ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಕಾಳಗ ಗೆದ್ದವರ ಯಾತನೆಗಳು    
ಸುದರ್ಶನ್
ಶುಕ್ರವಾರ, 3 ಏಪ್ರಿಲ್ 2009 (05:00 IST)
ಕದನಕ್ಕೆ ಸಿಕ್ಕ ಬಾಲಕಿ
ಪೋಸ್ಟ್ ಟ್ರಾಮಾಟಿಕ ಸ್ಟ್ರೆಸ್ ಡಿಸಾರ್ಡರ್ (PTSD) ವಿಯಟ್ನಾಂ ಕಾಳಗದಿಂದ ತಿರುಗಿ ಬಂದವರನ್ನು ಕಾಡುತ್ತಿತ್ತು. ಅದಕ್ಕೂ ಹಿಂದಿನ ಕಾಳಗಗಲ್ಲಿ ಅದಿರಲಿಲ್ಲವೆಂದಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಅದರ ಮಾತು ಬಂದಿದೆ. ಆದರೆ ಅದನ್ನು ಗುರುತಿಸಿ ಅದಕ್ಕೊಂದು ಹೆಸರು ಕೊಟ್ಟು, ಪರಿಹಾರವನ್ನು ರೂಪಿಸುವ ಕೆಲಸ ಮಾತ್ರ ಇತ್ತೀಚಿನದು. ಈಗ ಇರಾಕ್, ಅಫ್ಘಾನಿಸ್ತಾನದ ಕಾಳಗದಿಂದ ಮರಳಿದವರಲ್ಲೂ ಅದು ಇದ್ದೇ ಇದೆ. ಯುದ್ಧದಲ್ಲಿ ಮುಂಜಾನೆ ಜತೆಗಿದ್ದ ನಗುವ ಗೆಳೆಯ ಮಧ್ಯಾಹ್ನ ಕಣ್ಣೆದುರೇ ವೈರಿ ಬಾಂಬಿಗೆ ತುತ್ತಾಗಿ ಸಾವಿರ ತುಂಡಾದ ಅನುಭವ ಜೀವನ ಪರ್ಯಂತ ಜತೆಗೆ ಉಳಿಯುವಂತದು. ಮರಳಿದ ಮೇಲೂ ಅದನ್ನು ಸಂಬಾಳಿಸಿಕೊಂಡು ಒಟ್ಟಾಗಿ ಉಳಿಯುವುದು ಸುಲಭದ ಮಾತೇನಲ್ಲ. ತನ್ನ ಗೆಳೆಯನ ಸಾವಿಗೆ ತಾನೇ ಕಾರಣವೇನೋ ಎಂಬ ಅಪರಾಧೀ ಭಾವ - ಅದೆಷ್ಟೇ ಬುಡವಿಲ್ಲದ್ದು ಆಗಿದ್ದರೂ - ಸೇರಿಕೊಂಡರೆ ಹಗಲಿರುಳೂ ಅವರಿಗೆ ನರಕಯಾತನೆ. ಇದನ್ನು ಹಲವರು, ಹಲವಾರು ಬಾರಿ, ಹಲವು ಬಗೆಗಳಲ್ಲಿ ತೋಡಿಕೊಂಡಿದ್ದಾರೆ, ವಿವರಿಸಿದ್ದಾರೆ ಹಾಗು ಮನದಟ್ಟು ಮಾಡಿದ್ದಾರೆ. ಆದರೂ ಕಾಳಗಗಳು ಮಾತ್ರ ಆಗುತ್ತಲೇ ಇರುತ್ತದೆ.

ಇತ್ತೀಚಿನ ಇರಾಕ್, ಅಫ್ಘಾನಿಸ್ತಾನದ ಕಾಳಗದಲ್ಲಿ ಕೆಲವರ ನೋವು ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಅಮೆರಿಕ, ಬ್ರಿಟಿಷ್, ಆಸ್ಟ್ರೇಲಿಯದ ಸೈನಿಕ ತುಕಡಿಗಳು ಹೆಗಲಿಗೆ ಹೆಗಲು ಕೊಟ್ಟುಕೊಂಡು ಈ ಯುದ್ಧಗಳಲ್ಲಿ ಪಾಲ್ಗೊಂಡಿದ್ದವಲ್ಲ - ಅದು ಈ ಸಂಕೀರ್ಣತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ದೇಶಗಳ ಯುದ್ಧ-ಸಂಸ್ಕೃತಿಯ ಬೇರೆತನಗಳು ಹಲವು ಬಗೆಗಳಲ್ಲಿ ಮರಳಿದ ಸೈನಿಕರನ್ನು ಕಾಡಿದೆ. ಅಮೆರಿಕ, ಬ್ರಿಟನ್ನಿನ ಇಂಟಲಿಜನ್ಸ್ ಆಧಾರದ ಮೇಲೆ ನಡೆದ ಚಕಮಕಿಗಳಲ್ಲಿ ಆಗಬಾರದ ಸಂಗತಿಗಳು ನಡೆದು ಹೋಗಿದೆ. ಅದು ಈ PTSDಗೆ ಮತ್ತಷ್ಟು ಆಳ ಮತ್ತು ನೋವನ್ನು ದಯಪಾಲಿಸಿದೆ. ವೈರಿ ಸೈನಿಕರನ್ನು ಕೊಲ್ಲುತ್ತಿದ್ದೇನೆಂದು ಬಗೆದು - ಮಕ್ಕಳುಮರಿ, ಹೆಂಗಸರ ಮೇಲೆ ಗುಂಡು ಹಾರಿಸಿ ಕೊಂದ ಅಪರಾಧಿ ಭಾವ ಹಲವರನ್ನು ಕಿತ್ತು ತಿನ್ನುತ್ತಿದೆ. ಗೆಲುವೆಂಬುದೇ ಇಲ್ಲದ ಇಂದಿನ ಕಾಳಗಗಳಲ್ಲಿ ಈ ಯಾತನೆ ನೂರ್ಮಡಿಯಾಗುತ್ತದೆ ಕೂಡ.

ಇರಾಕಿನಿಂದ ಮರಳಿದ ಸೈನಿಕನೊಬ್ಬ ಹೋದ ವರ್ಷ ಸಿಡ್ನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ಒಬ್ಬನೇ ಒಂದು ಹೋಟಲಿನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ನಟ್ಟಿರುಳು ಜೀವ ತೆಗೆದುಕೊಂಡ. ಮುಂಚಿಂದಲೂ ಇದರ ಬಗ್ಗೆ ಅರಿವಿದ್ದರೂ ಅವನ ಸಾವು ಹಲವು ಬಾಗಿಲುಗಳನ್ನು ತಟ್ಟಿತು. ಹಲವು ಸೈನಿಕರು ಮುಕ್ತವಾಗಿ ತಮ್ಮ ಯುದ್ಧದ ಅನುಭವದ ಬಗ್ಗೆ, ಯಾತನೆಯ ಬಗ್ಗೆ, ಬದುಕಿನ ದಾರುಣತೆಯ ಬಗ್ಗೆ ಮಾತಾಡ ತೊಡಗಿದರು. ಸೈನ್ಯದ ಅಧಿಕಾರಿಗಳು ಅವರ ಮಾತನ್ನು ಕೇಳಲೇ ಬೇಕಾಯಿತು. ಆಗ ನಡೆದ ವಿಚಾರಣೆಯಲ್ಲಿ ಹಲವು ಸಂಗತಿಗಳು ಹೊರಬಿದ್ದವು.

ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವೆ ಸೈನಿಕರಿಗೆ ಬೇಕಾದ ಸೈಕಲಾಜಿಕಲ್ ನೆರವಿಗೆ ಕುತ್ತು ಬಂದಿದೆ. ಇರಬೇಕಾದಷ್ಟು ನೆರವು ಸಂಪನ್ಮೂಲ ಇಲ್ಲದೆ ಪರಿಹಾರ ಹಿನ್ನೆಲೆಗೆ ಸರಿದಿದೆ. ಯಾರದೋ ಇಂಟಲಿಜನ್ಸಿನ ತಪ್ಪಿನಿಂದ ಮನೆಯೊಂದರ ಮೇಲೆ ಗುಂಡುಹಾರಿಸಿದ ಸೈನಿಕ ಈಗ ಹಗಲಿರುಳು ನರಳುವಂತಾಗಿದೆ. ಒಂದು ತಾಯಿಯ ದೇಹದ ಪಕ್ಕ ರಕ್ತ ತುಂಬಿದ ಮುಖ ಮುಚ್ಚಿಕೊಂಡು ಕೂಗುತ್ತಿದ್ದ ಪುಟ್ಟ ಬಾಲಕನ ಚಿತ್ರ ಆ ಸೈನಿಕನ ದಿನನಿತ್ಯದ ಸಂಗಾತಿಯಾಗಿಬಿಟ್ಟಿದೆ. ಸದಾ ಕತ್ತಿಯಲಗಿನ ಮೇಲೆ ಅವನ ಬದುಕು ನಡೆಯುತ್ತಿದೆ. ಹೆಂಡತಿ ಮಕ್ಕಳು ಅವನು ಯಾವಾಗ ಸ್ನಾಪ್ ಆಗಿ ಜೀವ ತೆಕ್ಕೊಳ್ಳುತ್ತಾನೋ ಎಂದು ಪ್ರತಿಕ್ಷಣವೂ ಭಯದಲ್ಲೇ ಕಾಯುವಂತಾಗಿದೆ. ಎದುರಿಗಿರುವ ತನ್ನ ಮಕ್ಕಳ ತಂದೆ ಯಾವ ಕ್ಷಣದಲ್ಲಾದರೂ ಇಲ್ಲವಾಗಬಹುದೆಂಬ ಹಿಂಸೆ ಅವರ ಸಂಗಾತಿಗಳನ್ನು ಕಾಡುತ್ತದೆ.

ಯುದ್ಧ ನಂತರದ ಭೀಕರತೆಇವರೆಲ್ಲಾ ಯುದ್ಧಕ್ಕೆ ಹೋಗುವ ಮುನ್ನ ತಮ್ಮ ಸಂಗಾತಿಗಳ ಜತೆ ಚೆಲ್ಲಾಡುತ್ತಿದ್ದ ಹುಡುಗಾಟದ ಹುಡುಗರು. ಆದರೆ ಯುದ್ಧದಿಂದ ಮರಳಿದಾಗ ಗುರುತಿಲ್ಲದಂತೆ ಬದಲಾಗಿ ಹೋಗಿರುವುದು ಆ ಸೈನಿಕ ಹುಡುಗರ ಸಂಗಾತಿಗಳ ಕಹಿ ಅನುಭವ. ಆ ಹಿಂದೆ ತಮ್ಮ ಜತೆಗಿದ್ದ ಹುಡುಗ - ಈ ಮರಳಿದವನಲ್ಲಿ ಇಲ್ಲದ್ದು ಅವರನ್ನು ತಲ್ಲಣಗೊಳಿಸಿದೆ. ಆ ಹುಡುಗನ ಕರಾಳ ನೆರಳಂತಿರುವ ಈ ಮನುಷ್ಯನ ಜತೆ ಬದುಕುವುದು ಕೆಲವರಿಗೆ ಅಸಹನೀಯವಾದರೆ, ಹಲವರಿಗೆ ಶಿಕ್ಷೆಯಾಗಿರುತ್ತದೆ. ಆ ಸತ್ತ ಹುಡುಗಾಟದ ಹುಡುಗನಿಗೆ ಸದಾ ಶೋಕತಪ್ತರಾಗಿ ಬದುಕುವುದನ್ನು ಆ ಸೈನಿಕರ ಸಂಗಾತಿಗಳು ಕಲಿಯಬೇಕಾಗುತ್ತದೆ. ಸದಾ ಒಳಗೊಳಗೇ ಅಳುವುದು ಅವರ ವ್ಯಕ್ತಿತ್ವದ ಅಂಶವಾಗಿ ಬಿಡುತ್ತದೆ.

ಇರಾಕಿನಲ್ಲಿ ಕಡಿಮೆಯೆಂದರೂ ಹತ್ತುಲಕ್ಷ ಸಿವಿಲಿಯನ್ನರು ತಮ್ಮ ಬಾಗಿಲಿಗೆ ಬಂದ ಯುದ್ಧದಲ್ಲಿ ಸತ್ತಿದ್ದಾರೆ. ಅವರನ್ನು "collateral" ಎಂದು ಕರೆದು ಕೈತೊಳೆದುಕೊಳ್ಳುವಾಗ ಒಂದು ಸಂಗತಿ ಮತ್ತಷ್ಟು ಘೋರವಾಗುತ್ತದೆ. ಸಂಪನ್ಮೂಲಕ್ಕೇನೂ ಕಡಿಮೆಯಿಲ್ಲದ ಸಿರಿವಂತ ದೇಶಗಳ ಸೈನಿಕರ ಈ ದುರ್ಗತಿಗೆ ಮರುಕಪಡುವುದು ಸರಿಯೇ. ಆದರೆ ಇರಾಕಿನ, ಅಫ್ಘಾನಿಸ್ತಾನದ ಊರು ಹಳ್ಳಿಗಳಲ್ಲಿ ನಮ್ಮನಿಮ್ಮಂತಿದ್ದ ಜನರ ನೋವು ಯಾತನೆಗೆ ಇನ್ನೂ ಯಾವುದೇ ಹೆಸರು ಕೊಟ್ಟಿಲ್ಲ, ಅವರ ನೋವಿನ ಆಳವನ್ನು ಅಳೆದಿಲ್ಲ. ಯಾತನೆಗೆ ಪರಿಹಾರವೇನೆಂಬ ಮಾತಂತೂ ಇಲ್ಲವೇ ಇಲ್ಲ.
ಪುಟದ ಮೊದಲಿಗೆ
 
Votes:  3     Rating: 4.33    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು