ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ದೇಶ ತನ್ನತನ ತಿಳಕೊಂಡ ಯುದ್ಧ    
ಸುದರ್ಶನ್
ಶನಿವಾರ, 25 ಏಪ್ರಿಲ್ 2009 (05:01 IST)
ಗಲಿಪೊಲಿ ಯುದ್ಧಸ್ಮಾರಕ

ಸೈನಿಕರಿಗೆ ಸಂಬಂಧಿಸಿದ ಯಾವುದೇ ಆಚರಣೆಯಾಗಲೀ, ವೈಭವೀಕರಣವಾಗಲೀ ಎಚ್ಚರದ ಬೇಲಿಯೊಳಗೇ ಇರಬೇಕಾಗುತ್ತದೆ. ಸತ್ತವರ ನೆನಪಲ್ಲಿ ಕಣ್ಣೀರು ಮಿಡಿಯುವ ರಾಜಕಾರಣಿಗಳ ಬಗ್ಗೆ ಅನುಮಾನ ಇಟ್ಟುಕೊಂಡೇ ನೋಡಬೇಕಾಗುತ್ತದೆ. ಪೇಟ್ರಿಯಾಟಿಸಂ ಹಾಗು ನ್ಯಾಷನಲಿಸಂನ ಅಂತರವನ್ನು ಮನಸ್ಸಲ್ಲಿಟ್ಟುಕೊಂಡೇ ಯೋಚಿಸಬೇಕಾಗುತ್ತದೆ. ಇದನ್ನೆಲ್ಲಾ ಯಾಕೆ ಹೇಳಿಕೊಳ್ಳುತ್ತಿದ್ದೇನೆಂದರೆ, ಏಪ್ರಿಲ್ ೨೫ ಆಸ್ಟ್ರೇಲಿಯದಲ್ಲಿ Anzac day. ಮೊದಲನೇ ಮಹಾಯುದ್ಧದ ಗಲಿಪೊಲಿಯ ಆಕ್ರಮಣದಲ್ಲಿ ಪ್ರಾಣತೆತ್ತವರನ್ನು, ನಂತರ ಎರಡನೇ ಮಹಾಯುದ್ಧದಲ್ಲಿ ಅಸುನೀಗಿದವರನ್ನು, ಮುಂದೆ ಆಸ್ಟ್ರೇಲಿಯ ಪಾಲ್ಗೊಂಡ ಎಲ್ಲ ಯುದ್ಧಗಳಲ್ಲಿ ಜೀವ ತೆತ್ತವರನ್ನು ಇಡೀ ದೇಶ ನೆನಸಿಕೊಳ್ಳುವ ದಿನ. ಆ ಎಲ್ಲ ಯುದ್ಧಗಳಲ್ಲಿ ಸತ್ತವರ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅಂದು ದೇಶದಲ್ಲೆಲ್ಲಾ ಮಾರ್ಚ್ ಮಾಡುತ್ತಾರೆ. ಇಂದಿನ ಮುಂದಿನ ತಲೆಮಾರಿಗೆ ದೇಶದ ಬಗ್ಗೆ ಎಚ್ಚರ ಮೂಡಿಸುವ ದಿನ ಎಂದರೆ ತಪ್ಪಾಗಲಾರದು.

ಗಲಿಪೊಲಿ ಟರ್ಕಿಯ ಒಂದು ಸಣ್ಣ ಪೆನೆನ್ಸುಲ. ಅದನ್ನು ವಶಪಡಿಸಿಕೊಳ್ಳುವುದನ್ನು ಮೊದಲ ಮಹಾಯುದ್ಧದಲ್ಲಿ ಮುಖ್ಯವಾದ ಹೆಜ್ಜೆ ಎಂದು ಪರಿಗಣಿಸಲಾಗಿತ್ತು. ಅಲ್ಲಿಯ ಕಡಲ ಕಿನಾರೆಯನ್ನು ವಶಪಡಿಸಿಕೊಂಡು ಆ ಮೂಲಕ ಹೊಸ ಸಪ್ಲೈ ರೂಟ್ ತೆರೆದುಕೊಳ್ಳುವ ಯೋಚನೆಯಿತ್ತು. ಅದಕ್ಕಾಗಿ ಅಲೈಡ್ ದಳ ಸಾಕಷ್ಟು ತಯಾರಿ ನಡೆಸಿತ್ತು. ಬ್ರಿಟಿಷ್, ಫ್ರಾನ್ಸ್ ಅಲ್ಲದೆ ಮುಖ್ಯವಾಗಿ ಆಸ್ಟ್ರೇಲಿಯ, ನ್ಯೂಜಿಲೆಂಡ್ ಈ ಆಕ್ರಮಣದಲ್ಲಿ ಪಾಲ್ಗೊಳ್ಳಲು ಮುಂದೊತ್ತಿ ಬಂದಿತ್ತು. ಇಂಡಿಯದ ಸೈನ್ಯವೂ ಬ್ರಿಟಿಷರಡಿ ಪಾಲ್ಗೊಂಡು ಸಾವಿರಕ್ಕೂ ಮಿಕ್ಕಿ ಸೈನಿಕರನ್ನು ಕಳಕೊಂಡಿತ್ತು. ಬ್ರಿಟಿಷ್ ಮುಂದಾಳತ್ವದಲ್ಲಿ ಹಲವು ದಿನಗಳ ಈ ತಯಾರಿ ಟರ್ಕಿಗೂ ಸಿದ್ಧವಾಗಲು ಅವಕಾಶಕೊಟ್ಟಿತ್ತು.

ಆಸ್ಟ್ರೇಲಿಯಾ ಯುದ್ಧಸ್ಮಾರಕದ ಚಿತ್ರಅಟ್ಟೋಮಾನ್ ಎಂಪೈರ್‍ ಕುಸಿಯುತ್ತಿದ್ದ ಹೊತ್ತಲ್ಲಿ, ಗಲಿಪೊಲಿಯನ್ನು ಕಾಪಾಡಿಕೊಳ್ಳುವುದು ಟರ್ಕಿಗೂ ತುಂಬಾ ಮುಖ್ಯವಾಗಿತ್ತು. ವೈರಿಯ ಆಲೋಚನೆಯ ವಾಸನೆ ಹಿಡಿದ ಟರ್ಕಿ ತನ್ನ ಗಡಿರಕ್ಷಣೆಗೆ ಸನ್ನದ್ಧವಾಗ ತೊಡಗಿತು. ಗಲಿಪೊಲಿಯ ಕಡಲತಡಿಯ ಪಕ್ಕದ ಎತ್ತರದ ಗುಡ್ಡದಲ್ಲಿ ತನ್ನ ಸೈನ್ಯವನ್ನು ಅದು ಜಮಾಯಿಸಿತು. ಬಹುಶಃ ಇದೆಲ್ಲಾ ಎಲ್ಲ ಯುದ್ಧಗಳಲ್ಲೂ ನಡೆಯುವಂತಹವೇ. ಆದರೆ, ಮುಂದೆ ನಡೆದದ್ದು ಮಾತ್ರ ವಿಶಿಷ್ಟವಾದ್ದು.

ಲಂಡನ್ನಿನಲ್ಲಿ ತೆಗೆದುಕೊಂಡು ಹೇರಲ್ಪಟ್ಟ ಯುದ್ಧನಿರ್ಧಾರವನ್ನು ಪೂರೈಸಲು ೧೯೧೫ರ ಏಪ್ರಿಲ್ ೨೫ರ ಮುಂಜಾನೆ- ಬೆಳಕು ಹರಿಯುವ ಮುನ್ನದ ಅರೆಗತ್ತಲಿನಲ್ಲಿ- ಅಲೈಡ್ ದಳಗಳು ಟರ್ಕಿಯ ಕಡಲತಡಿಗೆ ದಾಳಿಯಿಟ್ಟವು. ಸುಲಭದಲ್ಲಿ ವಶಪಡಿಸಿಕೊಳ್ಳಬಹುದೆಂದು ತಿಳಿದಿದ್ದವರಿಗೆ ಅಲ್ಲಿ ನಡೆದ ಅತ್ಯಂತ ಘೋರ ಯುದ್ಧ ಅನಿರೀಕ್ಷಿತವಾಗಿತ್ತು. ಒಂದೆರಡು ವಾರದಲ್ಲಿ ಮುಗಿಯಬೇಕಾದ್ದು ಎಂಟು ತಿಂಗಳಾದರೂ ಮುಗಿಯಲಿಲ್ಲ. ಅಲೈಡ್ ದಳ ತೀವ್ರ ಜೀವನಷ್ಟವಾದ್ದರಿಂದ ಸೋತು ಹಿಮ್ಮೆಟ್ಟ ಬೇಕಾಯಿತು. ಅಷ್ಟೇ ಅಲ್ಲ ಸುಮಾರು ೪೫ ಸಾವಿರ ಅಲೈಡ್ ದಳದವರೂ, ಸುಮಾರು ೮೬ ಸಾವಿರ ಟರ್ಕಿ ಸೈನಿಕರೂ ಅಲ್ಲಿ ಅಸುನೀಗಿದರು. ಲಕ್ಷಾಂತರ ಮಂದಿ ಗಾಯಗೊಂಡರು.

ಎಲ್ಲಕ್ಕಿಂತ ಮಿಗಿಲಾಗಿ ಆ ಘಟನೆ ಆಸ್ಟ್ರೇಲಿಯದ ಒಳಮನಸ್ಸನ್ನು ತಟ್ಟಿ ಎಬ್ಬಿಸಿದ ಬಗೆ ಈ ದೇಶದ ಇತ್ತೀಚಿನ ಇತಿಹಾಸದ ಮುಖ್ಯ ಘಟ್ಟ ಅನ್ನುತ್ತಾರೆ. ೧೯೦೧ರಲ್ಲಿ ಎಲ್ಲ ರಾಜ್ಯಗಳು ಒಂದಾಗಿ ಫೆಡರೇಷನ್ ಸ್ಥಾಪಿಸಿಕೊಂಡ ಆಸ್ಟ್ರೇಲಿಯ ಆಗಿನ್ನೂ ಜಾಗತಿಕ ರಾಜಕಾರಣದಲ್ಲಿ ಹಸುಳೆ. ತಾಯೆಂದು ಪ್ರೇಮದಿಂದ ನೋಡುವ ಬ್ರಿಟನ್ನಿಗೆ ತಾನೂ ಒಂದು ಸಶಕ್ತ ದೇಶ ಎಂದು ತೋರುವ ಹಂಬಲ. ದೊಡ್ಡ ದೇಶಗಳ ಜತೆ ಭುಜಕ್ಕೆ ಭುಜಕೊಟ್ಟು ನಿಂತು ತನ್ನ ಶಕ್ತಿಯನ್ನು ಸಾರುವ ಗರಜು. ಇದಕ್ಕೆಲ್ಲಾ ಗಲಿಪೊಲಿಯ ಆಕ್ರಮಣ ಹೊಂದಿಕೊಂಡು ಬಂದಿತ್ತು.

ಡಾನ್ ಸರ್ವೀಸ್  ಆಚರಣೆಆದರೆ ಅಲ್ಲಿ ಗೆಲ್ಲಲಾರದೇ ಹೋಗಿದ್ದು ಬ್ರಿಟನ್ನಿನ ಬಗ್ಗೆ ಕಹಿ ಭಾವನೆಯನ್ನು ಮೊದಲ ಬಾರಿಗೆ ಈ ದೇಶದ ಜನರಲ್ಲಿ ಮೂಡಿಸಿತು. ಸುಮಾರು ಎಂಟು ಸಾವಿರ ಸೈನಿಕರನ್ನು ಕಳಕೊಂಡ ದೇಶ ಎಚ್ಚೆತ್ತುಕೊಂಡಂತೆ ಅನಿಸಿತು. ತನ್ನ ಸೈನಿಕರನ್ನು ಕುರಿಗಳಂತೆ ಬಲಿಕೊಟ್ಟ ಬ್ರಿಟನ್ನಿನ ಬಗ್ಗೆ ಮೊದಲ ಬಾರಿಗೆ "ತಾಯ ಪ್ರೇಮ"ವನ್ನು ಮೀರಿದ ಅರಿವು ಮೂಡಿಸಿತು. ಹಲವು ಇತಿಹಾಸಜ್ಞರು ಹೇಳುವ ಹಾಗೆ - ಆಸ್ಟ್ರೇಲಿಯ ತನ್ನತನವನ್ನು ಕಂಡುಕೊಂಡ ಘಟನೆಯಾಯಿತು ಎಂದು.

ಈಗಲೂ, ಪ್ರತಿ ಏಪ್ರಿಲ್ ೨೫ಕ್ಕೆ ಬೆಳಕು ಹರಿಯುವ ಮುನ್ನದ ಅರೆಗತ್ತಲಿನಲ್ಲಿ ಡಾನ್ ಸರ್ವೀಸ್ ನಡೆಯುತ್ತದೆ. ಒಂಟಿ ಕಹಳೆ ಮೊಳಗುತ್ತದೆ. ದೇಶ ತಾನು ಕಳಕೊಂಡ ಜೀವನೋತ್ಸಾಹದ ಮಕ್ಕಳನ್ನು ಎರಡು ನಿಮಿಷ ಮೌನವಾಗಿ ನೆನಪಿಸಿಕೊಳ್ಳುತ್ತದೆ.

[ಡಾನ್ ಸರ್ವೀಸ್ ಚಿತ್ರಕೃಪೆ- abc.net.au]
[ಯುದ್ಧಸ್ಮಾರಕ ಚಿತ್ರಗಳು-ಲೇಖಕರದು]

 

ಪುಟದ ಮೊದಲಿಗೆ
 
Votes:  2     Rating: 5    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು