ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಚಡ್ಡಿ ಬನಿಯನ್ ಮತ್ತು ಅಡುಗೆ ಕೆಲಸ    
ಸುದರ್ಶನ್
ಶುಕ್ರವಾರ, 10 ಏಪ್ರಿಲ್ 2009 (04:28 IST)
ನ್ಯಾಯಕ್ಕಾಗಿ ಒಕ್ಕೂಟ ಹೋರಾಟ
ಆಸ್ಟ್ರೇಲಿಯದಲ್ಲಿ ತಯಾರಿಕೋದ್ಯಮ ಹಿಂದಿನಿಂದಲೂ ದುಬಾರಿ. ಕನಿಷ್ಟ ವೇತನ, ಓವರ್ ಟೈಂ ಸೇರಿದಂತೆ ಇಲ್ಲಿಯ ಕೆಲಸಗಾರರಿಗೆ ಕಾನೂನನ್ವಯ ಕೊಡಲೇ ಬೇಕಾದ ಅನುಕೂಲಗಳನ್ನೆಲ್ಲಾ ಲೆಕ್ಕ ಹಾಕಿದರೆ ಏಷಿಯಾ ದೇಶಗಳ ಜತೆ ಸಾಟಿಯಾಗದಷ್ಟು ಹೆಚ್ಚು ಖರ್ಚು. ಇದರಿಂದಾಗಿ ತಯಾರಾದ ಸಾಮಾನೂ ಕೂಡ ದುಬಾರಿ. ಒಂದು ಕಾಲದಲ್ಲಿ ಇಲ್ಲಿ ತಯಾರಾದ ಸಾಮಾನುಗಳು ಉತ್ಕೃಷ್ಟವಾಗಿರುತ್ತದೆ ಎಂದು ಹೇಳಿಕೊಳ್ಳುತ್ತಿದ್ದರು. ಆ ಮಾತೆಷ್ಟು ದಿಟವೋ ಕಾಣೆ, ಆದರೆ ಇತ್ತೀಚೆಗಂತೂ ಆ ಮಾತು ಅರ್ಥ ಕಳಕೊಂಡಿದೆ. ಇಲ್ಲಿಯಷ್ಟೇ ಚೆನ್ನಾಗಿ ಲೋಕದ ಯಾವ ದೇಶದಲ್ಲಿ ಬೇಕಾದರೂ ತಯಾರಿಕೆ ಮಾಡಿಸಬಹುದು ಎಂದು ಗೊತ್ತಾಗಿದೆ. ಇದಕ್ಕೆ ಮ್ಯಾನೇಜ್‌ಮೆಂಟ್ ಒಂದು ಕಾರಣವಾದರೆ, ತಾಂತ್ರಿಕತೆ ಮತ್ತೊಂದು ಕಾರಣ.

ಯಾಕೆ ಹೇಳಿದೆನಂದರೆ, ಎಲ್ಲವೂ ಜಾಗತೀಕರಣಗೊಳ್ಳುತ್ತಿರುವ ಈ ಹೊತ್ತಲ್ಲಿ ಮರೆತಿದ್ದ ಚರಿತ್ರೆ ಮತ್ತೆ ಮತ್ತೆ ಇಣುಕುವುದು ಒಂದು ವಿಪರ್ಯಾಸವೇನೋ. ಹಿಂದುಳಿದ ದೇಶಗಳಿಗೆ ಮುಂದುವರಿದ ದೇಶದ ಕೆಲಸಗಳು ಹೋಗಿ ಸೇರಿಕೊಳ್ಳುತ್ತಿವೆ ಎಂಬ ಕೂಗು ಈಗ ಸರ್ವೇಸಾಮಾನ್ಯ. ಹತ್ತಾರು ವರ್ಷ ಕೆಲಸ ಮಾಡಿದ್ದಾಕೆಯ ಕೆಲಸ ಕಾಲು ಭಾಗದ ಖರ್ಚಿಗೆ ಹಿಂದುಳಿದ ದೇಶಕ್ಕೆ ರವಾನೆಯಾಗುವುದು ಹೊಸ ಸುದ್ದಿಯೇನಲ್ಲ. ಆದರೆ ಈಗ, ಆರ್ಥಿಕ ಹಿಂಜರಿತದ ನೆಪವೊಡ್ಡಿಯೂ ಇದು ನಡೆಯುತ್ತಿದೆ. ಇತ್ತೀಚೆಗೆ ಆಸ್ಟ್ರೇಲಿಯದ ಬನಿಯನ್ನು ಚಡ್ಡಿ ಮಾಡುವ ಕಂಪನಿಯೊಂದು ತನ್ನ ಕಾರ್ಖಾನೆಯ ಬಾಗಿಲು ಮುಚ್ಚಿತು. ಒಂದೆರಡು ಸಾವಿರ ಮಂದಿ ಕೆಲಸ ಕಳಕೊಂಡರು. ಈ ಜಾಗತಿಕ ಕುಸಿತದ ವೇಳೆಯಲ್ಲಿ ಸಾಮಾನು ಮಾರಾಟವಾಗುತ್ತಿಲ್ಲ ಎಂಬುದು ಕಂಪನಿ ಕೊಟ್ಟ ವಿವರಣೆ. ಒಂದಿಷ್ಟು ದಿನಗಳ ನಂತರ ಅದು ಏಷಿಯಾದ ಹಿಂದುಳಿದ ದೇಶವೊಂದರಲ್ಲಿ ಕಾರ್ಖಾನೆ ನಡೆಸುತ್ತಿರುವುದು ತಿಳಿದುಬಂತು. ಪ್ರಶ್ನೆಗಳು ಏಳತೊಡಗಿತು. ಕಂಪನಿ ಸರಿಯಾದ ವಿವರಣೆ ಕೊಡಲೇಬೇಕಾಯಿತು.

ಆರ್ಥಿಕ ಹಿಂಜರಿತವೇ ಕಾರಣ ಎಂದು ವಿವರಿಸಿದ ಕಂಪನಿಯ ವಕ್ತಾರ ಮತ್ತೊಂದು ಗುಟ್ಟನ್ನು ಬಿಟ್ಟುಕೊಟ್ಟಳು. ಹೊರದೇಶದಲ್ಲಿರುವ ತಯಾರಿಕಾ ಘಟಕ ಹೊಸದೇನಲ್ಲ, ತುಂಬಾ ದಿನಗಳಿಂದ ಅದು ನಡೆದುಕೊಂಡು ಬಂದಿದೆ ಎಂದಳು. ಅಷ್ಟೇ ಅಲ್ಲ, ಇಲ್ಲಿಯವರೆಗೂ ಅಲ್ಲಿಯ ಘಟಕದಿಂದಾಗಿ ನಾವು ಮಾಡಿದ ಲಾಭ ಇಲ್ಲಿಯ ಕೆಲಸಗಾರರನ್ನು ನೋಡಿಕೊಳ್ಳಲು ಪೋಲಾಗುತ್ತಿದೆ. ಇದು ಹೆಚ್ಚು ದಿನ ನಡೆಸಲು ಸಾಧ್ಯವಿಲ್ಲ. ಕಂಪನಿಯೇ ಮುಳುಗಿಹೋಗುತ್ತದೆ ಎಂದಳು. ನನಗ್ಯಾಕೋ ಇದು ವಸಾಹತು ಕಾಲದ ಮಾತಿನಂತೆ ಕೇಳಿತು. ಬ್ರಿಟನ್ನಿನ ಖಜಾನೆಯನ್ನು ಇಂಡಿಯಾದ ಕೆಲಸಗಾರರ ಬೆವರಿನಿಂದ ತುಂಬುತ್ತಿದುದು, ಇಂಡಿಯಾದ ಕೆಲಸಗಾರರು ಬಡವಾಗಿಯೇ ಉಳಿದದ್ದು ಮತ್ತೆ ನೆನಪಾಯಿತು. ಈ ಕಂಪನಿಯ ಏಷಿಯಾದ ಘಟಕದ ಕೆಲಸಗಾರರಿಗೆ ಕೊಡಬೇಕಾದ ಹಣವನ್ನು ಕೊಡದೆ ಇರುವುದು ಒಂದು ತಪ್ಪಾದರೆ,  ಆ ದುಡ್ಡು ಆಸ್ಟ್ರೇಲಿಯಕ್ಕೆ ರವಾನೆಯಾಗಿ ಕಂಪನಿಯ ಇಲ್ಲಿಯ ಕೆಲಸಗಾರರ ಕೈಸೇರಿದ್ದು ಮತ್ತೊಂದು ತಪ್ಪು. ಬಹುಶಃ ಜಾಗತೀಕರಣದ ನಾಡಿ ಹಿಡಿದವರಿಗೆ ಇವೆಲ್ಲಾ ಸೋಜಿಗ ಉಂಟು ಮಾಡಲಾರದೋ ಏನೋ.

ಶೆಫ್ ಗಳಿಲ್ಲದೇ ಬಿಕೋ ಅನ್ನುತ್ತಿರುವ ಹೋಟೆಲ್ , ಚಿತ್ರ-ಲೇಖಕರದುಅದೇ ಜಾಗತೀಕರಣದ ಇನ್ನೊಂದು ತಮಾಷೆ ಸಂಗತಿಯನ್ನೂ ಗಮನಿಸಿ. ಆಸ್ಟ್ರೇಲಿಯಕ್ಕೆ ಬರುವ ವಲಸಿಗರಿಗೆ ಹಲವಾರು ದಾರಿಗಳಿವೆ. ಕೆಲವು ದಾರಿಗಳು ಮುಚ್ಚಿಕೊಂಡರೆ, ಇನ್ನು ಕೆಲವು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಅಂತಹ ಒಂದು ದಾರಿ - ಆಸ್ಟ್ರೇಲಿಯದ ವಿಶ್ವವಿದ್ಯಾಲಯದಲ್ಲಿ ಕಲಿಯಲು ಬೇರೆ ಬೇರೆ ದೇಶಗಳಿಂದ ಮಂದಿ ಬರುವುದು. ಹೆಚ್ಚಿನವರು ಇಲ್ಲಿ ಒಂದು ಕೆಲಸ ಹಿಡಿದು ಉಳಿಯುತ್ತಾರೆ. ಹಲವರು ಇಲ್ಲಿ ಉಳಿಯಲೋಸುಗವೇ ಓದಲು ಬರುತ್ತಾರೆ. ಇವೆಲ್ಲಾ ಹೊಸತೇನಲ್ಲ, ವಿಶೇಷವೂ ಅಲ್ಲ. ವರ್ಷವರ್ಷವೂ ಈ ದೇಶದಲ್ಲಿ ಕೊರತೆಯಿರುವ ಕೆಲಸದ ಪಟ್ಟಿಯನ್ನು ಸರ್ಕಾರ ಪ್ರಕಟಿಸುತ್ತದೆ. ಒಂದೆರಡು ವರ್ಷದ ಕೆಳಗೆ ಅಡುಗೆ ಮಾಡುವ ಕುಕ್, ಶೆಫ್‌ಗಳ ಹೆಸರು ಆ ಪಟ್ಟಿಯಲ್ಲಿ ಮೇಲಿತ್ತು. ಆಗ ಹಲವರು ಇಲ್ಲಿ ವಿಶ್ವವಿದ್ಯಾಲಯದಲ್ಲಿ ಕುಕಿಂಗ್ ಡಿಗ್ರಿ ಮಾಡಿದರೆ, ಇಲ್ಲಿ ಉಳಿದುಕೊಳ್ಳಲು ಸುಲಭವೆಂದು ಅರಿತು ಹಿಂಡು ಹಿಂಡಾಗಿ ಸೇರಿಕೊಂಡರು. ಕೆಲವು ಕಾಲೇಜುಗಳಲ್ಲಿ ಕುಕಿಂಗ್ ಡಿಗ್ರಿಯ ಮಂದಿ ಮುಂಚಿಗಿಂತ ಒಂದಕ್ಕೆಂಟರಷ್ಟು ಹೆಚ್ಚಾದರಂತೆ. ದೇಶದಲ್ಲಿ ಬಂದು ಉಳಿಯಲು ಅದೊಂದು ಸುಲಭದ ಮಾರ್ಗವಾಯಿತು. ಹಲವರು ಅದನ್ನು ಬಳಸಿಕೊಂಡರು ಕೂಡ.

ವಿಚಿತ್ರವೆಂದರೆ ಹಾಗೆ ಕೋರ್ಸು ಮುಗಿಸಿ ಉಳಿದುಕೊಂಡವರಾರೂ ಶೆಫ್ ಆಗಲೀ ಕುಕ್ ಆಗಲೀ ಆಗಿ ಕೆಲಸ ಮಾಡುತ್ತಿಲ್ಲ. ಹೇಗೆ ಗೊತ್ತೆಂದು ಎಂದು ಕೇಳುತ್ತೀರ? ಆಸ್ಟ್ರೇಲಿಯದಲ್ಲಿ ಶೆಫ್‌ಗಳ ಕೊರತೆ ಮುಂಚಿನಂತಯೇ ಇದೆ. ಒಂದಿನಿತೂ ಕಡಿಮೆಯಾಗಿಲ್ಲ. ಯೂನಿವರ್ಸಿಟಿಯ ಅಕಾಡೆಮಿಕ್‌ಗಳು ಈ ಸಂಗತಿಯ ಬಗ್ಗೆ ಸ್ಟಡಿ ಮಾಡಲು ತೊಡಗಿ ಬಿಟ್ಟಿದ್ದಾರೆ. ಸತ್ಯ ಏನೆಂದು ರಟ್ಟುಮಾಡಿ ಎದೆತಟ್ಟಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯ ಸರ್ಕಾರವೂ ಕೆಟ್ಟ ಕನಸು ಕಂಡು ಎದ್ದಂತೆ ಎಚ್ಚೆತ್ತುಕೊಂಡುಬಿಟ್ಟಿದೆ. ಶೆಫ್‌ಗಳು ಡಿಮ್ಯಾಂಡಿರುವ ಕೆಲಸದ ಲಿಸ್ಟಲ್ಲಿ ಈಗ ಇಲ್ಲ. ದಿಟವಾಗಿಯೂ ಇನ್ನೂ ಕೊರತೆ ಇದ್ದರೂ ಕೂಡ! ಫ್ರೀ ಮಾರ್ಕೆಟ್ ಧುರೀಣರು ವಲಸಿಗರ ವಿರುದ್ಧ ದೇಶದ ರಕ್ಷಣೆಗೆ ನಿಲ್ಲುವ ಈ ಪರಿ ವಿಪರ್ಯಾಸವಾಗಿ ಏನೂ ಕಾಣಬೇಕಿಲ್ಲ. ಏಕೆಂದರೆ "ಫ್ರೀ ಮಾರ್ಕೆಟ್" ಕೂಡ ಸರ್ಕಾರದ ಬೆಂಬಲಕ್ಕೆ ಕೈಯೊಡ್ಡುತ್ತಿರುವ ಕಾಲವಲ್ಲವೇ ಇದು?
ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು