ಮೇ ೨೧, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಅದು ಸಕಲೇಶಪುರದ ಸಮೀಪದ ಪುಟ್ಟ ಹಳ್ಳಿ.  ಒಂದು ನೂರು ಕುಟುಂಬಗಳಿವೆ. ಊರಾಚೆ ಐದಾರು ಮನೆಗಳು. ಎಲ್ಲರೂ ದಲಿತರು. ಎಸ್ಟೇಟಿನ ಹೊರಗೆ ಲೈನ್ ಮನೆ ಇದೆ. ಅಲ್ಲಿ ಎಲ್ಲಿಂದಲೋ ಬಂದವರು ಎಸ್ಟೇಟಿನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ದಲಿತರ ಕೇರಿಯಲೊಬ್ಬನಿದ್ದಾನೆ. ಆತನ ಹೆಸರು ಕೋಡಿಗಯ್ಯ. ವಯಸ್ಸು ೭೫ ರ ಅಂದಾಜು ಇರಬಹುದು.  ಜೀತ ಮಾಡುತ್ತಿರುವರು ಎಂಥಹವರು ಅವರ ಪರಿಸ್ಥಿತಿ ಏನು ಎಂದು ಖುದ್ದು ಕರೆದುಕೊಂಡು ಹೊರಟ ಬೈರಪ್ಪ, ನಿಜ ದರ್ಶನ ಮಾಡಿಸುತ್ತೇವೆ ಎಂದರು. ಈ ಮಧ್ಯೆ ನಾವು ಆ ಗ್ರಾಮದ ಸಮೀಪ ಬಂದಾಗ ಇಲ್ಲಿ ಯಾರಾದರೂ ಜೀತ ಮಾಡುತ್ತಿದ್ದಾರೆಯೇ ಎಂದು ವಿಚಾರಿಸಿದಾಗ ಅಲ್ಲೊಬ್ಬ ಕೋಡಿಗಯ್ಯನ ವಿಚಾರ ತಿಳಿಸಿದ. ಆತನನ್ನು ಭೇಟಿ ಮಾಡಬೇಕೆಂದು ಹೊರಟೆವು. ನಮಗೆ ಹೇಳಿದ ವ್ಯಕ್ತಿಯ ಮಾಹಿತಿಯಂತೆ ‘ನಾವು ನೋಡಲು ಹೊರಟ ವ್ಯಕ್ತಿ ಅಲ್ಲಿಯ ನಿವಾಸಿ. ಹೆಂಡತಿ ಮಕ್ಕಳಿದ್ದರೂ ಅವನು ಮನೆಗೆ ಹೋಗಲಾರ. ಗೌಡರ ಮನೆಯ ತೋಟದಲ್ಲೇ ಅವನ ವಾಸ. ಅದೂ ಇದು ಕೆಲಸ ಮಾಡಿಕೊಂಡು ಇರುತ್ತಾನೆ. ನಾನು ಹುಟ್ಟಿದಾಗಿಂದ ನೋಡುತ್ತಿದ್ದೇನೆ. ಮಹಾನ್ ನಿಷ್ಠ ಅಪ್ಪಿ ತಪ್ಪಿ ಅವರ ಸಾಹುಕಾರನ ಬಗ್ಗೆ ಬೈಯ್ಯಬೇಡಿ ಎಂದು ಎಚ್ಚರಿಸಿದ್ದ. ನೀವು ಅವನನ್ನು ಖುದ್ದು ಕಂಡು ಮಾಹಿತಿ ಪಡೆದುಕೊಳ್ಳಿ ಎಂದಾಗ ಆತನ ಮನೆಯತ್ತ ಹೊರಟಿದ್ದೆವು.

ಆತನ ಮನೆಗೆ ಹೋದಾಗ ಬೆಳಗ್ಗೆ ೯.೩೦. ಊರ ಹೊರಗಿನ ಪ್ರದೇಶ. ಇವನದೊ ಏಕೈಕ ಮನೆ. ಅಲ್ಲಲ್ಲಿ ದೂರದಲ್ಲಿ ಒಂದೊಂದು ಮನೆಗಳಿವೆ.   ಹೆಂಡತಿ ಖಾಯಿಲೆ ಬಿದ್ದಿದ್ದಳು. ಇದ್ದ ಒಬ್ಬ ಮಗ ಮೆನೆ ಬಿಟ್ಟು ಯಾವಾಗಲೋ ಹೋದ ಎಂಬ ಮಾಹಿತಿ....

 ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ

ನಾನು ಎರಡನೇ ಕ್ಲಾಸಿನಲ್ಲಿರುವಾಗ ನಡೆದ ಘಟನೆ. ನಾನಾಗ ನಮ್ಮ ಕ್ಲಾಸಿನ 'ಮಿನಿ ರೌಡಿ' ಎಂದು ಗುರುತಿಸಿಕೊಂಡಿದ್ದೆ. ಜನರನ್ನು ರೇಗಿಸೋದಂದರೆ ಏನೋ ಒಂದು ಖುಷಿ ಆಗ. ಅಸಂಬದ್ಧ ಶಬ್ದಗಳನ್ನು ಉಪಯೋಗಿಸಿ ಬಯ್ಯೋದೆಂದರಂತೂ ಖುಷಿಯೋ ಖುಷಿ.

ಅಕ್ಕನ ಜೊತೆಗೆ ಶಾಲೆಗೆ ನಡೆದು ಹೋಗುತ್ತಿದ್ದೆ. ಪಕ್ಕದ ಮನೆಯ ಮಾವ ಅನತಿ ದೂರದಲ್ಲಿ ಪದ್ಮುಂಜದ ಕಡೆಗೇ ಹೊರಟಿದ್ದರು.  ಸಿಕ್ಕಿದ್ದೇ ಚಾನ್ಸ್ ಅಂತ 'ಓಯ್!  ...ಮಾಮ' ಅಂತೆಲ್ಲಾ ಸುಮ್ಮನೇ ಬಯ್ದಿದ್ದೆ. ಅವರಿಗೇನೂ ಕೇಳಿಸಿರಲಿಲ್ಲ. ಕೇಳಬೇಕೆಂಬ ಉದ್ದೇಶವೂ ನನ್ನದಾಗಿರಲಿಲ್ಲ. ಸುಮ್ಮನೆ ಹುಚ್ಚು ಖುಷಿ ಅಷ್ಟೇ!

ಮಾವನಿಗೆ ಕೇಳದಿದ್ದರೂ ನನ್ನ ಅಕ್ಕ ಅದನ್ನು ಕೇಳಿಸಿಕೊಂಡಿದ್ದಳು. ತನ್ನ ಮುದ್ದಿನ ತಮ್ಮನ ಬಾಯಿಯಿಂದ ಬಂದಿದ್ದ ಅಪ್ಪಟ ಸಂಸ್ಕೃತ ಅವಳಿಗಂತೂ ಸುತಾರಾಂ ಇಷ್ಟವಾಗಿರಲಿಲ್ಲ.

ಸಂಜೆಯವರೆಗೆ ತೆಪ್ಪಗೆ ಶಾಲೆಯಲ್ಲಿದ್ದ ಅಕ್ಕ ಸಂಜೆ ಮನೆ ತಲುಪುತ್ತಲೇ ಅಪ್ಪನಿಗೆ ಸಂಪೂರ್ಣ ವರದಿ ಒಪ್ಪಿಸಿದಳು. ಅಪ್ಪನೋ ಸಂಜೆ ಹೊತ್ತಿಗೆ ಸಾಮಾನ್ಯವಾಗಿ ಕೋಪದಲ್ಲೇ ಇರುವವರು. ವಿಷಯ ತಿಳಿಯುತ್ತಲೇ ಅಕ್ಕನ ಎದುರಿಗೇ ನನ್ನನ್ನು ದರದರನೆ ಎಳೆದು ರಪ-ರಪ-ರಪ-ರಪನೆ ಬೆನ್ನಿಗೆ ಹೊಡೆದರು. ಬೆನ್ನಿನಲ್ಲಿ ಅಪ್ಪನ ಬರಿಗೈಯ ಕೆಂಪಾದ ಅಚ್ಚುಗಳು.

ಈ ಘಟನೆಯನ್ನು ಪ್ರತ್ಯಕ್ಷ ವೀಕ್ಷಿಸಿದ...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ

ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು.ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ...

ಅಂತ:ಪುರದ ಅಳುಗಳು:ಲಕ್ಷ್ಮೀಶಂಕರ ಜೋಶಿ ಅಂಕಣ

ನಾನು ಕಲಿಯುವಾಗ, ನನ್ನ ಕಾಲೇಜಿನಲ್ಲಿ ಹಿಸ್ಟರಿ ಪಾಠ ಮಾಡುವ ಮೇಷ್ಟ್ರೋಬ್ಬರು ಹೈದ್ರಾಬಾದ ಕರ್ನಾಟಕ ಪ್ರದೇಶದವರೇ! ಬಹಳ ಒಳ್ಳೆಯವರು. ಸಾಲಾಗಿ ಐದು ಹೆಣ್ಣು ಮಕ್ಕಳ ನಂತರ ಹುಟ್ಟಿದ ಮಗನನ್ನು ಹೂವಿನಂತೆ ಜೋಪಾನ ಮಾಡುತ್ತಿದ್ದರು. ಮಗನನ್ನು ಪಡೆಯುವ ಸಲುವಾಗಿಯೇ ಐದಾರು ಹೆಣ್ಣುಗಳನ್ನು ಹೆತ್ತಿದ್ದರೆಂದು ಅವರ ಮನೆ ಹತ್ತಿರವಿರುವ ಹೆಣ್ಣುಮಕ್ಕಳು...

ರಾಜೇಶ್ವರಿ ಕಥನ:ಕಾಡೆಂಬ ಕಡಲಿನ ಮೂರನೇ ಕಂತು

ನೂರು ವರ್ಷದ ಹಿಂದೆನೆ "ಪೂನಾದ ಪೋಚಾಸ್" ಎಂಬ ನರ್ಸರಿ ಇತ್ತೆಂದು ತಿಳಿದರೇ ಆಶ್ಚರ್ಯವಾಗುತ್ತೆ. ಅಮ್ಮನ ಅಣ್ಣ(ತಂದೆ) ಹೊಸ ಹೊಸ ಪ್ರಯೋಗಕ್ಕೆ ತೆರೆದುಕೊಳ್ಳುವವರಾಗಿದ್ದರೆಂದು ಹೇಳಿರುವೆನಷ್ಟೆ. ಅವರಿಗೆ ಅಣಬೆ ಬೆಳೆಯುವ ಜಾಹೀರಾತೊಂದು ಗಮನಕ್ಕೆ ಬಂದಿತಂತೆ - 'ಪೂನಾದ ಪೋಚಾಸ್" ಅಲ್ಲಿಂದ ಅಣಬೆ ಬೀಜ ತರಿಸಿಕೊಂಡು ಅಣಬೆ ಬೆಳೆಯಲು ಶತ ಪ್ರಯತ್ನಪಟ್ಟರು. ಹಲವಾರು...

 
 ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’

ಕಮಲಮ್ಮನವರಿಗೆ ಇನ್ನಿಲ್ಲದ ಆತಂಕವಾಗಿತ್ತು. ಮಗಳ ಮದುವೆಗಾಗಿ ಖರೀದಿಸಿದ್ದ ಎಲ್ಲಾ ಒಡವೆಗಳು ಇದ್ದರೂ ಮಗಳು ಇಷ್ಟಪಟ್ಟು ಆರಿಸಿದ್ದ ಕೆಂಪು ಹರಳಿನ ಸಣ್ಣ ಉಂಗುರದ ಸುಳಿವೇ ಇರಲಿಲ್ಲ. ಮಧ್ಯಾಹ್ನದಿಂದ ಅವರು ಹುಡುಕದ ಜಾಗವಿಲ್ಲ, ತಡಕದ ಮೂಲೆಯಿಲ್ಲ. ರೂಮಿನಲ್ಲಿದ್ದ ಬೀರು, ಹಾಸಿಗೆ, ಮಂಚ ಎಲ್ಲವನ್ನೂ ಎಳೆದೆಳೆದು ನಾಲ್ಕಾರು ಬಾರಿ ಹುಡುಕಿ ಸುಸ್ತಾಗಿದ್ದರು. ಅವರ ಮನದಲ್ಲಿ ಅದನ್ನು ಕದ್ದವರ ಬಗ್ಗೆ ಸಂಶಯ ಮೂಡಿತ್ತು. ಎಷ್ಟು ಸಾರಿ ಹುಡುಕಿದರೂ ಉಂಗುರ ಸಿಗದೇ ಹೋದಾಗ ಆ ಸಂಶಯ ಬೆಳೆದು ಹೆಮ್ಮರವಾಗಿತ್ತು. ಆದರೂ ಮನಸ್ಸಿನ ಮೂಲೆಯಲ್ಲಿ ಅದನ್ನು ಒಪ್ಪಿಕೊಳ್ಳಲು ಆಗದೇ ಅವರು ಚಡಪಡಿಸುತಿದ್ದರು. ಧಾರೆಯ ರೇಸಿಮೆ ಸೀರೆ ಮತ್ತು ಆ ಉಂಗುರದೊಂದಿಗಿದ್ದ ಎಲ್ಲಾ ಒಡವೆಗಳನ್ನು ಕೊನೆಯ ಬಾರಿ ನೋಡಿದವಳು ಅವಳೇ.. ಮನೆಗೆಲಸದ ಕೆಂಪಿ. ಅವಳು ಹೋದ ಮೇಲೆ ಎಲ್ಲಾ ಒಡವೆಗಳನ್ನು ಅವುಗಳ ಬಾಕ್ಸುಗಳಲ್ಲಿ ಜೋಪಾನವಾಗಿಟ್ಟಾಗ ಉಳಿದದ್ದು ಉಂಗುರದ ಬಾಕ್ಸು. ಅದರೊಳಗೆ ಉಂಗುರ ತೆಗೆದಿಡಲು ನೋಡಿದಾಗ ಅಲ್ಲಿ ಉಂಗುರ ಕಾಣದೇ ಅವರಿಗೆ ಆತಂಕವಾಗಿತ್ತು. ಅವಳು ನೋಡಿ ಎಲ್ಲವನ್ನೂ ಅವರೆದುರಿಗೇ ಸೀರೆಯೊಂದಿಗೆ ಇಟ್ಟು ಹೋಗಿದ್ದರೂ ಅವಳು ಯಾವ ಮಾಯದಲ್ಲಿ ಆ ಉಂಗುರವನ್ನು ಕದ್ದಳೆಂದು ಅವರಿಗೆ ತಿಳಿದಿರಲಿಲ್ಲ. ಆದರೂ ಇಷ್ಟು ವರ್ಷಗಳಿಂದ ಮನೆಯಲ್ಲಿ ಕೆಲಸ ಮಾಡುತಿದ್ದರೂ ಎಂದೂ ಇಂತಹ ಕೆಲಸ ಮಾಡಿದವಳಲ್ಲ... ಇಂದೇಕೆ ಇಂತಹ ಕೆಲಸ ಮಾಡಿದಳು ಎಂಬ ಚಿಂತೆ ಕಮಲಮ್ಮನವರ ತಲೆಯನ್ನ ಕೊರೆಯುತಿತ್ತು. ವಯಸ್ಸಾದ ಮೇಲೆ ಮನುಷ್ಯನಿಗೆ ದುರಾಸೆ ಜಾಸ್ತಿಯಾಗುತ್ತದೇನೋ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಮುಂದೇನು ಮಾಡುವುದೆಂದು ತಿಳಿಯದೆ ಖಿನ್ನರಾಗಿ ಕುಳಿತುಬಿಟ್ಟರು. ಅವರ ಮನಸ್ಸು ಇಪ್ಪತ್ತು ವರ್ಷದ ಹಿಂದಕ್ಕೆ ತೆರಳಿತು.

ಕೆಂಪಮ್ಮ ಕಮಲಮ್ಮನವರ ಮನೆಗೆ ಕೆಲಸ ಕೇಳಿಕೊಂಡು ಬಂದಾಗ ಅವಳಿಗಿನ್ನೂ ಇಪ್ಪತ್ತು ವರ್ಷ. ಕೈಯ್ಯಲ್ಲೊಂದು ಹಸುಗೂಸು. ಮದುವೆಯಾಗಿ ಮೂರು ವರ್ಷದ ಬಳಿಕ ಕೂಲಿ ಕೆಲಸ...

Font Help
Site Web
ಜನಮತ
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige