ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಚಳಿ ಕತ್ತಲು ಮತ್ತು ನೀಚತನ    
ಸುದರ್ಶನ್
ಶುಕ್ರವಾರ, 12 ಜೂನ್ 2009 (05:00 IST)
ಸಿಡ್ನಿಯನ್ನು ಇಬ್ಭಾಗಿಸಿ ಹರಿಯುವ ‘ಪ್ಯಾರಾಮಟ’

"ಮರೆತೇ ಬಿಟ್ಟಿದ್ದೆ! ಚಳಿಗಾಲ ಶುರುವಾಗಿ ಆಗಲೇ ಹತ್ತು ದಿನವಾಗಿದೆಯಲ್ಲ, ಅಯ್ಯೋ!" ಎಂದು ತನ್ನನ್ನೇ ಬಯ್ದುಕೊಂಡಂತೆ- ಈ ಚಳಿ ರಾತ್ರಿ ಬೆಳಗಾಗುವಾಗ ದಬ್ಬಕ್ಕನೆ ಅವುಚಿಕೊಂಡಿದೆ. ನಾನು ಹೇಳುತ್ತಿರುವುದು ತುಂಬಾ ನಾಟಕೀಯ ಅನಿಸಿದರೆ ಅದು ನನ್ನ ತಪ್ಪಲ್ಲ. ಏಕೆಂದರೆ, ಈ ವರ್ಷ ಸಿಡ್ನಿಗೆ ಚಳಿ ಆವರಿಸಿದ್ದೇ ಹಾಗೆ. ಈವತ್ತು ಬೆಳಿಗ್ಗೆ. ಹಚ್ಚವಾಗಿ ಕತ್ತರಿಸಿಟ್ಟ ಹುಲ್ಲಿನ ಮೇಲೆಲ್ಲಾ ದಟ್ಟವಾಗಿ ಇಬ್ಬನಿಗಟ್ಟಿದೆ. ಹೌದು ಐಸಾಗಿ ಒಂದು ಪದರ ಹರಡಿದೆ. ಹಲವು ದಿನಗಳ ಇಂತಹ ಫ್ರಾಸ್ಟಿನಡಿ ಹುಲ್ಲು ಕಳೆಗುಂದಿ ಸಾಯುತ್ತವೆ. ಇಬ್ಬನಿಯನ್ನು ತೊಲಗಿಸಬೇಕಾದ ಸೂರ್ಯ ತನ್ನ ಕೆಲಸ ಮರೆತು ಉತ್ತರದ ಬೇಸಿಗೆಯಲ್ಲಿ ಅಂಡಲೆಯುತ್ತಿದ್ದಾನೆ. ಅವನ ವಾರೆ ಬಿಸಿಲಿನ ನಿಸ್ತೇಜವನ್ನು ಇಬ್ಬನಿ ಪದರ ಅಣಕಿಸಿ ನಗುತ್ತಿರುವಂತೆ ಹರಡಿಕೊಂಡಿದೆ.

ಚಳಿಗಾಲದಲ್ಲಿ ಹಗಲುಗಳು ಚಿಕ್ಕವು. ಸಂಜೆ ಐದಕ್ಕೇ ದೀಪ ಹಚ್ಚಬೇಕು. ಮನೆಗೆ ಹಿಂದುರುಗುವ ದಾರಿಯೆಲ್ಲಾ ಕತ್ತಲು. ಹತ್ತು ವರ್ಷಕ್ಕಿಂತ ಹಿಂದಿನ ಮಾತು ಈವತ್ತು ತುಂಬಾ ನೆನಪಾಯಿತು. ನಾವು ಆಗಿದ್ದ ಅಪಾರ್ಟ್‌ಮೆಂಟ್ ಮನೆ ಸಿಡ್ನಿಯನ್ನು ಇಬ್ಭಾಗಿಸಿ ಹರಿಯುವ ‘ಪ್ಯಾರಾಮಟ’ ಎಂಬ ಹೊಳೆಯ ದಡದ ಪಕ್ಕದ ರಸ್ತೆಯಲ್ಲಿತ್ತು. ಮನೆಯಿಂದ ರೈಲ್ವೇ ಸ್ಟೇಷನ್ನಿಗೆ ಹೋಗಿ ಬರಲು ಒಂದು ಕಿರಿದಾದ ಕಾಲ್ಸೇತುವೆಯನ್ನು ದಾಟಿ ಹೋಗಿಬರಬೇಕಾಗಿತ್ತು. ಆ ಉದ್ದದ ಸೇತುವೆಯ ನಟ್ಟ ನಡುವಲ್ಲಿ ಮಾತ್ರ ಒಂದು ಪುಟ್ಟ ದೀಪ ಮಿಣಿಮಿಣಿ ಎನ್ನುತ್ತಿರುತ್ತಿತ್ತು. ಉಳಿದಂತೆ ಕತ್ತಲು. ಹೊಳೆಯ ಒಂದು ಪಕ್ಕದಲ್ಲಿ ಎತ್ತರದ ಕಟ್ಟಡಗಳು ಇದ್ದವು. ಅವುಗಳ ನಡುವಿನ ಒಂದು ಕಿರಿಯ ಓಣಿಯನ್ನು ಹೊಕ್ಕು ಸೇತುವೆ ತಲುಪಬೇಕಿತ್ತು. ಆ ಓಣಿಯಲ್ಲೂ ದೀಪವಿಲ್ಲ, ಕತ್ತಲು.

ಇಂತಹುದೇ ಒಂದು ಚಳಿಗಾಲದ ಸಂಜೆ ಕೆಲಸದಿಂದ ಹಿಂತಿರುಗುತ್ತಿದ್ದೆ. ರೈಲಿನಲ್ಲಿ ಓದುತ್ತಿದ್ದ ಯಾವುದೋ ಪುಸ್ತಕದ ಬಗ್ಗೆ ಯೋಚಿಸುತ್ತಾ ನನ್ನ ಲೋಕದಲ್ಲೇ ಮುಳುಗಿಹೋಗಿದ್ದೆ. ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಇಲ್ಲದ ಕಾರಣ ಹಾಗೆ ಮೈಮರೆಯುವುದು ಅಪಾಯಕಾರಿಯಲ್ಲ. ಕೊಂಚವೇ ಎಚ್ಚರವಿದ್ದು ಅತ್ತಿತ್ತ ನೋಡಿ ಹೋದರೆ ಸಾಕು. ಹೀಗೆ ಏನೋ ಯೋಚಿಸುತ್ತಾ ಸೇತುವೆಗೆ ಹೋಗುವ ಓಣಿಗೆ ತಿರುಗಿದೆ. ಅಲ್ಲಿಂದಲೇ ಕಾಣುವ ಸೇತುವೆ ನಡುವಿನ ದೀಪದ ಸಣ್ಣ ಬೆಳಕು ಇದ್ದೂ ಇಲ್ಲದಂತಿತ್ತು. ಆ ಉದ್ದದ ಓಣಿಯಲ್ಲಿ ಎರಡು ಹೆಜ್ಜೆ ಇಟ್ಟೊಡನೆ, ದೂರದ ಸೇತುವೆಯ ಶುರುವಿನಲ್ಲಿ ನನ್ನ ಅರ್ಧ ಎಚ್ಚರಕ್ಕೆ ಎರಡು ಮನುಷ್ಯಾಕೃತಿ ಕಂಡಿತು. ಯಾರೋ ಇರಲಿ ಎಂದುಕೊಂಡು ಮತ್ತೊಂದೆರಡು ಹೆಜ್ಜೆ ಹೋಗುತ್ತಲೂ ಅನುಮಾನವಾಯಿತು. ಮರಗಟ್ಟುವಂತಹ ಚಳಿಯಲ್ಲಿ, ಸಂಜೆಯ ಕತ್ತಲಲ್ಲಿ ಯಾರನ್ನೋ ಕಾಯುತ್ತಾ ನಿಂತಿರುವಂತೆ ಕಂಡಿತು. ನನ್ನ ನಡಿಗೆ ನಿಧಾನವಾಯಿತು.

ನನ್ನನ್ನು ನೋಡಿದ್ದೆ ಆ ಮನುಷ್ಯಾಕೃತಿಗಳು ಎಚ್ಚೆತ್ತುಕೊಂಡು ಚುರುಕಾದ ಹಾಗಾಯಿತು. ನನ್ನತ್ತ ತಿರುಗಿ ನಿಂತಂತಾಯಿತು. ನಾನು ನಿಂತುಬಿಟ್ಟೆ. ಯಾಕೋ ಸರಿಯಿಲ್ಲ ಅನಿಸಿತು. ಆ ಇಬ್ಬರು ಹುಡುಗರು ನನ್ನತ್ತ ತಿರುಗಿ ಹೆಜ್ಜೆಯಿಟ್ಟರು. ನಾನು ಒಂದೆರಡು ಕ್ಷಣ ಮರಗಟ್ಟಿ ನಿಂತುಬಿಟ್ಟೆ. ಹಿಂದೆ ತಿರುಗಿ ಹೋಗಲೇ? ಅಥವಾ ಮುಂದಕ್ಕೆ ಹೋಗಲೆ? ಅಥವಾ ನಿಂತಲ್ಲೇ ನಿಂತುಬಿಡಲೆ? ಎಂದೆಲ್ಲಾ ಯೋಚನೆ ತಲೆಯಲ್ಲಿ ಮಿಂಚಿಹೋಯಿತು. ಅದಕ್ಕೆಲ್ಲಾ ಉತ್ತರ ಕಂಡುಕೊಳ್ಳುವ ಮೊದಲೇ, ಯಾವುದೋ ಒಳದನಿಗೆ ಶರಣುಹೋಗಿ ತಿರುಗಿ ಹೊರಟು ಬಿಟ್ಟಿದ್ದೆ. ಹೆಜ್ಜೆ ಚುರುಕಾಗಿ ಹಾಕುತ್ತಿದ್ದೆ. ಇದೆಲ್ಲಾ ನಾನು ಪ್ರಜ್ಞಾಪೂರ್ವಕವಾಗಿ ಮಾಡುತ್ತಲೇ ಇರಲಿಲ್ಲ. ಎಲ್ಲಾ ಬೊಂಬೆ ಆಟದಂತೆ ನಡೆಯುತ್ತಿತ್ತು.

ಹೊಸದಾಗಿ ಕಟ್ಟಿರುವ ಅದೇ ಸೇತುವೆಓಣಿಯಿಂದ ಹೊರಬಂದು ಎತ್ತ ಹೋಗುವುದೆಂದು ನೋಡುತ್ತಾ ಒಮ್ಮೆ ಹಿಂದೆ ತಿರುಗಿದೆ. ಆ ಹುಡುಗರೂ ನನ್ನತ್ತ ಸರಸರ ಬರುತ್ತಿದ್ದರು. ಆ ನಿರ್ಜನ ರಸ್ತೆಯ ಇನ್ನೊಂದು ಪಕ್ಕ ಅಷ್ಟು ದೂರದಲ್ಲಿ ಒಂದು ರೆಸ್ಟೋರೆಂಟ್ ಕಂಡಿತು. ಓಡುತ್ತ ರಸ್ತೆ ದಾಟಿ ಅದನ್ನು ಹೊಕ್ಕುಬಿಟ್ಟೆ. ಅಲ್ಲಿದ್ದ ವೇಟ್ರೆಸ್ಸಿಗೆ ಯಾರೋ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ ಮನೆಗೆ ಫೋನ್ ಮಾಡಬೇಕು ಅಂತ ಕೇಳಿಕೊಂಡೆ. ಪರಿಸ್ಥಿತಿ ಅರ್ಥವಾದವಳಂತೆ ಫೋನತ್ತ ಕೈಚಾಚಿ ಮಾಡು ಅಂದಳು. ನನ್ನ ಹೆಂಡತಿಗೆ ಫೋನ್ ಮಾಡಿ ನಡೆದದ್ದು ಹೇಳುತ್ತಿರುವಾಗ ಗಾಜಿನ ಕಿಟಕಿಯ ಮೂಲಕ ನನ್ನತ್ತ ನೋಡುತ್ತಾ ಅವರಿಬ್ಬರು ಹಾದು ಹೋಗಿದ್ದು ಕಂಡಿತು. ಅವರ ನೋಟ ‘ಬಾ ಮಗನೆ ಹೊರಗೆ, ನೋಡ್ಕೋತೀವಿ’ ಅನ್ನೋ ಹಾಗಿತ್ತು. ತುಸು ಹೊತ್ತು ಅಲ್ಲೇ ಕಾದಿದ್ದು, ಹೆಂಡತಿ ಬಂದು ಪಿಕ್ ಮಾಡುವಾಗ ಅವರಿಬ್ಬರೂ ಎತ್ತಲೋ ಕಾಣೆಯಾಗಿದ್ದರು. ಬಹುಶಃ ನಾನು ಸೇತುವೆಯತ್ತ ಮುಂದೆ ಹೋಗಿದ್ದರೆ ಬಡಿದು ನನ್ನ ಬಳಿಯಿರುವುದೆಲ್ಲಾ ಕಿತ್ತುಕೊಳ್ಳುತ್ತಿದ್ದರೋ, ದುಡ್ಡು ಕೇಳುತ್ತಿದ್ದರೋ, ಸಿಗರೇಟು ಕೇಳುತ್ತಿದ್ದರೋ ಯಾರಿಗೆ ಗೊತ್ತು. ಆದರೆ ಅಂದಿನಿಂದ ಪ್ರತಿದಿನವೂ ಸ್ಟೇಷನ್ನಿನಿಂದ ಪಿಕ್ ಮಾಡುತ್ತೇನೆ ಎಂಬ ಹೆಂಡತಿಯ ಒತ್ತಾಯವನ್ನು ಒಪ್ಪಿಕೊಂಡರೂ ನನಗೆ ಅದು ಅಗತ್ಯವೆನಿಸಿರಲಿಲ್ಲ. ಆಮೇಲೂ ಹಲವು ಸಲ ಕತ್ತಲಲ್ಲಿ ಅಲ್ಲಿಯೇ ಹಾದು ಬಂದಿದ್ದೇನೆ.

ನನಗೆ ಅಂದು ಇದ್ದ ಸಾಧನ ಸವಲತ್ತು ಇಲ್ಲದವರ ಬಗ್ಗೆ ಯೋಚಿಸುವಾಗ ಅಭದ್ರತೆಯ ಅರ್ಥ ಆಗುತ್ತದೆ. ಆ ಅಭದ್ರತೆಯೇ ನೀಚ ಕೆಲಸವನ್ನು ಮಾಡಿಸುತ್ತದೆ. ಅಲ್ಲದೆ, ನೀಚತನಕ್ಕೆ ತುತ್ತಾದವರಿಗೆ ಸ್ವಾರೋಪಿತ ಅವಮಾನವನ್ನೂ ಅದೇ ಅಭದ್ರತೆಯೇ ಲೇಪಿಸುತ್ತದೆ. ಇಂಡಿಯನ್ ಹುಡುಗರು ತುತ್ತಾಗುತ್ತಿರುವ ನೀಚತನಕ್ಕೆ ಹಲವು ಮುಖಗಳು, ಹಲವು ಕೋನಗಳು ಮೆಲ್ಲನೆ ಒಂದೊಂದಾಗಿ ತೆರೆದುಕೊಳ್ಳುತ್ತಿದೆ. ಇಡೀ ಪೋಲಿಸಿಂಗ್ ಹಾಗು ಎಲ್ಲ ಸಾಮಾನ್ಯರ ರಕ್ಷಣೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ನಾವಿನ್ನೂ ಹೆಚ್ಚು ಕೆಲಸ ಮಾಡಬೇಕೆಂದು ಪೋಲೀಸರು ಒಪ್ಪಿಕೊಳ್ಳುವಂತಾಗಿದೆ. ಇವೆಲ್ಲಾ ಹೀಗಿರಬೇಕಾಗಿಲ್ಲ. ಹೀಗಿರದೇ ಇರಲು ಸಾಧ್ಯವಿದೆ ಎಂಬ ಒತ್ತಡ ಎಲ್ಲ ಕಡೆ ಕಾಣುತ್ತಿದೆ. ಇದರಿಂದ ಹುಟ್ಟುವ ಪರಿಹಾರಕ್ಕೆ ಮಾತ್ರ ಇಲ್ಲಿಯ ನಗರವಾಸಿಗಳು ತಾಳ್ಮೆಯಿಂದ ಕಾಯಬೇಕಷ್ಟೆ. ಈಗ ಆ ಹಳೆಯ ಸೇತುವೆಯನ್ನು ಹೊಸದಾಗಿ ಕಟ್ಟಿದ್ದಾರೆ. ಅಲ್ಲದೆ, ಸಣ್ಣ ಹಗಲುಗಳು ಹಾಗು ಬೇಗ ಕತ್ತಲಾಗುವ ಸವಾಲು ಚಳಿಗಾಲದಲ್ಲಿ ಮಾತ್ರ.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  2     Rating: 5    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು