಡಿದ್ದು ಕವಿತೆಗಳನ್ನು.

ಈಗಲೂ ಅವರಿಗೆ ಆಸೆ ಇರುವುದು ಒಳ್ಳೆಯ ಕವಿಯಾಗಬೇಕು ಎಂಬುದು.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿರುವಾಗಲೇ ಹಠ ಹಿಡಿದು ಸಣ್ಣ ಸಣ್ಣ ಹಾಳೆಗಳಲ್ಲಿ ಕವಿತೆಗಳನ್ನು ಬರೆದು ಗೆಳೆಯರ ಮುಂದೆ ಹಿಂಜರಿಯುತ್ತಾ ಓದುತ್ತಿದ್ದ ಗಣೇಶರನ್ನು ಅವರ ಗೆಳೆಯರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಕಥೆಯಲ್ಲಿ ಹೇಳಿಕೊಳ್ಳಲಾಗದ ಸುಖದುಃಖಗಳನ್ನು ಕವಿತೆಯಲ್ಲಿ ಹೇಳುವುದು ಹೆಚ್ಚು ಸಲೀಸು, ಆಪ್ತ ಹಾಗೂ ಸುಖಕರ ಎನ್ನುವುದು ಅವರ ಮಾತು.

ತೀರ ಸಂಕಟವೆನಿಸಿದಾಗ ಕವಿತೆಯೇ ತೀರಾ ಹತ್ತಿರದ ಸಂಬಂಧಿಯಂತೆ ಕಾಣಿಸುತ್ತದೆ, ನನ್ನನ್ನು ನಾನೇ ಸಂತೈಸಿಕೊಳ್ಳಲು ಕಾವ್ಯಕ್ಕಿಂತ ಒಳ್ಳೆಯ ಉಪಕರಣ ಬೇರೇನಿದೆ ಎಂದು ಅವರು ಹೇಳುತ್ತಾರೆ

ಕೆಂಡಸಂಪಿಗೆಯ ಈ ಬಾರಿಯ ಭಾನುವಾರದ ವಿಶೇಷದಲ್ಲಿ ಮೊಗಳ್ಳಿ ಬರೆದ ನಾಲ್ಕು ಹೊಸ ಕವಿತೆಗಳಿವೆ. ಕವಿತೆ ಓದಿ ನಿಮಗೇನನಿಸಿತು ನಮಗೆ ಬರೆಯಿರಿ. 

ಅನಾದಿ ಮಗು

ಆಡಿಕೊಳ್ಳುತ್ತಿದೆ ಕಾಲಾತೀತ ಮಗುದಿಕ್ಕಿಲ್ಲ ದೆಸೆಯಿಲ್ಲ ದೇವರಂಥ ಹಸುಗೂಸು ರುಂಡವಿಲ್ಲದ ಗೊಂಬೆಗೆ ಮರು ಜೀವ ತುಂಬಿಬಿಸಾಡಿದ ಆಟಿಕೆಗಳಲ್ಲೆ ಮಾಟದ ನೋಟ ಕಂಡುಮುರಿದ ರೆಕ್ಕೆಯಲ್ಲೆ ದಿಗಂತಗಳ...

 ಮಕ್ಕಳ ಸಂಪಿಗೆಯಲ್ಲಿ ಬುದ್ಧನ ಬೆಳಕು

ಪ್ರೀತಿಯ ಮಕ್ಕಳೇ ,ನಾಡಿದ್ದು ಮಂಗಳವಾರ ಬುದ್ಧ ಜಯಂತಿ. ನಿಮಗೆಲ್ಲಾ ಗೊತ್ತಿರುವ ಹಾಗೆ ಗೌತಮ ಬುದ್ಧ ಜಗತ್ತಿಗೆ ಜ್ಞಾನದ ಬೆಳಕು ನೀಡಿದವನು. ಪ್ರೀತಿ ಹಂಚಿದವನು. ಮನುಷ್ಯ ಮನುಷ್ಯರ ನಡುವೆ ಬೇಧಭಾವವಿಲ್ಲ, ಸಕಲ ಜೀವಿಗಳೆಲ್ಲವೂ ಒಂದೇ. ಎಲ್ಲರೂ ಸುಖವಾಗಿರಬೇಕು. ಎಲ್ಲರೂ ಸುಖವಾಗಿರಬೇಕಾದರೆ ನಾವು ಅತಿ ಆಸೆಗಳನ್ನು ಬಿಡಬೇಕು. ಯುದ್ಧ ಮಾಡುವ ಮನಸ್ಸು ಹೊಂದಿರಬಾರದು ಎಂದು  ತೋರಿಸಿಕೊಟ್ಟವನು.

ಇಂದಿನ ಮಕ್ಕಳ ಸಂಪಿಗೆಯಲ್ಲಿ ನಾವು ಮೈಸೂರಿನ ಮಹಾಭೋಧಿ ಶಾಲೆಯಲ್ಲಿ ಒಟ್ಟಾಗಿ ಓದುತ್ತಿರುವ ಭಾರತದ ಮೂರು ಮೂಲೆಗಳ ಮೂವರು ಮಕ್ಕಳು ಬಿಡಿಸಿದ ಬುದ್ಧನ ಕಲ್ಪನಾ ಚಿತ್ರಗಳನ್ನು ಪ್ರಕಟಿಸುತ್ತಿದ್ದೇವೆ.

ಏಳನೆಯ ತರಗತಿಯಲ್ಲಿ ಓದುತ್ತಿರುವ ಧಮ್ಮಸಾಗರ್‌ನ ಊರು ಯಾವುದು ಅಂತೀರಾ? ದೂರದ ಅರುಣಾಚಲ ಪ್ರದೇಶ. ಅಲ್ಲಿನ ಚಂಗ್ಲೊಮ್ ಜಿಲ್ಲೆಯ ಧೂಮ್‌ಪಾನಿ ಎಂಬ ಹಳ್ಳಿಯಲ್ಲಿ ಈತನ ತಂದೆ ತಾಯಿ, ಅಕ್ಕ ಅಣ್ಣ ಎಲ್ಲರೂ ಇದ್ದಾರೆ. ಬೌದ್ಧ ಬಿಕ್ಷುವೊಬ್ಬ ತಪಸ್ಸಿಗೆ ನಿಂತಿರುವ ಚಿತ್ರವನ್ನು ಎಷ್ಟು ಮನೋಜ್ಞವಾಗಿ ಧಮ್ಮಸಾಗರ್ ಚಿತ್ರಿಸಿದ್ದಾನೆ ನೋಡಿ. ಈತನಿಗೆ ದೊಡ್ಡವನಾದ ನಂತರ ಒಳ್ಳೆಯ ಆರ್ಟಿಸ್ಟ್ ಆಗಬೇಕೆಂಬ ಆಸೆಯಂತೆ.

ಬುದ್ಧನ ಪರಿನಿರ್ವಾಣ ಚಿತ್ರವನ್ನು ಬಿಡಿಸಿರುವುದು ಜಮ್ಮಕಾಶ್ಮೀರದ ಲೇಹ್‌ನವನಾದ...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ಮಾರ್ಕ್ಸಿಸ್ಟರೂ, ಸ್ವಾಮೀಜಿಗಳೂ

‘ಕೇರಳದಲ್ಲಿರುವ ೯೦ ಪ್ರತಿಶತ ಕಾಷಾಯಧಾರಿಗಳು ಕಳ್ಳರೇ.. ಅವರಿಗೆ ಸರಿಯಾಗಿ ಬಟ್ಟೆ ತೊಡುವುದನ್ನು ಮೊದಲು ಕಲಿಸಬೇಕು..ಜೈಲುಕೋಣೆಗೆ ದಬ್ಬಬೇಕು.....' ಎಂಬಿತ್ಯಾದಿಯಾಗಿ ಗುಡುಗುವ ಮೂಲಕ ಸುದ್ದಿಯಾಗಿದ್ದಾರೆ ಕೇರಳದ ದೇವಸಂ(ಮುಜರಾಯಿ) ಮಂತ್ರಿ ಜಿ ಸುಧಾಕರನ್.

ಮೊನ್ನೆಯಷ್ಟೆ ಸಂತೋಷ್ ಮಾಧವನ್ ಎನ್ನುವ ಟಕ್ಕ ಸ್ವಾಮೀಜಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ...

ಪಟ್ಟಣ ಪುರಾಣ-ಓಟಿಗೆ ಕೋಟಿ ಬಿಲ್ಲಿಗೆ ಕಿರಿಕಿರಿ

ಕಡೆಗೂ ಸಾಹೇಬರು ಹರಸಿದರು. ಎರಡೂ ಚಿಲ್ಲರೆಗೆ ಬದಲಾಗಿ ಇಪ್ಪತ್ತೈದು! ಮೇಜಿನಲ್ಲಿಟ್ಟ ದಪ್ಪನೆ ಕಂದು ಲಕೋಟೆಯನ್ನು ಅವರತ್ತಲೇ ಸರಿಸಿ- ‘ನೋಡಿ ಪೀಏಯವರೆ- ಮೂರು ತಿಂಗಳಿಂದ ಕಾದಿದ್ದಾಯಿತು. ಕೊನೆಗೆ ಇಷ್ಟು ಕೊಟ್ಟರೆ ಆಗದ ಮಾತು. ನಾನು ನೀವು ಕೊಡೋದನ್ನ ಮೂರು ಜನರ ಜತೆ ಹಂಚಬೇಕು. ಇದು ಒಬ್ಬನ ಖರ್ಚಿಗೂ ಆಗೋಲ್ಲ. ನಾನೇನೋ ಮುಲಾಜಿಗೆ ಕೆಲಸ ಮಾಡಿದರೂ ಇವರುಗಳು...

ವೈದೇಹಿ ಕಾಲಂ - ಮೀನಾಕ್ಷಮ್ಮನ ಸಿನೆಮಾ ಕಥೆ

ಮೀನಾಕ್ಷಮ್ಮನಿಗೆ ಕತೆ ಕಾದಂಬರಿ ಮಾತ್ರವಲ್ಲ, ಸಿನೆಮಾವೆಂದರೂ ಪಂಚಪ್ರಾಣವಿತ್ತು. ಹೊಸ ಸಿನೆಮಾ ಬಂತೆಂದರೆ ಹೇಗಾದರೂ ಬಿಡುವು ಮಾಡಿಕೊಂಡು ಸೆಕೆಂಡ್ ಶೋಗೆ ಎದ್ದೇ ಬಿಡುವರು ಅವರು. ನೋಡುವುದೆಂದರೆ ಬರಿದೆ ನೋಡುವುದೆ? ಮರುದಿನ ಹೊಲಿಗೆ ಚಾವಡಿಯಲ್ಲಿ ಅದರ ಕತೆ, ವಿಮರ್ಶೆ ಎಲ್ಲ ಬಂದವರ ಜೊತೆ ಆಗಬೇಕು. ಅದು ಖಂಡಿತವಾಗಿಯೂ ನಡೆದದ್ದೇ ಅಂತ ನಾವು ಮಕ್ಕಳು...

 
 ಯಾರೂ ಇಲ್ಲದ ದಾರಿಯಲ್ಲಿ ಟಿಬೆಟನ್ನರು

ಇಂದು ಬೆಳಗ್ಗೆ ಹೀಗೇ ಹೋಗುತ್ತಿದ್ದರೆ ಹೊಸದಾಗಿ ಟಾರು ಹಾಕಿದ ಯಾರೂ ಇಲ್ಲದ ದಾರಿಯಲ್ಲಿ ಬುದ್ಧನ ಹೆಸರು ಹೇಳಿಕೊಂಡು ಕೈಯಲ್ಲಿ ಮಹಾತ್ಮಾ ಗಾಂಧಿಯ ಫೊಟೋ ಹಿಡಿದುಕೊಂಡು ಒಂದಿಷ್ಟು ಟಿಬೆಟನ್ ನಿರಾಶ್ರಿತರು ನಡೆದುಹೋಗುತ್ತಿದ್ದರು. ಇವರಿಗೇನಾಗಿದೆ, ಇವರ ಕಷ್ಟಗಳೇನು ಎಂಬ ಅರಿವೇ ಇಲ್ಲದ ಹಳ್ಳಿಯ ಜನ ಆ ಮೆರವಣಿಗೆಯನ್ನು ತನ್ನ ಪಾಡಿಗೆ ತಾನು ಹೋಗಲು ಬಿಡುತ್ತಿದ್ದರು. ಟಾರು ರಸ್ತೆಯ ಎಡಬದಿಯಲ್ಲಿ ಒಬ್ಬಬ್ಬರ ಹಿಂದೆ ಒಬ್ಬರು ಇರುವೆಗಳಂತೆ ಸಾಲುಸಾಲಾಗಿ ನಡೆದು ಹೋಗುತ್ತಿದ್ದ ಇವರಲ್ಲಿ ಬಹುತೇಕರು ಭಾರತದಲ್ಲೇ ಹುಟ್ಟಿ ನಲವತ್ತು ವರ್ಷಗಳಾಗಿದ್ದರೂ, ಇವರ ಮಕ್ಕಳೂ ಇಲ್ಲೇ ಸಂಸಾರ ಹೂಡಿ ಸುಖದಲ್ಲೋ ಸಂಕಟದಲ್ಲೋ ಜೀವಿಸುತ್ತಿದ್ದರೂ ಇವರು ಹೀಗೆ ಪ್ರತಿವರ್ಷ ಮೆರವಣಿಗೆ ಹೋಗುತ್ತಾರೆ. ಇವರ ಬಾಯಲ್ಲಿ ಬುದ್ಧ, ಕೈಯಲ್ಲಿ ಗಾಂಧಿ ಹಾಗೂ ತಲೆಯೊಳಗೆ ದಲಾಯಿಲಾಮಾ ಎಂಬ ಧರೆಯ ದೇವರು.ಇವರು ಮೆರವಣಿಗೆ ಹೊರಟಿರುವುದು ಚೀನಾ ಎಂಬ ಬೆಂಕಿಯುಗುಳುವ ಕೆಂಪು ಡ್ರಾಗನ್ ಟಿಬೆಟ್‌ನಲ್ಲಿ ನಡೆಸುತ್ತಿರುವ ಕೌರ್ಯಗಳ ಎದುರು.

ಯಾವುದನ್ನೂ ನೇರವಾಗಿ ಎದುರು ಹಾಕಿಕೊಳ್ಳದ ಇವರ ಆರಾಧ್ಯ ದೈವ ದಲಾಯಿಲಾಮ ಹಾಲಿವುಡ್‌ನ ಖ್ಯಾತ ನಟ ನಟಿಯರ ಮನಗೆದ್ದು ಅವರ ಮುಖಾಂತರ ಟಿಬೆಟ್ ಜನರ ನೋವಿನ ಬಗ್ಗೆ ಜಾಗತಿಕ ಗಮನವನ್ನೂ ಸೆಳೆದರು. ಯಾವತ್ತೂ ಚೀನಾದ ಜೊತೆ ನೇರ ಸಂಧಾನ ನಡೆಸದೆ ಆ ದೇಶದ ಮೇಲೆ ಜಾಗತಿಕ ಒತ್ತಡ ಹೇರಲು ಹೋಗಿ ಚೈನಾದ ಕೆಂಗಣ್ಣಿಗೂ ಗುರಿಯಾದರು. ಈಗ ನಮ್ಮನ್ನು ಮಾತುಕತೆಗೆ ಕರೆಯಿರಿ, ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದು ದಲಾಯಿಲಾಮ ಗೋಗೆರೆಯುತ್ತಿದ್ದರೂ ಚೈನಾದ ಕಮ್ಯುನಿಷ್ಟ್ ದೇವತೆಗಳು ದಲಾಯಿಲಾಮ ಮಾತನ್ನು ಪರಿಗಣಿಸುವ ಗೌರವನ್ನು ತೋರಿಸುತ್ತಿಲ್ಲ. ನಾವೇ ಒಲಂಪಿಕ್ಸ್ ಮೂಲಕ ಜಗತ್ತಿನ ಗಮನ ಸೆಳೆಯುವ ಹುನ್ನಾರದಲ್ಲಿದ್ದರೆ ನೀವೂ ಅದನ್ನೇ ಬಳಸಿಕೊಂಡು ಜಗತ್ತಿನ ಸಿಟ್ಟನ್ನು ನಮ್ಮ ವಿರುದ್ಧ ತಿರುಗಿಸುತ್ತಿದ್ದರೆ ಸಂಧಾನ ಸಾಧ್ಯವಿಲ್ಲ ಮೊದಲು...

Font Help
Site Web
ಜನಮತ
ಕೆಂಡಸಂಪಿಗೆಯಲ್ಲಿ ರಾಜಕೀಯ ಬರಹಗಳು
 
 
Getting poll results. Please wait...