ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ - ಪಿಂಕ್ ಪ್ಯಾಂತರ್‍ ಹಾಗು ಒಂಟಿತನ    
ಸುದರ್ಶನ್
ಬುಧವಾರ, 6 ಆಗಸ್ಟ್ 2008 (04:29 IST)
ಕೆಲಸದ ಬಳಿ ಟ್ರೈನ್ ಇಳಿದು ಉದ್ದದ ಸುರಂಗದ ಮೂಲಕ ನಡೆದು ಹೋಗಬೇಕು. ಸಿಡ್ನಿಯ ಹೈಡ್ ಪಾರ್ಕ್ ಅಡಿಯ ಆ ಒಳದಾರಿಯಲ್ಲಿ ದೂರದ ಮೆಟ್ಟಿಲ ಕಡೆ ನೋಡುತ್ತಾ ನಡೆಯುವುದು ಒಂದು ಚಂದದ ಅನುಭವ. ಒಂದೆರಡು ನಿಮಿಷ ಯಾವುದಾದರೂ ಸಂಗತಿಯ ಬಗ್ಗೆ ಮನಸ್ಸು ಧ್ಯಾನಸ್ಥವಾಗುತ್ತದೆ.

ಅಲ್ಲಿ ಮತ್ತೊಂದು ವಿಶೇಷವೂ ಇದೆ. ದಿನಾಲೂ ಅಲ್ಲದಿದ್ದರೂ, ವಾರಕ್ಕೊಂದೆರಡು ದಿನ ಯಾರಾದರೂ ಅಲ್ಲಿ ಹಾಡುತ್ತಲೋ, ವಾದ್ಯ ನುಡಿಸುತ್ತಲೋ ಇರುತ್ತಾರೆ. ಆ ಸಂಗೀತದ ದನಿ ಒಂದು ವಿಚಿತ್ರ ಬಗೆಯ ಕಳೆ ಆ ಒಳದಾರಿಗೆ ತಂದು ಕೊಡುತ್ತದೆ. ಆ ತೂಬಿನಲ್ಲಿ ಸಣ್ಣಗೆ ಮರುದನಿ ಕೊಡುತ್ತಾ ತುಂಬಿಕೊಳ್ಳುತ್ತದೆ. ಬರೇ ಪಕ್ಕದ ಗೋಡೆಯ ಚೌಕವನ್ನೆಣಿಸುತ್ತಲೋ ಅಥವಾ ನೆಲದ ಮೇಲೆ ಕಣ್ಣಿಟ್ಟೋ ನಡೆಯುತ್ತಿರುತ್ತೇವೆ. ಸಂಗೀತ ಪರಿಚಿತವಿರಬಹುದು ಇಲ್ಲದಿರಬಹುದು. ಆದರೂ ಸಂಗೀತದ ಮಟ್ಟು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಆ ಪಲುಕು ನೆನಪಿಸುವ ಮಂದಿಯೋ, ಸಂಗತಿಯೋ, ಜಾಗವೋ ನಮ್ಮೊಡನೆ ಇರುತ್ತದೆ. ತುದಿಯ ಮೆಟ್ಟಿಲು ತಲುಪಿ ಒಳದಾರಿಯ ಹೊಟ್ಟೆಯಿಂದ ಹೊರಗೆದ್ದು ಬೆಳಕಿಗೆ ಬರುವವರೆಗೂ.

ಈವತ್ತು ಅಲ್ಲಿ ಕೇಳಿದ್ದು ಪಿಂಕ್ ಪ್ಯಾಂತರ್‍ ಸಂಗೀತ. ತುಂಟ ಡಿಟೆಕ್ಟಿವ್‌ ಸಂಗೀತವಾದರೂ, ಕೇಳಿದ್ದು ಕುಣಿಯವಂತೇನೂ ಇರಲಿಲ್ಲ. ನುಡಿಸುವವ ಅಷ್ಟೇನೂ ಕುಶಲನೂ ಅನಿಸಲಿಲ್ಲ. ಮೂಲ ಸಂಗೀತದ ನಡೆಗಿಂತಲೂ ಕೊಂಚ ನಿಧಾನಕ್ಕೆ ಇತ್ತು. ತಡೆತಡೆದು ಅಲ್ಲವಾದರೂ ನುಡಿಸುತ್ತಿರುವವ ಸ್ವರಗಳನ್ನು ಹುಡುಕುಡುಕಿ ನುಡಿಸುತ್ತಿರಬಹುದು ಅನಿಸುವಂತಿತ್ತು. ಮೂಲ ಸಂಗೀತಕ್ಕಿಂತ ನಿಧಾನವಾದ್ದರಿಂದ ಅದಕ್ಕೆ ಬೇರೇನೋ ಬಂದು ಸೇರಿಕೊಂಡಂತೆ ಅನಿಸುತ್ತಿತ್ತು. ಅದನ್ನು ನುಡಿಸುವವನ ಮುಖ ನೋಡುವ ತವಕವಾಯಿತು.

ನುಡಿಸುತ್ತಿದ್ದವ ದೊಡ್ಡ ಕಾಯದ ಬಿಳಿಯ ಯುವಕ. ಮಾಸಿದ ಜೀನ್ಸ್, ಹರಿದ ಟೀಶರ್ಟ್, ಕುರುಚಲು ಗಡ್ಡದವ. ಸಣ್ಣ ಡಬ್ಬದ ಮೇಲೆ ಕೂತಿದ್ದಾನೆ. ಸಣ್ಣ ಕೊಳಲಿನಂತಹ ಮರದ ರೆಕಾರ್ಡರ್‍ ತುಟಿಗಿಟ್ಟುಕೊಂಡಿದ್ದಾನೆ. ಬೆರಳುಗಳು ಸಲೀಸಾಗಿ ಓಡಾಡುತ್ತಿಲ್ಲವಾದರೂ ಕೇಳುತ್ತಿದ್ದ ಮಟ್ಟಿಗೆ ಏನೋ ಮೋಹಕತೆ ಇದೆ. ಕಪ್ಪು ಬೀನಿಯನ್ನು ಮುಂದಿಟ್ಟುಕೊಂಡಿದ್ದಾನೆ. ಅದರಲ್ಲೊಂದಷ್ಟು ಬಿಡಿಕಾಸು ಬಿದ್ದಿದೆ. ಹತ್ತಿರ ಬರುತ್ತಲೂ ಕೈ ತಾನೇ ತಾನಾಗಿ ಜೇಬಲ್ಲಿ ನುಸುಳಿ ಒಂದೆರಡು ಕಾಸು ತೆಗೆದು ಬೀನಿಗೆ ಹಾಕಿತು. ಅವನ ಮುಖ ನೋಡಿದೆ. ಕಣ್ಣು ಮುಚ್ಚಿಕೊಂಡಿದ್ದ. ಕೆಲಸಕ್ಕೆ ಗಡಿಬಿಡಿಯಲ್ಲಿ ಓಡುತ್ತಿರುವವರಿಗೆ ಅಡ್ಡವಾದರೂ ಪರವಾಗಿಲ್ಲ ಎಂದು ಒಂದು ಕ್ಷಣ ಅವನ ಮುಂದೆ ನಿಂತೆ.

ಕಣ್ಣು ತೆರೆದು ನಗದೇ ದಿಟ್ಟಿಸಿದ. ಯಾಕೋ ಆ ಕಣ್ಣಲ್ಲಿ ತೀವ್ರ ಒಂಟಿತನ ಕಂಡಿತು. ಇದೊಂದೇ ಮಟ್ಟು ಇವನಿಗೆ ಬರುವುದೇನೋ ಅನಿಸಿತು. ಅದು ಅವನಿಗೆ ಏನೇನು ನೆನಪಿಸುತ್ತಿರಬಹುದು? ಆ ಮಟ್ಟಿನ ಹಿಂದೆ ಯಾವಾವ ನೋವುಗಳು, ಖುಷಿಗಳು ಅವನನ್ನು ಕಾಡುತ್ತಿರಬಹುದು?

ಮರುಗಳಿಗೆ ತಿರುಗಿ ನಡೆದೆ. ಒಳದಾರಿಯ ತುದಿಯಲ್ಲಿರುವ ಮೆಟ್ಟಿಲು ಹತ್ತುವಾಗ ಹೆಜ್ಜೆ ಭಾರವೆನಿಸಿತು. ಹೌದು ಗೊತ್ತಾಯಿತು. ಆ ಸಂಗೀತದಲ್ಲಿ ಇದ್ದದ್ದು ಏನೋ  ಕಳಕೊಂಡ, ಏನೋ ಸಿಕ್ಕದ, ಏನೋ ಬೇಕೆಂದು ಹಂಬಲಿಸುವ ಒಂಟಿತನ. ಪಿಂಕ್ ಪ್ಯಾಂತರಿನಂತಹ ತುಂಟ ಸಂಗೀತದಲ್ಲೂ ಒಂಟಿತನ ಹೊಮ್ಮಿಸಿದನಲ್ಲ ಎಂದುಕೊಂಡೆ. ಅವನಿಗೆ ಅದು ಸಾಧ್ಯವಾದ ಬಗೆ ನನಗೆ ಅಚ್ಚರಿಯಾಯಿತು. ಆ ಜನಪ್ರಿಯ ಮಟ್ಟಿನಡಿಯಲ್ಲಿ, ಅವನ ನುಡಿಸುವಿಕೆಯಲ್ಲಿ ಹೊಸದೊಂದು ಉಪಪಾಠ ಕಂಡಂತಾಗಿ, ಅದು ಹತ್ತು ಹಲವಾರು  ಸಾಧ್ಯತೆಗಳನ್ನು ತೆರೆದಿಟ್ಟು ಮೈ ಝುಮ್ಮೆಂದಿತು. ಸುರಂಗದ ಮೆಟ್ಟಿಲು ಹತ್ತಿ ಹೊರಬಂದು, ಚಳಿಗಾಲದ ತೆಳುಬಿಸಿಲಿಗೆ ಮುಖವೊಡ್ಡಿ ನಿಟ್ಟುಸಿರುಬಿಟ್ಟೆ.

ಒಳಗಿಂದ ಒಂಟಿತನ ಸವರಿಸಿಕೊಂಡ ಪಿಂಕ್ ಪ್ಯಾಂತರ್‍ ಮಟ್ಟು ಇನ್ನೂ ಕೇಳುತ್ತಲೇ ಇತ್ತು.
ಪುಟದ ಮೊದಲಿಗೆ
 
Votes:  1     Rating: 4    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ