ಮಾರ್ಚ್ ೧೦, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಸೌದಿ ಅರೇಬಿಯಾದ ಕಿಂಗ್ ಸೌದ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿರುವ ಕನಕರಾಜು  ಮೂಲತಃ ಚಿತ್ರದುರ್ಗ ಜಿಲ್ಲೆಯ ಆರನಕಟ್ಟೆಯವರು.ಅರಬಿ ನಾಡಿನ ಕುರಿತ ಅವರ ಕಥಾ ಪ್ರಸಂಗಗಳು ಇನ್ನು ಮುಂದೆ ಕೆಂದಸಂಪಿಗೆಯಲ್ಲಿ ನಿಯಮತವಾಗಿ ಕಾಣಿಸಿಕೊಳ್ಳಲಿವೆ.

ಲಿಬಿಯಾದಲ್ಲಿ ಒಂದು ವರ್ಷ ದುಡಿದ ನಾನು ಸೌದಿ ಅರೇಬಿಯಾಕ್ಕೆ ಹೊರಟಾಗ ಕೆಲವು ಗೆಳೆಯರು ಹುಬ್ಬೇರಿಸಿದರು. ಅವರ ಪ್ರಕಾರ ನಾನು ಹೋಗುತ್ತಿದ್ದುದು ಕಟ್ಟರ್ ಸಂಪ್ರದಾಯವಾದಿ ಕಠಿಣ ಕಾನೂನುಗಳ ದೇಶವೊಂದಕ್ಕೆ. ಅವರ ಅಭಿಪ್ರಾಯಗಳನ್ನು ಕೇಳಿ ನಕ್ಕು ಸುಮ್ಮನಾಗಿದ್ದೆ. ಈಜಿಪ್ಟಿನ ಬರಹಗಾರ್ತಿಯಾದ ನವ್ವಲ್ ಅಲ್ ಸಾದವಿಯ ಒಂದು ಬರಹ ನಾ ಲಿಬಿಯಾದಲ್ಲಿದ್ದಾಗ ಸಿಕ್ಕಿತ್ತು. ಆಕೆಯ ಒಂದು ಮಾತನ್ನು ನಾ ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ. ಅದು ಹೀಗಿದೆ: "ನನಗೆ ಏನೊಂದು ಬೇಕಾಗಿಲ್ಲ. ನನಗೆ ಯಾವುದರಲ್ಲೂ ನಂಬಿಕೆಯಿಲ್ಲ. ನನಗೆ ಯಾವುದರ ಮೇಲೂ ಭಯವಿಲ್ಲ. ಆದ್ದರಿಂದಲೆ ನಾ ಸ್ವತಂತ್ರಳಾಗಿದ್ದೇನೆ. ಏಕೆಂದರೆ, ಬದುಕಿನಲ್ಲಿ ನಮ್ಮ ಆಸೆಗಳು, ನಂಬಿಕೆಗಳು, ಭಯಗಳು ನಮ್ಮನ್ನು ಗುಲಾಮರನ್ನಾಗಿಸುತ್ತವೆ". ಆಕೆ ದಿಟ್ಟ ಬರಹಗಾತಿ. ಆಕೆಯ ಬರಹಗಳನ್ನು ಓದಲು ಹುಡುಕಿ ಸುಸ್ತಾಗಿ ಆಕೆಯನ್ನು ಮರತೇ ಹೋದನೇನೋ ಎನ್ನುವಷ್ಟರಲ್ಲಿ ಮೊನ್ನೆ ಚೆನ್ನೈನಿಂದ ತರಿಸಿಕೊಂಡ ತಮಿಳಿನ ನವ್ಯೋತ್ತರ ಬರಹಗಾರರಾದ ಚಾರು ನಿವೇದಿತರ ಪುಸ್ತಕಗಳಲ್ಲಿ "ಊರಿನ್ ಮಿಗ ಅಳಗಾನ ಪೆಣ್" ( ಊರಿನ ಅತಿ ಸುಂದರ ಹೆಣ್ಣು) ಎಂಬ ಅನುವಾದಿತ ಕಥಾ ಸಂಕಲನದಲ್ಲಿ ಸಾದವಿಯನ್ನು ಕಂಡು ಹಿರಿಹಿರಿ ಹಿಗ್ಗಿದೆ....

 ಸರ್ವಜ್ಞ ಎನ್ನ ಜಾತಿಯವನೇ? -ಒಂದು ಚಿದಂಬರ ಪ್ರಶ್ನೆ

ಕುಲ ಕುಲ ಕುಲವೆಂದು ಹೊಡೆದಾಡದಿರಿ... ಜ್ಯೋತಿಯಾವ ಜಾತಿಯಮ್ಮ ಜಗದೀಶ್ವರೀ ಮುಂತಾದ ಸೊಲ್ಲುಗಳನ್ನು ಬಹಳ ಚಿಕ್ಕಂದಿನಿಂದಲೂ ಕೇಳಿಸಿಕೊಂಡೇ ಬೆಳೆದು ಬಂದೆ. ಗಂಡು-ಹೆಣ್ಣು ಎನ್ನುವುದಷ್ಟೇ ಜಾತಿ ಎನ್ನುವ ವ್ಯಾಖ್ಯಾನವನ್ನೂ ನಿರಂತರವಾಗಿ ಅದರಲ್ಲೂ ಬುದ್ಧಿಜೀವಿಗಳ ಕೂಟದಲ್ಲಿ ಕೇಳಿಸಿಕೊಂಡಿದ್ದೇನೆ. ಜಾತಿ ವಿನಾಶ ಸಮ್ಮೇಳನಗಳು ನಡೆದಿರುವುದು ಕೂಡಾ ಇತಿಹಾಸ. ಇಷ್ಟಾದರೂ ಜನರಿಗೆ ಜಾತಿಯ ಮೇಲಿನ ವ್ಯಾಮೋಹ ಹೋಗಿಲ್ಲ. ನನ್ನನ್ನೂ ಸೇರಿಸಿಕೊಂಡಂತೆ ಸರ್ಕಾರದ ಅದೆಷ್ಟೋ ಫಾರ್ಮ್‌ಗಳಲ್ಲಿ ಕಡ್ಡಾಯವಾಗಿ ಜಾತಿ ನಮೂದಿಸಬೇಕು. ಒಂದುವೇಳೆ ಜಾತಿ ನಮೂದಿಸದಿದ್ದರೆ ಅಪ್ಲಿಕೇಷನ್ ರಿಜೆಕ್ಟ್ ಆಗುತ್ತೆ, ಹಾಗಾದರೆ ಜಾತಿ ಎನ್ನುವುದು ಪ್ರತಿಯೊಬ್ಬನಿಗೂ ಅನಿವಾರ್ಯ ಎಂದಾಯಿತು.

ಜಾತಿಯ ಮೂಲಕವೇ ಒಬ್ಬ ವ್ಯಕ್ತಿ ದೊಡ್ಡವನಾಗುತ್ತಾನೆ ಅಥವಾ ಅವನಿಗೆ ಸಮಾಜದಲ್ಲಿ ಉನ್ನತ ಸ್ಥಾನ ಮಾನ ದಕ್ಕುತ್ತವೆಯೇ? ಎನ್ನುವುದೂ ಕೂಡ ಈಗ ಚರ್ಚೆಗೆ ಕಾರಣವಾಗುವ ಅಂಶ. ಜಾತಿಯ ಬಲದಿಂದಲೇ ಒಬ್ಬ ವ್ಯಕ್ತಿ ಬುದ್ದಿವಂತ ಅನ್ನಿಸಿಕೊಳ್ಳುತ್ತಾನೆಯೇ? ಎನ್ನುವುದು ಸಂಶಯ ಹುಟ್ಟು ಹಾಕುತ್ತಿದೆ. ಇದಕ್ಕೆ ಬುದ್ಧಿವಂತರೇ ತಿಳುವಳಿಕೆ ಕೊಡಬೇಕು ಎನ್ನುವುದು ನನ್ನ ಕೋರಿಕೆ.

ಇಷ್ಟೆಲ್ಲಾ ಪೀಠಿಕೆಗೆ ಕಾರಣವಾದ ಸಂಗತಿಯೆಂದರೆ ಸರ್ವಜ್ಞ ಯಾವ...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ಈ ನೆಲದ ಜಾಲಿ ಹೂ : ರೈತ ಹೋರಾಟಗಾರ್ತಿ ಅನಸೂಯಮ್ಮ

ಇಂದು ವಿಶ್ವ ಮಹಿಳಾ ದಿನ. ಇಂದೇ ಮಹಿಳಾ ಮೀಸಲಾತಿ ಮಸೂದೆ ಕೂಡ ಮಂಡನೆಯಾಗುತ್ತಿದೆ... ಈ ಹೊತ್ತಿನಲ್ಲಿ ಅರಳಾಳುಸಂದ್ರದ ಅನಸೂಯಮ್ಮನವರ ಕುರಿತ ಬರಹ ಇಲ್ಲಿದೆ... 

ಹತ್ತಾರು, ನೂರಾರು ವರ್ಷಗಳ ಕಾಲ ನಮ್ಮ ನೆಲದಲ್ಲಿ ಗುಲಾಮಗಿರಿ ಅನುಭವಿಸಿದ ನಾವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ ಎಂಬ ಪ್ರಶ್ನೆ ರೈತರಿಗೆ ಎದುರಾದಾಗ ಹುಟ್ಟಿದ್ದೇ ರಾಜ್ಯ...

ಕನ್ನಡ ಸಾಹಿತ್ಯಕ್ಕೆ ಖೇಣಿ ಕೊಟ್ಟ 'ಕುದರಿ'

ಖುಷ್ ಆದವರ ಹತ್ತಿರ ಕನ್ನಡದ ಕೆಲಸ ಮಾಡಿಸದಿದ್ದರೆ ಹೇಗೆ? ಎಂಬ ಯೋಚನೆ ವೀರಭದ್ರನದು. ಏನನ್ನಾದರೂ ಕೇಳಬೇಕು. ಏನು? ಹಾಗೆ ನೋಡಿದರೆ ಯಾರ ಹತ್ತಿರ ಏನನ್ನು ಕೇಳಬೇಕು? ಎಂಬುದು ಹೈದರಾಬಾದ್ ಕರ್ನಾಟಕದ ಜನತೆಗೆ ಗೊತ್ತೇ ಇಲ್ಲ. ಕೊಡುವವನ ಸಾಮರ್ಥ್ಯ ಅರಿತು ಕೇಳುವ ಜಾಯಮಾನವೂ ಅವರದಲ್ಲ. ತಮ್ಮ ಆ ಕ್ಷಣದ ಅಗತ್ಯಕ್ಕೆ ಅನುಗುಣವಾಗಿ ಏನೋ ಒಂದನ್ನು ಕೇಳಿಬಿಡುತ್ತಾರೆ....

ಹಳ್ಳಿ ಮಗಳಿಗೂ ಆಡಳಿತ ಕೊಟ್ಟರೆ... : ಕುಸುಮಾ ಬರಹ

ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳ ಅಮ್ಮಂದಿರು, ಅಕ್ಕಂದಿರು ಹೀಗಾದಾರು ಎಂದು ನಾವು ಯಾರಾದರು ಕನಸು ಕಂಡಿದ್ದೆವೆ! ಖಂಡಿತಾ ಇಲ್ಲ. ಮನೆ ನಡೆಸಿಕೊಂಡು, ಮಕ್ಕಳನ್ನು ಸುಧಾರಿಸಿಕೊಂಡು ಹೋಗುತ್ತಿದ್ದ ಲಕ್ಷ್ಮಮ್ಮ, ತರಕಾರಿ ಬೆಳೆಸಿ, ಬುಟ್ಟಿಯಲ್ಲಿ ತುಂಬಿಕೊಂಡು ಹತ್ತಿರದ ಪೇಟೆಗೆ ಹೋಗಿ ಮಾರುತ್ತಿದ್ದ ಪುಟ್ಟತಾಯಮ್ಮ, ಕುಡಿದು ಬಂದ ಗಂಡನಿಂದ...

 
 ವಿ.ಕೆ.ಮೂರ್ತಿ ಚರಿತೆ : ಅಂಗಡಿ ಮನೇಲಿ ಕೈಲಾಸಂ ಕಂಡಿದ್ದು

ನಮ್ಮ ತಂದೆ ಕಣ್ಣು ಮುಚ್ಚಿದರು 

``ನಾನು ಬೆಂಗಳೂರಿನಲ್ಲಿದ್ದಾಗ ನಮ್ಮ ತಂದೆ ಹೋಗಿಬಿಟ್ಟರು. ಆಮೇಲೆ ನಾನು ಮೈಸೂರಿಗೆ ಹೋಗೋದು ಕಡಿಮೆ ಆಗಿಹೋಯಿತು. ಅಲ್ಲಿ ಅಕ್ಕ ಇದ್ದರು.  ಅದರೂ ಅವರ ಮನೇಲಿ ಎಷ್ಟು ದಿನಾಂತ ಹೋಗಿ ಇರೋದು.  ಯಾವಾಗ್ಲೂ ಬೆಂಗಳೂರಲ್ಲಿ ಸ್ನೇಹಿತರ ಜೊತೆ ಕಾಲ ಕಳೀತಿದ್ದೆ.  ಮನಸ್ಸಿಗೆ ತುಂಬಾ ಬೇಜಾರಾಗೋದು, ಆದರೆ ಹೊರಗೆ ತೋರಿಸ್ಕೋತಾ ಇರಲಿಲ್ಲ.

ನಮ್ಮ ತಂದೆ ಹೋದಾಗ ರಾಜಾರಾಮ ಅಗ್ರಹಾರದ ಮನೆಯಲ್ಲಿದ್ದರು.  ಹಣದ ತೊಂದರೆ ಹೆಚ್ಚಾಗಿ ಅವರ ಕೊನೇ ದಿನಗಳಲ್ಲಿ ಹೊಸಕೇರಿಯ ಔಟ್ ಹೌಸನ್ನೂ ಬಿಟ್ಟು ಈ ಮನೆ ತಿಂಗಳಿಗೆ 4 ರುಪಾಯಿ ಬಾಡಿಗೆಗೆ ತೆಗೆದುಕೊಂಡಿದ್ದರು.  ಅಲ್ಲಿಗೇ ನಮ್ಮ ಅಕ್ಕ ಭಾವನೂ ಬಂದು ಇರತೊಡಗಿದರು.  ಅವರದೂ ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ.  ಜೊತೆಗೆ ನಮ್ಮ ತಂದೆಯವರನ್ನು ನೋಡಿಕೊಳ್ಳಲೂ ಯಾರೂ ಇರಲಿಲ್ಲ.

ನಮ್ಮ ತಂದೆ ಹೋದ ಮೇಲೆ ನನ್ನ ಮೈಸೂರಿನ ಸಂಬಂಧ ಕಡಿದಂತೇ ಆಯಿತು.''

ನನಗೆ ಪ್ರಾಣಹೋಗೋದು ದುಡ್ಡು ತಗೊಳ್ಳೋಕೆ

``ನಮ್ಮ ದೊಡ್ಡಮ್ಮ ಅವರನ್ನು ಗಂಜಾಂ ನಾಗಪ್ಪ ಅವರ ಕುಟುಂಬಕ್ಕೆ ಕೊಟ್ಟಿದ್ದರು. ಆಕೆ ವಿಧವೆ. ಒಂದು ದಿನ ಅವರನ್ನು ನೋಡೋಕೆ ಹೋದಾಗ ಅವರು, ನಾನು ಗಂಜಾಂ ನಾಗಪ್ಪನವರ ಮಗ ಸುಬ್ಬರಾಮಯ್ಯನಿಗೆ ಹೇಳ್ತೀನಿ, ನಿಂಗಷ್ಟು ದುಡ್ಡು ಕೊಡೂಂತ ಅಂದರು.  ನಾನು ಖಂಡಿತ ಬೇಡ ಅಂದೆ.  ಅದಕ್ಕವರು, ಇರಲಿ ಬಿಡು ಯಾವ್ಯಾವುದಕ್ಕೊ ಖರ್ಚು ಮಾಡ್ತಾರೆ.  ಓದೋ ಹುಡುಗ ನಿನಗೆ ಕೊಟ್ರೆ ಏನೋ ಅಂದ್ರು.  ಅವರಿಗೆ ಕುಟ್ಟೀಗೆ ಒಂದೆರಡು ರುಪಾಯಿ ಕೊಡು ಕಷ್ಟದಲ್ಲಿದ್ದಾನೆ, ಓದ್ತಿದಾನೆ, ತಂದೆ ತಾಯೀನೂ ಇಲ್ಲ ಅಂದರು.  ಅಂದಿನಿಂದ ಅವರು ಪ್ರತಿ ತಿಂಗಳೂ 5 ರುಪಾಯಿ ಕೊಡೋಕೆ ಶುರು ಮಾಡಿದರು.  ನಂಗೆ ದುಡ್ಡು ತಗೊಳ್ಳೊಕೆ ಅವರ ಅಂಗಡಿಗೆ ಹೋಗೋಕೆ ಪ್ರಾಣ ಹೋಗೋ ಥರಾ ಆಗೋದು.  ಆಗ ಅವರ ಅಂಗಡಿ ಸುಲ್ತಾನ್ ಪೇಟೆಯಲ್ಲಿತ್ತು. ಕುಟ್ಟಿ ಬಾರೋ ಇಲ್ಲಿ ಅಂದವರೇ ಸುಬ್ಬರಾಮಯ್ಯನವರು ಸದ್ದಿಲ್ಲದೇ...

Font Help
Site Web
ಜನಮತ
ಮಹಿಳಾ ಮೀಸಲಾತಿ ಮಸೂದೆ
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige