ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಕದ ತಟ್ಟುತ್ತಿರುವ ನಿರಾಶ್ರಿತ ಕೈಗಳು    
ಸುದರ್ಶನ್
ಶುಕ್ರವಾರ, 1 ಮೇ 2009 (06:41 IST)
ವಲಸಿಗರ ದೋಣಿ

ಮನೆಯೆದುರಿನ ಮರ ಅವಸರದಲ್ಲಿ ಎಂಬಂತೆ ಎಲೆ ಎಲ್ಲ ಉದುರಿಸಿಕೊಂಡು ಬೋಳಾಗಿ ನಿಂತಿದೆ. ಇದೀಗ ಇಲ್ಲಿ -ಅದೂ ಅಲ್ಲದ, ಇದೂ ಅಲ್ಲದ ಋತು. ಕಾಲು ಹಾಗು ಕೈಬೆರಳಿನ ತುದಿಗಳಿಂದ ಚಳಿ ಮೆಲ್ಲನೆ ಮೈಗೇರುವ ತವಕದಲ್ಲಿರುವ ಹೊತ್ತು. ಬೇಸಿಗೆಯಲ್ಲಾ ಮನಸ್ಸು ಗರಿಗೆದರಿ ಹಾರಿ ಈಗ ಬಂದಿಳಿದು ಕಾವಿಗೆ ಕೂರುವ ಹೊತ್ತು. ಯಾಕೋ ಎಲ್ಲಾ ತುಂಬಾ ಕಳೆಗುಂದಿದಂತೆ ಅನಿಸುತ್ತಿದೆ.

ಕೆಲಸಗಳು ಇದ್ದೂ ಇಲ್ಲವೆಂಬಂತೆ ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲಸ ಕಳಕೊಂಡವರು ಹೆಚ್ಚುತ್ತ ಇದ್ದಾರೆ. ಇನ್ನೂ ಹೆಚ್ಚುತ್ತಾರೆ ಅಂತ ಸುದ್ದಿ ಬೇರೆ. ಎಷ್ಟೋ ಮನೆಗಳು ಮುರಿಯುತ್ತವಂತೆ. ಮುರಿದದ್ದನ್ನು ಮತ್ತೆ ಕಟ್ಟಿಕೊಳ್ಳಲು ಬಲವನ್ನೇನೋ ಮಂದಿ ಕಂಡುಕೊಳ್ಳುತ್ತಾರಂತೆ. ಆದರೆ ಅದಕ್ಕಿನ್ನೂ ಕಾಯಬೇಕಂತೆ. ದುಡಿಯಬೇಕನ್ನುವವರಿಗೆ ಕೆಲಸಕ್ಕೆ ತೊಂದರೆ. ಕೆಲಸವಿದ್ದರೂ, ತಂಡಿಯನ್ನು ನಿಭಾಯಿಸುವಷ್ಟು ಕಾವು ಸಿಗುವ ತೊಂದರೆ ಈ ಚಳಿಗಾಲದ ದಾರುಣತೆಯನ್ನು ಹೆಚ್ಚಿಸಬಹುದು ಎಂಬ ಸುದ್ದಿ ಮನಸ್ಸನ್ನು ಮುದುಡಿಸುತ್ತದೆ.

ಆಸ್ಟ್ರೇಲಿಯದ ಬಾಗಿಲನ್ನು ಮತ್ತೆ ನಿರಾಶ್ರಿತರ ಅದರುವ ಕೈಗಳು ತಟ್ಟುತ್ತಿವೆ. ಮುರುಕು ದೋಣಿಗಳು, ಅದರಲ್ಲಿ ಬೆದರಿದ ಜೀವಗಳು ತಮ್ಮ ಮಕ್ಕಳುಮರಿಗಳನ್ನು ಅವುಚಿಕೊಂಡು ತೇಲಿಬರುತ್ತಿದೆ. ಇರಾಕಿನಿಂದ ಶೆಲ್ಲು, ಬಾಂಬು ಅಲ್ಲದೆ ಈಗೀಗ ಹೆಚ್ಚುತ್ತಿರುವ ಕಾರುಬಾಂಬಿನಿಂದ ಬಚಾವಾಗಲು ಓಡುತ್ತಿದ್ದರೆ, ಆಫ್ಗಾನಿಸ್ತಾನದಲ್ಲಿ ಮೈಲುಗೈ ಪಡೆದ ಅಟ್ಟಹಾಸದ ಕಟುಕರಿಂದ ಓಡುತ್ತಿದ್ದಾರೆ. ಪಾಕಿಸ್ತಾನದ ಗುಂಡು ತೂರುವ ಕೊಲೆಗಡುಕರಿಂದ ತಲೆತಪ್ಪಿಸಿಕೊಂಡು ಬರುತ್ತಿದ್ದರೆ, ಇತ್ತ ಕಡೆ ಒಳಗೊಳಗೆ ಕುದಿಯುತ್ತಲೇ ಇದ್ದು, ಥಟ್ಟನೆ ಭುಗಿಲೆದ್ದ ಶ್ರೀಲಂಕಾದ ಸಂಘರ್ಷದಿಂದ ತಮಿಳು ಜೀವಗಳು ಓಡಿಬರುತ್ತಿದ್ದಾರೆ.

ಹೀಗೆ ಬರುವುದು ಹೆಚ್ಚುತ್ತಿದ್ದಂತೆ ಆಸ್ಟ್ರೇಲಿಯದ ಒಳಗಿನ ಗುದ್ದಾಟವೂ ಹೆಚ್ಚುತ್ತದೆ. "ಒಳಗೆ ಬಿಡಬೇಡಿ", "ಹಿಂದಕ್ಕೆ ಕಳಿಸಿ", "ಅವರೆಲ್ಲಾ ಪಾತಕಿಗಳು!", "ಎಲ್ಲಾದರೂ ಸಾಯಲಿ, ಇಲ್ಲಿಬೇಡ" ಎನ್ನುವ ದನಿಗಳು ದೊಡ್ಡದಾಗುತ್ತಾ ಹೋಗುತ್ತವೆ. ಆಶ್ರಯ ಬೇಡಿ ಬಂದವರನ್ನು "illegal" ಎಂದು ಕರೆಯುವುದು ತಪ್ಪಷ್ಟೇ ಅಲ್ಲ, ದುಷ್ಟತನವೂ ಹೌದು ಎಂದು ವರ್ಷಾನುವರ್ಷಗಳಿಂದ ಕೂಗುಗಳು ಕೇಳುತ್ತಿದ್ದರೂ, ಆಸ್ಟ್ರೇಲಿಯದ ಪ್ರೆಸ್ ಕೌನ್ಸಿಲ್ ಹಾಗೆ ಕರೆಯಕೂಡದೆಂದು ವಿವರಣೆ ಹೊರಡಿಸಿದ್ದರೂ, ರೇಡಿಯೋ, ಟೀವಿ, ಪತ್ರಿಕೆಗಳಲ್ಲಿ ನಿರಾಶ್ರಿತರನ್ನು "illegal" ಎಂದೇ ಕರೆದು ಅವರ ಬಗ್ಗೆ ಅನುಮಾನ ಹುಟ್ಟಿ ಜರಿಯಲು ದಾರಿ ಮಾಡಿಕೊಡುತ್ತಿದ್ದಾರೆ.

ಇತ್ತ "ಸ್ವೈನ್ ಫ್ಲೂ" ಧುತ್ತೆಂದು ಎದುರಾಗಿದೆ. ಅಮೆರಿಕಾ, ಯೂರೋಪು, ಏಷಿಯಾದ ದೇಶಗಳ ಆರೋಗ್ಯ ಸವಲತ್ತುಗಳನ್ನು ತೀವ್ರ ಪರೀಕ್ಷೆಗೆ ಒಡ್ಡುವುದರಲ್ಲಿ ಅನುಮಾನವಿಲ್ಲದಂತಾಗಿದೆ. ಎಷ್ಟು ಜನರನ್ನು ಬಲಿ ತೆಗೆದುಕೊಳ್ಳಬಹುದೆಂದು ಲೆಕ್ಕಾಚಾರ ಶುರುವಾಗಿದೆ. ಇದರಿಂದ ಈಗಾಗಲೇ ನಡುಗುತ್ತಿರುವ ದೇಶಗಳ ಆರ್ಥಿಕತೆಗೆ ಇನ್ನೆಷ್ಟು ಗುದ್ದು ಬೀಳಬಹುದೆಂದೂ ತಲೆಕೆರೆದುಕೊಳ್ಳುತ್ತಿದ್ದಾರೆ. ಸೀನಿದವರಿಂದ ದೂರಕ್ಕೆ ಮಾರುದ್ದ ಹಾರುವ, ಕೈಕುಲುಕಲು ಬಂದವರಿಗೆ ಕೈಚಾಚಲೂ ಅನುಮಾನಿಸುವ ಹೊತ್ತು ಇದು. ದಕ್ಷಿಣ ಭೂಖಂಡದ ಚಳಿಗಾಲದಲ್ಲಿ ಇದು ಮತ್ತೂ ಮಾರಣಾಂತಿಕ ಎಂಬುದು ಎಲ್ಲರ ದುಗುಡಕ್ಕೆ ಕಾರಣ.

ನಿರಾಶ್ರಿತರ ಹಕ್ಕುಗಳಿಗಾಗಿ ಹೋರಾಟನಡುಹಗಲು ಹತ್ತಿರವಾದರೂ ಮೋಡ ಮುಸುಕಿಯೇ ಇದ್ದು ಸೂರ್ಯನ ಇರವೇ ಅನುಮಾನ ಹುಟ್ಟಿಸುವಂತಿದೆ. ಯಾವ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಜೀವ ಮುಡಿಪಾಗಿಟ್ಟು ಯುದ್ಧಗಳಲ್ಲಿ ಕಾದಿದ್ದಾರೋ, ಅದೇ ಸರ್ಕಾರದ ವಿರುದ್ಧ ತಮ್ಮ ಹಕ್ಕಿಗಾಗಿ ಹಲವಾರು ವರ್ಷಗಳಿಂದ ಗೂರ್ಖಾಗಳು ಸೆಣಸುತ್ತಿದ್ದಾರೆ. ನೇಪಾಳದ ಗುಡ್ಡಗಾಡಿಂದ ಆಯ್ದ ಗೂರ್ಖಾ ರೆಜಿಮೆಂಟು ಈಗಲೂ ಬ್ರಿಟನ್ನಿನ ತುಕಡಿಗಳಲ್ಲೊಂದು. ಅವರಲ್ಲಿ ೧೯೯೭ರ ಮುನ್ನ ನಿವೃತ್ತರಾದ ಗೂರ್ಖಾ ಮಂದಿ ಬ್ರಿಟನ್ನಿನಲ್ಲಿ ತಳವೂರುವ ಹಾಗಿಲ್ಲ ಎಂದು ಸರ್ಕಾರ ಘೋಷಿಸಿತ್ತು, ಆದರೆ ಈಗ, ಆ ಘೋಷಣೆ ಬ್ರಿಟನ್ನಿನ ಸಂಸತ್ತಿನ ಓಟಿನಲ್ಲಿ ಸೋತ ಸುದ್ದಿ ಬಂದಿದೆ. ಗೂರ್ಖಾಗಳ ಮುಖದಲ್ಲಿ ತುಸು ನಗು ಅರಳಿದೆ. ಯುದ್ಧ ಪದಕಗಳು ಸೆಟೆದ ಎದೆಗಳ ಮೇಲೆ ಮತ್ತೆ ಹೊಳೆಯುತ್ತಿದೆ. ಒತ್ತಿ ಹಿಡಿದ ಖುಷಿಯೂ ನಗುವೂ ಅವರ ಸಂಯಮವನ್ನು ಧಿಕ್ಕರಿಸುತ್ತಿದೆ. ಆದರೂ ಗೂರ್ಖಾಗಳ ಹಕ್ಕಿನ ಹೋರಾಟವಿನ್ನೂ ಮುಗಿದಿಲ್ಲ. ಸರ್ಕಾರದ ಮುಂದಿನ ಅಡ್ಡಗಾಲು ಏನಿರಬಹುದೆಂಬ ಆತಂಕವಿದ್ದೇ ಇದೆ. ತನಗೆ ಬೇಕಾದಾಗ ಯುದ್ಧಸೇವೆಗೆ ಬಳಸಿಕೊಂಡು, ಬೇಡದಾಗ ಕೈತೊಳೆದುಕೊಳ್ಳುವ ಸರ್ಕಾರಗಳ ಇಂತಹ ದೌರ್ಜನ್ಯಕ್ಕೆ ಕೊನೆ ಯಾವಾಗ ಎಂದು ಕೇಳುವಂತಾಗುತ್ತದೆ.

ಮೋಡದ ಹಿಂದಿಂದ ತುಸುವೇ ಇಣುಕಿಹೋದ ಸೂರ್ಯ ತಾನಿದ್ದೇನೆ ಎಂದು ಖಾತರಿ ಮಾಡಲೋಸ್ಕರವೇ ಹಾಗೆ ಮಾಡಿದಂತಿತ್ತು. ಸೂರ್ಯನಿಗೆ ನಗುವುದಕ್ಕೂ ಅನುಮಾನವಿರುವಂತಿತ್ತು. ಅಂತಹ ಹೊತ್ತಿದು.

[ಚಿತ್ರಕೃಪೆ-abc.net]

ಪುಟದ ಮೊದಲಿಗೆ
 
Votes:  0     Rating: 0    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ