ಅದು ಸಕಲೇಶಪುರದ ಸಮೀಪದ ಪುಟ್ಟ ಹಳ್ಳಿ. ಒಂದು ನೂರು ಕುಟುಂಬಗಳಿವೆ. ಊರಾಚೆ ಐದಾರು ಮನೆಗಳು. ಎಲ್ಲರೂ ದಲಿತರು. ಎಸ್ಟೇಟಿನ ಹೊರಗೆ ಲೈನ್ ಮನೆ ಇದೆ. ಅಲ್ಲಿ ಎಲ್ಲಿಂದಲೋ ಬಂದವರು ಎಸ್ಟೇಟಿನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ದಲಿತರ ಕೇರಿಯಲೊಬ್ಬನಿದ್ದಾನೆ. ಆತನ ಹೆಸರು ಕೋಡಿಗಯ್ಯ. ವಯಸ್ಸು ೭೫ ರ ಅಂದಾಜು ಇರಬಹುದು. ಜೀತ ಮಾಡುತ್ತಿರುವರು ಎಂಥಹವರು ಅವರ ಪರಿಸ್ಥಿತಿ ಏನು ಎಂದು ಖುದ್ದು ಕರೆದುಕೊಂಡು ಹೊರಟ ಬೈರಪ್ಪ, ನಿಜ ದರ್ಶನ ಮಾಡಿಸುತ್ತೇವೆ ಎಂದರು. ಈ ಮಧ್ಯೆ ನಾವು ಆ ಗ್ರಾಮದ ಸಮೀಪ ಬಂದಾಗ ಇಲ್ಲಿ ಯಾರಾದರೂ ಜೀತ ಮಾಡುತ್ತಿದ್ದಾರೆಯೇ ಎಂದು ವಿಚಾರಿಸಿದಾಗ ಅಲ್ಲೊಬ್ಬ ಕೋಡಿಗಯ್ಯನ ವಿಚಾರ ತಿಳಿಸಿದ. ಆತನನ್ನು ಭೇಟಿ ಮಾಡಬೇಕೆಂದು ಹೊರಟೆವು. ನಮಗೆ ಹೇಳಿದ ವ್ಯಕ್ತಿಯ ಮಾಹಿತಿಯಂತೆ ‘ನಾವು ನೋಡಲು ಹೊರಟ ವ್ಯಕ್ತಿ ಅಲ್ಲಿಯ ನಿವಾಸಿ. ಹೆಂಡತಿ ಮಕ್ಕಳಿದ್ದರೂ ಅವನು ಮನೆಗೆ ಹೋಗಲಾರ. ಗೌಡರ ಮನೆಯ ತೋಟದಲ್ಲೇ ಅವನ ವಾಸ. ಅದೂ ಇದು ಕೆಲಸ ಮಾಡಿಕೊಂಡು ಇರುತ್ತಾನೆ. ನಾನು ಹುಟ್ಟಿದಾಗಿಂದ ನೋಡುತ್ತಿದ್ದೇನೆ. ಮಹಾನ್ ನಿಷ್ಠ ಅಪ್ಪಿ ತಪ್ಪಿ ಅವರ ಸಾಹುಕಾರನ ಬಗ್ಗೆ ಬೈಯ್ಯಬೇಡಿ ಎಂದು ಎಚ್ಚರಿಸಿದ್ದ. ನೀವು ಅವನನ್ನು ಖುದ್ದು ಕಂಡು ಮಾಹಿತಿ ಪಡೆದುಕೊಳ್ಳಿ ಎಂದಾಗ ಆತನ ಮನೆಯತ್ತ ಹೊರಟಿದ್ದೆವು.
ಆತನ ಮನೆಗೆ ಹೋದಾಗ ಬೆಳಗ್ಗೆ ೯.೩೦. ಊರ ಹೊರಗಿನ ಪ್ರದೇಶ. ಇವನದೊ ಏಕೈಕ ಮನೆ. ಅಲ್ಲಲ್ಲಿ ದೂರದಲ್ಲಿ ಒಂದೊಂದು ಮನೆಗಳಿವೆ. ಹೆಂಡತಿ ಖಾಯಿಲೆ ಬಿದ್ದಿದ್ದಳು. ಇದ್ದ ಒಬ್ಬ ಮಗ ಮೆನೆ ಬಿಟ್ಟು ಯಾವಾಗಲೋ ಹೋದ ಎಂಬ ಮಾಹಿತಿ....