ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕವಿದು ಬಿದ್ದರು ಶಂಭು ಹೆಗಡೆ ಹರಿಯ ಚರಣದಲಿ    
ರಾಜಶೇಖರ ಹೆಗಡೆ
ಮಂಗಳವಾರ, 3 ಫೆಬ್ರವರಿ 2009 (12:13 IST)
ಹೀಗಿದ್ದರು ಶಂಭು ಹೆಗಡೆ
ಆಗ ನಾನಷ್ಟೇ ಶಾಲೆಗೆ ಹೋಗಲು ಶುರು ಮಾಡಿದ್ದೆ. ಬಹುಶಃ ಒಂದನೇ ತರಗತಿ ಎಂದು ನೆನಪು. ನಮ್ಮೂರಲ್ಲಿ ಆ ದಿನ ಆಟ. ಆಟ ಅಂದರೆ ಯಕ್ಷಗಾನ. ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದಾಗ ಮನೆಯಲ್ಲಿ ಅತಿಥಿಗಳಿದ್ದರು. ಅವರಾರೆಂದು ನನಗೆ ಗೊತ್ತಿರಲಿಲ್ಲ. ಆ ಪೈಕಿ ಒಬ್ಬರು ನನ್ನನ್ನು ತಮ್ಮ ಸನಿಹ ಕರೆದರು. ಅಳುಕುತ್ತಲೇ ಹೋದೆ. ‘ಏನು ಹೆಸರು?’ ಅಂದರು. ‘ಹೇಳಿದೆ’ (ಆಗ ನಾನು ‘ರ’ ವನ್ನು ‘ಲ’ ಎಂದು ಉಚ್ಚರಿಸುತ್ತಿದ್ದೆ. ‘ಆಟ ಹೆಂಗಿರ್ತು ನೋಡಿದ್ಯ?’ ಎಂದರು. ಇಲ್ಲ ಎಂಬಂತೆ ತಲೆಯಾಡಿಸಿದೆ. ಅವರು ಇನ್ನೂ ಏನಾದರೂ ಹೇಳುತ್ತಿದ್ದರೇನೋ! ಆದರೆ ನಾನು ನನ್ನ ಹೆಸರನ್ನು ‘ಲಾಜಶೇಖಲ’ ಎಂದಿದ್ದು ಅಲ್ಲಿದ್ದವರಲ್ಲಿ ನಗೆ ಹಚ್ಚಿಬಿಟ್ಟಿತ್ತು. ನಾನು ನಾಚಿ ಓಡಿದೆ.

ನಂತರ ಗೊತ್ತಾಗಿದ್ದು ನನ್ನನ್ನು ಮಾತನಾಡಿಸಿದವರು ಕೆರೆಮನೆ ಶಂಭು ಹೆಗಡೆ ಎಂದು.

ಇಂದು (೦೩-ಫೆ-೨೦೦೯) ಬೆಳ್ಳಂ ಬೆಳಿಗ್ಗೆ ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದಾಗ ನಾನು ಈ ನೆನಪಿಗೆ ಜಾರಲೇಬೇಕಾಯಿತು. ಏಕೆಂದರೆ ನಾನು ಯಕ್ಷಗಾನ ನೋಡುವುದಕ್ಕಿಂತ ಮೊದಲೇ ಶಂಭು ಹೆಗಡೆ ಅವರನ್ನು ಕಂಡವನು. ನನ್ನಣ್ಣ, ಸೋದರಮಾವ ಎಲ್ಲರೂ ಶಂಭು ಹೆಗಡೆ ಅವರ ಒಡನಾಡಿಗಳಾಗಿದ್ದರಿಂದ ಆ ಭಾಗ್ಯ ನನಗೆ ಸಿಕ್ಕಿತ್ತು.

ಕರ್ಣ ಪಾತ್ರಧಾರಿ ಶಂಭು ಹೆಗಡೆನಂತರ ನಾನು ಯಕ್ಷಗಾನ ನೋಡತೊಡಗಿದ ಮೇಲೆ, ಅದನ್ನು ಅರ್ಥ ಮಾಡಿಕೊಳ್ಳುತ್ತ ಬಂದ ಹಾಗೆ ಶಂಭು ಹೆಗಡೆ ಅವರ ವಿವಿಧ ಪಾತ್ರಗಳು ಆಪ್ತವಾದವು. ಅವರೂ ಆಪ್ತರಾಗುತ್ತ ಬಂದರು. ಬಹುಶಃ ಯಕ್ಷಗಾನ ಕಲಾವಿದರ ಪೈಕಿ ಶಂಭು ಹೆಗಡೆ ಅವರಷ್ಟು ನನಗೆ ಇಷ್ಟವಾದ ಕಲಾವಿದ ಬೇರೆ ಇಲ್ಲ. ಅವರು ‘ಕುರುಕ್ಷೇತ್ರದ ರಣಕ್ಷೇತ್ರದಲ್ಲಿ...’ ಎಂದು ಮಧುರ ಕಂಠದಲ್ಲಿ ಮಾತನಾಡುವುದನ್ನು ನಾನು ಶಾಲಾದಿನಗಳಲ್ಲಿ ಮಿಮಿಕ್ರಿ ಮಾಡುತ್ತಿದ್ದೆ. ‘ನೋಡಿರಿ ಧರ್ಮಜ ಫಲುಗುಣಾದಿಗಳು’ ಎಂಬ ಧುರ್ಯೊಧನನ ಲೇವಡಿಯನ್ನೋ, ‘ಘಳಿಗೆ ಸೈರಿಸು ಪಾರ್ಥ’ ಎಂಬ ಕರ್ಣನ ಪ್ರಾರ್ಥನೆಯನ್ನೋ ಅನುಕರಿಸಿ ಬಾಲ್ಯದ ದಿನಗಳಲ್ಲಿ ಕುಣಿಯತೊಡಗಿದರೆ ಆ ಕ್ಷಣದಲ್ಲಿ ನಾನೇ ಶಂಭು ಹೆಗಡೆಯಾಗುತ್ತಿದ್ದೆ. ತೆಂಗಿನಗರಿಗಳನ್ನು ಸಿಗಿಸಿಕೊಂಡು, ಡಬ್ಬಿಯನ್ನೇ ಚೆಂಡೆಯಾಗಿಸಿಕೊಂಡು, ಇದ್ದಿಲಲ್ಲಿ ಮೀಸೆ ಬರೆದುಕೊಂಡು ಕುಣಿಯುವ ಕ್ಷಣಗಳಲ್ಲಿ ಕಾಡುತ್ತಿದ್ದುದು ಶಂಭು ಹೆಗಡೆ ಮತ್ತು ಅವರ ಅಭಿನಯ.

ಆಗೆಲ್ಲ ಸಾಮಾನ್ಯವಾಗಿ ಬೇರೆ ಮೇಳಗಳ ಯಕ್ಷಗಾನ ರಂಗಮಂಚಗಳು ಚೌಕಾಕಾರದಲ್ಲಿರುತ್ತಿದ್ದವು. ಇಡಗುಂಜಿ ಮೇಳದ್ದು ಮಾತ್ರ ಬೇರೆ. ‘ಅರ್ಧ ಚಂದ್ರಾಕೃತಿಯ ರಂಗಸಜ್ಜಿಕೆಯಲ್ಲಿ’ ಎಂಬ ಹ್ಯಾಂಡಬಿಲ್‌ನ ಸಾಲುಗಳು ಕಂಡರೆ ಅದು ಇಡಗುಂಜಿ ಮೇಳದ ಆಟ ಎಂದೇ ಅರ್ಥ. ಆಗಲೂ ಈಗಲೂ. ಸಾಂಪ್ರದಾಯಿಕ ರಂಗಪರದೆ ಬದಲು ಅಲ್ಲಿ ತೆಳು ನೀಲಿ ಪರದೆ. ಇದು ಬಹುಕಾಲದವರೆಗೆ ನನಗೆ ಯಾಕೆಂದು ಅರ್ಥವಾಗಿರಲಿಲ್ಲ. ಚೆಂದ ಕಾಣಲಿ ಎಂದು ಹಾಗೆ ಮಾಡಿರಬಹುದು ಎಂದುಕೊಂಡಿದ್ದೆ. ‘ಸಭಾಲಕ್ಷಣದಲ್ಲಿ ನಿರೂಪಿತವಾದಂತೆ ನಿರ್ಮಿಸಲಾದ ರಂಗಮಂಟಪ ಇದು’ ಎಂದೂ, ಆ ಬದಲಾವಣೆಗೆ ಕಾರಣರಾದವರು ಶಂಭು ಹೆಗಡೆ ಎನ್ನುವುದೂ ನಂತರದ ದಿನಗಳಲ್ಲಿ ಸ್ಪಷ್ಟವಾಯಿತು.

ಬಾಹುಕನ ಪಾತ್ರದಲ್ಲಿ ಶಂಭುಹೆಗಡೆಯಕ್ಷಗಾನ ನೃತ್ಯ ಮಾಧ್ಯಮದ ಸಕಲ ಸಾಧ್ಯತೆಗಳನ್ನು ವ್ಯವಸಾಯೀ ಮೇಳಗಳಲ್ಲಿ ಸಾರ್ಥಕಗೊಳಿಸಿದ ಕಲಾವಿದರೆಂದರೆ ಶಂಭುಹೆಗಡೆ. ‘ಕೃಷ್ಣ ಸಂಧಾನ’ ಆಖ್ಯಾನದ ‘ಕವಿದುಬಿದ್ದನು ಹರಿಯ ಚರಣದಲಿ’ ಪದ್ಯಕ್ಕೆ ಅವರ ಅಭಿನಯ ನೋಡಿದವರಿಗೆ ಈ ಮಾತು ತಕ್ಷಣ ಅರ್ಥವಾಗುತ್ತದೆ. ಪ್ರತಿ ಭೇಟಿಯಲ್ಲೂ ಅವರು ಯಕ್ಷಗಾನದ ಕುರಿತು ಕಾಳಜಿ ವ್ಯಕ್ತಪಡಿಸುತ್ತಿದ್ದುದನ್ನು ಕಂಡು ದಂಗಾಗಿದ್ದೇನೆ. ಯಕ್ಷಗಾನದಲ್ಲಿ ಇನ್ನೇನು ಮಾಡದಿದ್ದರೂ ನಡೆಯುತ್ತದೆ ಎಂಬ ಖ್ಯಾತಿಯ ತುಟ್ಟತುದಿಯಲ್ಲಿದ್ದಾಗಲೂ ಈ ಕಲೆಯ ಭವಿಷ್ಯದ ಕುರಿತು ಅವರು ಮಾತನಾಡುತ್ತಿದ್ದರು. ‘ಪ್ರೇಕ್ಷಕರು ಬಯಸುತ್ತಾರೆ’ ಎಂದು ಏನೇನೋ ಮಾಡಲು ಅವರು ಸಾಲದ ಭಾರ ಹೊತ್ತಾಗಲೂ ಬಯಸಲಿಲ್ಲ ಎನ್ನುವುದು ಅವರಿಗಿದ್ದ ಕಲಾ ಕಾಳಜಿಗೆ ಸಾಕ್ಷಿ. ಅವರು ಕಲಾವಿದನಾಗಿ ಬೆಳೆಯುತ್ತ ಬಂದ ಹಾಗೆ ನಾನು ಅವರ ಅಭಿಮಾನಿಯಾಗಿ ಬೆಳೆಯುತ್ತ ಬಂದೆ. ಎಂದೂ ಅವರ ಮಾತುಗಳಲ್ಲಿ ಅಹಂಕಾರ ಇರಲಿಲ್ಲ. ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಹೇಳಿದ್ದರು: ‘ಎಸ್‌ಎಸ್‌ಎಲ್‌ಸಿವರೆಗೆ ಓದಿ, ಎರಡು ಡ್ರಾಯಿಂಗ್‌ ಪರೀಕ್ಷೆ ಮುಗಿಸಿ ಶಾಲಾ ಮಾಸ್ತರ ಆಗಿದ್ದವನು ನಾನು. ಅಪ್ಪ ಬೇಡ ಅಂದ್ರೂ ಬಿಡದೇ ಯಕ್ಷಗಾನವನ್ನು ಆರಾಧಿಸಿದೆ. ಈ ಕಲಾ ಬದುಕಿನಲ್ಲಿ ನಾನು ಸಂತಸವನ್ನೂ ಸಂಕಟವನ್ನೂ ಅನುಭವಿಸಿದ್ದೇನೆ. ಆದರೆ ಬದುಕಿನಲ್ಲಿ ಒಂದು ಹಂತದ ತೃಪ್ತಿ ಇದೆ’

ನಿಜ, ರಾಮನಿರ್ಯಾಣದ ರಾಮ ಹೇಳುವ ಹಾಗೆ ‘ನೋವು ನಲಿವುಗಳಿಂದ ಕೂಡಿದ’ ಬದುಕು ಅವರದಾಗಿತ್ತು. ತಮ್ಮನ ಅಕಾಲಿಕ ನಿಧನದಿಂದ ಕಂಗೆಟ್ಟ ವರ್ಷವಂತೂ ಧೈರ್ಯವೊಂದರ ಬಲದಲ್ಲಿಯೇ ಮೇಳ ಮುನ್ನಡೆಸಿದ ಸಾಹಸಿ ಅವರು. ಅವರ ಒಡನಾಟದ ನೆನಪುಗಳು ನೂರಾರು. ಎರಡು ತಿಂಗಳ ಹಿಂದೆ ಭೇಟಿಯಾದಾಗ ಅವರು ಹೇಳಿದ್ದರು: ‘ನಿಮ್ಮನ್ನೆಲ್ಲಾ ಚಿಕ್ಕಂದಿನಿಂದ ಕಂಡಿದ್ದೇನೆ. ಈಗ ಇಷ್ಟು ಬೆಳೆದಿದ್ದೀರಿ. ನಿಮ್ಮನ್ನು ಕಂಡಾಗೆಲ್ಲ ನನಗೆ ವಯಸ್ಸಾಯಿತು ಎಂದು ನೆನಪಾಗುತ್ತದೆ’ ಎಂದು ನಕ್ಕಿದ್ದರು. ಆದರೆ ಅವರ ಆಯಸ್ಸಿಗೆ ನಿಜಕ್ಕೂ ವಯಸ್ಸಾಗಿತ್ತು ಎಂದು ಈಗ ಅರ್ಥವಾಗುತ್ತಿದೆ. ಬಹುಶಃ ಅವರು ನನ್ನೊಡನೆ ಆಡಿದ ಕಡೇ ಮಾತೂ ಅದೇ.
ಪುಟದ ಮೊದಲಿಗೆ
 
Votes:  6     Rating: 4    
 
 
ಸಂಬಂಧಿಸಿದ ಲೇಖನಗಳು
  ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ
  ಸುದ್ದಿ ಮಾಧ್ಯಮಗಳು ಮತ್ತು ಹೊಣೆಗಾರಿಕೆ
  ಅವತಾರ ನೋಡಿ ವೈಶಾಲಿ ಬರೆದದ್ದು
  ಕ್ರಿಕೆಟಿನ ತವರುಮನೆಯ ಕಳವಳಗಳು: ಯೋಗೀಂದ್ರ ಬರಹ
  ಹಾರಲಾರದ ಹಕ್ಕಿ- ಒಂದು ಸೂಫಿ ಕಥೆ
  ನಿರ್ದೇಶಕ ಅಭಯಸಿಂಹರಿಗೆ ಪ್ರೇಕ್ಷಕ ಬರೆದ ಪತ್ರ
  ಮಹಾಲಿಂಗೇಶ್ವರ ಭಟ್ ಬರೆದ ಪ್ರೇಮ ಕವಿತೆ
  `ರಣ್' ಚಿತ್ರದಲ್ಲೂ ಸತ್ಯ ಸತ್ತಿಲ್ಲವೆ?
  ಪ್ರೇಮಶೇಖರರ `ಕನ್ನಡಿ' : ಭಾನುವಾರ ದೆಹಲಿಯಲ್ಲಿ ಬಿಡುಗಡೆ
  ರಾಷ್ಟ್ರಪ್ರಶಸ್ತಿಯ ಗುಬ್ಬಚ್ಚಿಗಳು : ಅಭಯಸಿಂಹ ಬರಹ
  ಕುಸುಮ ರೋಗವೂ ಟೀವಿ ಸ್ಟೋರೀನೂ: ಪ್ರಿಯಾ ಬರಹ
  ‘ಇವಳನ್ನು ಹುಚ್ಚಿ ಎಂದು ಒಪ್ಪಲಾರೆ' : ಗಂಗಾಧರಯ್ಯ ಬರಹ
  ಗಣರಾಜ್ಯೋತ್ಸವ ಮತ್ತು ದೇವನೂರು: ಒಂದು ಮಾತುಕತೆ
  ಗಣ ರಾಜ್ಯೋತ್ಸವ ಸ್ಪೆಷಲ್- ಆರು ದಶಕಗಳ ಗಣತಂತ್ರ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಈಗ ವಿಷ್ಣು ಇಲ್ಲ; ಮಾರ್ಕೆಟ್ ಇದೆ
  ಮಗನಿಗೇ ಶಿಷ್ಯನಾದ ಓಶೋರ ತಂದೆ- ರಾಘು ಬರಹ
  ಫೇಸ್ಬುಕ್ಕಲ್ಲಿ ಇಲ್ಲ ಅಂದ್ರೆ ಬದುಕೀನೇ ಇಲ್ವಾ?
  ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವಿತೆ
  ಕಾಮ್ರೇಡ್ ನೀಲಾ ಕಂಡ `ಕೆಂಪು ಬಸುದಾ'
  ಚಾಮಯ್ಯ ಮೇಷ್ಟರೂ ಹೋಗಿಬಿಟ್ಟರು
  ಕಣ್ಣುಮುಚ್ಚಿದ ಕಾಮ್ರೇಡ್ ಬಸು- ಅನಂತಮೂರ್ತಿ ಹೇಳಿದ್ದು
  ಭಾನುವಾರದ ವಿಶೇಷ- ಸಂಧ್ಯಾದೇವಿ ಬರೆದ ಕವನ ಕಥನ
  ಹೈಟಿಯಲ್ಲಿ ಕೊಲೆಗಡುಕಿ ವಸುಂಧರೆ
  `ಗೌಡ್ರು ಬಯ್ದಿದ್ದು ಒಂದ್ಸಲ... ಆದರೆ ನೀವು?'
  ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು
  ಪಟೇಲ್ ಮಂಜಯ್ಯನವರು ಮೊಮ್ಮಗಳಿಗೆ ಬರೆದ ಪತ್ರ
  ಕನ್ನಡದ ಪಾಪುಗೆ 90 ವರ್ಷ
  ಕೆಟ್ಟ ಮಾತಾಡಿ ಗಮನ ಸೆಳೆದ ಗೌಡರು
  ಒಂದು ಮಂದಹಾಸದಂತೆ ಮತ್ತೆ ಕೆಂಡಸಂಪಿಗೆ
  ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
  ಪರಮಾಣು ವಿದ್ಯುತ್ ಪರಿಸರ ಸ್ನೇಹಿಯೇ?
  ಸ್ವರ್ಗದ ಬಾಗಿಲು: ಒಂದು ಸೂಫಿ ಕಥೆ
  ಕರುನಾಡ ಕಲಾವಿದನಿಗೆ ಸಿಂಗಪುರದಿಂದ ಮೂರ್ತಿ ಬರೆದ ಪತ್ರ
  ಫೇಸ್ ಬುಕ್ಕಿನಲ್ಲಿ ಗೊರಿಲ್ಲಾ ಗೆಳೆಯರು
  ಯುರೋಪ್ ಪ್ರವಾಸದ ಕಸಾನುಭೂತಿ
  ಎಡಚರಿಗೊಂದು ಸಂತಸದ ಹೊಸ ಚಡ್ಡಿ
  ‘ಮಾನ್ಸೆಂಟೋ’ ಅವಾಂತರಗಳು: ಒಂದು ಸಾಕ್ಷ್ಯಚಿತ್ರ
  ಮುಕುಂದ ಜೋಶಿ ಅನುವಾದಿಸಿದ ಹಿಂದಿ ಕವಿತೆ
  ಗೂಗಲ್ ಗೆ ಚೀನಾದಲ್ಲಿ ಗಿರಾಕಿಗಳೇ ಇಲ್ಲ
  ಅಹೋಬಲ ಶಂಕರರ ಕುರಿತು ಉಮಾ: ಇನ್ನಷ್ಟು
  ನಾನು ಕಂಡ ಅಹೋಬಲ ಶಂಕರ: ಉಮಾ ಸಂಪಾದಕೀಯ
  ಬಿಜೆಪಿಗೆ ಜಿನ್ನಾ ಎಂಬ ‘ಜಿನ್ನು’ ಹಿಡಿದಿದೆಯೇ?
  ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲ: ಒಂದು ಪರಿಚಯ
  ಸೂಫಿ ಕಥೆ: ‘ಬಗ್ದಾದಿಗೆ ಬಂದ ಮೃತ್ಯು ದೂತ’
  ಎತ್ತರದ ಹುಡುಗನ ಕಷ್ಟಗಳು
  ರಾಮಚಂದ್ರ ದೇವ ಬರೆದ ಒಂದು ಹಳೆಯ ಕವಿತೆ
  ಇನ್ನು ನಾವು ಬಲ್ಬಿಗೆ ವಿದಾಯ ಹೇಳಬಹುದೇ?
  ನೂರಏಳರ ಅಜ್ಜಿಗೆ ಇಪ್ಪತ್ಮೂರನೇ ಮದುವೆಯಾಗುವಾಸೆ!
  ಅನುಪಮಾ ಅನುವಾದಿಸಿದ ನಾಮದೇವ್ ಕವಿತೆ
  ಚೀನಾ: ದುಡಿವವರ ಕೈಗೆ ಅಂತರ್ಜಾಲ ಬಲ
  ಉಮಾ ಸಂಪಾದಕೀಯ:ತಿಮ್ಮಯ್ಯನೂ, ರಾಮಾಗಳೂ,ಲಿಂಗ ಲೆಕ್ಕಾಚಾರಗಳೂ
  ನಗರದ ದೃಶ್ಯಗಳು, ಕಾಡಿನ ಸದ್ದುಗಳು: ರಾಜೇಶ್ವರಿ ಬರಹ
  ತುರ್ತು ನಿಗಾ ಘಟಕದಲ್ಲಿ ಪಾಣಿಗ್ರಹಣ