ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ - ಚಳಿಯಲ್ಲಿ ಒಲಿಂಪಿಕ್ಸ್ ತಲೆಬಿಸಿ    
ಸುದರ್ಶನ್
ಸೋಮವಾರ, 1 ಸೆಪ್ಟೆಂಬರ್ 2008 (05:14 IST)
ಸಿಡ್ನಿಯ ಚಳಿಯಲ್ಲಿ ಎರಡು ವಾರ ಮೈಬಿಸಿ ಕಾಯಿಸಿಕೊಳ್ಳಲೆಂಬಂತೆ ಒಲಂಪಿಕ್ಸ್ ಬಂದು ಹೋಯಿತು. ಆಸೀ ಆಟಗಾರರು ಪಾಲ್ಗೊಂಡ ಹಾಗೂ ಮುಖ್ಯವಾಗಿ ಗೆಲ್ಲಬಹುದಾದ ಆಟಗಳನ್ನೇ ಟೀವಿ ಪರದೆಯಲ್ಲಿ ನೋಡಿ ನೋಡಿ ಕೊಂಚ ತಲೆಯೂ ಬಿಸಿಯಾಯಿತು. ನನ್ನಂತವರು ಹುಡುಕುಡುಕಿ ಇಂಡಿಯಾದವರು ಗೆಲ್ಲಬಹುದಾದ ಆಟಗಳಲ್ಲಿ ಏನಾದವೆಂದು ಪತ್ರಿಕೆಗಳಲ್ಲಿ, ಅಲ್ಲಿ ಇಲ್ಲಿ ಓದಬೇಕಾಯಿತು. ಕುಸ್ತಿಯಲ್ಲಿ ಆಸ್ಟ್ರೇಲಿಯಾದಿಂದ ಪಾಲ್ಗೊಂಡ ಮೆಲ್ಬರ್ನಿನ ಕ್ಯಾಬ್ ಡ್ರೈವರ್ ಮಾತು ಆಸೀ ಟೀವಿಯಲ್ಲಿ ಕೇಳಿದಾಗ ಕಿವಿ ನಿಮಿರುತ್ತಿತ್ತು. ನನ್ನ ಕೆಲಸದ ಟೇಬಲ್ಲಿನ ಎದುರೇ ಗೋಡೆಗೆ ದೊಡ್ಡ ಟೀವಿ ಪರದೆ ನೇತಾಕಿ, ಆಸೀ ಆಟಗಾರರು ಗೆಲ್ಲಬಹುದಾದ ಫೈನಲ್ಲಿಗೆ ಕೆಲಸದವರೆಲ್ಲಾ ಸುತ್ತಿಕೊಂಡು ಬೀಜಿಂಗಿನಲ್ಲಿಯೇ ಇದ್ದೇವೇನೋ ಎಂಬಂತೆ 'ಗೋ... ಗೋ...' ಎಂದು ಹುರಿದುಂಬಿಸುತ್ತಿದ್ದುದು ತಮಾಷೆಯಾಗಿ ಕಂಡರೂ, ನನ್ನ ಎದೆಯನ್ನೂ ಬೆಚ್ಚಗಾಗಿಸಿತು ಎನ್ನದಿದ್ದರೆ ಸುಳ್ಳಾಡಿದಂತೇ ಹೌದು.

ಅದೆಲ್ಲಾ ಮುಗಿದು ಕ್ಲೋಸಿಂಗ್ ಕೂಟದಲ್ಲಿ ಆಫ್ರಿಕಾದ ಕೆನ್ಯಾ, ಮರೊಕೊ ಮತ್ತು ಇಥಿಯೋಪಿಯವೇ ಮೂರೂ ಪದಕಗಳನ್ನು ಗೆದ್ದ ಮೆರಾಥಾನ್ ಓಟದ ವಿಜೇತರಿಗೆ ಪದಕಗಳನ್ನು ಕೊಟ್ಟಿದ್ದು ನೀವೂ ನೋಡಿರಬಹುದು, ಚಿನ್ನದ ಪದಕ ಗೆದ್ದ ಸ್ಯಾಮುಯೆಲ್ ಕಮವು ವಾನ್ಸಿರುನ ಸೌಜನ್ಯದ ನಗು ಮತ್ತು ತನ್ನ ನಾಡಿನ ಬಾವುಟ ನೋಡುತ್ತಾ ಅವನ ಕಣ್ಣಲ್ಲಿ ನೀರಾಡಿದ್ದು ನನ್ನ ಮಟ್ಟಿಗೆ ಹೈಲೈಟಾಯಿತು. ಅತ್ಯಾಧುನಿಕ ತಂತ್ರಜ್ಞಾನ, ವಿಜ್ಞಾನದ ನೆರವಿನಿಂದ ಸಿರಿವಂತ ದೇಶಗಳು ಪದಕಗಳನ್ನು ಕೊಳ್ಳೆ ಹೊಡೆಯುವ ಇಲ್ಲಿ ಇದೊಂದು ವಿಪರ್ಯಾಸ ನೋಡಿ. ತನ್ನ ಪೂರ್ವಿಕರ ಕೊಡುಗೆಯಿಂದ ಹಿಡಿದು ತನ್ನ ಸ್ವಂತ ದೇಹದ ಆಳದಲ್ಲಿರುವ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿಕೊಂಡು ಗೆಲ್ಲಬೇಕಾದ ಈ ಓಟಗಳು ಯಾವಾಗಲೂ ಆಫ್ರಿಕಾದ ಪಾಲಾಗುವುದು ಸೋಜಿಗವಲ್ಲ.

ಪದಕಗಳ ಪಟ್ಟಿಯಲ್ಲಿ ಆಸ್ಟ್ರೇಲಿಯ ಆರನೇ ಜಾಗದಲ್ಲಿದೆ. ಅದಕ್ಕಿಂತ ಮೇಲೆ ಇಂಗ್ಲೆಂಡಿದೆ. ಆಸೀಗಳು ಸಹಿಸಲಾಗದ ನೋವಿನಲ್ಲಿ ಮುಳುಗಿದ್ದಾರೆ. ಹಿಂದಿರುಗಿದ ಆಟಗಾರರನ್ನು "ಮಹೋನ್ನತ ರಾಷ್ಟ್ರೀಯ ಹೆಮ್ಮೆ" ಎಂಬ ಮಾತುಗಳಿಂದ ಬರಮಾಡಿಕೊಂಡೂ, ಒಳಗೊಳಗೆ ಕರುಬುತ್ತಿದ್ದಾರೆ. ಯಾಕೆ ಹೀಗಾಯಿತು, ಎಲ್ಲಿ ತಪ್ಪಿದೆವು ಎಂದೆಲ್ಲಾ ಕೇಳಿಕೊಳ್ಳುತ್ತಿದ್ದಾರೆ. ನಾಲ್ಕಾರು ವರ್ಷಗಳ ಕಾಲ ತಮ್ಮೆಲ್ಲಾ ಶಕ್ತಿ-ಯುಕ್ತಿಯನ್ನು ಒಟ್ಟುಗೂಡಿಸಿ ಕೆಲಸ ಮಾಡಿದ್ದರೂ ಆಗಬಾರದ್ದು ಆಗಿದೆ ಎಂಬಂತೆ ತಲೆಕೆಳಗೆ ಹಾಕುತ್ತಿದ್ದಾರೆ.

ಕಡೆಗೆ ಆ ದುಃಖ ಬಂದು ನಿಂತಿರುವುದು ಸ್ಪೋರ್ಟ್ಸ್ ಫಂಡಿಂಗ್ ಹೆಚ್ಚಬೇಕು ಎಂಬಲ್ಲಿಗೆ. ಈ ಬಾರಿ ಆಸ್ಟ್ರೇಲಿಯ ಗೆದ್ದಿರುವ ಒಲಂಪಿಕ್ಸ್‌ ಪದಕ ಒಂದೊಂದಕ್ಕೂ ತಗುಲಿರುವ ವೆಚ್ಚ ಸುಮಾರು ಎಂಬತ್ತು ಮಿಲಿಯನ್ ಡಾಲರಿನಷ್ಟು ಎಂದು ಲೆಕ್ಕಹಾಕುವುದೇ ಕುಚೇಷ್ಟೆಯೆಂದು ಬಯ್ಯುತ್ತಿದ್ದಾರೆ. ಪ್ರತಿ ಪದಕಕ್ಕೆ ಏನಿಲ್ಲವೆಂದರೂ ಸುಮಾರು ಹನ್ನೆರಡು ಮಿಲಿಯನ್ ಡಾಲರಿನಷ್ಟಂತೂ ಸಾರ್ವಜನಿಕ ಹಣ ಸಂದಿದೆ ಎಂಬುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಬದಲಾಗಿ ಅದು ಸಾಲದು ಎನ್ನುತ್ತಿದ್ದಾರೆ. ಇಂಗ್ಲೆಂಡಿನವರು ಮಾಡಿದಂತೆ, ಸ್ಪೋರ್ಟ್ಸ್ ಲಾಟರಿಯ ಮೂಲಕ ಹಣವೆತ್ತಬೇಕೆಂಬ ಸಂಗತಿ ಬಲಪಡೆಯುತ್ತಿದೆ. ಸರ್ಕಾರ ಹೆಚ್ಚು ಹಣ ಹೂಡಬೇಕು ಎಂದು ಒತ್ತಾಯ ಬರುತ್ತಿದೆ.

ಆಸೀಗಳಿಗೆ ತಮ್ಮನ್ನು ತಾವು ಆಟ-ಓಟದ ಗೀಳಿನವರು ಎಂದು ಎತ್ತರದ ದನಿಯಲ್ಲಿ ವಿವರಿಸಿಕೊಳ್ಳುವುದು ಖುಷಿ. ಆದರೆ, ನಿಜವಾಗಿಯೂ ನೋಡಿದರೆ ಒಬೀಸಿಟಿಯ ತೊಂದರೆ ದಿನದಿನಕ್ಕೆ ಏರುತ್ತಿದೆ. ಅದರಲ್ಲೂ ಅಮೇರಿಕಣ್ಣನ ಕೈಹಿಡಿದೇ ನಡೆದಿದ್ದೇವೆ ಎಂದು ಮನಸ್ಸಿಲ್ಲದೆ ಸಣ್ಣಗೆ ಗೊಣಗಿಕೊಳ್ಳುತ್ತಾರಷ್ಟೆ. ಒಲಿಂಪಿಕ್ಸಿನ ಮೇಲು ಸ್ತರದ ಆಟಗಳಿಗಿಂತ, ಊರೂರಲ್ಲಿ ಮಕ್ಕಳ ಆಟದ ಕ್ಲಬ್ಬುಗಳಿಗೆ ಹಣ ಕೊಟ್ಟು, ಹೆಚ್ಚೆಚ್ಚು ಮಕ್ಕಳು ಆಟಗಳಲ್ಲಿ ತೊಡಗುವಂತೆ ಮಾಡುವುದು ಒಳ್ಳೆಯದೆಂದರೆ ಹುಬ್ಬೇರಿಸುತ್ತಾರೆ. ಒಲಿಂಪಿಕ್ಸಿನಲ್ಲಿ ಪದಕ ಗೆದ್ದು ಎದೆ ತಟ್ಟಿಕೊಳ್ಳುವುದು ಬೇಡವೆ? ಎದೆ ತಟ್ಟಿಕೊಳ್ಳುವುದನ್ನು ಬಿಟ್ಟು ಸಮಾಜಕ್ಕೆ ಬೇರೇನನ್ನೂ ಅದು ಮಾಡದಿದ್ದರೂ ಕೂಡ?

ಒಂದತ್ತ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳಿಗೆ ಸರ್ಕಾರದ ಹಣವನ್ನು ಕಡಿತ ಮಾಡಿಕೊಂಡೇ ಬರಲಾಗಿದೆ. ಹಿಂದೊಮ್ಮೆ ಜಗತ್ತಿನ ಉತ್ತಮ ವಿಶ್ವವಿದ್ಯಾಲಯ ಎನಿಸಿಕೊಂಡಿದ್ದವೆಲ್ಲಾ ಈಗ ಹಿಂದೆ ಬೀಳುತ್ತಿವೆ. ಇನ್ನೊಂದತ್ತ ಮೂಲನಿವಾಸಿಗಳ ಆರೋಗ್ಯಕ್ಕೆ ಸಲ್ಲಬೇಕಾದಷ್ಟು ಹಣ, ಮನಸ್ಸು ಸಲ್ಲುತ್ತಿಲ್ಲ. ಹಾಗಾಗಿ ಅವರಿಗೂ, ಉಳಿದ ಆಸೀಗಳಿಗೂ ಆರೋಗ್ಯದ ಅಳತೆಯಲ್ಲಿ ಅಜಗಜಾಂತರ ಉಳಿದು ಬಿಟ್ಟಿದೆ. ಕ್ಯಾನೆಡಾ, ಫಿನ್ಲಾಂಡ್, ಸ್ವಿಸ್‌ನಂತಹ ದೇಶಗಳ ಹಾಗೆ ಪದಕಗಳ ಪಟ್ಟಿಯಲ್ಲಿ ಕೆಳಕ್ಕಿದ್ದೂ ಜಾಗತಿಕ ಕಾಣ್ಕೆಗಳನ್ನು ಕೊಡುವಂತೆ ಆಸ್ಟ್ರೇಲಿಯಾ ಹುರಿಗೊಳ್ಳಬೇಕೆಂಬ ಮಾತು ಮತ್ತೆ ಕೇಳುತ್ತಿದೆ. ಹೀಗೆ ಪದಕಗಳಿಂದ ತಮ್ಮ ಮೇಲ್ಮೆಯನ್ನು ಅಳೆದುಕೊಳ್ಳುವ ಹುಚ್ಚೇಕೆ ಎಂಬ ಆತ್ಮಾವಲೋಕನ ಸುರುವಾಗಿದೆ...

ಅಯ್ಯೋ ಬಿಡಿ, ನಮ್ಮ ಸಂತೋಷದ ಗಳಿಗೆಯನ್ನು ಹಾಳುಮಾಡಲೇ ಈ ಮಾತುಗಳನ್ನು ಆಡುವುದು ಎಂದು ಹಲವರು ಮುಖ ತಿರುಗಿಸುತ್ತಾರೆ. ಅವರ ಜತೆ ಸ್ಯಾಮುಯೆಲ್‌ ಕಮವು ವಾನ್ಸಿರುನ ನೀರಾಡುವ ಕಣ್ಣಿನ ಬಗ್ಗೆ ಮಾತುಕತೆ ಶುರುವಾಗುವ ಮುಂಚೆಯೇ ಕೊನೆಗಾಣುತ್ತದೆ.

(ಚಿತ್ರಕೃಪೆ : ಸೆವೆನ್ ನೆಟ್‌ವರ್ಕ್, ಆಸ್ಟ್ರೇಲಿಯಾ)
ಪುಟದ ಮೊದಲಿಗೆ
 
Votes:  6     Rating: 4    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು