ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಚಡ್ಡಿ ಬನಿಯನ್ ಮತ್ತು ಅಡುಗೆ ಕೆಲಸ    
ಸುದರ್ಶನ್
ಶುಕ್ರವಾರ, 10 ಏಪ್ರಿಲ್ 2009 (04:28 IST)
ನ್ಯಾಯಕ್ಕಾಗಿ ಒಕ್ಕೂಟ ಹೋರಾಟ
ಆಸ್ಟ್ರೇಲಿಯದಲ್ಲಿ ತಯಾರಿಕೋದ್ಯಮ ಹಿಂದಿನಿಂದಲೂ ದುಬಾರಿ. ಕನಿಷ್ಟ ವೇತನ, ಓವರ್ ಟೈಂ ಸೇರಿದಂತೆ ಇಲ್ಲಿಯ ಕೆಲಸಗಾರರಿಗೆ ಕಾನೂನನ್ವಯ ಕೊಡಲೇ ಬೇಕಾದ ಅನುಕೂಲಗಳನ್ನೆಲ್ಲಾ ಲೆಕ್ಕ ಹಾಕಿದರೆ ಏಷಿಯಾ ದೇಶಗಳ ಜತೆ ಸಾಟಿಯಾಗದಷ್ಟು ಹೆಚ್ಚು ಖರ್ಚು. ಇದರಿಂದಾಗಿ ತಯಾರಾದ ಸಾಮಾನೂ ಕೂಡ ದುಬಾರಿ. ಒಂದು ಕಾಲದಲ್ಲಿ ಇಲ್ಲಿ ತಯಾರಾದ ಸಾಮಾನುಗಳು ಉತ್ಕೃಷ್ಟವಾಗಿರುತ್ತದೆ ಎಂದು ಹೇಳಿಕೊಳ್ಳುತ್ತಿದ್ದರು. ಆ ಮಾತೆಷ್ಟು ದಿಟವೋ ಕಾಣೆ, ಆದರೆ ಇತ್ತೀಚೆಗಂತೂ ಆ ಮಾತು ಅರ್ಥ ಕಳಕೊಂಡಿದೆ. ಇಲ್ಲಿಯಷ್ಟೇ ಚೆನ್ನಾಗಿ ಲೋಕದ ಯಾವ ದೇಶದಲ್ಲಿ ಬೇಕಾದರೂ ತಯಾರಿಕೆ ಮಾಡಿಸಬಹುದು ಎಂದು ಗೊತ್ತಾಗಿದೆ. ಇದಕ್ಕೆ ಮ್ಯಾನೇಜ್‌ಮೆಂಟ್ ಒಂದು ಕಾರಣವಾದರೆ, ತಾಂತ್ರಿಕತೆ ಮತ್ತೊಂದು ಕಾರಣ.

ಯಾಕೆ ಹೇಳಿದೆನಂದರೆ, ಎಲ್ಲವೂ ಜಾಗತೀಕರಣಗೊಳ್ಳುತ್ತಿರುವ ಈ ಹೊತ್ತಲ್ಲಿ ಮರೆತಿದ್ದ ಚರಿತ್ರೆ ಮತ್ತೆ ಮತ್ತೆ ಇಣುಕುವುದು ಒಂದು ವಿಪರ್ಯಾಸವೇನೋ. ಹಿಂದುಳಿದ ದೇಶಗಳಿಗೆ ಮುಂದುವರಿದ ದೇಶದ ಕೆಲಸಗಳು ಹೋಗಿ ಸೇರಿಕೊಳ್ಳುತ್ತಿವೆ ಎಂಬ ಕೂಗು ಈಗ ಸರ್ವೇಸಾಮಾನ್ಯ. ಹತ್ತಾರು ವರ್ಷ ಕೆಲಸ ಮಾಡಿದ್ದಾಕೆಯ ಕೆಲಸ ಕಾಲು ಭಾಗದ ಖರ್ಚಿಗೆ ಹಿಂದುಳಿದ ದೇಶಕ್ಕೆ ರವಾನೆಯಾಗುವುದು ಹೊಸ ಸುದ್ದಿಯೇನಲ್ಲ. ಆದರೆ ಈಗ, ಆರ್ಥಿಕ ಹಿಂಜರಿತದ ನೆಪವೊಡ್ಡಿಯೂ ಇದು ನಡೆಯುತ್ತಿದೆ. ಇತ್ತೀಚೆಗೆ ಆಸ್ಟ್ರೇಲಿಯದ ಬನಿಯನ್ನು ಚಡ್ಡಿ ಮಾಡುವ ಕಂಪನಿಯೊಂದು ತನ್ನ ಕಾರ್ಖಾನೆಯ ಬಾಗಿಲು ಮುಚ್ಚಿತು. ಒಂದೆರಡು ಸಾವಿರ ಮಂದಿ ಕೆಲಸ ಕಳಕೊಂಡರು. ಈ ಜಾಗತಿಕ ಕುಸಿತದ ವೇಳೆಯಲ್ಲಿ ಸಾಮಾನು ಮಾರಾಟವಾಗುತ್ತಿಲ್ಲ ಎಂಬುದು ಕಂಪನಿ ಕೊಟ್ಟ ವಿವರಣೆ. ಒಂದಿಷ್ಟು ದಿನಗಳ ನಂತರ ಅದು ಏಷಿಯಾದ ಹಿಂದುಳಿದ ದೇಶವೊಂದರಲ್ಲಿ ಕಾರ್ಖಾನೆ ನಡೆಸುತ್ತಿರುವುದು ತಿಳಿದುಬಂತು. ಪ್ರಶ್ನೆಗಳು ಏಳತೊಡಗಿತು. ಕಂಪನಿ ಸರಿಯಾದ ವಿವರಣೆ ಕೊಡಲೇಬೇಕಾಯಿತು.

ಆರ್ಥಿಕ ಹಿಂಜರಿತವೇ ಕಾರಣ ಎಂದು ವಿವರಿಸಿದ ಕಂಪನಿಯ ವಕ್ತಾರ ಮತ್ತೊಂದು ಗುಟ್ಟನ್ನು ಬಿಟ್ಟುಕೊಟ್ಟಳು. ಹೊರದೇಶದಲ್ಲಿರುವ ತಯಾರಿಕಾ ಘಟಕ ಹೊಸದೇನಲ್ಲ, ತುಂಬಾ ದಿನಗಳಿಂದ ಅದು ನಡೆದುಕೊಂಡು ಬಂದಿದೆ ಎಂದಳು. ಅಷ್ಟೇ ಅಲ್ಲ, ಇಲ್ಲಿಯವರೆಗೂ ಅಲ್ಲಿಯ ಘಟಕದಿಂದಾಗಿ ನಾವು ಮಾಡಿದ ಲಾಭ ಇಲ್ಲಿಯ ಕೆಲಸಗಾರರನ್ನು ನೋಡಿಕೊಳ್ಳಲು ಪೋಲಾಗುತ್ತಿದೆ. ಇದು ಹೆಚ್ಚು ದಿನ ನಡೆಸಲು ಸಾಧ್ಯವಿಲ್ಲ. ಕಂಪನಿಯೇ ಮುಳುಗಿಹೋಗುತ್ತದೆ ಎಂದಳು. ನನಗ್ಯಾಕೋ ಇದು ವಸಾಹತು ಕಾಲದ ಮಾತಿನಂತೆ ಕೇಳಿತು. ಬ್ರಿಟನ್ನಿನ ಖಜಾನೆಯನ್ನು ಇಂಡಿಯಾದ ಕೆಲಸಗಾರರ ಬೆವರಿನಿಂದ ತುಂಬುತ್ತಿದುದು, ಇಂಡಿಯಾದ ಕೆಲಸಗಾರರು ಬಡವಾಗಿಯೇ ಉಳಿದದ್ದು ಮತ್ತೆ ನೆನಪಾಯಿತು. ಈ ಕಂಪನಿಯ ಏಷಿಯಾದ ಘಟಕದ ಕೆಲಸಗಾರರಿಗೆ ಕೊಡಬೇಕಾದ ಹಣವನ್ನು ಕೊಡದೆ ಇರುವುದು ಒಂದು ತಪ್ಪಾದರೆ,  ಆ ದುಡ್ಡು ಆಸ್ಟ್ರೇಲಿಯಕ್ಕೆ ರವಾನೆಯಾಗಿ ಕಂಪನಿಯ ಇಲ್ಲಿಯ ಕೆಲಸಗಾರರ ಕೈಸೇರಿದ್ದು ಮತ್ತೊಂದು ತಪ್ಪು. ಬಹುಶಃ ಜಾಗತೀಕರಣದ ನಾಡಿ ಹಿಡಿದವರಿಗೆ ಇವೆಲ್ಲಾ ಸೋಜಿಗ ಉಂಟು ಮಾಡಲಾರದೋ ಏನೋ.

ಶೆಫ್ ಗಳಿಲ್ಲದೇ ಬಿಕೋ ಅನ್ನುತ್ತಿರುವ ಹೋಟೆಲ್ , ಚಿತ್ರ-ಲೇಖಕರದುಅದೇ ಜಾಗತೀಕರಣದ ಇನ್ನೊಂದು ತಮಾಷೆ ಸಂಗತಿಯನ್ನೂ ಗಮನಿಸಿ. ಆಸ್ಟ್ರೇಲಿಯಕ್ಕೆ ಬರುವ ವಲಸಿಗರಿಗೆ ಹಲವಾರು ದಾರಿಗಳಿವೆ. ಕೆಲವು ದಾರಿಗಳು ಮುಚ್ಚಿಕೊಂಡರೆ, ಇನ್ನು ಕೆಲವು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಅಂತಹ ಒಂದು ದಾರಿ - ಆಸ್ಟ್ರೇಲಿಯದ ವಿಶ್ವವಿದ್ಯಾಲಯದಲ್ಲಿ ಕಲಿಯಲು ಬೇರೆ ಬೇರೆ ದೇಶಗಳಿಂದ ಮಂದಿ ಬರುವುದು. ಹೆಚ್ಚಿನವರು ಇಲ್ಲಿ ಒಂದು ಕೆಲಸ ಹಿಡಿದು ಉಳಿಯುತ್ತಾರೆ. ಹಲವರು ಇಲ್ಲಿ ಉಳಿಯಲೋಸುಗವೇ ಓದಲು ಬರುತ್ತಾರೆ. ಇವೆಲ್ಲಾ ಹೊಸತೇನಲ್ಲ, ವಿಶೇಷವೂ ಅಲ್ಲ. ವರ್ಷವರ್ಷವೂ ಈ ದೇಶದಲ್ಲಿ ಕೊರತೆಯಿರುವ ಕೆಲಸದ ಪಟ್ಟಿಯನ್ನು ಸರ್ಕಾರ ಪ್ರಕಟಿಸುತ್ತದೆ. ಒಂದೆರಡು ವರ್ಷದ ಕೆಳಗೆ ಅಡುಗೆ ಮಾಡುವ ಕುಕ್, ಶೆಫ್‌ಗಳ ಹೆಸರು ಆ ಪಟ್ಟಿಯಲ್ಲಿ ಮೇಲಿತ್ತು. ಆಗ ಹಲವರು ಇಲ್ಲಿ ವಿಶ್ವವಿದ್ಯಾಲಯದಲ್ಲಿ ಕುಕಿಂಗ್ ಡಿಗ್ರಿ ಮಾಡಿದರೆ, ಇಲ್ಲಿ ಉಳಿದುಕೊಳ್ಳಲು ಸುಲಭವೆಂದು ಅರಿತು ಹಿಂಡು ಹಿಂಡಾಗಿ ಸೇರಿಕೊಂಡರು. ಕೆಲವು ಕಾಲೇಜುಗಳಲ್ಲಿ ಕುಕಿಂಗ್ ಡಿಗ್ರಿಯ ಮಂದಿ ಮುಂಚಿಗಿಂತ ಒಂದಕ್ಕೆಂಟರಷ್ಟು ಹೆಚ್ಚಾದರಂತೆ. ದೇಶದಲ್ಲಿ ಬಂದು ಉಳಿಯಲು ಅದೊಂದು ಸುಲಭದ ಮಾರ್ಗವಾಯಿತು. ಹಲವರು ಅದನ್ನು ಬಳಸಿಕೊಂಡರು ಕೂಡ.

ವಿಚಿತ್ರವೆಂದರೆ ಹಾಗೆ ಕೋರ್ಸು ಮುಗಿಸಿ ಉಳಿದುಕೊಂಡವರಾರೂ ಶೆಫ್ ಆಗಲೀ ಕುಕ್ ಆಗಲೀ ಆಗಿ ಕೆಲಸ ಮಾಡುತ್ತಿಲ್ಲ. ಹೇಗೆ ಗೊತ್ತೆಂದು ಎಂದು ಕೇಳುತ್ತೀರ? ಆಸ್ಟ್ರೇಲಿಯದಲ್ಲಿ ಶೆಫ್‌ಗಳ ಕೊರತೆ ಮುಂಚಿನಂತಯೇ ಇದೆ. ಒಂದಿನಿತೂ ಕಡಿಮೆಯಾಗಿಲ್ಲ. ಯೂನಿವರ್ಸಿಟಿಯ ಅಕಾಡೆಮಿಕ್‌ಗಳು ಈ ಸಂಗತಿಯ ಬಗ್ಗೆ ಸ್ಟಡಿ ಮಾಡಲು ತೊಡಗಿ ಬಿಟ್ಟಿದ್ದಾರೆ. ಸತ್ಯ ಏನೆಂದು ರಟ್ಟುಮಾಡಿ ಎದೆತಟ್ಟಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯ ಸರ್ಕಾರವೂ ಕೆಟ್ಟ ಕನಸು ಕಂಡು ಎದ್ದಂತೆ ಎಚ್ಚೆತ್ತುಕೊಂಡುಬಿಟ್ಟಿದೆ. ಶೆಫ್‌ಗಳು ಡಿಮ್ಯಾಂಡಿರುವ ಕೆಲಸದ ಲಿಸ್ಟಲ್ಲಿ ಈಗ ಇಲ್ಲ. ದಿಟವಾಗಿಯೂ ಇನ್ನೂ ಕೊರತೆ ಇದ್ದರೂ ಕೂಡ! ಫ್ರೀ ಮಾರ್ಕೆಟ್ ಧುರೀಣರು ವಲಸಿಗರ ವಿರುದ್ಧ ದೇಶದ ರಕ್ಷಣೆಗೆ ನಿಲ್ಲುವ ಈ ಪರಿ ವಿಪರ್ಯಾಸವಾಗಿ ಏನೂ ಕಾಣಬೇಕಿಲ್ಲ. ಏಕೆಂದರೆ "ಫ್ರೀ ಮಾರ್ಕೆಟ್" ಕೂಡ ಸರ್ಕಾರದ ಬೆಂಬಲಕ್ಕೆ ಕೈಯೊಡ್ಡುತ್ತಿರುವ ಕಾಲವಲ್ಲವೇ ಇದು?
ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ