ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಯ್ಯಾನ್ ಉಟ್ಸನ್: ಕಟ್ಟಿದವನು ಕಣ್ಣೆತ್ತಿಯೂ ನೋಡದೆ ಹೋಗಿಬಿಟ್ಟ    
ಸುದರ್ಶನ್
ಭಾನುವಾರ, 7 ಡಿಸೆಂಬರ್ 2008 (10:23 IST)
ಯ್ಯಾನ್ ಉಟ್ಸನ್

೯೦ ವರ್ಷದ ಡೇನಿಶ್ ಆರ್ಕಿಟೆಕ್ಟ್ ಯ್ಯಾನ್ ಉಟ್ಸನ್ (Jorn Utzon) ಹೋದ ವಾರ ತೀರಿಕೊಂಡ. ಕಣ್ಣಿನ ನೋಟ ತಗ್ಗಿ ಬಹುಪಾಲು ಕುರುಡಾಗಿಬಿಟ್ಟಿದ್ದ. ಮೆದುನುಡಿಯ ಇವನಿಗೆ ನಿದ್ದೆಯಲ್ಲೇ ಹೃದಯಾಘಾತ - ಮೌನ ಸಾವು. ಸಿಡ್ನಿಯ ಹೆಸರಾಂತ ‘ಆಪೆರಾ ಹೌಸ್'ನ ಮೂಲ ವಿನ್ಯಾಸಕನಾಗಿಯೂ ಅದನ್ನು ತನ್ನ ಕಣ್ಣಿಂದ ಒಮ್ಮೆಯೂ ನೋಡದೇ ತೆರಳಿಬಿಟ್ಟ.

ಆಪೆರಾ ಹೌಸನ್ನು ಜಗತ್ತಿನ ಎಲ್ಲ ಮೂಲೆಗಳಿಂದ ಬಂದು ಜನ ಕತ್ತೆತ್ತಿ ನೋಡಿ ಬೆರಗಾಗುತ್ತಾರೆ. ನೋಡಲು ಬಂದ ಗೆಳೆಯರನ್ನು ಅಲ್ಲಿಗೆ ಕರೆದೊಯ್ದ ನಮಗೆ, ಅವರ ಅರಳುವ ಕಣ್ಣನ್ನು ನೋಡುವುದೇ ಒಂದು ಆನಂದ. ವರ್ಷವರ್ಷವೂ ಆ ಕಟ್ಟಡಕ್ಕೆ ಬರುವ ಮಿಲಿಯನ್ ಗಟ್ಟಲೆ ನೋಟಕರು ತಲೆತೂಗದೇ ಹೋಗುವುದೇ ವಿರಳ. ಆದರೆ ಅದರ ಮೂಲ ವಿನ್ಯಾಸಕ ಉಟ್ಸನ್, ಆಪೆರಾ ಹೌಸ್ ಪೂರ್ಣಗೊಳ್ಳುವ ಮೊದಲೇ ಆಸ್ಟ್ರೇಲಿಯ ಬಿಟ್ಟು ಹೊರನಡೆದ. ಆಮೇಲೆ ಒಮ್ಮೆಯೂ ಅದನ್ನು ಸಂದರ್ಶಿಸಿಲ್ಲ! ಆಪೆರಾ ಹೌಸ್ ಜಾಗತಿಕ ಹೆರಿಟೇಜ್ ಪಟ್ಟಿಯಲ್ಲೀಗ ಸೇರಿದೆ.

ಸಿಡ್ನಿಯ ಹಾರ್ಬರಿನ ತಟಕ್ಕೊಂದು ಕಟ್ಟಡಕ್ಕಾಗಿ ನ್ಯೂ ಸೌತ್ ವೇಲ್ಸ್ ರಾಜ್ಯಸರ್ಕಾರ ೧೯೫೭ರಲ್ಲಿ ವಿನ್ಯಾಸದ ಸ್ಪರ್ಧೆ ನಡೆಸಿತು. ಅನಿರೀಕ್ಷಿತವಾಗಿ ಉಟ್ಸನ್‌ನ ವಿನ್ಯಾಸ ಗೆದ್ದು - ಕಟ್ಟಲು ಅವನನ್ನು ಬರಮಾಡಿಕೊಂಡರು. ೧೯೬೬ರಲ್ಲಿ ಕಟ್ಟಡ ಅರ್ಧವಾಗಿದ್ದಾಗ ಉಟ್ಸನ್ ನಿರ್ಮಾಣದಿಂದ ಹೊರ ನಡೆದ. ಸರ್ಕಾರದ ಧೋರಣೆ ಹಾಗು ಖರ್ಚಿನ ವಿಚಾರ ಅವನನ್ನು ನಿರಾಶೆಗೊಳಿಸಿತ್ತು. ಅದೊಂದು ವಿಚಿತ್ರ ಕಥನ.

೧೯೧೮ರಲ್ಲಿ ನೇವಲ್ ಆರ್ಕಿಟೆಕ್ಟನ ಮಗನಾಗಿ ಹುಟ್ಟಿದ ಉಟ್ಸನ್ ಡೇನಿಶ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಿಂದ ೧೯೪೨ರಲ್ಲಿ ಪದವಿ ಪಡೆದು ತನ್ನ ಕೆಲಸ ಶುರುಮಾಡಿದ. ಯುದ್ಧದ ವೇಳೆ ಸ್ವೀಡನ್, ಫಿನ್‌ಲ್ಯಾಂಡಲ್ಲಿ ಕೆಲಸ ಮಾಡಿ ಮತ್ತೆ ಡೆನ್ಮಾರ್ಕಿಗೆ ಹಿಂದಿರುಗಿದ. ಸಿಡ್ನಿ ಆಪೆರಾ ಹೌಸಿನ ನಂತರ ಹಲವು ಕಟ್ಟಡಗಳನ್ನು ವಿನ್ಯಾಸ ಮಾಡಿದ್ದರೂ, ಇದು ಮಾತ್ರ ಉಟ್ಸನನ ಹೆಸರನ್ನು ಅಜರಾಮರ ಮಾಡಿದ ಕಟ್ಟಡವಾಗಿ ಉಳಿದಿದೆ.

ಸಮುದ್ರದ ಮುಂಕಿನಾರೆಯಲ್ಲಿ ಚಿಪ್ಪುಗಳನ್ನು ಜೋಡಿಸಿಟ್ಟಂತಿರುವ ಅವನ ವಿನ್ಯಾಸವನ್ನು ಹಲವು ಬಗೆಗಳಲ್ಲಿ ಜನ ಅರ್ಥೈಸುತ್ತಾರೆ. ಕಪ್ಪೆಚಿಪ್ಪಿನ ಚೂಪುಗಳು ಸಾಗರದ ಕತೆ ಹೇಳುತ್ತದೆ ಎಂದು ಕೆಲವರೆನ್ನುತ್ತಾರೆ. ದೋಣಿಯ ಹಾಯಿಗಳು ಆಸ್ಟ್ರೇಲಿಯದ ವಲಸೆಯ ಕತೆ ಹೇಳುತ್ತದೆ ಎಂದು ಇನ್ನು ಕೆಲವರು ಹೇಳುತ್ತಾರೆ. ದೇವ ಮಂದಿರದಂತಹ ಗೋಪುರದ ಶೈಲಿಯೆಂದು ಕೆಲವು ನಂಬಿಕಸ್ತರು ಹೇಳುತ್ತಾರೆ. ಆದರೆ ಡಾಕ್ಯುಮೆಂಟರಿ ಒಂದರಲ್ಲಿ ಸುಲಿದ ಕಿತ್ತಳೆಯ ಸಿಪ್ಪೆ ತನ್ನ ಮೂಲ ವಿನ್ಯಾಸಕ್ಕೆ ಸ್ಪೂರ್ತಿ ಎಂದು ಉಟ್ಸನ್ ಹೇಳಿದಂತೆ ನನ್ನ ನೆನಪು. ಕಿತ್ತಳೆ ಹಣ್ಣಿನ ಮೂಲಕ್ಕೂ - ಚಿಪ್ಪಿನಂತ-ಹಾಯಿಯಂತ-ಗೋಪುರದಂತ ಕಟ್ಟಡದ ಪೂರ್ಣರೂಪಕ್ಕೂ ನಡುವಿನ ಕತೆ ಮಾತ್ರ ರೋಚಕವಾದ್ದು.

ಉಟ್ಸನ್ ಕನಸು ಕಂಡ ಆ ಬಾಗಿದ ಹೊರಮೈ ಛಾವಣಿಯನ್ನು ಗೋಲದ ಸಂಕೀರ್ಣ ಕೋನದ ಭಾಗಗಳಾಗಿ ಮಾಡಬೇಕಿತ್ತು. ಅರವತ್ತರ ದಶಕದ ಆಸ್ಟ್ರೇಲಿಯದಲ್ಲಿ ಅದನ್ನು ನಿರ್ಮಿಸಬಲ್ಲವರು ಇರಲಿಲ್ಲ. ಹಾಗಾಗಿ ಯುರೋಪಿನ ನಿರ್ಮಾಣಕಾರರ ಮೊರೆ ಹೋದ. ತನ್ನ ವಿನ್ಯಾಸಕ್ಕೆ ಕುಂದಾಗದಂತೆ, ಹೊರಮೈ ಛಾವಣಿಯನ್ನು ಬಿಡಿಬಿಡಿಯಾಗಿ ಮಾಡಿಸಿ ತರಿಸಿದ. ಅಷ್ಟರಲ್ಲಿ ಸರ್ಕಾರ ಬದಲಾಗಿ, ಖರ್ಚು ಹೆಚ್ಚಾಯ್ತು ಎಂಬ ಕೂಗಾಟ ಶುರುವಾಯ್ತು. ಖರ್ಚು ತಗ್ಗಿಸಬೇಕೆಂದು ಠರಾವು ಹೊರಟಿತು. ಉಟ್ಸನ್ ತನ್ನ ವಿನ್ಯಾಸದ ಯಾವುದೇ ಅಂಶವನ್ನೂ ಬಿಟ್ಟುಕೊಡಲು ತಯಾರಿರಲಿಲ್ಲ. ರಂಗಮಂದಿರದ ಒಳಾಂಗಣ, ಆಪೆರಾಗೆ ಬೇಕಾದ ಅಕೌಸ್ಟಿಕ್ಸ್, ಕಲಾವಿದರ ಗ್ರೀನ್ ರೂಮು ಎಲ್ಲವೂ ಒಂದಕ್ಕೊಂದು ತಾಳೆ ಹಾಕಿಕೊಂಡಿದ್ದು ಒಂದು ಬದಲಿಸಿದರೆ ಮತ್ತೊಂದು ಕೆಡುವ ಅಪಾಯವಿತ್ತಂತೆ. ಇದನ್ನೆಲ್ಲಾ ಸರ್ಕಾರಿ ಬ್ಯೂರೋಕ್ರಾಟ್ಸ್ ಜತೆ ವಾದಿಸಿ ವಾದಿಸಿ ಉಟ್ಸನ್ ಸೋತು ಹೋದನಂತೆ.

ಆಪೆರಾ ಹೌಸ್ಖರ್ಚಿನ ತಿಕ್ಕಾಟದಲ್ಲಿ ಉಟ್ಸನ್‌ಗೆ ಅವಮಾನವಾಗುವಂತೆ ಹೊಸ ಸರ್ಕಾರ ಅವನ ಸಂಬಳ ನಿಲ್ಲಿಸಿತು. ಉಟ್ಸನ್ ಗಂಟುಮೂಟೆ ಕಟ್ಟಿಕೊಂಡು ದೇಶದಿಂದ ಹೊರಬಿದ್ದ. ಸರ್ಕಾರಿ ಆರ್ಕಿಟೆಕ್ಟರಿಗೆ ಮುಂದಿನ ಕೆಲಸ ವಹಿಸಲಾಯಿತು. ಅವರು ತಮ್ಮ ಯಜಮಾನರ ಮಾತು ಮೀರಲಿಲ್ಲ. ಅಂದಿನ ಪಾರ್ಟಿ ರಾಜಕೀಯಕ್ಕೆ ಸ್ಪಂದಿಸಿದ ಸರ್ಕಾರದ ಸಣ್ಣತನ ಕಡೆಗೂ ಒಳವಿನ್ಯಾಸವನ್ನು ತನ್ನ ಕೈಗೆತ್ತಿಕೊಂಡು ಕೆಡಿಸಿಬಿಟ್ಟಿತು. ಉಟ್ಸನ್ ಕಹಿ ಮನಸ್ಸಿನಿಂದ ಆಸ್ಟ್ರೇಲಿಯ ಬಿಟ್ಟು ಹೋದವನು ಮತ್ತೆ ಇಲ್ಲಿಗೆ ಬರಲೇ ಇಲ್ಲ. ಈ ಎಲ್ಲ ಜಗಳದ ಪರಿಣಾಮವಾಗಿ ಅವನು ತನ್ನ ಜೀವನದಲ್ಲಿ ಮುಂದೆ ಇದಕ್ಕಿಂತ ಚೆನ್ನಾದ ಕೃತಿಯನ್ನು ವಿನ್ಯಾಸಮಾಡಲಿಲ್ಲ. ಅದು ಲೋಕಕ್ಕಾದ ನಿಜವಾದ ದೊಡ್ಡ ನಷ್ಟ ಎಂದು ಹಲವರ ಅಂಬೋಣ. ತೊಂಬತ್ತರ ಕಡೆಯಲ್ಲಿ ಆಪೆರಾ ಹೌಸಿನ ಒಳಾಂಗಣವನ್ನು ಸರಿಮಾಡಲು, ಅವನ ಮಕ್ಕಳ ಮೂಲಕ ಸರ್ಕಾರ ಅವನಿಂದ ಸಲಹೆ ಪಡೆಯಿತು. ಅಷ್ಟೆ. ಮತ್ತೆ ಇಲ್ಲಿಗೆ ಬರುವ ಇಚ್ಛೆ ಅವನು ತೋರಲಿಲ್ಲ.

ಮನಸ್ಸಲ್ಲಿ ಕಹಿ ಉಳಿದಿಲ್ಲ ಎನ್ನುತ್ತಲೇ ತನ್ನ ಹಟವನ್ನು ಸಾಧಿಸಿ ಉಟ್ಸನ್ ಹೊರಟುಬಿಟ್ಟ. ಇಪ್ಪತ್ತನೇ ಶತಮಾನದ ಅಚ್ಚಳಿಯದ ಕುರುಹೆಂದು ಲೋಕವೇ ಕೊಂಡಾಡಿದರೂ, ತನ್ನ ಮನಸ್ಸಿಗೊಪ್ಪದ್ದು ಎಂಬ ತನ್ನ ನಿಲುವನ್ನು ಕಡೆಗೂ ಬಿಟ್ಟುಕೊಡದೇ ಹೊರಟುಬಿಟ್ಟ. ತಮ್ಮ ತಪ್ಪು ಅರಿವಾಗಿರುವ ಸಿಡ್ನಿಯ ಮಂದಿ ಅವನು ತೀರಿಕೊಂಡಾಗ ಕಟ್ಟಡದ ದೀಪವನ್ನು ತಗ್ಗಿಸಿ ಮೌನವಾಗಿ ಉಟ್ಸನ್‌ಗೆ ತಲೆ ಬಾಗಿದರು.

ಪುಟದ ಮೊದಲಿಗೆ
 
Votes:  7     Rating: 4.14    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು