ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ- ಕುದುರೆಬಾಲದ ಹಿಂದೆ ದೇಶಕ್ಕೆ ದೇಶ    
ಸುದರ್ಶನ್
ಶನಿವಾರ, 8 ನವೆಂಬರ್ 2008 (07:24 IST)

ಮೊನ್ನೆ ಮಂಗಳವಾರದ ರೇಸಿನ ಬಗ್ಗೆ ನೀವು ಕೇಳಿರಬಹುದು. ಬಹುದು ಏನು ಕೇಳಿಯೇ ಇರುತ್ತೀರಿ. ‘race that stops the nation' ಅಂತ ಪ್ರಸಿದ್ಧವಾದ ರೇಸು. ಎಷ್ಟೆಲ್ಲಾ ಲೆಕ್ಕಾಚಾರದ ನಡುವೆನೂ ಈ ರೇಸು ಅದೃಷ್ಟದ ಪರೀಕ್ಷೆನೇ. ಇಂತಹ ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವಲ್ಲೂ ಇದರ ಉದ್ವೇಗಕ್ಕೇನೂ ಕಡಿಮೆಯಿಲ್ಲ. ಚೆಂದಚೆಂದದ, ಬಣ್ಣಬಣ್ಣದ ಬಟ್ಟೆಗಳೆಲ್ಲಾ ಹೊರಗೆ ಬಂದಿವೆ. ವಿಚಿತ್ರ, ವಿಲಕ್ಷಣ ಹ್ಯಾಟು ಟೋಪಿಗಳು ತಲೆಗಳ ಮೇಲೆ ರಾರಾಜಿಸುತ್ತಿವೆ. ಕಂಠಮಟ್ಟ ಕುಡಿಯಲು, ನೆತ್ತಿವರೆಗೂ ಅಮಲೇರಲು, ಬಿಯರು, ವೈನು, ಶಾಂಪೇನು ಧಾರಾಕಾರವಾಗಿ ಹರಿದಿದೆ. ಉದ್ದುದ್ದ ಕ್ಯೂನಲ್ಲಿ ಜನ ಬೇಸರವಿಲ್ಲದೆ ಕಾಯುತ್ತಿದ್ದಾರೆ.

ನಾನೂ ಆ ರೇಸಿನಲ್ಲಿ ಬೆಟ್ ಮಾಡೋದಕ್ಕೆ ಹೋಗಿ ನೋಡಿದರೆ ಬೆಟ್ ಕಟ್ಟಿಸಿಕೊಳ್ಳೋ ಅಂಗಡಿ ತುಂಬಾ ಜನ. ಕ್ಯೂನಲ್ಲಿ ಕಾದು, ಧರ್ಮಸ್ಥಳದ ಮಂಜುನಾಥನ್ನ ನೆನೆದು, ಕಡೆಗೂ ಒಂದು ಹತ್ತು ಡಾಲರ್ ಬೆಟ್ ಕಟ್ಟಿ ಬಂದೆ. ಬೆಟ್ ಕಟ್ಟಿದಾಗಲೇ ರೇಸಲ್ಲಿ ಎಲ್ಲಿಲ್ಲದ ಹುರುಪು ಉದ್ವೇಗ ಇರೋದು ತಾನೆ? ನಿಮಗೆ ಯಾವ ರೇಸಿನ ಬಗ್ಗೆ ಮಾತಾಡ್ತಿದೀನಿ ಅಂತ ಅನುಮಾನ ಬಂದಿರಬಹುದು.

ಆಸ್ಟ್ರೇಲಿಯಾದ ಹಳ್ಳಿಯೂರುಗಳಲ್ಲಿ ನಾಯಿ, ಆಡು, ಅಷ್ಟೇ ಯಾಕೆ ಕಪ್ಪೆಗಳನ್ನು ಕೂಡ ರೇಸು ಓಡಿಸ್ತಾರೆ. ಹೋಗಬೇಕಾದತ್ತ ಹೋಗದ ಅವುಗಳಲ್ಲಿ ಒಂದು ಅಪ್ಪಿತಪ್ಪಿ ಹೋದಾಗ ಗೆಲ್ಲುವ ಅದರ ಮಾಲೀಕ ಎದೆಯುಬ್ಬಿಸಿ ಬಹುಮಾನ ಗೆಲ್ತಾನೆ. ಯಾವ ಪ್ರಾಣಿ ಗೆಲ್ಲುತ್ತೆ ಅಂತ ಪಣಕಟ್ಟಿ ಉಳಿದವರು ಒಂದಷ್ಟು ಕಾಸು ಮಾಡಿಕೊಳ್ತಾರೆ. ಮಾಡಲು ಕೆಲಸವಿಲ್ಲದಾಗ ಜನಪದ ಹಿಂದೆಲ್ಲಾ ಟೈಂಪಾಸಿಗೆ ನಡೆಸುತ್ತಿದ್ದ ಈ ರೇಸುಗಳು ಈಗ ಹಲವು ಕಡೆಗಳಲ್ಲಿ ಪರಂಪರೆಯಾಗಿ ಉಳಿದುಬಿಟ್ಟಿದೆ. ಪಣ ಕಟ್ಟೋದು ದೇಶದ ಒಂದು ಚಹರೆಯೇ ಆಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮೊನ್ನೆ ಮಂಗಳವಾರದ ಕುದುರೆ ರೇಸಿನ ಬಗ್ಗೆ ನಿಮಗೆ ಹೇಳಬೇಕು.

ಬೆಟ್ಟಿಂಗ್ ಕಟ್ಟುವ ಸ್ಥಳಅಲ್ಲಿ ಅಮೆರಿಕದಲ್ಲಿ ನವೆಂಬರ್ ನಾಲ್ಕರಂದು ಪ್ರೆಸಿಡೆಂಟಿನ ರೇಸು ನಡೆದಿರುವಾಗ ಆಸ್ಟ್ರೇಲಿಯಾದಲ್ಲಿ ಮೆಲ್ಬರ್ನ್ ಕಪ್‌ಗಾಗಿ ಕುದುರೆ ರೇಸು. ಆಸೀಗಳಿಗೆ ಯಾವುದು ಹೆಚ್ಚು ಮುಖ್ಯ ಅನ್ನುವ ಪ್ರಶ್ನೆಯೇ ಅನುಚಿತ. ಯಾಕೆಂದರೆ, ಪ್ರತಿ ನವೆಂಬರಿನ ಮೊದಲ ಮಂಗಳವಾರ ಮಧ್ಯಾಹ್ನ ಮೂರುಗಂಟೆಯ ಸುಮಾರಿಗೆ ಓಡೋ ಈ ರೇಸು ದೇಶವನ್ನೇ ನಿಲ್ಲಿಸುತ್ತೆ. ಮೆಲ್ಬರ್ನಿನ ವಸಂತೋತ್ಸವದ ಅಂದಿನ ಎಂಟನೇ ರೇಸಿಗೆ ಕೀಬೋರ್ಡಿನ ಮೇಲಾಡುವ ಬೆರಳುಗಳು, ಸುತ್ತಿಗೆ ಹಿಡಿದ ಮೆಕಾನಿಕ್ ಕೈಗಳು, ಬ್ರಶ್ ಹಿಡಿದ ಕಲಾವಿದರ ಕೈಗಳು, ಸೈನಿಗೆ ಪೆನ್ ಹಿಡಿದ ಕೈಗಳು ನಿಶ್ಚಲ ಆಗುತ್ತವೆ. ಸಿರಿವಂತರು ಕಟ್ಟುವ ಸಾವಿರಾರು ಡಾಲರಿನಿಂದ ಹಿಡಿದು ಐವತ್ತು ಸೆಂಟಿಗೂ ಪಣಕಟ್ಟಬಹುದು ಅಂದರೆ ಈ ರೇಸಿನ ಪ್ರಭಾವ, ಸಮಭಾವ ಎಂತದು ಅನ್ನೋದು ತಿಳಿಯತ್ತೆ.

ಜೂಜಾಡೋರು, ಕುದುರೆ ಬಾಲಕ್ಕೆ ದುಡ್ಡು ಕಟ್ಟೋರು ಅಂದರೆ ಮುಖ ಮುರಿಯೋರಿಗೆ ಇದೆಲ್ಲಾ ವಿಚಿತ್ರ ಅನ್ನಿಸಬಹುದು. ನನಗೂ ಹಾಗೇ ಅನ್ನಿಸ್ತಿತ್ತು. ಆದರೆ ಈಗ ನಾನೂ ವರ್ಷಕ್ಕೊಂದು ಸಲ ಈ ರೇಸಲ್ಲಿ ಯಾವ ಕುದುರೆ ಓಡುತ್ತೆ? ಅದರ ವಿಚಾರ ಏನು ಅಂತ ಒಂದೆರಡು ಕಡೆ ನೋಡಿ ದುಡ್ಡು ಕಟ್ಟುತೀನಿ. ರೇಸಾಗೋವಾಗ ಎಲ್ಲರ ಜತೆ ನಿಂತು ನನ್ನ ಕುದುರೆ ಗೆಲ್ಲತ್ತಾ ಅಂತ ಉಸಿರು ಬಿಗಿ ಹಿಡಕೊಂಡು ನೋಡ್ತೀನಿ. ಈ ದೇಶಕ್ಕೆ ಬಂದು ನಾನೂ ಕೆಟ್ಟು ಹೋದನಾ ಅಂತ ಅನುಮಾನ ಒಂದೊಂದು ಸಲ ತಲೆ ಕೆಡಸುತ್ತೆ. ಆದರೆ ಮೊನ್ನೆ ಯಾರೋ, ಧರ್ಮಸ್ಥಳದ ಹಿಂದಿನ ಧರ್ಮಾಧಿಕಾರಿಗಳಿಗೆ, ಹಳೆಕಾರಿನ ಮೋಹದ ಜತೆಗೆ ಕುದುರೆ ಜೂಜಿನ ಮೋಹವೂ ಇತ್ತು ಅಂತ ಹೇಳಿದರು. ಹಾಗಾದರೆ ನಾನು ಪೂರ್ತಿ ಕೆಟ್ಟಿಲ್ಲ ಅಂತ ಸಮಾಧಾನ ಮಾಡಿಕೊಂಡೆ.

ಮೊನ್ನೆ ರೇಸಲ್ಲಿ, ಪಂಡಿತರೆಲ್ಲಾ ಐರಿಶ್ ಕುದುರೆ ‘Septimus' ಗೆಲ್ಲುತ್ತೆ, ಇಲ್ಲದಿದ್ದರೆ ‘Mad Rush' ಅಥವಾ ‘Profound Beauty' ಗೆಲ್ಲುತ್ತೆ ಅಂತ ಎಲ್ಲರ ದಾರಿ ತಪ್ಪಿಸಿದರು. ದೇಶಭಕ್ತ ಆಸೀಗಳು - ಆಸೀ ಕುದುರೆ ‘Barbaricus' ಮೇಲೆ ದುಡ್ಡು ಹಾಕಿದ್ದರು. ದೇಶದ ಪ್ರಧಾನಿ ರಡ್ ‘Zipped' ಮೇಲೆ ದುಡ್ಡು ಕಟ್ಟಿದ್ದ. ಎಲ್ಲರಿಗೂ ನಾಮ ಹಾಕಿ ‘Viewed' ಅನ್ನೋ ಕುದುರೆ ಗೆಲ್ತು. ಅದರ ಟ್ರೈನರನಕೈಯಡಿ ಮೆಲ್ಬರ್ನ್ ಕಪ್‌ನಲ್ಲಿ ಗೆದ್ದ ಹನ್ನೆರಡನೇ ಕುದುರೆ ಇದು ಅಂತ ರೇಸ್ ಆದ ಮೇಲೆ ನನಗೆ ಗೊತ್ತಾಗಿದ್ದು.

ಮೆಲ್ಬರ್ನ್ ಇರೋ ವಿಕ್ಟೋರಿಯಾ ರಾಜ್ಯಕ್ಕೇ ಆವತ್ತು ‘ವಸಂತೋತ್ಸವ' ಅಂತ ರಜೆ. ದಿಂಡುದಿಂಡಾಗಿ ರೇಸ್‌ಕೋರ್ಸಿಗೆ ಜನ ಬರ್ತಾರೆ. ಕುದುರೆ ಜೂಜಲ್ಲದೆ, ಹಿಂದೆ ಸಿರಿವಂತರ ಅಣಕಿಸೋದಕ್ಕಂತಲೇ ವಿಲಕ್ಷಣದ ಟೊಪ್ಪಿಗೆ ತೊಡುತಿದ್ದರಂತೆ. ಈಗ ಅದೇ ಸೀರಿಯಸ್ಸಾಗಿ, ಅವರ ನಡುವೇನೆ ಕಾಂಪಿಟಿಶನ್ ನಡೆಯತ್ತೆ. ಜತೆಗೆ ಡ್ರೆಸ್ ಕಾಂಪಿಟಿಶನ್, ಅದರ ಸುತ್ತ ಹರಿಯೋ ವೈನು ಶಾಂಪೇನಿನ ಹೊಳೆ - ನೀವು ನೆನಸಿಕೊಳ್ಳಬಹುದಾದ ಎಲ್ಲ ‘ಕ್ಷುಲ್ಲಕ'ಗಳೂ ಇಲ್ಲಿಯ ಒಂದು ಭಾಗ! ಟೀವಿ ಮುಂದೆ ಇದನ್ನ ನೋಡೋಕಂತಲೇ ಅರ್ಧ ಜನ ನೆರೀತಾರೆ. ಆದರೆ ನನ್ನ ಜತೆ ಕೆಲಸ ಮಾಡೋ ಮೂರ್ನಾಕು ತಲೆಮಾರಿನ ಆಸೀ ಗುಮ್ ಅಂತ ದೂರ ಕೂತಿದ್ದ. ಬೆಟ್ ಕೂಡ ಕಟ್ಟಿರಲಿಲ್ಲ. ‘ಯಾಕೋ ಮಾರಾಯ?' ಅಂತ ಕೇಳಿದೆ. ನಿಟ್ಟುಸಿರು ಬಿಟ್ಟು ಅವನ ತಂದೆ ಬೆಟ್ ಮಾಡಿ ಮಾಡಿ ದುಡ್ಡೆಲ್ಲಾ ಕಳಕೊಂಡು ಮಕ್ಕಳನ್ನ ಬೀದಿ ಪಾಲು ಮಾಡುವಲ್ಲಿಗೆ ತಂದಿದ್ನಂತೆ. ಅದಕ್ಕೆ ಇವನು ಕುದುರೆ, ಜೂಜಿನ ಕಡೆ ತಿರುಗಿ ನೋಡಲ್ಲ ಅಂತ ಅಂದು ತನ್ನ ಕೆಲಸಕ್ಕೆ ಮರಳಿದ.

ಧರ್ಮಸ್ಥಳದ ಮಂಜುನಾಥನ ದಯೆ ಆಸ್ಟ್ರೇಲಿಯಾದಲ್ಲಿ ಎಫೆಕ್ಟ್ ಇಲ್ಲ ಅಂತ ಕಾಣತ್ತೆ. ನನ್ನ ಕುದುರೆ ಗೆಲ್ಲೋದಿರಲಿ ಎಷ್ಟನೇ ಸ್ಥಾನದಲ್ಲಿತ್ತು ಅಂತಾನೂ ಟೀವಿಲಿ ಹೇಳಲಿಲ್ಲ.

[ಚಿತ್ರಗಳು-ಲೇಖಕರದು]

ಪುಟದ ಮೊದಲಿಗೆ
 
Votes:  3     Rating: 5    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು