ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ - ಒಬ್ಬಳು ಹಳೆಯ ಮ್ಯಾನೇಜರಳ ಕಥೆ    
ಸುದರ್ಶನ್
ಶುಕ್ರವಾರ, 31 ಅಕ್ಟೋಬರ್ 2008 (05:23 IST)

ಹದಿಮೂರು ವರ್ಷದ ನಂತರ ಮೊನ್ನೆ ನನ್ನ ಹಳೆಯ ಮ್ಯಾನೇಜರ್‍ ಒಬ್ಬಾಕೆಯನ್ನು ಭೇಟಿಮಾಡಿದ್ದೆ. ನನ್ನೊಡನೆ ಇನ್ನೊಂದಿಬ್ಬರು ಇದ್ದರು. ಕುಶಲ ಮಾತು ಎಲ್ಲ ಮುಗಿದು ಊಟ ಮುಂದುವರಿದಂತೆ ನಮ್ಮ ಮಾತು ಎತ್ತೆತ್ತಲೋ ಹರಿದಾಡಿತು. ನಾವೇನೇನು ಮಾಡಿದೆವು, ಎಲ್ಲೆಲ್ಲಿ ಕೆಲಸಮಾಡಿದೆವು, ಎಲ್ಲೆಲ್ಲಿ ಹೇಗಿತ್ತು ಎಂದೆಲ್ಲಾ ಹರಟುತ್ತ ಹೋದೆವು. ಹೆಂಡತಿ ಮಕ್ಕಳ ಸಮಾಚಾರವೂ ಹಾದು ಹೋಯಿತು. ಇಲ್ಲಿ ಒಂದು ವಿಶೇಷವೇನೆಂದರೆ ನಮ್ಮ ಮ್ಯಾನೇಜರಳ ಸಂಸಾರದ ವಿಷಯವನ್ನು ಎತ್ತುವುದಕ್ಕೆ ಎಲ್ಲರಿಗೂ ಹಿಂಜರಿಕೆ. ಅಲ್ಲಿದ್ದವರಿಗೆಲ್ಲಾ ಗೊತ್ತಿದ್ದ ಓಪನ್ ಸಿಕ್ರೆಟ್ ಎಂದರೆ ಆಕೆ ಗಂಡಸರ ಜತೆಗೆ ಭದ್ರವಾದ ಯಾವುದೇ ಸಂಬಂಧದಲ್ಲಿಯೂ ಇಲ್ಲದಿದುದು. ಲಕ್ಷಣವಾಗಿಯೇ ಇರುವ ಆಕೆ ಮತ್ತೊಬ್ಬಳು ಹೇಳುವ ಪ್ರಕಾರ ತುಂಬಾ ಬೇಗನೇ ತನಗಿಷ್ಟವಾದ ಗಂಡಸರನ್ನು ಒಲಿಸಿಕೊಳ್ಳಬಲ್ಲಳು ಎಂದು.

ಹದಿನೈದು ವರ್ಷದ ಕೆಳಗೆ ಮದುವೆಯಾಗಿದ್ದರೂ ಒಂದು ವರ್ಷದ ಆಸುಪಾಸಿನಲ್ಲೇ ಅದು ಮುರಿದುಬಿದ್ದಿತ್ತು. ಮದುವೆಯ ಫೋಟೋಗಳನ್ನು ನಮ್ಮೊಡನೆ ಬೀಗುತ್ತಾ ಹಂಚಿಕೊಂಡದ್ದು ನನಗಂತೂ ಚೆನ್ನಾಗಿ ನೆನಪಿದೆ. ಆದರೆ ಆ ಮದುವೆ ಕೊನೆಗೊಳ್ಳುವುದರಲ್ಲಿ ಹೆಚ್ಚು ದಿನ ಹಿಡಿದಿರಲಿಲ್ಲ. ನಮ್ಮ ಗುಮಾನಿಯ ಪ್ರಕಾರ ಈಕೆ ಒಲಿಸಿಕೊಳ್ಳುವಷ್ಟೇ ಬೇಗ ಸಂಗಾತಿಗಳ ಬಗ್ಗೆ, ಗಂಡಸರ ಬಗ್ಗೆ ಬೇಸತ್ತು ಹೋಗುತ್ತಾಳೆ ಎಂದು. ಹಾಗೆಯೇ ಆಕೆಯ ಇನ್ನೊಂದು ಮುಖದ ಬಗ್ಗೆಯೂ ಹೇಳಬೇಕು. ತನ್ನ ಕೆಲಸದಲ್ಲಿ ಅತ್ಯಂತ ವಿಧೇಯಳು ಮತ್ತು ಅತ್ಯಂತ ಕಮಿಟೆಡ್. ಹಲವು ಸಲ ನಾನೇ ನೋಡಿರುವಂತೆ ಹನ್ನೆರಡು, ಹದಿನಾರು ಗಂಟೆಗಳ ಕಾಲ ಎಡೆಬಿಡದೆ ಕೆಲಸ ಮಾಡುತ್ತಿದ್ದಳು. ವರ್ಕೋಹಾಲಿಕ್ ಅನ್ನಬಹುದು. ಅವಳ ವಯುಕ್ತಿಕ ಬದುಕು ಹಸನಾಗಿರಲು ಅದೂ ಕೂಡ ಒಂದು ತೊಡಕೇ ಆಗಿತ್ತೇನೋ. ಅದೇನೇ ಆದರೂ, ನಮಗೇ ಗೊತ್ತಿರುವಂತೆ ಹಲವರೊಡನೆ ಈಗಾಗಲೇ ಬೆರೆತು-ಮುರಿದು ಹಿಂದೆ ನೋಡದೆ ಮುಂದೆ ನಡೆಯುವುದು ಆಕೆಯ ಪ್ರವೃತ್ತಿ ಮತ್ತು ದಿಟ್ಟತನ. ನಾನೀಗ ಹೇಳ ಹೊರಟಿರುವುದಕ್ಕೂ ಆಕೆಯ ಈ ಸಂಗತಿಗೂ ಏನೂ ಸಂಬಂಧವಿಲ್ಲ.

ನಮ್ಮ ನಮ್ಮ ಅನುಭವಗಳನ್ನು ಹೇಳಿಕೊಳ್ಳುವಾಗ ಒಂದು ಮಾತು ಬಂದಿತು. ನನ್ನ ಹಳೆಯ ಮ್ಯಾನೇಜರ್‍ ‘ಇಂಡಿಯನ್ನರೊಂದಿಗಿನ ನನ್ನ ಅನುಭವವೆಲ್ಲಾ ಒಳ್ಳೆಯದೇ...' ಎಂದಳು. ನನ್ನ ಜತೆಗಿದ್ದ ಮತ್ತೊಬ್ಬಾಕೆಯೂ ಇಂಡಿಯನ್ನಾದ್ದರಿಂದ ಈ ನಮೂನೆಯ ಮಾತು ಬರುವುದು ನಿರೀಕ್ಷಿತವೇ. ಆದರೆ ಅವಳ ಮಾತು ತುಂಬಾ ಪ್ರಾಮಾಣಿಕವಾಗಿಯೇ ಇತ್ತು. ನನ್ನಿಂದ ತೊಡಗಿ ಹಲವರ ಉದಾಹರಣೆಯನ್ನೂ ಕೊಟ್ಟಳು. ಆಕೆಗದು ನಿಜವಾಗಿಯೂ ಅಭಿಮಾನದ ವಿಷಯವೇ ಆಗಿತ್ತು ಎಂಬುದನ್ನು ಆಕೆಯ ಮಾತಿನ ಧಾಟಿಯಲ್ಲೇ ಹೇಳಬಹುದಿತ್ತು. ಆದರೆ, ಉಳಿದವರು ಬೇರೆ ಬಗೆಯ ಕೆಲವು ಅನುಭವಗಳನ್ನೂ ಕಂಡಿದ್ದರು. ಸಿಂಗಪುರದ ಕೆಲವು ಇಂಡಿಯನ್ ಮೂಲದ ಜನರೊಡೆಗಿನ ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡರು. ನಂತರ ಒಬ್ಬಾತ ‘ತಾನು ಕಂಡ ಹಾಗೆ ಇಂಡಿಯನ್ನರು ಒಳ್ಳೆಯ ಕೆಲಸಗಾರರು, ಆದರೆ ತುಂಬಾ ಬ್ಯಾಡ್ ಮ್ಯಾನೇಜರರು...' ಎಂದ. ಒಂದು ಕ್ಷಣ ನನ್ನ ಇಂಡಿಯಾದ ಕೆಲಸದಲ್ಲಿನ ಮ್ಯಾನೇಜರರ ವಿಚಾರ ತಲೆಯಲ್ಲಿ ಸುಳಿದು ಹೋಯಿತು. ಎಲ್ಲರೂ ಮೌನವಾದೆವು. ನಂತರ ನಾನು ‘ಹಾಗೆ ಯಾಕಿರಬಹುದು ಎಂದು ನಿಮಗೆ ಅನಿಸುತ್ತದೆ?' ಎಂದು ಓಪನ್ ಪ್ರಶ್ನೆ ಕೇಳಿದೆ. ಯಾರಿಗೂ ಏನೂ ಹೊಳೆಯಲಿಲ್ಲ. ಭುಜ ಕುಣಿಸಿದರು. ಮುಗುಳು ನಕ್ಕರು.

ತುಂಬಾ ಜನರಲ್ ಆದ ಆ ಮಾತನ್ನು ಒಪ್ಪುವುದು ಬಿಡುವುದು ಮುಖ್ಯವಲ್ಲ. ಅಥವಾ ಸರಿ ತಪ್ಪು ಎನ್ನುವುದೂ ಅಲ್ಲ. ಆದರೆ ಇಂಡಿಯನ್ನರು ಹಾಗೆ ಕಾಣುವುದರ ಹಿಂದೆ ಏನೆಲ್ಲಾ ಇದೆಯಲ್ಲಾ ಎಂದು ಅನಿಸಿತು. ಯಾವುದೂ ಸ್ಪಷ್ಟವಲ್ಲದಿದ್ದರೂ ಏನೋ ಹುಡುಕಾಟಕ್ಕೆ ಅದು ಎಡೆಮಾಡಿಕೊಟ್ಟಿತು. ನಮ್ಮ ಚರಿತ್ರೆ, ಸಂಸ್ಕೃತಿ, ಸಮಾಜ ಎಲ್ಲವನ್ನೂ ಅದು ಮತ್ತೊಮ್ಮೆ ಹೊಸ ದಿಟ್ಟಿನಲ್ಲಿ ನೋಡುವಂತೆ ಪ್ರೇರೇಪಿಸಿತು. ಮ್ಯಾನೇಜರನಾಗಲು ಅನರ್ಹ ಎಂದು ನನಗೆ ನಾನೇ ತುಂಬಾ ದಿನಗಳ ಮೊದಲೇ ಹೇಳಿಕೊಂಡಿದ್ದೆ. ತಾಂತ್ರಿಕತೆಯಲ್ಲಿ ಮುಳುಗಬಲ್ಲ ನನ್ನ ಸ್ವಭಾವವೂ ಅದಕ್ಕೆ ಕಾರಣವಿರಬಹುದು. ಹೇಳಿಸಿಕೊಂಡು ಮಾಡಿ ಗೆಲ್ಲುವ ನಾವು ಹೇಳಿ ಮಾಡಿಸುವಾಗ ಸೋಲುತ್ತೇವಾ ಎಂಬ ಯೋಚನೆ ಒಂದು ಕಡೆಯಾದರೆ ಹಾಗೆಂದು ನಮ್ಮನ್ನು ಗುರುತಿಸುವ ಉಳಿದವರ ಕಣ್ಣಲ್ಲಿ ನಾವು ಹೇಗೆಲ್ಲಾ ಕಾಣುತ್ತೇವಲ್ಲ ಎಂದು ಇನ್ನೊಂದು ಯೋಚನೆಯೂ ಆವರಿಸಿತು.

ಊಟ ಮುಗಿದು ಹೊರಡುವಾಗ ನನ್ನ ಹಳೆಯ ಮ್ಯಾನೇಜರಳು - ‘ಮತ್ತೆ ಹೀಗೇ ಸಿಗೋಣ... ಇನ್ನೊಂದು ಹತ್ತು ವರ್ಷ ಮಾಡುವುದು ಬೇಡ' ಎಂದು ಪುಟುಪುಟು ರಸ್ತೆ ದಾಟಿ ಹೊತ್ತಾಯಿತು ಎನ್ನುತ್ತಾ ಓಡಿದಳು.

ಪುಟದ ಮೊದಲಿಗೆ
 
Votes:  5     Rating: 3.2    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು