ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಕ್ರಿಸ್ಮಸ್ ಸಂತಸದಲ್ಲಿ ಅಂತರ್ಮುಖಿ    
ಸುದರ್ಶನ್
ಗುರುವಾರ, 25 ಡಿಸೆಂಬರ್ 2008 (01:14 IST)

 ವರ್ಷವಿಡೀ ಸಿಕ್ಕಾಪಟ್ಟೆ ಕುಗ್ಗಿ ಹೋದ ಆರ್ಥಿಕ ಮತ್ತು ಸಾಮಾಜಿಕ ಬದುಕುಗಳು ಕೊಂಚ ನಿಟ್ಟುಸುರಿಬಿಡುವ ಗಳಿಗೆ ಇದು. ಕ್ರಿಸ್‌ಮಸ್ ಮತ್ತು ಹೊಸವರ್ಷದ ನಡುವಿನ ಈ ದಿನಗಳು ಗೆದ್ದವರು ನೆಲಕ್ಕಿಳಿಯುವ, ಸೋತವರು ಮತ್ತೆ ಕನಸು ಚಿಗುರಿಸಿಕೊಳ್ಳುವ ಗಳಿಗೆ. ಬಿದ್ದೂ ಮೀಸೆ ಮಣ್ಣಾಗಿಲ್ಲ ಎಂಬಂತಹ ಮಾತುಗಳು ಎಲ್ಲರ ನಾಲಗೆಯ ಮೇಲೆ. ಇದು ಮತ್ತೆ ಏಳಲು ಅನಿವಾರ್ಯವೇನೋ. ಹೀಗೆಲ್ಲಾ ಯೋಚಿಸುತ್ತಾ ಇರುವಾಗ, ಊರ ತುಂಬಾ ಮಕ್ಕಳು ಮರಿಗಳನ್ನು ಎಳೆದುಕೊಂಡು ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ಕೊಳ್ಳುತ್ತಿರುವ ಮಂದಿ ಕಿಕ್ಕಿರಿಯುತ್ತಾರೆ. ಕ್ರಿಸ್‌ಮಸ್‌ಗೆ ಇನ್ನೆರಡು ದಿನವಿರುವಾಗಿನ ಆತುರ ಕಾತರ ಎಲ್ಲರ ಕಣ್ಣುಗಳಲ್ಲಿ. ಪೇಟೆಯ ಬಣ್ಣ ಬೆಳಕುಗಳನ್ನು ಕಣ್ಣಲ್ಲಿ ತುಂಬಿಕೊಂಡು ತಮ್ಮ ಲೋಕದಲ್ಲೇ ಮೈಮರೆತ ಮಕ್ಕಳು ಅವರ ಹಿಂದೆ ಕಾಲೆಳೆದುಕೊಂಡು ಓಡಾಡುತ್ತಾರೆ. ಅಂಗಡಿ ಕಿಟಕಿಗಳಲ್ಲಿ ಹಾಕಿರುವ ಕ್ರಿಸ್‌ಮಸ್ ಬೊಂಬೆ, ಅಲಂಕಾರಗಳನ್ನು ನೋಡುತ್ತಾ ಕಳೆದುಹೋಗುತ್ತಾರೆ. ಹೌದು, ಕಳೆದು ಹೋಗಲು ತಕ್ಕುದಾದ ಗಳಿಗೆಯಿದು ಎನಿಸುತ್ತದೆ.

ಕ್ರಿಸ್‌ಮಸ್ ಆಚರಣೆ ಧರ್ಮದಿಂದ ಎಷ್ಟು ದೂರ ಹೋಗಿದೆ ಎಂದು ಒಂದು ಕಡೆ ಖುಷಿಯಾಗುತ್ತದೆ. ಆದರೆ, ಅದನ್ನು ಅತ್ತ ಜಗುತ್ತಿರುವ ಒತ್ತಡಗಳು ಮತ್ತು ಲಾಭಕೋರತನ ನೋಡಿ ಅನುಮಾನವಾಗುತ್ತದೆ. ಈ ಹಬ್ಬದ ಮತ್ತು ಬಿಡುವಿನ ಹೊತ್ತಲ್ಲಿ ಯಾಕೋ ಮನಸ್ಸು ಅಂತರ್ಮುಖಿಯಾಗುತ್ತದೆ. ಕಾಡು ಕಡಲು ಊರು ಸುತ್ತಲು ಸೂಕ್ತ ಹೊತ್ತಿದು. ಮನಸ್ಸು ಬಹಿರ್ಮುಖವಾಗಿ ನಲಿಯಬೇಕಾದ ಹೊತ್ತಿದು. ಆದರೂ ಯಾವ ಸಮಜಾಯಿಷಿಗೂ ಮನಸ್ಸು ಬಗ್ಗುತ್ತಿಲ್ಲ. ಇಡೀ ವರ್ಷದ ಆಗುಹೋಗು ಮತ್ತು ಸದ್ಯದ ಅನಿರ್ದಿಷ್ಟತೆ ಎಲ್ಲವನ್ನೂ ಅನುಮಾನಿಸುವಂತೆ ಮಾಡುತ್ತದೆ.

sudarshan australiaಮುಂದಿನ ವರ್ಷ ಎರಡನೇ ಮಗುವನ್ನು ಎದುರು ನೋಡುತ್ತಿರುವ ಗೆಳೆಯನೊಬ್ಬ ತನ್ನ ಕುಟುಂಬದೊಡನಿರಲು ಹೋಗಿದ್ದಾನೆ. ದಾರಿಯಲ್ಲಿ ಅವನ ಹೆಂಡತಿಯ ಅಜ್ಜಿಯ ಜತೆ ಎರಡು ದಿನ ಕಳೆಯಲು ಯೋಚಿಸಿದ್ದಾರೆ. ೯೩ ವರ್ಷದ ಮುದುಕಿ. ತುಂಬಾ ಸ್ವಾಭಿಮಾನಿ. ಒಬ್ಬಂಟಿಯಾಗಿದ್ದಾಳಂತೆ. ಹತ್ತಿಪ್ಪತ್ತು ವರ್ಷಗಳ ಮುಂಚೆಯೇ ಗಂಡ ಸತ್ತಿದ್ದಾನೆ. ಸಹಬಾಳ್ವೆ ಅನ್ನುವುದು ಆಕೆಗೆ ಮರೆತೇ ಹೋಗಿದೆಯಂತೆ. ನನ್ನ ಗೆಳೆಯನ ಮಗಳನ್ನು ತುಂಬಾ ಪ್ರೀತಿಸುತ್ತಾಳಂತೆ. ತನ್ನ ಮನೆಯ ಪಕ್ಕದ ಬೀದಿಯ ಅಂಗಡಿಯಿಂದ ಇವರಿಗೆ ಉಡುಗೊರೆ ತಂದಿಟ್ಟಿರುತ್ತಾಳಂತೆ. ಮರೆತು ಮತ್ತೆ ಮತ್ತೆ ಅದೇ ಉಡುಗೊರೆ ಕೊಡುತ್ತಾಳಂತೆ. ಅವಳಿಗೆ ಬೇಜಾರಾಗಬಾರದೆಂದು "ಚೆನ್ನಾಗಿದೆ! ಚೆನ್ನಾಗಿದೆ!" ಎಂದು ನಕ್ಕು ಹೊರಡುತ್ತಾರಂತೆ. ಹಣ್ಣು ಹಣ್ಣು ಮುದುಕಿಯಾಗಿರುವ ಆಕೆಯ ಮೈತುಂಬಾ ಚರ್ಮ ಸುಕ್ಕುಗಟ್ಟಿದೆಯಂತೆ. ಆ ಸುಕ್ಕುಗಳ ನಡುವೆ ಆಕೆಯನ್ನು ಹುಡುಕಬೇಕು ಎಂದು ಹೇಳಿ ಈ ಗೆಳೆಯ ನಗುತ್ತಾನೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅವಳ ಸಿಗರೇಟಿನ ಚಟದ ಬಗ್ಗೆ ಇವನ ಆತಂಕ. ತನ್ನ ಹದಿಮೂರನೇ ವಯಸ್ಸಲ್ಲಿ ಆಕೆ ಸೇದಲು ತೊಡಗಿದ್ದಂತೆ. ಎಂಬತ್ತು ವರ್ಷದ ರೂಢಿ ಸುಲಭದಲ್ಲಿ ಹೋಗುವಂತಹುದಲ್ಲ ಎಂದು ತಮ್ಮ ಪ್ರಯತ್ನಗಳ ಪಟ್ಟಿಮಾಡುತ್ತಾನೆ.

ಆಕೆಯ ಪುಟ್ಟ ಮನೆಯ ತುಂಬಾ ಸಿಗರೇಟಿನ ವಾಸನೆಯಂತೆ. ಯಾರಿರಲಿ ಬಿಡಲಿ ತನ್ನ ಸಿಗರೇಟನ್ನು ಆಕೆ ಬಿಡುವುದಿಲ್ಲವಂತೆ. ಇವನ ಬಸುರಿ ಹೆಂಡತಿಗೆ ಸಿಗರೇಟಿನ ಹೊಗೆ ಒಳ್ಳೆಯದಲ್ಲ. ಮತ್ತು ಎರಡು ವರ್ಷದ ಪುಟ್ಟ ಮಗಳು ಬೇರೆ. ಇವನಿಗೆ ಅತೀವ ಹಿಂಜರಿಕೆ. ಇವನ ಹೆಂಡತಿಗೆ ತನ್ನ ಅಜ್ಜಿಯ ಬಗ್ಗೆ ಅತೀವ ಅಕ್ಕರೆ. ಏನು ಮಾಡುವುದು. ಹೇಗೋ ಇದ್ದು ಬಿಡುತ್ತೇನೆ. ಮಗಳನ್ನು ಆದಷ್ಟು ಹೊರಗೆ ಓಡಾಡಿಸಿಕೊಂಡಿರುತ್ತೇನೆ ಅನ್ನುತ್ತಾನೆ. ತನ್ನ ಹೆಂಡತಿ ಮತ್ತು ತಾನು ಹದಿನೈದು ವರ್ಷ ಸಿಗರೇಟು ಸೇದಿ ಒಂದೆರಡು ವರ್ಷದಿಂದ ಬಿಟ್ಟಿದ್ದೇವೆ ಎಂದು ಹೇಳಿ ಅರ್ಥಗರ್ಭಿತವಾಗಿ ನಗುತ್ತಾನೆ. ಊರಿಂದ ಬಂದಾಗ ಅವನಿಂದ ಇನ್ನಷ್ಟು ರಸವತ್ತಾದ ಕತೆಗಳಿರುತ್ತವೆ ಎಂದು ನೆನಪಾಗಿ ಮುಗುಳ್ನಗುತ್ತೇನೆ.

ಇನ್ನೊಬ್ಬ ಗೆಳೆಯನ ತಂದೆ ಹಾಗು ತಂದೆಯ ಸಂಗಾತಿ ಉತ್ತರದ ಬೀಚುಗಳ ಊರಲ್ಲಿ ಇರುವುದಂತೆ. ಅಲ್ಲಿಗೆ ಕ್ರಿಸ್‌ಮಸ್ ನಂತರ ಹೋಗಿ ತಂದೆಯನ್ನು ಭೇಟಿ ಮಾಡಬೇಕೆಂದು ಲೆಕ್ಕಾಚಾರ ಹಾಕಿದ್ದಾನೆ. ಚಿಕ್ಕವನಿದ್ದಾಗ ಇವನ ತಂದೆ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದನಂತೆ. ದೊಡ್ಡ ದರೋಡೆ ಎಲ್ಲ ಅಲ್ಲವಂತೆ. ಅವನಿಗೆ ಅಷ್ಟೆಲ್ಲಾ ತಾಕತ್ತಿರಲಿಲ್ಲ ಎಂದು ಹಲ್ಕಿರಿಯುತ್ತಾನೆ. ಕ್ಲೀನರ್ ಬಟ್ಟೆ ತೊಟ್ಟು ಹೋಗಿ ಪಬ್‌ಗಳಲ್ಲಿರುವ ಜೂಜು ಮಿಷನ್‌ನಿಂದ ದುಡ್ಡು ದೋಚಿಕೊಂಡು ಬರುತ್ತಿದ್ದರಂತೆ. ಸಿಕ್ಕಿ ಹಾಕಿಕೊಂಡು ಜೈಲಾಗಿದೆಯಂತೆ. ಆಗಲೇ ಅಪ್ಪ ಅಮ್ಮ ಬೇರಾದರಂತೆ. ಇದನ್ನು ಅವನು ಯಾರದೋ ಕತೆಯೆಂಬಂತೆ ಹೇಳುತ್ತಾನೆ. ಹೇಗೆ ಸಾಧ್ಯ ಅನಿಸುತ್ತದೆ. ಆದರೆ ಹಾಗೆ ಹೇಳಲು ಬೇಕಾದ ತಂದೆಯ ಬಗೆಗಿನ ಮನಸ್ಸಿನ ನಿರಾಳ ಅವನಲ್ಲಿ ಕಾಣುತ್ತದೆ. ನನ್ನ ತಲೆಯೊಳಗಿನ ಎಷ್ಟೋ ಹಳೆಯ ಗೊಂದಲಗಳ ಅರಿವು ಮಾಡಿ ಕೊಡುತ್ತದೆ.

ತನ್ನ ಹೆಂಡತಿಗೆ ಈ ವರ್ಷ ಏನು ಕೊಡಲಿ ಎಂದು ಜೋರಾಗಿ ಪ್ರಶ್ನಿಸಿಕೊಳ್ಳುತ್ತಾನೆ. ತನ್ನೆರಡು ಪುಟ್ಟ ಮಕ್ಕಳಿಗೆ ಕೊಳ್ಳುವುದು ಸುಲಭ. ಮಕ್ಕಳೇ ಇದು ಬೇಕೆಂದು ಕೇಳದಿದ್ದರೆ ತನಗೆ ಆಡಬೇಕನಿಸದ ಆಟಿಕೆಗಳನ್ನೇ ಅವರಿಗೂ ತಂದು ಬಿಡುತ್ತೇನೆ ಎಂದು ನಗುತ್ತಾನೆ. ಆದರೆ, ವರ್ಷ ಕಳೆದಂತೆ ಹೆಂಡತಿಗೆ ಮಾತ್ರ ಉಡುಗೊರೆ ಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಪಿಸುಗುಡುತ್ತಾನೆ. ಅದು ಏನನ್ನು ಸೂಚಿಸುತ್ತದೆ ಎಂದು ನಾನು ಕೆಣಕಿದರೆ ತುಸು ಗಡುಸಾಗಿ ಬಿಡುತ್ತಾನೆ. "ಇಲ್ಲ! ಇಲ್ಲ! ಏನು ಕೊಡಬೇಕೆಂದು ಗೊತ್ತಿದೆ. ಆದರೆ ಒಂದೆರಡು ಆಯ್ಕೆ ಇದೆ, ನಿರ್ಧರಿಸಿಲ್ಲ ಅಷ್ಟೆ" ಎಂದು ಸಮಜಾಯಿಷಿ ಹೇಳುತ್ತಾನೆ. ನನಗೆ ಹೇಳುವುದಕ್ಕಿಂತ ತನಗೆ ತಾನೇ ಹೇಳಿಕೊಂಡ ಸ್ವಗತದಂತಿರುತ್ತದೆ ಅವನ ಮಾತುಗಳು.

ಒಂದು ಧಾರ್ಮಿಕ ಹಬ್ಬವನ್ನು ತಮಗೆ ಬೇಕಾದಂತೆ ಬಗ್ಗಿಸುವಕೊಳ್ಳುವ ಪರಿ ನೋಡಿ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಹಾಗೆ ಉಡುಗೊರೆಗಳ ಮೂಲಕ ಹತ್ತಿರದವರ ಬಗೆಗಿನ ತಮ್ಮ ಪ್ರೀತಿಯನ್ನು ಎಕ್ಸ್‌ಟರ್ನಲೈಸ್ ಮಾಡಿಕೊಳ್ಳುವುದು ನಮಗೆ ಆಗಿ ಬಂದಿಲ್ಲ ಎಂದು ಮನವರಿಕೆಯಾಗುತ್ತದೆ. ಅದು ಮುಖ್ಯವೇ ಅಥವಾ ಮುಖ್ಯವಲ್ಲವೇ ಎಂಬ ಚರ್ಚೆ ಅನಗತ್ಯ ಎಂದೂ ಅರಿವಾಗುತ್ತದೆ. ಸಾಯುವವರೆಗೂ ಹೊಗೆಸೊಪ್ಪು ಕಡ್ಡಿಪುಡಿ ತಿನ್ನುತ್ತಿದ್ದ, ನಾನು ಚಿಕ್ಕಂದಿನಲ್ಲಿ ನೋಡುತ್ತಿದ್ದ ಮುದುಕಿಯರು, ಅವರ ನಗುಗಳು, ನಕ್ಕಾಗ ಕಾಣುವ ಕಪ್ಪುಗಟ್ಟಿ ಕರಗಿ ಸಣ್ಣಗಾದ ಹಲ್ಲುಗಳು ಎಲ್ಲಾ ನೆನಪಾಗುತ್ತವೆ. ಅವರೆಲ್ಲಾ ಇಲ್ಲಿ ಬಂದು ಇದ್ದಿದ್ದರೆ ಹೇಗಿರುತ್ತಿದ್ದರು? ಮಕ್ಕಳು ಮರಿಗಳನ್ನೆಲ್ಲಾ ಹೇಗೆ ನೋಡಿಕೊಳ್ಳುತ್ತಿದ್ದರು? ಏನೆಲ್ಲಾ ಉಡುಗೊರೆ ಕೊಳ್ಳುತ್ತಿದ್ದರು ಎಂದು ಲೆಕ್ಕ ಹಾಕುತ್ತಾ ಮತ್ತೆ ಅಂತರ್ಮುಖಿಯಾಗುತ್ತೇನೆ. ಪೇಟೆ ಬೀದಿಯ ಮೇಲೆ ಬಿದ್ದೂ ಬೀಳದ ಹಾಗೆ ಸಣ್ಣಹನಿಯ ಮಳೆ ಹಾದು ಹೋಗುತ್ತದೆ.

ಪುಟದ ಮೊದಲಿಗೆ
 
Votes:  3     Rating: 4.67    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು