ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಸಿಡ್ನಿಯಲ್ಲಿ ಕರುಣಿಸೋ ರಂಗಾ    
ಸುದರ್ಶನ್
ಗುರುವಾರ, 16 ಅಕ್ಟೋಬರ್ 2008 (03:28 IST)
ಭೀಮಸೇನ ಜೋಷಿ

ನನ್ನ ಬಾಲ್ಯ ಕಳೆದದ್ದು ಬೆಂಗಳೂರಿನ ಸಿಟಿ ಮಾರ್ಕೆಟ್, ಕಲಾಸಿಪಾಳ್ಯ ಪ್ರದೇಶದ ಅಂಚಿನಲ್ಲಿದ್ದ ಪುಟ್ಟಕೋಣೆಗಳ ಚಿಕ್ಕ ಮನೆಯಲ್ಲಿ. ಮಧ್ಯಮವರ್ಗದ ಮನಸ್ಸುಳ್ಳ ಮನೆಯಲ್ಲಿ ಕೆಳಮಧ್ಯಮವರ್ಗದ ಸವಾಲುಗಳ ನಡುವೆ ಕಳೆಯಿತು. ಈ ಸವಾಲನ್ನು ಕೆಲವರು ‘ಕಷ್ಟ' ಎಂದು ಕರೆಯುತ್ತಾರೆ. ಆದರೆ ಕೈಗೆಟುಕದ ಚಿಕ್ಕಚಿಕ್ಕ ಕನಸಿದ್ದರೂ ನಮಗೆ ಹಾಗನಿಸುತ್ತಿರಲಿಲ್ಲ. ಅಜ್ಜಿ ಮನೆಯ ತಾತ-ಅಜ್ಜಿಯರ ಪ್ರೀತಿ, ಸೋದರ ಮಾವಂದಿರ ಕುಕ್ಕುಲತೆ ಆ ‘ಕಷ್ಟ'ಗಳನ್ನು ಸಹ್ಯಮಾಡಿದ್ದು ನಿಜವಾದರೂ, ಅದಕ್ಕಿಂತ ಮಿಗಿಲಾಗಿದ್ದು ಬೇರೊಂದಿತ್ತು. ಅದು ಸೆಲ್ಫ್-ಪಿಟಿ ಹಿಂಬಾಗಿಲಿನಿಂದಲೂ ನುಸುಳದಂತ ಅಪ್ಪ-ಅಮ್ಮನ ಕಟ್ಟೆಚ್ಚರದ ಪಾಲನೆ.

ಅಪ್ಪ ಈವತ್ತಿಗೂ ಕೆಲವೊಮ್ಮೆ ಆಜ್ಞೇಯತಾವಾದಿ ಆಗಿಯೂ, ಕೆಲವೊಮ್ಮೆ ಯಾವುದೋ ‘ಪ್ರಕೃತಿ ಶಕ್ತಿ' ಇದೆಯೆಂಬ ನಂಬಿಕೆಯನ್ನೂ ಉಳಿಸಿಕೊಂಡವರು. ವಿಕಾಸವಾದ ಮತ್ತು ದೈವಿಕ ಕಲ್ಪನೆಯ ಒಲ್ಲದ ಲಗ್ನ ಎಂದು ಅದನ್ನು ಅರಿಯುತ್ತೇನೆ. ಅವರಿಂದ ಪ್ರಭಾವಿತರಾದ ಅಮ್ಮ ಈಗಲೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆಯಿಲ್ಲದೆ, ಆದರೆ ‘ನಂಬಬೇಕೇನೋ' ‘ನಂಬಿದರೆ ಒಳ್ಳೆಯದೇನೋ' ಎಂಬ ತೊಳಲಾಟದಲ್ಲಿ ಇರುವವರು.

ಆ ಚಿಕ್ಕಮನೆಯಲ್ಲಿ ಬೆಳಗಾ ಮುಂಚೆ ಕೇಳುತ್ತಿದ್ದ ಸಿಟಿ ಮಾರ್ಕೆಟ್ ಮಸೀದಿಯ ನಮಾಜಿನ ಕರೆ ಮೈದಡವಿ ಎಬ್ಬಿಸುತ್ತಿತ್ತು. ಅದೆಂದೂ ಬೇಡದ್ದು ಅನಿಸುತ್ತಿರಲಿಲ್ಲ. ಆ ಕರೆಯುವ ದನಿ ಅದಕ್ಕೆ ತುಸು ಕಾರಣವಾದರೆ, ಕೇಳುವ ಕಿವಿಯೂ ತುಸು ಕಾರಣವಾಗಿತ್ತು. ಮುಂಜಾನೆಯ ನಸುಗತ್ತಲಲ್ಲಿ ಹಾಲು ತರಲು ಅಪ್ಪ ಮಫ್ಲರ್ ಸುತ್ತಿಕೊಂಡು ಹೊರಟರೆ, ಅಮ್ಮ ಮಜ್ಜಿಗೆ ಕಡಿಯಲು ಕೂರುತ್ತಿದ್ದರು. ಅಡುಗೆ ಮನೆಯ ಮೂಲೆಯ ಗೋಡೆಗೆ ಬಡಿದಿದ್ದ ಎರಡು ಕಬ್ಬಿಣದ ಹುಕ್ಕಿಗೆ ಕಟ್ಟಿದ ಬಿಳಿ ಹಗ್ಗದ ಕುಣಿಕೆ. ಅದರೊಳಗೆ ಗರಗರ ತಿರುಗುವ ಕಡಗೋಲು. ಮಜ್ಜಿಗೆಯ ಬುರ್‍ಬುರ್‍ ಸದ್ದು. ಅದರೊಟ್ಟಿಗೆ ಅಮ್ಮ ಗುನುಗುತ್ತಿದ್ದ ‘ಕರುಣಿಸೋ ರಂಗ' ಪದ.

ಅಮ್ಮ ಚಂದವಾಗಿ ಹಾಡಿದರೂ ತಮ್ಮನ್ನು ಗಾಯಕಿ ಅಂದುಕೊಂಡಿಲ್ಲ. ಬೇಂದ್ರೆಯವರ ‘ಏಳು ಚಿನ್ನ ಬೆಳಗಾಯ್ತು ಅಣ್ಣ' ಪದ್ಯಕ್ಕೆ ಅವರು ಹಾಕಿಕೊಂಡ ತಮ್ಮದೇ ಮಟ್ಟು ನನಗೆ ಈವತ್ತಿಗೂ ಪ್ರಿಯ ಎಂದರೆ ‘ಅಯ್ಯೋ ಹೋಗೋ' ಎಂದು ಬಾಯಿಗೆ ಕೈ ಅಡ್ಡ ಮಾಡಿ ನಗುತ್ತಾರೆ. ಆದರೆ, ನಮ್ಮ ಬಾಲ್ಯ ಜೀವನದ ಸವಾಲುಗಳನ್ನು ದೇವರ ಮುಂದೆ ಅಳುಕಿನಿಂದಲೇ ಇಡುವಂತೆ ಅವರು ಅಂದು ‘ಕರುಣಿಸೋ ರಂಗ' ಹಾಡುತ್ತಿದ್ದರು ಎಂದು ನನಗೆ ಯಾವಾಗಲೂ ಅನಿಸಿದೆ. ‘ಆ ಎಲ್ಲಾ ಪುರಾಣದ ಪಾತ್ರಗಳಂತೆ ಹಲವು ಬಗೆಗಳಲ್ಲಿ ನಾನು ಬೇಡಲಾರೆ' ಎಂಬುದನ್ನು ಅವರು ಕಂಡುಕೊಂಡಂತೆ ಅನಿಸುತ್ತಿತ್ತು. ಅವರ ಆ ಭಾವ, ಹಾಡಿನ ಸಾಲಿಗಿಂತ ಅವರು ಹಾಡುತ್ತಿದ್ದ ಮಟ್ಟಿನಲ್ಲಿ, ಆ ಮಟ್ಟನ್ನು ತೆರೆದಿಡುತ್ತಿದ್ದ ದನಿಯಲ್ಲಿ, ಆ ದನಿಯನ್ನು ಹೊರಡಿಸುತ್ತಿದ್ದ ಮನಸ್ಸಿನ ಆಳದ ಮುಜುಗರದಲ್ಲಿ ಇತ್ತೆಂದು ನನಗೆ ಈಗ ಅನಿಸುತ್ತದೆ. ಇಲ್ಲದಿದ್ದರೆ, ಅಷ್ಟು ಆಳಕ್ಕೆ ಆ ಹಾಡು ನನ್ನ ಮನಸ್ಸಿನಲ್ಲಿ ಕೂರಲು ಹೇಗೆ ಸಾಧ್ಯ ಎಂದು ಕೇಳಿಕೊಳ್ಳುತ್ತೇನೆ.

ಇದೆಲ್ಲಾ ನೆನಪಾದದ್ದು, ಪ್ರಸಿದ್ಧ ಗಾಯಕ ಭೀಮಸೇನ ಜೋಷಿ ಅದೇ ಪದವನ್ನು ಧಿಮಾಕಿನಿಂದಲೋ ಎಂಬಂತೆ ಹಾಡುವುದನ್ನು ಕೇಳಿದಾಗ. ‘ಬೇರೆಲ್ಲ ಭಕ್ತರಂತೆ ಬೇಡಲಾರೆ - so what -  ಕರುಣಿಸೋ ರಂಗಾ' ಎಂದು ದೇವರ ಕತ್ತಿನ ಪಟ್ಟಿ ಹಿಡಿದಂತೆ ಇದೆಯಲ್ಲಾ ಅನಿಸಿದಾಗ. ಅವರ ಹಾಡಿಗೇನು ಉಪಪಾಠ ಎಂದು ಹುಡುಕ ಹೊರಟು ಖಾಲಿ ಕೈಯಲ್ಲಿ ಹಿಂದಿರುಗಿದಾಗ. ಸಿಡ್ನಿಯಲ್ಲಿ ನಮ್ಮ ಮಕ್ಕಳಿಗೆ ಸಿರಿವಂತಿಕೆಯ ನಡುವೆ ಸವಾಲಿನ ಬದುಕನ್ನು ಕಟ್ಟಿಕೊಡುವುದು ಹೇಗೆಂದು ಯೋಚಿಸುವಾಗ. ಸೆಲ್ಫ್-ಪಿಟಿಯ ಅಪಾಯ ಎಲ್ಲಾವಾಗಲೂ ಇದೆ ಎಂದು ಅನಿಸಿದಾಗ.

ಪುಟದ ಮೊದಲಿಗೆ
 
Votes:  5     Rating: 3.4    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ