ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ‘ನೋಡಿ ಅವರಲ್ಲೂ ಒಳ್ಳೆಯವರಿರುತ್ತಾರೆ!’    
ಸುದರ್ಶನ್
ಶುಕ್ರವಾರ, 12 ಡಿಸೆಂಬರ್ 2008 (03:14 IST)
ಸಿಡ್ನಿಯ ದಿನಸಿ ಅಂಗಡಿ

ಆಸ್ಟ್ರೇಲಿಯದಲ್ಲಿ ಲೆಬನಾನಿನಿಂದ ಬಂದ ಜನರಿದ್ದಾರೆ. ಹೆಚ್ಚಾಗಿ ಕಾರು ರಿಪೇರಿ ಶಾಪೋ ಅಥವಾ ದಿನಸಿ ಅಂಗಡಿಯೋ ಇಟ್ಟುಕೊಂಡಿದ್ದಾರೆ. ಎಂಬತ್ತರ ದಶಕದ ಲೆಬನಾನ್ ಯುದ್ಧದ ಹೊತ್ತಿನಲ್ಲಿ ತಮ್ಮ ಹಾಗೂ ಮಕ್ಕಳ ಜೀವ ಕಾಪಾಡಿಕೊಳ್ಳಲು ಗುಳೆ ಬಂದವರು. ಹೆಚ್ಚಿನವರು ಮುಸಲ್ಮಾನರಾದರೆ, ಕ್ರಿಶ್ಚಿಯನ್ನರೂ ಇದ್ದಾರೆ. ಮುಸಲ್ಮಾನರೆಂದರೆ ಸಿಡಿಮಿಡಿಯೆನ್ನುವ ಲೋಕದಲ್ಲಿ ಲೆಬನಾನಿನ ಮುಸಲ್ಮಾನರಿಂದ ತಮಗೂ ಇಲ್ಲದ ಸಂಕಟ ಎಂದು ಅಲ್ಲಿನ ಕ್ರಿಶ್ಚಿಯನ್ನರು ಗೊಣಗುತ್ತಾರೆ. ಹಾಗೆಯೇ ಹಲವಾರು ಲೆಬನೀಸರು ಒಳ್ಳೆ ಕೆಲಸಗಳಲ್ಲೂ ಇದ್ದಾರೆ. ಅವರ ಮುಂದಿನ ತಲೆಮಾರಿನ ಮಕ್ಕಳು ಎಲ್ಲರಂತೆ ನಾಡಿನ ಉಳಿದವರೊಂದಿಗೆ ಒಡನಾಡಿಕೊಂಡು, ತಮ್ಮ ಕೆಲಸಗಳಲ್ಲಿ ಮುಂದವರಿದಿರುವುದೂ ಇದೆ.

ಲೆಬನೀಸರೆಲ್ಲರೂ ನಮ್ಮಂತೆ ತರಕಾರಿ ತುಂಬಾ ಬಳಸುತ್ತಾರೆ, ಹಿಂದಿ ಚಿತ್ರಗಳನ್ನು ತಪ್ಪದೆ ನೋಡಿ ನಲಿಯುತ್ತಾರೆ. ಅದರ ಹಾಡುಗಳಿಗೆ ಕಾಲು ಕುಣಿಸುತ್ತಾ ತಮ್ಮದಾಗಿಸಿಕೊಳ್ಳುತ್ತಾರೆ. ಆದರೂ ಇವರ ಬಗ್ಗೆ ಇಂಡಿಯಾದವರ ಗಮನ ಮತ್ತು ನಿಲುವು ತುಂಬಾ ವಿಚಿತ್ರವಾದ್ದು.

ಹಲವಾರು ವರ್ಷಗಳ ಹಿಂದಿನ ಮಾತು. ಆಗತಾನೆ ಇಂಡಿಯಾದಲ್ಲಿ ಟಿವಿಕ್ರಾಂತಿ ಶುರುವಾಗಿತ್ತು. ಅಲ್ಲಿಯ ಟಿವಿ ಹಿಡಿಯಲೋಸುಗ ದೊಡ್ಡ ಡಿಶ್ ಆಂಟೆನಾ ಹಾಕಲು ಗೆಳೆಯನೊಬ್ಬನ ಮನೆಯಲ್ಲಿ ನಾವೆಲ್ಲಾ ಒಟ್ಟುಗೂಡಿದ್ದೆವು. ಅದಕ್ಕೆ ಬೇಕಾದ ಕಬ್ಬಿಣದ ಪೈಪೊಂದನ್ನು ಕತ್ತರಿಸಿಕೊಂಡು ಬರಲು ವರ್ಕ್‌ಶಾಪಿಗೆ ಹೋಗಬೇಕಾಗಿ ಬಂತು. ಆ ವರ್ಕ್‌ಶಾಪಿನಲ್ಲಿ ಭೇಟಿಯಾದ ಒಬ್ಬ ಲೆಬನೀಸಿನವ ಮಾತುಕತೆಯಾಡುತ್ತಾ ಎಲ್ಲರನ್ನೂ ನಗಿಸುತ್ತಿದ್ದ. ಕುಳ್ಳಗೆ, ಕರಿಬಿಳಿ ಮೀಸೆಯ, ಒರಟು ಕೈಗಳ ಐವತ್ತು ದಾಟಿದವ. ನಮ್ಮೊಡನಿದ್ದ ಒಬ್ಬನಿಗೆ ಕಿಡ್ನಿ ಕೆಟ್ಟು ಡಯಾಲಿಸಿಸಿಗೆ ಪ್ರತಿ ವಾರ ಹೋಗುತ್ತಾನೆ ಎಂದು ಅವನಿಗೆ ಗೊತ್ತಾಯಿತು. ಕೂಡಲೆ ಆ ಬೇನೆಗೆ ಯಾವುದೋ ತರಕಾರಿ ಒಳ್ಳೆಯದು ಎಂದು ಹೇಳತೊಡಗಿದ. ಅವನದು ಹರುಕುಮುರುಕು ಇಂಗ್ಲೀಷು, ಆ ತರಕಾರಿಯ ಹೆಸರು ಗೊತ್ತಿರಲಿಲ್ಲ. ಸರಿ, ಆ ತರಕಾರಿಯ ಬಣ್ಣನೆ ಶುರು ಮಾಡಿದ. ಅದರ ಉದ್ದ, ಗಾತ್ರ, ಬಣ್ಣ ಬೆಳೆಯುವ ಪರಿ ಏನು ಹೇಳಿದರೂ ಅವನು ಯಾವ ತರಕಾರಿ ಹೇಳುತ್ತಿದ್ದಾನೆ ಎಂದು ಯಾರಿಗೂ ತಿಳಿಯಲಿಲ್ಲ. ಪೈಪಿನ ಕೆಲಸ ಮುಗಿದಿದ್ದರೂ, ಹೊರಡಲು ಬಿಡವೊಲ್ಲ. ನಮಗಂತು ಅವನಿಂದ ತಪ್ಪಿಸಿಕೊಂಡರೆ ಸಾಕಾಗಿತ್ತು. ಅವನೋ ಪಟ್ಟುಬಿಡದೆ ಹೇಗೇಗೋ ಕೈಬೀಸುತ್ತಾ, ಅದರಿಂದ ಅಡುಗೆ ಮಾಡುವುದನ್ನೆಲ್ಲಾ ವಿವರಿಸುತ್ತಾ ಹೋದ. ಕಡೆಗೆ ಎಲ್ಲವೂ ವಿಫಲವಾದಾಗ ತನ್ನ ಮನೆಯ ಅಡ್ರೆಸ್ ಕೊಟ್ಟು ಅಲ್ಲಿಗೆ ಬಾ, ಹಿತ್ತಲಲ್ಲಿ ಬೆಳೆದಿದೆ ಕೊಡುತ್ತೇನೆ ಅಂದ.

ಡಿಶ್ ಮೇಲಕ್ಕೇರಿಸಿ ಇಂಡಿಯಾ ಟಿವಿ ನೋಡಿ ನಲಿಯುತ್ತಾ ನಮಗೆ ಅವನ ಮಾತು ಮರೆತೇ ಹೋಯಿತು. ನಮ್ಮ ಗೆಳೆಯನೂ ಮರೆತನೋ ಅಥವಾ ಯಾರು ಹೋಗುತ್ತಾರೆ ಎಂದೋ ಅವನಲ್ಲಿಗೆ ಹೋಗಲೇ ಇಲ್ಲ. ಎರಡು ದಿನ ಕಾದ ಅವನು, ಇವನು ಯಾಕೆ ಬರಲಿಲ್ಲ ಎಂದು ಚಡಪಡಿಸಿದನಂತೆ. ನಾವು ಮಾತು ಮಾತಿಗೆ ಹೇಳಿದ್ದ ಅಡ್ರೆಸ್ಸಿನ ಅಂದಾಜಿನ ಮೇಲೆ ಅಲೆದೂ ಅಲೆದೂ ನಮ್ಮ ಗೆಳೆಯನ ಮನೆ ಹುಡುಕಿಕೊಂಡು ಬಂದನಂತೆ. ಯಾಕೆ ಬರಲಿಲ್ಲ ಎಂದು ದಬಾಯಿಸದನಂತೆ. ತನ್ನ ಹಿತ್ತಲಲ್ಲಿ ಬೆಳೆದಿದ್ದ ತರಕಾರಿಯನ್ನು ಅವರ ಮುಂದೆ ರಾಶಿ ಹಾಕಿದನಂತೆ. ಅದನ್ನು ಹೇಗೆ ಬೇಯಿಸಬೇಕು, ಹೇಗೆ ತಿನ್ನಬೇಕು ಎಂದು ಗಂಟೆ ಕಾಲ ಹೇಳಿದನಂತೆ. ನಂತರ ಟೀ ಕುಡಿದು ಬೈ ಹೇಳಿ ಹೊರಟುಹೋದನಂತೆ. ಇದನ್ನೆಲ್ಲಾ ನಮಗೆ ಹೇಳಿದ ಗೆಳೆಯ ‘ನೋಡಿ ಅವರಲ್ಲೂ ಒಳ್ಳೆಯವರಿರುತ್ತಾರೆ' ಎಂದಿದ್ದ! ನಾನು ಅವಕ್ಕಾಗಿದ್ದೆ.

ನಾನ್-ವೆಜ್ ತಿನ್ನದ ನಮ್ಮ ಎಷ್ಟೋ ಜನ ಸಂಪ್ರದಾಯಸ್ತರು ಲೆಬನೀಸರ ಅಂಗಡಿಗಳಿಗೆ ಹೋಗುವುದಿಲ್ಲ. ತಲೆಯಲ್ಲಿ ಏನೇನೋ ತುಂಬಿಕೊಂಡು ಆ ಅಂಗಡಿಗಳತ್ತ ಸುಳಿಯಲು ಹಿಂಜರಿಯುತ್ತಾರೆ. ಆದರೆ ಇಲ್ಲೊಂದು ತಮಾಷೆ ನೋಡಿ. ಲೆಬನೀಸರ ದಿನಸಿ ಅಂಗಡಿಯಲ್ಲಿ ಗೋಡಂಬಿ, ದ್ರಾಕ್ಷಿ, ಬಾದಾಮಿ, ಖರ್ಜೂರ ಚೆನ್ನಾಗಿ ಇರುತ್ತದೆ. ಕಡಿಮೆ ಬೆಲೆಗೂ ಸಿಗುತ್ತದೆ. ಅವನ್ನೇ ಬಣ್ಣದ ಡಬ್ಬದಲ್ಲಿ ತುಂಬಿ ಎರಡರಷ್ಟು ಬೆಲೆಗೆ ಸೂಪರ್ ಮಾರ್ಕೆಟ್ಟುಗಳಲ್ಲಿ ಮಾರುತ್ತಾರೆ. ಆ ಮೋಸವನ್ನು ನಮ್ಮವರು ಬಲು ಬೇಗ ಅರಿತುಕೊಳ್ಳುವ ಜಾಣರು. ಆದರೂ ಲೆಬನೀಸಂಗಡಿಗೆ ಹೋಗಕೂಡದು ಎಂದು ತಾಕೀತು ಮಾಡುವ ಭಾರತೀಯ ಗಂಡಂದಿರಿದ್ದಾರೆ. ಅಲ್ಲಿಂದ ತಂದ ಬಾದಾಮಿ ಗೋಡಂಬಿ ಕೇಜಿಗಟ್ಟಲೆ ತಿನ್ನಿಸಿ ಬೇರೆಯವರು ತಮ್ಮ ಮಕ್ಕಳನ್ನು ದಷ್ಟಪುಷ್ಟವಾಗಿ ಬೆಳೆಸುತ್ತಾರೆ ಎಂದು ಪರಿತಪಿಸುವ ಅವರ ಹೆಂಡತಿಯರಿದ್ದಾರೆ. ಆ ಹೆಂಡತಿಯರು ‘ಹೋದರೆ ಏನೀಗ' ಎಂದು ಹತ್ತಿರದವರ ಜತೆ ಅಸಹನೆಯಿಂದ ಗುಸುಗುಸು ಅಂದುಕೊಳ್ಳುತ್ತಾರೆ. ಕಡೆಗೆ ತಡೆಯಲಾರದೆ ಗಂಡನ ಕಣ್ಣುತಪ್ಪಿಸಿ, ಬೇರೆಲ್ಲಿಂದಲೋ ತಂದೆ ಎಂದು ಸುಳ್ಳು ಹೇಳುತ್ತಾರೆ. ಲೆಬನೀಸಂಗಡಿಯಿಂದಲೇ ತಂದು ತಮ್ಮ ಮಕ್ಕಳಿಗೂ ತಿನ್ನಿಸಿ ನೆಮ್ಮದಿಪಡುತ್ತಾರೆ. ಈ ನಮ್ಮ ತಾಯಂದಿರಿಗೆ ಆ ಅಂಗಡಿಯವ ಲೆಬನೀಸನೋ ಮುಸಲ್ಮಾನನೋ ಅನ್ನುವದಕ್ಕಿಂತ ತಮ್ಮ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುವುದು ಬೇಕಾಗಿರುತ್ತದೆ.

[ಚಿತ್ರಗಳು-ಲೇಖಕರವು]

ಪುಟದ ಮೊದಲಿಗೆ
 
Votes:  4     Rating: 4.75    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು