ಜನವರಿ ೨೮, ೨೦೧೨
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಈ ಗಣ ರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ಹೂವಿನ ಹಬ್ಬ. ಎಲ್ಲಿ ನೋಡಿದರೂ ಕೋಲು ಹಿಡಿದು ಕಾಲು ಹಾಕುತ್ತಿರುವ ಹಿರಿಯರಿಂದ ಹಿಡಿದು, ಕೈಗೆ ಸಿಕ್ಕದೆ ಕಣ್ಣತಪ್ಪಿಸಿ ಕುಣಿದಾಡುವ ಮಕ್ಕಳು, ಕೈಕೈ ಹಿಡಿದು ಸುತ್ತಲಿನ ಪರಿವೆ ಇಲ್ಲದ ಅಲೆದಾಡುವ ಯುವ ಜನರು, ಕುಲುಕುಲು ನಗುತ್ತಾ ಬಣ್ಣದ ಸಿರೆಯುಟ್ಟು ಚಿಣ್ಣರನ್ನು ಎತ್ತಿಕೊಂಡು ಕಲರವ ಮಾಡುತ್ತಿರುವ ಗೃಹಿಣಿಯರು ಎಲ್ಲರ ನೋಟ ಲಾಲಬಾಗಿನ ಕಡೆಗೆ. ಕೆಂಪು ತೋಟದಲ್ಲಿ ಹೂ ಹಬ್ಬದ ನೂರನೆ ವರ್ಷಾಚರಣೆ. ಅದಕ್ಕಾಗಿ ದೇಶವಿದೇಶದ ಲಕ್ಷಾಂತರ ಹೂಗಳ ಜಮಾವಣೆ, ನೂರಾರು ಬಣ್ಣದ, ಸಾವಿರಾರು ಜಾತಿ ದೇಶವಿದೇಶಗಳ ಪುಷ್ಪ ಮೇಳ. ಬರಿ ಸಂಖ್ಯೆಯಲ್ಲಿ ಮಾತ್ರವಲ್ಲ ಅವುಗಳ ಜೋಡಣೆಯಿಂದಲೂ ಕಲೆಯ ಕಂಪು  ಹರಡಿ ಕಣ್ಣಿಗೆ ತಂಪು, ಮನಸಿಗೆ ಇಂಪು ಕೊಡುತ್ತಿರುವ ಸುಮಗಳ ಸುಮಧುರ ಲಾಸ್ಯ ಲಕ್ಷಾಂತರ ನೋಡುಗರ ಕಣ್ಮನ ತಣಿಸುತ್ತಲಿದೆ.

ರಾಷ್ಟ್ರೀಯ ದಿನಗಳಂದು ಲಾಲಬಾಗಿನ ಗಾಜಿನ ಮನೆಯಲ್ಲಿ ಫಲ ಪುಷ್ಪ ಪ್ರದರ್ಶನ ಈಗ ದಶಕ ದಶಕಗಳಿಂದ ಸಾಗಿಬಂದ ಪರಂಪರೆ. ಇಂದಿಗೆ ಬರೋಬ್ಬರಿ ನೂರುವರ್ಷದ ಇತಿಹಾಸ. ದೇಶ ವಿದೇಶ ಪುಷ್ಪಗಳ ಜತೆಗೆ ಅವುಗಳ ಕಲಾತ್ಮಕ ಸೃಜನಶೀಲತೆಯ ಸಂಕೇತ. ಬಹಳ ಸಲ ಯಾವುದೋ ಒಂದು ವಿಷಯದ ಮೇಲೆ, ಅವುಗಳ ಜೋಡಣೆ ಕೇಂದ್ರೀಕೃತವಾಗಿರುವುದು. ಭಾರತೀಯ ಹಬ್ಬಗಳ ಪ್ರದರ್ಶನ ಒಂದು ವರ್ಷವಾದರೆ, ಋತು ವೈಭವದ ಸೌಂದರ್ಯ ಮತ್ತೊಂದು ವರ್ಷ. ಇತ್ತೀಚಿನ ದಿನಗಳಲ್ಲಿ ಅದು ಇತಿಹಾಸ, ಸಾಹಿತ್ಯ, ಸಂಗೀತಗಳ ಸಂಗಮವಾಗಿ ರಸಿಕರ ಮನಸೆಳೆಯುತ್ತದೆ. ಪ್ರತಿವರ್ಷ ಒಂದೊಂದು ವಿಷಯಾಧಾರಿತ ವ್ಯವಸ್ಥೆಯಿಂದ ಪ್ರದರ್ಶನ ಹೆಚ್ಚಿನ ಮೆರಗು...

 ಬಾಬು ಕರಡಿ ಸರಣಿ:ದೂರದ ಸಂಬಂಧಿ ಯಾರಬ್

ಚಿಕ್ಕಂದಿನಲ್ಲಿ ಹೆದರುತ್ತೇನೆಂದು ಕರಡಿಯವನ ಕೈಯಲ್ಲಿ ಅಮ್ಮ ತಾಯಿತವೊಂದನ್ನು ಕಟ್ಟಿಸಿದ್ದಳು, ತಾಯಿತ ಕಟ್ಟಿಸುವುದಕ್ಕಿಂತ ಮುಂಚೆ ಆ ಕರಡಿ ಮುಣ ಮುಣ ಅಂತ ಅದೇನೋ ಮಂತ್ರ ಹೇಳಿ ಉಫ್ ಅಂತ ತಾಯಿತವನ್ನು ಉಗುಳಿತ್ತು. ಆ ತಾಯಿತ ಕರಡಿಯಾಡಿಸುವವನ ಕೈಸೇರಿ ನನ್ನ ಕುತ್ತಿಗೆಗೆ ತಲುಪಿತ್ತು. ಅಮ್ಮ ಒಂದೋ, ಎರಡು ರೂಪಾಯಿ ಕೊಟ್ಟಿರಬೇಕು, ಆಗಿನ ಕಾಲಕ್ಕೆ ಅದು ದೊಡ್ಡ ಮೊತ್ತ. ಆ ಕರಡಿ ಆಡಿಸುವವ ಆಗಾಗ ಕನಸಿನಲ್ಲಿ ಬಂದು ಕಾಡುತ್ತಿದ್ದವನು ಇವನೇ ಇರಬೇಕೆಂದುಕೊಂಡೆ. ಪ್ರಾಥಮಿಕ ಶಾಲೆಯಲ್ಲಿ ನಮ್ಮ ಹನುಮಂತರಾಯಪ್ಪ ಮೇಷ್ಟ್ರು ರಾಗಬದ್ಧವಾಗಿ ಹಾಡುತ್ತಿದ್ದ ಕರಡಿಯ ಕುಣಿತ ಪದ್ಯ ‘ಕರಡಿಯ ಕುಣಿಸುತ ಬಂದನು ಬಾವ’ ಮತ್ತೆ ನೆನಪಾಯಿತು. ಈ ನೆನಪುಗಳಿಗೆ ಬೆನ್ನು ಮಾಡಿ ಬಹಳ ವರ್ಷ ಆಯಿತೆಂದು ಕಾಣುತ್ತದೆ.

ಆದರೆ, ಬಹುಶಃ ೧೯೯೦ ದಶಕದಲ್ಲಿರಬೇಕು, ಆಗ ಉದಯ ಟೀವಿಯದೇ ದರ್ಬಾರು, ಅದರ ರಾತ್ರಿ ವಾರ್ತೆಯಲ್ಲಿಬೆಂಗಳೂರಿನ ನೆಲಮಂಗಲದ ಬಳಿಯಲ್ಲಿ ಒಬ್ಬ ಕರಡಿಯಾಡಿಸುವವನನ್ನು ಹಿಡಿದು ಜೈಲಿಗೆ ಕಳಿಸಲಾಗಿದೆ ಎಂಬ ಸುದ್ದಿ ಮತ್ತೆ ಕರಡಿಯಾಡಿಸುವವನ ನೆನಪನ್ನು ಕೆದಕಿತು. ನಾನು ಕಾಲೇಜು ಸೇರಿದ್ದೆ. ಆಗಿನ್ನು ತಾತ ಬದುಕಿದ್ದರು, ಅವರು ಹೇಳುತ್ತಿದ್ದ ಅವರ ಭಾವನ ಕತೆ ಮತ್ತೆ ಕೇಳಬೇಕೆನಿಸಿತು. ತಾತನ ಭಾವ ಕರಡಿಯೊಂದಿಗೆ...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
‘ಆಡುಜೀವನ’ದ ಹದಿನಾಲ್ಕನೇ ಕಂತು

ಅಧಿಕ ವ್ಯತ್ಯಾಸವಿಲ್ಲದಂತಹ ಇನ್ನೊಂದು ಹಗಲೂ ಅಸ್ತಮಿಸಿತು. ಅಷ್ಟರೊಳಗೆ ಆಡುಗಳನ್ನು ನಡೆದಾಡಿಸಲು ಕರೆದೊಯ್ಯುವುದಕ್ಕೆ ಭೀಕರರೂಪಿ ನನಗೆ ಹಲವು ರೀತಿಯಲ್ಲಿ ತರಬೇತಿ ನೀಡಿದ. ಆಡುಗಳ ಹಿಂದೆ ನಿಂತು ಓಡಿಸದೆ ಪಕ್ಕಗಳಲ್ಲಿ ನಿಂತು ಮುನ್ನಡೆಸುವುದನ್ನೂ ಮುಂದಕ್ಕೆ ಜಿಗಿದೋಡಲು ಶ್ರಮಿಸುವವನ್ನು ಹೊಡೆದು ದಾರಿಗೆ ತರುವುದನ್ನೂ ಅವನು ತೋರಿಸಿಕೊಟ್ಟ. ಒಂದೊಂದು...

ಗಣರಾಜ್ಯದ ದಿನದಂದು ಒಂದು ಹಳೆಯ ಶಾಲಾ ನೆನಪು

ಈ ವಾರದಲ್ಲಿ ಪುಟ್ಟ ಹುಡಗರಿಬ್ಬರ ಭಾವಚಿತ್ರಗಳಿರುವ ಜಾಹೀರಾತುಗಳೆರಡು ಪತ್ರಿಕೆಯೊಂದರ ಮೂಲೆಯಲ್ಲಿ ಬಂತು. ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕ, ವಿಧೇಶ ಪ್ರವಾಸ ಇತ್ಯಾದಿಗಳಿಗೆ ಸಂತೋಷ ಸೂಚಿಸಿ ಬರುವ ಜಾಹೀರಾತುಗಳನ್ನೂ, ಮರಣ ವಾರ್ಷಿಕ ಇತ್ಯಾದಿಗಳಿಗೆ ಕಂಬನಿಯಿಡುವ ಶ್ರದ್ಧಾಂಜಲಿಗಳನ್ನೂ ನೋಡಿ ಈ ಚಿತ್ರಗಳ ಜೊತೆ ಸಂತೋಷವನ್ನೋ, ಬೇಸರವನ್ನೋ ಹಂಚಿಕೊಳ್ಳುವ...

ಬಿಳಿಯ ಮೋಡದ ಹಾದಿ- ೮: ಗುರುವಿನ ಸನ್ನಿಧಿ

ಆ ದೂರದ ಐಡಿಯಾಗಳೆಲ್ಲ ಈಗ ನನ್ನ ಕಣ್ಣೆದುರಿಗೇ ಇರುವುದನ್ನು ಕಂಡು ನನಗೆ ಆದ ಸಂತೋಷಕ್ಕೆ, ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಇಲ್ಲಿ ಇದ್ದ ಆ ಗುರು-ತನ್ನ ಬಳಿಗೆ ಬಂದವರನ್ನೆಲ್ಲ ತನ್ನ ಜ್ಞಾನದಿಂದ ಮಾತ್ರವಲ್ಲ ತನ್ನ ಸಾನ್ನಿಧ್ಯದಿಂದಲೇ ಪ್ರಭಾವಗೊಳಿಸುತಿದ್ದ, ಪವಿತ್ರ ಗ್ರಂಥಗಳು ಬೋಧಿಸುವ ಸಂಗತಿಗಳನ್ನು ಬುದ್ಧನ ಕಾಲದಲ್ಲಿ ಆದಂತೆ ಈಗಲೇ ಇಲ್ಲೇ...

 
 ಡಾಕ್ಟರಮ್ಮನ ಡೈರಿಯ ಕುರಿತು ರಹಮತ್ ತರೀಕೆರೆ

ಕನ್ನಡದಲ್ಲಿ ಬರೆಹ ಮಾಡುವ ಅನೇಕ ವೈದ್ಯರು ನನಗೆ ಪರಮಾಪ್ತರು. ಅವರಲ್ಲಿ  ಬೆಸಗರಹಳ್ಳಿ ರಾಮಣ್ಣ, ಧಾರವಾಡದ ಸಂಜೀವ ಕುಲಕರ್ಣಿ, ಮೈಸೂರಿನ ಡಾ. ಲಕ್ಷ್ಮೀನಾರಾಯಣ. ಬೆಂಗಳೂರಿನ ಡಾ. ವಾಸು, ಹೊನ್ನಾವರದ ಡಾ. ಅನುಪಮಾ, ರೈತನಾಯಕರಾದ ದೊಡ್ಡಬಳ್ಳಾಪುರದ ಡಾ. ವೆಂಕಟರೆಡ್ಡಿ, ತುಮಕೂರಿನ ಡಾ. ಮಿರ್ಜಾ ಬಶೀರ್, ಚಿಕ್ಕನಾಯಕನಹಳ್ಳಿಯ ಡಾ. ರಘುಪತಿ, ತಾಳ್ಯದ ಡಾ. ರಮಾನಂದ ಮುಂತಾದವರು. ಕೊನೆಯ ಮೂವರು ಪ್ರಾಣಿವೈದ್ಯರು. ಇವರೆಲ್ಲರ ಸಂಗದಿಂದ ನಾನು ಬಹಳಷ್ಟು ತಿಳಿವಳಿಕೆ ಪಡೆದಿದ್ದೇನೆ. ಈ ಎಲ್ಲರಲ್ಲೂ ಇರುವ ಸಮಾನ ಅಂಶವೆಂದರೆ, ಸಾಹಿತ್ಯ ಮತ್ತು ನಮ್ಮ ಸಮಾಜದ ಆರೋಗ್ಯಕ್ಕೆ ಕಳವಳಿಸುವ ಚಳುವಳಿಗಾರತನ.

ಇವರಲ್ಲೆಲ್ಲ ವಯಸ್ಸಿನಲ್ಲಿ ಚಿಕ್ಕವರು ಡಾ. ಅನುಪಮಾ ಅವರು. ಹೊನ್ನಾವರ ಸೀಮೆಯ ಕವಲಕ್ಕಿ ಎಂಬ ಪುಟ್ಟ ಊರಿನಲ್ಲಿ ವೈದ್ಯೆಯಾಗಿರುವ ಇವರು, ಈ ಭಾಗದಲ್ಲಿ ಎಷ್ಟೊಂದು ಜನಪ್ರಿಯರಾಗಿದ್ದಾರೆಂದು ನಾನು ಜನರನ್ನು ಮಾತಾಡಿಸುತ್ತ ಕಂಡುಕೊಂಡೆ. ಅನುಪಮಾ ಅವರನ್ನು ಕಂಡವರಿಗೆ ಗೌರವ ಹುಟ್ಟಲು ಕಾರಣ, ಅವರು ಜನಪರ ವೈದ್ಯರಾಗಿ ಪಡೆದಿರುವ ಜನಮನ್ನಣೆ ಮಾತ್ರವಲ್ಲ, ಅವರ ಓದಿನ ಹುಚ್ಚು ಮತ್ತು ಅವರು ಕವಲಕ್ಕಿ ಹೊನ್ನಾವರಗಳಲ್ಲಿ ತಮ್ಮ ಜೀವನ ಸಂಗಾತಿಯಾಗಿರುವ ಡಾ. ಕೃಷ್ಣ ಅವರೊಡಗೂಡಿ ಸಂಘಟಿಸುವ ಸಾಹಿತ್ಯಕ ಕಾರ್ಯಕ್ರಮಗಳು. ಒಮ್ಮೆ ಅವರ ಮನೆಗೆ ಹೋದ ಹೊತ್ತಲ್ಲಿ ಅವರ ಗ್ರಂಥಾಲಯ ಕಂಡು ಬೆರಗಾದೆ. ಚರಿತ್ರೆಯನ್ನು ಫಿಕ್ಷನ್ ತರಹ ಬರೆಯುತ್ತಿರುವ ವಿಲಿಯಂ ಡ್ಯಾಲ್‌ರಿಂಪಲನ ಹೆಸರು ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಅನೇಕ ಅಧ್ಯಾಪಕರಿಗೆ ಗೊತ್ತಿದೆಯೊ ಇಲ್ಲವೊ, ಆದರೆ ಅನುಪಮಾ ಮಾತ್ರ ಅವನ ಕೃತಿಗಳನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಅವರ ಜ್ಞಾನದ ಹಸಿವು ಅಪೂರ್ವವಾಗಿದೆ.  

ಇಂತಹ ಅನುಪಮಾ ಅವರು ಅಂತರ್ಜಾಲ ಪತ್ರಿಕೆಯಾದ ‘ಕೆಂಡಸಂಪಿಗೆಯಲ್ಲಿ ಒಂದು ವರ್ಷಕಾಲ ಬರೆದ ಅಂಕಣ ಬರೆಹಗಳ ಈ ಸಂಕಲನಕ್ಕೆ ನಾನು ಮುನ್ನುಡಿ ಬರೆಯಬೇಕೆಂದು ಅಪೇಕ್ಷಿಸಿದ್ದಾರೆ....

Font Help
Site Web
ಜನಮತ
ಐದರ ವಸಂತದಲ್ಲಿ ಕೆಂಡಸಂಪಿಗೆ
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige