ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಇಂಡಿಯಾದ ಹರೆಯದವರ ಕಥೆ    
ಸುದರ್ಶನ್
ಶುಕ್ರವಾರ, 13 ಫೆಬ್ರವರಿ 2009 (02:56 IST)
ಮತ್ತೊಂದು ವರ್ಷ ಮುಗಿದಿದೆ. ಎಷ್ಟೋ ಜನ ಹರೆಯದವರು ಹನ್ನೆರಡು ವರ್ಷದ ಶಾಲೆಯ ಓದು ಮುಗಿಸಿ, ಕೆಲಸಕ್ಕೋ, ಅಪ್ರೆಂಟೀಸಿಗೋ, ವಿಶ್ವವಿದ್ಯಾಲಯಕ್ಕೋ ಲಗ್ಗೆ ಇಡಲು ತಯಾರಾಗಿದ್ದಾರೆ. ಇನ್ನೊಂದೆರಡು ವಾರದಲ್ಲಿ ಅವರಲ್ಲಿ ಹಲವರು ಇದರಲ್ಲಿ ಯಾವುದಾದರೂ ಒಂದಕ್ಕೆ ಸೇರಿಕೊಳ್ಳುತ್ತಾರೆ. ಕೆಲವರು ಎಲ್ಲ ದೇಶಗಳಲ್ಲಿರುವಂತೆ ಇಲ್ಲಿಯೂ ಗೊಂದಲದಲ್ಲಿರುತ್ತಾರೆ. ಅಂತಹವರಲ್ಲಿ ಕೆಲವರು ಏನೂ ಮಾಡದೆ ಸುಮ್ಮನೆ ಇರುತ್ತಾರೆ. ಇನ್ನು ಕೆಲವರು ಸರಿಯಾದ ಬೆಂಬಲವಿಲ್ಲದೆ ಬೀದಿಗೆ ಬೀಳುತ್ತಾರೆ. ಇದರ ಬಗ್ಗೆ ಆಸ್ಟ್ರೇಲಿಯದ ಅಂಕಿ-ಅಂಶ ನನಗೆ ಗೊತ್ತಿಲ್ಲ. ಆದರೆ ಹೀಗೆಲ್ಲ ಇರುತ್ತಾರೆ ಎಂಬುದಂತೂ ಹೌದು.

ನಮ್ಮ ಇಂಡಿಯದ ಹರೆಯದವರ ಕತೆಯೂ ಅಷ್ಟೆ. ಅತಿ ಹೆಚ್ಚಿನವರು ವಿಶ್ವವಿದ್ಯಾಲಯಕ್ಕೆ ಹೋಗುತ್ತಾರೆ. ಕುತ್ತಿಗೆ ಹಿಸುಕುವಷ್ಟು ಒತ್ತಾಯಿಸಿ ಓದಿಸುವ ಅತಿರೇಕದ ನಮ್ಮವರಲ್ಲಿ ಬೆಂಬಲವಿಲ್ಲದ ಮಕ್ಕಳು ಕಡಿಮೆ. ಇಲ್ಲಿನ ಇಂಡಿಯದವರಲ್ಲಿ ಮಾತ್ರ ಅತ್ಯಂತ ರಕ್ಷಿತ ಮಕ್ಕಳಿರಬೇಕು ಅಂದುಕೊಳ್ಳಬೇಡಿ. ಬಡದೇಶಗಳಿಂದ ಬಂದ, ಸಾಂಪ್ರದಾಯಿಕ ಸಮಾಜದಿಂದ ಬಂದ, ಆರ್ಥಿಕ ಕಾರಣಕ್ಕೆ ಬಂದ ಬಹುಪಾಲು ಕುಟುಂಬಗಳಲ್ಲೂ ಇದು ದಿಟ.

ಇದೆಲ್ಲಕ್ಕೂ ಒಂದು ನಾಟಕೀಯ ತಿರುವು ಬರುವುದು ಮಕ್ಕಳು ಹದಿನೆಂಟು ವಯಸ್ಸು ಮುಟ್ಟಿದಾಗ. ಆಸ್ಟ್ರೇಲಿಯಾದಲ್ಲಿ ಆಗ ಅವರನ್ನು ವಯಸ್ಕರೆಂದು ಪರಿಗಣಿಸುತ್ತಾರೆ. ಜತೆಗೆ ಅವರ ವ್ಯವಹಾರದಲ್ಲಿ ಸಮಾಜ ಹಾಗು ಕಾನೂನು ತಂದೆತಾಯಿಯರನ್ನು ಹೊರಗಿಡುತ್ತದೆ. ಮಕ್ಕಳೂ ತಾವು ವಯಸ್ಕರಾದಾಗ ಸ್ವಂತ ನಿರ್ಣಯಗಳಿಗೆ ತೆರೆದುಕೊಳ್ಳುತ್ತಾರೆ. ತೆರೆದುಕೊಳ್ಳಬೇಕಾಗುತ್ತದೆ.

ಶಾಲೆ ಮುಗಿಸಿ ಬೇರೆ ಬೇರೆ ದಾರಿಹಿಡಿಯುವ ಗೆಳೆಯರು ಕಡೆಯ ಬಾರಿಗೆಂಬಂತೆ ಪಾರ್ಟಿ ಮಾಡುವುದು ಸಾಮಾನ್ಯ. ಹದಿನೆಂಟು ದಾಟಿದ ಇವರು ತಾವೇ ಮೊದಲ ಬಾರಿಗೆ ಹೋಗಿ ರಾಜಾರೋಷವಾಗಿ ಆಲ್ಕೋಹಾಲ್ ಕೊಳ್ಳಬಹುದಾದ್ದರಿಂದ ಈ ಪಾರ್ಟಿಗಳಿಗೆ ರಂಗೇರುತ್ತದೆ. ಇಂಡಿಯದ ಮಕ್ಕಳ ಇಂತಹ ಪಾರ್ಟಿಗಳು ಸಾಮಾನ್ಯವಾಗಿ ತಂದೆತಾಯಿಯರ ಬೆನ್ನ ಹಿಂದೆ ನಡೆಯುತ್ತದೆ. ಬೇರೆಯವರಲ್ಲಾದರೋ ತಂದೆತಾಯಿಯರಿಗೆ ತಮ್ಮ ಮಕ್ಕಳು ಕುಡಿಯುತ್ತಾರೆ, ಮೋಜು ಮಾಡುತ್ತಾರೆ ಎಂದು ಗೊತ್ತಿರುತ್ತದೆ. ಈ ಪಾರ್ಟಿಗಳು ಅವರ ಸಮ್ಮುಖದಲ್ಲಿ ನಡೆಯದಿದ್ದರೂ ಮುಚ್ಚಿಡುವಂತಹದಾಗಿರುವುದಿಲ್ಲ. ಆದರೆ ಮುಚ್ಚಿಡುವುದನ್ನೇ ಒಳ್ಳೆಯತನ ಅಂದುಕೊಳ್ಳುವ ಇಂಡಿಯದ ಹೆತ್ತವರಿಗೆ ಅನುಮಾನ ಮಾತ್ರ ಕಾಡುತ್ತಿರುತ್ತದೆ.

ಇತ್ತೀಚೆಗೆ ನಡೆದ ಇಂಡಿಯದ ಹುಡುಗನೊಬ್ಬನ ಪಾರ್ಟಿಯ ಬಗ್ಗೆ ಹೇಳುತ್ತೇನೆ. ನನಗೆ ಹೇಗೆ ಗೊತ್ತಾಯಿತು ಎಂದು ಕೇಳಬೇಡಿ. ಹಾಗೇನೆ, ನಾನು ಹೇಳಿದೆ ಎಂದು ದಯವಿಟ್ಟು ಯಾರಿಗೂ ಹೇಳಬೇಡಿ.

ಮಗ ಹಾಳಾಗಿಹೋಗುತ್ತಾನೆ ಎಂದು ಹೆದರಿದ ಇಂಡಿಯದ ಹೆತ್ತವರು, ಬೇರೆಲ್ಲೋ ಪಾರ್ಟಿ ಮಾಡಬೇಡ ಎಂದು ತಾವೇ ಒಂದು ಸಣ್ಣ ಹಾಲು ಬುಕ್ಕು ಮಾಡಿಸಿಕೊಟ್ಟಿದ್ದರು. ಹತ್ತು ಹದಿನೈದು ಜನ ಗೆಳೆಯರ ಜತೆ ಸಂಗೀತ ಹಾಕಿಕೊಂಡು ಒಂದು ಸಂಜೆ ಕಳೆಯಲಿ ಎಂದು ಹರಸಿದ್ದರು. ಮಗ ತಾನೇ ಪಿಜ್ಜಾ ತರಿಸಿಕೊಡುತ್ತೇನೆ ಅಂದದ್ದರಿಂದ ಆ ತಾಯಿ ಅಡುಗೆ ಮಾಡಿರಲಿಲ್ಲ. ರಾತ್ರಿ ಹನ್ನೆರಡಕ್ಕೆ ಹಾಲಿನ ಬುಕಿಂಗ್ ಮುಗಿಯುತ್ತದೆ. ನೀವು ಪಾರ್ಟಿ ಮುಗಿಸಬೇಕು ಎಂದು ತಾಕೀತು ಮಾಡಿ ಹೋದರು.

ಆ ಮಗ ಅಲ್ಲಿಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ ಒಂದಷ್ಟು ದುಡ್ಡು ಕೈಗೂಡಿಸಿಕೊಂಡಿದ್ದ. ಗೆಳೆಯರೆಲ್ಲಾ ಸೇರಿ ಬೇಕಷ್ಟು ಆಲ್ಕೋಹಾಲ್ ತರಿಸಿಕೊಂಡರು. ಹದಿನೈದು, ಇಪ್ಪತ್ತು ಜನರ ಪಾರ್ಟಿ, ಗೆಳೆಯರ ಗೆಳೆಯರು ಎಂದು ಬೆಳೆದು ಎಂಬತ್ತಕ್ಕೆ ಮುಟ್ಟಿತ್ತು! ಅವರಲ್ಲಿದ್ದ ಕೆಲವು ಜಾಣ ಇಂಡಿಯನ್ ಹುಡುಗರು, ಬೇಗ ಬೇಗನೇ ಬೇಕಷ್ಟು ಕುಡಿದು, ರಾತ್ರಿ ಹನ್ನೆರಡರ ಒಳಗೆ ಮನೆಗೆ ಹೊರಟು ಹೋದರು. ಉಳಿದವರು ಚೆನ್ನಾಗಿ ಕುಡಿದು ಕುಣಿದು ಸಂತಸಪಟ್ಟರು. ಆ ಹರೆಯದವರಿಗೆ ಹೊತ್ತು ಹೋದದ್ದೇ ಗೊತ್ತಾಗಿಲ್ಲ. ಪಿಜ್ಜಾವೂ ಮರೆತು ಹೋಗಿದೆ. ಆ ಹಾಲ್‌ನ ಪಕ್ಕದ ಪಾರ್ಕಿನ ತುಂಬಾ ಇವರು ಕುಡಿದು ಬಿಸುಟ ಬಾಟಲಿಗಳು. ಇದ್ದಕ್ಕಿದ್ದಂತೆ ಕಂಡುಕೊಂಡ ಸ್ವಾತಂತ್ರ್ಯವನ್ನು ‘ಮಿಕ್ಕಿ ಮೀರಿ’ ಅನುಭವಿಸಿದರು! ಹೀಗಿರುತ್ತಾ ಸಂಭವಿಸಬಾರದ್ದು ಸಂಭವಿಸಿಯೇ ಬಿಟ್ಟಿತು.

ಆ ಇಂಡಿಯನ್ ಮಗನ ಇಂಡಿಯನ್ ತಂದೆ ತಾಯಿ ಧುತ್ತಂತ ಪ್ರತ್ಯಕ್ಷವಾದರು. ರಾತ್ರಿ ಎರಡು ಗಂಟೆ ಕಳೆದಿದೆ. ಇಲ್ಲಿನ್ನೂ ಪಾರ್ಟಿ ಮುಗಿದಿಲ್ಲದಿರುವುದು ನೋಡಿ ಕಿಡಿಕಿಡಿಯಾದರು. ಮಗನನ್ನು ತರಾಟೆಗೆ ತೆಕ್ಕೊಂಡರು. ಕೂಡಲೆ ಪಾರ್ಟಿ ಮುಗಿಸು ಎಂದು ಅಬ್ಬರಿಸಿದರು. ಬಿಸಿಬಿಸಿ ಮಾತುಗಳು ಹಾರಾಡಿದವು. ಕಡೆಗೂ ಒಲ್ಲದ ಮನಸ್ಸಿನಿಂದ ಹುಡುಗರೇ ಪಾರ್ಕನ್ನೆಲ್ಲಾ ಕ್ಲೀನ್ ಮಾಡಿದರು. ಅವನ ಗೆಳೆಯರೆಲ್ಲಾ ‘ಇಂಡಿಯನ್ ಪೇರೆಂಟ್ಸೇ ಇಷ್ಟು’ ಎಂದು ಗೊಣಗಿಕೊಳ್ಳುತ್ತಾ, ಬೈದುಕೊಳ್ಳುತ್ತಾ ಚದುರಿದರು. ಹೆತ್ತವರು ಒಲ್ಲದ ಮನಸ್ಸಿನ ಮಗನನ್ನು ಮನೆಗೆ ಎಳೆದುಕೊಂಡು ಹೋದರು. ಇತ್ತ ಪಾರ್ಟಿಗೆ ಬಂದಿದ್ದ ಹಲವರು ಗುಂಪಾಗಿ ಇಷ್ಟುದಿನ ಅವರಿಗೆ ಪ್ರವೇಶವಿರದಿದ್ದ ಕಿಂಗ್ಸ್ ಕ್ರಾಸ್ ಎಂಬ ಕ್ಯಾಬರೆ, ಸೆಕ್ಸ್ ಅಂಗಡಿಗಳ ಕಡೆ ಹೊರಟದ್ದು ಆ ತಂದೆ ತಾಯಿಯರಿಗೆ ಗೊತ್ತಾಗುವುದು ಸಾಧ್ಯವೇ ಇರಲಿಲ್ಲ!

ಬೇಸಿಗೆಯಲ್ಲಿ ಬಹು ಬೇಗ ಬೆಳಗಾಗುವ ಆಸ್ಟ್ರೇಲಿಯದಲ್ಲಿ - ತುಸು ಹೊತ್ತಿಗೆ ಆಕಾಶ ಮೆಲ್ಲಗೆ ಬೆಳಕಾಗಲು ತೊಡಗುತ್ತದೆ. ಮನೆಯಲ್ಲಿ ಆ ಮಗನಿಗೆ ಕಣ್ಣಿಗೆ ನಿದ್ದೆ ಹತ್ತುವ ಮೊದಲೆ ಹೊರಗಿನ ಮರಗಳಲ್ಲಿ ಹಕ್ಕಿಗಳಿಗೆ ಬೆಳಗಿನ ಸೂಚನೆ ಬಂದಿರುತ್ತದೆ. ಪೂರ್ವದಲ್ಲಿ ಮರಗಳ ಹಾಗು ಬೆಟ್ಟಗಳ ಹಿಂದೆ ಸೂರ್ಯ ಹೊಂಚುತ್ತಿರುತ್ತಾನೆ.

ದುರ್ಗತಿಯ ಸಂಸ್ಕೃತಿ, ಸ್ವೇಚ್ಛಾಚಾರ ಎಂದು ನೀವೆಲ್ಲಾ ರಾದ್ಧಾಂತ ಮಾಡಿಕೊಳ್ಳುವ ಮೊದಲು ಒಂದೆರಡು ವಿಷಯ ಹೇಳಿ ಬಿಡುತ್ತೇನೆ. ಈ ಹುಡುಗರಲ್ಲಿ ಹಲವರು ಮುಂದೆ ಡಾಕ್ಟರು, ಇಂಜಿನಿಯರು, ಪ್ರೊಫೆಸರುಗಳು ಆಗುತ್ತಾರೆ. ಇವರಷ್ಟೇ ಅಲ್ಲ, ಈಗ ದೊಡ್ಡ ಪಟ್ಟದಲ್ಲಿರುವವರೆಲ್ಲಾ ಹೀಗೇ ಬೆಳೆದು ಬಂದವರೇ. ಸ್ವೇಚ್ಛೆಯ ಅಂಚಲ್ಲಿ ತಮ್ಮ ಜವಾಬ್ದಾರಿ ಅರಿತವರು. ಪ್ರಾಮಾಣಿಕವಾಗಿ ಮುಂದೆ ಸುತ್ತಲಿನವರ ಒಳಿತಿಗೆ ದುಡಿದವರು. ಮಿಕ್ಕಿ ಮೀರಿ ಹೋಗಿ, ಹಿಂತಿರುಗಿ, ನೈತಿಕತೆ ಹೇರವಂತಹುದಲ್ಲ ಎಂದು ಕಂಡುಕೊಂಡವರು. ಎಲ್ಲರಿಗೂ ತಮ್ಮ ತಮ್ಮ ನೈತಿಕತೆಯನ್ನು ಕಂಡುಕೊಳ್ಳುವ ಅವಕಾಶ ಇರುವಂತೆ ಎದೆಗುಂದದೆ ನೋಡಿಕೊಂಡವರು. ಇವೆಲ್ಲಾ ಇಲ್ಲಿ ಪ್ರಾಮಾಣಿಕತೆ ಮತ್ತು ನಿಯತ್ತು ಇರಲು ಬಹು ದೊಡ್ಡ ಕಾರಣವೇನೋ ಅನಿಸಿತು. ಆ ಇಂಡಿಯನ್ ಹುಡುಗನ ಅವಾಂತರಕ್ಕೆ ಒಳಗೊಳಗೇ ನಗು ಬಂತು.
ಪುಟದ ಮೊದಲಿಗೆ
 
Votes:  4     Rating: 4.75    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ