ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕವಿದು ಬಿದ್ದರು ಶಂಭು ಹೆಗಡೆ ಹರಿಯ ಚರಣದಲಿ    
ರಾಜಶೇಖರ ಹೆಗಡೆ
ಮಂಗಳವಾರ, 3 ಫೆಬ್ರವರಿ 2009 (12:13 IST)
ಹೀಗಿದ್ದರು ಶಂಭು ಹೆಗಡೆ
ಆಗ ನಾನಷ್ಟೇ ಶಾಲೆಗೆ ಹೋಗಲು ಶುರು ಮಾಡಿದ್ದೆ. ಬಹುಶಃ ಒಂದನೇ ತರಗತಿ ಎಂದು ನೆನಪು. ನಮ್ಮೂರಲ್ಲಿ ಆ ದಿನ ಆಟ. ಆಟ ಅಂದರೆ ಯಕ್ಷಗಾನ. ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದಾಗ ಮನೆಯಲ್ಲಿ ಅತಿಥಿಗಳಿದ್ದರು. ಅವರಾರೆಂದು ನನಗೆ ಗೊತ್ತಿರಲಿಲ್ಲ. ಆ ಪೈಕಿ ಒಬ್ಬರು ನನ್ನನ್ನು ತಮ್ಮ ಸನಿಹ ಕರೆದರು. ಅಳುಕುತ್ತಲೇ ಹೋದೆ. ‘ಏನು ಹೆಸರು?’ ಅಂದರು. ‘ಹೇಳಿದೆ’ (ಆಗ ನಾನು ‘ರ’ ವನ್ನು ‘ಲ’ ಎಂದು ಉಚ್ಚರಿಸುತ್ತಿದ್ದೆ. ‘ಆಟ ಹೆಂಗಿರ್ತು ನೋಡಿದ್ಯ?’ ಎಂದರು. ಇಲ್ಲ ಎಂಬಂತೆ ತಲೆಯಾಡಿಸಿದೆ. ಅವರು ಇನ್ನೂ ಏನಾದರೂ ಹೇಳುತ್ತಿದ್ದರೇನೋ! ಆದರೆ ನಾನು ನನ್ನ ಹೆಸರನ್ನು ‘ಲಾಜಶೇಖಲ’ ಎಂದಿದ್ದು ಅಲ್ಲಿದ್ದವರಲ್ಲಿ ನಗೆ ಹಚ್ಚಿಬಿಟ್ಟಿತ್ತು. ನಾನು ನಾಚಿ ಓಡಿದೆ.

ನಂತರ ಗೊತ್ತಾಗಿದ್ದು ನನ್ನನ್ನು ಮಾತನಾಡಿಸಿದವರು ಕೆರೆಮನೆ ಶಂಭು ಹೆಗಡೆ ಎಂದು.

ಇಂದು (೦೩-ಫೆ-೨೦೦೯) ಬೆಳ್ಳಂ ಬೆಳಿಗ್ಗೆ ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದಾಗ ನಾನು ಈ ನೆನಪಿಗೆ ಜಾರಲೇಬೇಕಾಯಿತು. ಏಕೆಂದರೆ ನಾನು ಯಕ್ಷಗಾನ ನೋಡುವುದಕ್ಕಿಂತ ಮೊದಲೇ ಶಂಭು ಹೆಗಡೆ ಅವರನ್ನು ಕಂಡವನು. ನನ್ನಣ್ಣ, ಸೋದರಮಾವ ಎಲ್ಲರೂ ಶಂಭು ಹೆಗಡೆ ಅವರ ಒಡನಾಡಿಗಳಾಗಿದ್ದರಿಂದ ಆ ಭಾಗ್ಯ ನನಗೆ ಸಿಕ್ಕಿತ್ತು.

ಕರ್ಣ ಪಾತ್ರಧಾರಿ ಶಂಭು ಹೆಗಡೆನಂತರ ನಾನು ಯಕ್ಷಗಾನ ನೋಡತೊಡಗಿದ ಮೇಲೆ, ಅದನ್ನು ಅರ್ಥ ಮಾಡಿಕೊಳ್ಳುತ್ತ ಬಂದ ಹಾಗೆ ಶಂಭು ಹೆಗಡೆ ಅವರ ವಿವಿಧ ಪಾತ್ರಗಳು ಆಪ್ತವಾದವು. ಅವರೂ ಆಪ್ತರಾಗುತ್ತ ಬಂದರು. ಬಹುಶಃ ಯಕ್ಷಗಾನ ಕಲಾವಿದರ ಪೈಕಿ ಶಂಭು ಹೆಗಡೆ ಅವರಷ್ಟು ನನಗೆ ಇಷ್ಟವಾದ ಕಲಾವಿದ ಬೇರೆ ಇಲ್ಲ. ಅವರು ‘ಕುರುಕ್ಷೇತ್ರದ ರಣಕ್ಷೇತ್ರದಲ್ಲಿ...’ ಎಂದು ಮಧುರ ಕಂಠದಲ್ಲಿ ಮಾತನಾಡುವುದನ್ನು ನಾನು ಶಾಲಾದಿನಗಳಲ್ಲಿ ಮಿಮಿಕ್ರಿ ಮಾಡುತ್ತಿದ್ದೆ. ‘ನೋಡಿರಿ ಧರ್ಮಜ ಫಲುಗುಣಾದಿಗಳು’ ಎಂಬ ಧುರ್ಯೊಧನನ ಲೇವಡಿಯನ್ನೋ, ‘ಘಳಿಗೆ ಸೈರಿಸು ಪಾರ್ಥ’ ಎಂಬ ಕರ್ಣನ ಪ್ರಾರ್ಥನೆಯನ್ನೋ ಅನುಕರಿಸಿ ಬಾಲ್ಯದ ದಿನಗಳಲ್ಲಿ ಕುಣಿಯತೊಡಗಿದರೆ ಆ ಕ್ಷಣದಲ್ಲಿ ನಾನೇ ಶಂಭು ಹೆಗಡೆಯಾಗುತ್ತಿದ್ದೆ. ತೆಂಗಿನಗರಿಗಳನ್ನು ಸಿಗಿಸಿಕೊಂಡು, ಡಬ್ಬಿಯನ್ನೇ ಚೆಂಡೆಯಾಗಿಸಿಕೊಂಡು, ಇದ್ದಿಲಲ್ಲಿ ಮೀಸೆ ಬರೆದುಕೊಂಡು ಕುಣಿಯುವ ಕ್ಷಣಗಳಲ್ಲಿ ಕಾಡುತ್ತಿದ್ದುದು ಶಂಭು ಹೆಗಡೆ ಮತ್ತು ಅವರ ಅಭಿನಯ.

ಆಗೆಲ್ಲ ಸಾಮಾನ್ಯವಾಗಿ ಬೇರೆ ಮೇಳಗಳ ಯಕ್ಷಗಾನ ರಂಗಮಂಚಗಳು ಚೌಕಾಕಾರದಲ್ಲಿರುತ್ತಿದ್ದವು. ಇಡಗುಂಜಿ ಮೇಳದ್ದು ಮಾತ್ರ ಬೇರೆ. ‘ಅರ್ಧ ಚಂದ್ರಾಕೃತಿಯ ರಂಗಸಜ್ಜಿಕೆಯಲ್ಲಿ’ ಎಂಬ ಹ್ಯಾಂಡಬಿಲ್‌ನ ಸಾಲುಗಳು ಕಂಡರೆ ಅದು ಇಡಗುಂಜಿ ಮೇಳದ ಆಟ ಎಂದೇ ಅರ್ಥ. ಆಗಲೂ ಈಗಲೂ. ಸಾಂಪ್ರದಾಯಿಕ ರಂಗಪರದೆ ಬದಲು ಅಲ್ಲಿ ತೆಳು ನೀಲಿ ಪರದೆ. ಇದು ಬಹುಕಾಲದವರೆಗೆ ನನಗೆ ಯಾಕೆಂದು ಅರ್ಥವಾಗಿರಲಿಲ್ಲ. ಚೆಂದ ಕಾಣಲಿ ಎಂದು ಹಾಗೆ ಮಾಡಿರಬಹುದು ಎಂದುಕೊಂಡಿದ್ದೆ. ‘ಸಭಾಲಕ್ಷಣದಲ್ಲಿ ನಿರೂಪಿತವಾದಂತೆ ನಿರ್ಮಿಸಲಾದ ರಂಗಮಂಟಪ ಇದು’ ಎಂದೂ, ಆ ಬದಲಾವಣೆಗೆ ಕಾರಣರಾದವರು ಶಂಭು ಹೆಗಡೆ ಎನ್ನುವುದೂ ನಂತರದ ದಿನಗಳಲ್ಲಿ ಸ್ಪಷ್ಟವಾಯಿತು.

ಬಾಹುಕನ ಪಾತ್ರದಲ್ಲಿ ಶಂಭುಹೆಗಡೆಯಕ್ಷಗಾನ ನೃತ್ಯ ಮಾಧ್ಯಮದ ಸಕಲ ಸಾಧ್ಯತೆಗಳನ್ನು ವ್ಯವಸಾಯೀ ಮೇಳಗಳಲ್ಲಿ ಸಾರ್ಥಕಗೊಳಿಸಿದ ಕಲಾವಿದರೆಂದರೆ ಶಂಭುಹೆಗಡೆ. ‘ಕೃಷ್ಣ ಸಂಧಾನ’ ಆಖ್ಯಾನದ ‘ಕವಿದುಬಿದ್ದನು ಹರಿಯ ಚರಣದಲಿ’ ಪದ್ಯಕ್ಕೆ ಅವರ ಅಭಿನಯ ನೋಡಿದವರಿಗೆ ಈ ಮಾತು ತಕ್ಷಣ ಅರ್ಥವಾಗುತ್ತದೆ. ಪ್ರತಿ ಭೇಟಿಯಲ್ಲೂ ಅವರು ಯಕ್ಷಗಾನದ ಕುರಿತು ಕಾಳಜಿ ವ್ಯಕ್ತಪಡಿಸುತ್ತಿದ್ದುದನ್ನು ಕಂಡು ದಂಗಾಗಿದ್ದೇನೆ. ಯಕ್ಷಗಾನದಲ್ಲಿ ಇನ್ನೇನು ಮಾಡದಿದ್ದರೂ ನಡೆಯುತ್ತದೆ ಎಂಬ ಖ್ಯಾತಿಯ ತುಟ್ಟತುದಿಯಲ್ಲಿದ್ದಾಗಲೂ ಈ ಕಲೆಯ ಭವಿಷ್ಯದ ಕುರಿತು ಅವರು ಮಾತನಾಡುತ್ತಿದ್ದರು. ‘ಪ್ರೇಕ್ಷಕರು ಬಯಸುತ್ತಾರೆ’ ಎಂದು ಏನೇನೋ ಮಾಡಲು ಅವರು ಸಾಲದ ಭಾರ ಹೊತ್ತಾಗಲೂ ಬಯಸಲಿಲ್ಲ ಎನ್ನುವುದು ಅವರಿಗಿದ್ದ ಕಲಾ ಕಾಳಜಿಗೆ ಸಾಕ್ಷಿ. ಅವರು ಕಲಾವಿದನಾಗಿ ಬೆಳೆಯುತ್ತ ಬಂದ ಹಾಗೆ ನಾನು ಅವರ ಅಭಿಮಾನಿಯಾಗಿ ಬೆಳೆಯುತ್ತ ಬಂದೆ. ಎಂದೂ ಅವರ ಮಾತುಗಳಲ್ಲಿ ಅಹಂಕಾರ ಇರಲಿಲ್ಲ. ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಹೇಳಿದ್ದರು: ‘ಎಸ್‌ಎಸ್‌ಎಲ್‌ಸಿವರೆಗೆ ಓದಿ, ಎರಡು ಡ್ರಾಯಿಂಗ್‌ ಪರೀಕ್ಷೆ ಮುಗಿಸಿ ಶಾಲಾ ಮಾಸ್ತರ ಆಗಿದ್ದವನು ನಾನು. ಅಪ್ಪ ಬೇಡ ಅಂದ್ರೂ ಬಿಡದೇ ಯಕ್ಷಗಾನವನ್ನು ಆರಾಧಿಸಿದೆ. ಈ ಕಲಾ ಬದುಕಿನಲ್ಲಿ ನಾನು ಸಂತಸವನ್ನೂ ಸಂಕಟವನ್ನೂ ಅನುಭವಿಸಿದ್ದೇನೆ. ಆದರೆ ಬದುಕಿನಲ್ಲಿ ಒಂದು ಹಂತದ ತೃಪ್ತಿ ಇದೆ’

ನಿಜ, ರಾಮನಿರ್ಯಾಣದ ರಾಮ ಹೇಳುವ ಹಾಗೆ ‘ನೋವು ನಲಿವುಗಳಿಂದ ಕೂಡಿದ’ ಬದುಕು ಅವರದಾಗಿತ್ತು. ತಮ್ಮನ ಅಕಾಲಿಕ ನಿಧನದಿಂದ ಕಂಗೆಟ್ಟ ವರ್ಷವಂತೂ ಧೈರ್ಯವೊಂದರ ಬಲದಲ್ಲಿಯೇ ಮೇಳ ಮುನ್ನಡೆಸಿದ ಸಾಹಸಿ ಅವರು. ಅವರ ಒಡನಾಟದ ನೆನಪುಗಳು ನೂರಾರು. ಎರಡು ತಿಂಗಳ ಹಿಂದೆ ಭೇಟಿಯಾದಾಗ ಅವರು ಹೇಳಿದ್ದರು: ‘ನಿಮ್ಮನ್ನೆಲ್ಲಾ ಚಿಕ್ಕಂದಿನಿಂದ ಕಂಡಿದ್ದೇನೆ. ಈಗ ಇಷ್ಟು ಬೆಳೆದಿದ್ದೀರಿ. ನಿಮ್ಮನ್ನು ಕಂಡಾಗೆಲ್ಲ ನನಗೆ ವಯಸ್ಸಾಯಿತು ಎಂದು ನೆನಪಾಗುತ್ತದೆ’ ಎಂದು ನಕ್ಕಿದ್ದರು. ಆದರೆ ಅವರ ಆಯಸ್ಸಿಗೆ ನಿಜಕ್ಕೂ ವಯಸ್ಸಾಗಿತ್ತು ಎಂದು ಈಗ ಅರ್ಥವಾಗುತ್ತಿದೆ. ಬಹುಶಃ ಅವರು ನನ್ನೊಡನೆ ಆಡಿದ ಕಡೇ ಮಾತೂ ಅದೇ.
ಪುಟದ ಮೊದಲಿಗೆ
 
Votes:  6     Rating: 4    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?