ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಜುಲೈ ತಿಂಗಳ ಅತಿಥಿ ಸಂಪಾದಕ ಸುದರ್ಶನ್ ಪರಿಚಯ    
ಸುದರ್ಶನ್
ಬುಧವಾರ, 1 ಜುಲೈ 2009 (05:48 IST)
ಸುದರ್ಶನ್
ಸುದರ್ಶನ್ ಎಂಬತ್ತರ ದಶಕದಿಂದಲೇ ಹಲವು ನಿಟ್ಟಿನಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದವರು. ಪ್ರೇಮಾ ಕಾರಂತರ ನಿರ್ದೇಶನದಲ್ಲಿ ಚಂದ್ರಶೇಖರ ಕಂಬಾರರ "ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು" ನಾಟಕದಲ್ಲಿ ಅಲಿಬಾಬಾನಾಗಿ ರಂಗ ಹತ್ತಿದವರು. ಮುಂದೆ ಬೆನಕ ತಂಡದ "ಹ್ಯಾಮ್ಲೆಟ್", "ಸತ್ತವರ ನೆರಳು", "ಜೋಕುಮಾರಸ್ವಾಮಿ", "ಕಾಗೆ ಕುಣಿತ", "ಸಂಕೀರ್ಣ", "ಯಮರಂಜನೆ" ಹೀಗೆ ಹಲವಾರು ನಾಟಕಗಳಲ್ಲಿ ತೊಡಗಿಕೊಂಡವರು. ಮುಂದೆ ಪ್ರಯೋಗರಂಗದವರ "ಬ್ರಹ್ಮಚಾರಿ ಶರಣಾದ", "ಟೆಂಪೆಸ್ಟ್", "ಮೌನಿ" ಮುಂತಾದ ನಾಟಕಗಳಲ್ಲಿ ನಟಿಸಿದ್ದರು. ಅಲ್ಲದೆ "ಮಣ್ಣಿನ ಬಂಡಿ" ಹಾಗು "ಬೇವಾರ್ಸಿಗಳ ಸಂಭ್ರಮ (ಭಗವದಜ್ಜುಕೀಯ)" ನಾಟಕಗಳಲ್ಲಿ ನಟನೆ, ರಚನೆ ಹಾಗು ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸಿದವರು.

"ಮಂಡೇ ಥಿಯೇಟರ್‍" ಎಂಬ ಆಪ್ತ ರಂಗಪ್ರಯೋಗವನ್ನು ಬೆಂಗಳೂರಿನಲ್ಲಿ ಆರಂಭಿಸಿ "ಗೋಡೆ", "ಸಿಂಹ", "ಕುರ್ಚಿಗಳು", "ಸುರಂಗ" ಮುಂತಾದ ನಾಟಕಗಳನ್ನು ಅನುವಾದಿಸಿ, ನಿರ್ದೇಶಿಸಿದ್ದರು. ಕಂಬಾರರ "ಹಳವಂಡಗಳು" ಹಾಗು ಕೆಲವು ಬೀದಿನಾಟಕಗಳ ನಿರ್ಮಾಣದಲ್ಲೂ ಸಕ್ರಿಯವಾಗಿ ತೊಡಗಿಕೊಂಡವರು. ಕಾವ್ಯ, ಸಾಹಿತ್ಯ ಹಾಗು ಚಲನಚಿತ್ರಗಳಲ್ಲೂ ಆಸಕ್ತಿಯಿರುವ ಸುದರ್ಶನರು ೧೯೮೮ರಲ್ಲಿ "ಭಾಗಿ ೮೮" ಎಂಬ ಪೋಸ್ಟ್ ಕಾರ್ಡಿನಲ್ಲಿ ಪುಟ್ಟಪದ್ಯಗಳನ್ನು ಬರೆದು ಕಳಿಸುವ ವಿಭಿನ್ನ ಚಟುವಟಿಕೆಯನ್ನು ಕೈಗೊಂಡಿದ್ದರು.

೯೦ರ ದಶಕದ ಮೊದಲಿಂದ ಆಸ್ಟ್ರೇಲಿಯದ ಸಿಡ್ನಿಯಲ್ಲಿ ನೆಲೆಸಿರುವ ಸುದರ್ಶನ ಅಲ್ಲಿಯೂ ಸಹ "ಅನಿವಾಸಿ ಕಲಾ ತಂಡ" ಎಂಬ ನಾಟಕದ ಗುಂಪನ್ನು ಕಟ್ಟಿಕೊಂಡು ಕನ್ನಡ ನಾಟಕ, ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಶಾ. ಬಾಲುರಾಯರ "ಬೆಕ್ಕು ಬಾವಿ", ಗೊಗೋಲನ "ಜುಗಾರಿಕೂಟ", ಕಂಬಾರರ "ಜೋಕುಮಾರ ಸ್ವಾಮಿ" ನಾಟಕಗಳನ್ನು ನಿರ್ದೇಶಿಸಿದ್ದಾರೆ.

ನಾಟಕವಷ್ಟೇ ಅಲ್ಲದೆ, ಸಾಕ್ಷ್ಯ ಚಿತ್ರ, ಕಿರುಚಿತ್ರರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಹದಿವಯಸ್ಸಿನಲ್ಲೇ "ಹೆಲ್ಪ್" ಎಂಬ ಕಿರುಚಿತ್ರವನ್ನು ಬೆಂಗಳೂರಿನಲ್ಲಿ ನಿರ್ಮಿಸಿದ್ದರು. "ಕ್ಲೌಡ್ಸ್ ವೀಪ್ ಆನ್ ದಿ ಗ್ರೀನ್‌ನೆಸ್" ಎಂಬ ಅವರ ಕಿರುಚಿತ್ರವು ಆಸ್ಟ್ರೇಲಿಯದ "ಇಂಟೆಲ್ ಟ್ರಾಪ್‌ಫೆಸ್ಟ್" ಎಂಬ ಜಗತ್ತಿನಲ್ಲೇ ಅತಿ ದೊಡ್ಡ ಪ್ರದರ್ಶನ ಉಳ್ಳದ್ದಾಗಿರುವ ಚಿತ್ರೋತ್ಸವದ ಫೈನಲಿಸ್ಟ್ ಆಗಿ ಪ್ರದರ್ಶನಗೊಂಡಿತು. ಮತ್ತೊಂದು ಕಿರುಚಿತ್ರ "ಓಯಸಿಸ್" ಬೈರನ್ ಬೇ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆಯಿತಲ್ಲದೆ, ಬಾರ್ಸಲೋನ ಹಾಗು ರೋಮಿನ ಚಿತ್ರೋತ್ಸವಗಳಲ್ಲೂ ಆಯ್ಕೆಯಾಗಿ ಪ್ರದರ್ಶನಗೊಂಡಿತು.

೨೦೦೬ರಲ್ಲಿ ಇವರು ಬರೆದು ನಿರ್ದೇಶಿಸಿದ "ಮುಖಾಮುಖಿ" ಕನ್ನಡ ಚಲನಚಿತ್ರಕ್ಕೆ ಅತ್ಯುತ್ತಮ ಸಂಭಾಷಣೆ ರಾಜ್ಯ ಪ್ರಶಸ್ತಿ ದೊರೆತಿದೆ. ೨೦೦೭ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ "ಸುವರ್ಣ ಕರ್ನಾಟಕ ರಂಗ ಪುರಸ್ಕಾರ"ವನ್ನು ನೀಡಲಾಯಿತು. ಇವರ ಸ್ವಂತ ನಾಟಕ "ಲೀಲಾಂತ"ವನ್ನು ಎಂ.ಎಸ್.ಸತ್ಯುರವರು ರಂಗಾಯಣದ ನಾಟಕ ಶಿಬಿರಕ್ಕೆ ನಿರ್ದೇಶಿಸಿದ್ದು, ಈಗ ಹಲವು ಕಡೆ ಪ್ರದರ್ಶನವನ್ನು ಕಾಣುತ್ತಿದೆ. "ಲೀಲಾಂತ", "ಜುಗಾರಿಕೂಟ" ಹಾಗು ಕವನ ಸಂಕಲನ "ಚೌಕಿ" ಪ್ರಕಟಗೊಂಡಿರುವ ಕೃತಿಗಳು.
ಪುಟದ ಮೊದಲಿಗೆ
 
Votes:  2     Rating: 3.5    
 
 
ಸಂಬಂಧಿಸಿದ ಲೇಖನಗಳು
  ದೆಹಲಿಯ ಚಳಿಗೆಂದು ರೇಣುಕಾ ಬರೆದದ್ದು
  ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ
  ಸುದ್ದಿ ಮಾಧ್ಯಮಗಳು ಮತ್ತು ಹೊಣೆಗಾರಿಕೆ
  ಅವತಾರ ನೋಡಿ ವೈಶಾಲಿ ಬರೆದದ್ದು
  ಕ್ರಿಕೆಟಿನ ತವರುಮನೆಯ ಕಳವಳಗಳು: ಯೋಗೀಂದ್ರ ಬರಹ
  ಹಾರಲಾರದ ಹಕ್ಕಿ- ಒಂದು ಸೂಫಿ ಕಥೆ
  ನಿರ್ದೇಶಕ ಅಭಯಸಿಂಹರಿಗೆ ಪ್ರೇಕ್ಷಕ ಬರೆದ ಪತ್ರ
  ಮಹಾಲಿಂಗೇಶ್ವರ ಭಟ್ ಬರೆದ ಪ್ರೇಮ ಕವಿತೆ
  `ರಣ್' ಚಿತ್ರದಲ್ಲೂ ಸತ್ಯ ಸತ್ತಿಲ್ಲವೆ?
  ಪ್ರೇಮಶೇಖರರ `ಕನ್ನಡಿ' : ಭಾನುವಾರ ದೆಹಲಿಯಲ್ಲಿ ಬಿಡುಗಡೆ
  ರಾಷ್ಟ್ರಪ್ರಶಸ್ತಿಯ ಗುಬ್ಬಚ್ಚಿಗಳು : ಅಭಯಸಿಂಹ ಬರಹ
  ಕುಸುಮ ರೋಗವೂ ಟೀವಿ ಸ್ಟೋರೀನೂ: ಪ್ರಿಯಾ ಬರಹ
  ‘ಇವಳನ್ನು ಹುಚ್ಚಿ ಎಂದು ಒಪ್ಪಲಾರೆ' : ಗಂಗಾಧರಯ್ಯ ಬರಹ
  ಗಣರಾಜ್ಯೋತ್ಸವ ಮತ್ತು ದೇವನೂರು: ಒಂದು ಮಾತುಕತೆ
  ಗಣ ರಾಜ್ಯೋತ್ಸವ ಸ್ಪೆಷಲ್- ಆರು ದಶಕಗಳ ಗಣತಂತ್ರ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಈಗ ವಿಷ್ಣು ಇಲ್ಲ; ಮಾರ್ಕೆಟ್ ಇದೆ
  ಮಗನಿಗೇ ಶಿಷ್ಯನಾದ ಓಶೋರ ತಂದೆ- ರಾಘು ಬರಹ
  ಫೇಸ್ಬುಕ್ಕಲ್ಲಿ ಇಲ್ಲ ಅಂದ್ರೆ ಬದುಕೀನೇ ಇಲ್ವಾ?
  ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವಿತೆ
  ಕಾಮ್ರೇಡ್ ನೀಲಾ ಕಂಡ `ಕೆಂಪು ಬಸುದಾ'
  ಚಾಮಯ್ಯ ಮೇಷ್ಟರೂ ಹೋಗಿಬಿಟ್ಟರು
  ಕಣ್ಣುಮುಚ್ಚಿದ ಕಾಮ್ರೇಡ್ ಬಸು- ಅನಂತಮೂರ್ತಿ ಹೇಳಿದ್ದು
  ಭಾನುವಾರದ ವಿಶೇಷ- ಸಂಧ್ಯಾದೇವಿ ಬರೆದ ಕವನ ಕಥನ
  ಹೈಟಿಯಲ್ಲಿ ಕೊಲೆಗಡುಕಿ ವಸುಂಧರೆ
  `ಗೌಡ್ರು ಬಯ್ದಿದ್ದು ಒಂದ್ಸಲ... ಆದರೆ ನೀವು?'
  ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು
  ಪಟೇಲ್ ಮಂಜಯ್ಯನವರು ಮೊಮ್ಮಗಳಿಗೆ ಬರೆದ ಪತ್ರ
  ಕನ್ನಡದ ಪಾಪುಗೆ 90 ವರ್ಷ
  ಕೆಟ್ಟ ಮಾತಾಡಿ ಗಮನ ಸೆಳೆದ ಗೌಡರು
  ಒಂದು ಮಂದಹಾಸದಂತೆ ಮತ್ತೆ ಕೆಂಡಸಂಪಿಗೆ
  ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
  ಪರಮಾಣು ವಿದ್ಯುತ್ ಪರಿಸರ ಸ್ನೇಹಿಯೇ?
  ಸ್ವರ್ಗದ ಬಾಗಿಲು: ಒಂದು ಸೂಫಿ ಕಥೆ
  ಕರುನಾಡ ಕಲಾವಿದನಿಗೆ ಸಿಂಗಪುರದಿಂದ ಮೂರ್ತಿ ಬರೆದ ಪತ್ರ
  ಫೇಸ್ ಬುಕ್ಕಿನಲ್ಲಿ ಗೊರಿಲ್ಲಾ ಗೆಳೆಯರು
  ಯುರೋಪ್ ಪ್ರವಾಸದ ಕಸಾನುಭೂತಿ
  ಎಡಚರಿಗೊಂದು ಸಂತಸದ ಹೊಸ ಚಡ್ಡಿ
  ‘ಮಾನ್ಸೆಂಟೋ’ ಅವಾಂತರಗಳು: ಒಂದು ಸಾಕ್ಷ್ಯಚಿತ್ರ
  ಮುಕುಂದ ಜೋಶಿ ಅನುವಾದಿಸಿದ ಹಿಂದಿ ಕವಿತೆ
  ಗೂಗಲ್ ಗೆ ಚೀನಾದಲ್ಲಿ ಗಿರಾಕಿಗಳೇ ಇಲ್ಲ
  ಅಹೋಬಲ ಶಂಕರರ ಕುರಿತು ಉಮಾ: ಇನ್ನಷ್ಟು
  ನಾನು ಕಂಡ ಅಹೋಬಲ ಶಂಕರ: ಉಮಾ ಸಂಪಾದಕೀಯ
  ಬಿಜೆಪಿಗೆ ಜಿನ್ನಾ ಎಂಬ ‘ಜಿನ್ನು’ ಹಿಡಿದಿದೆಯೇ?
  ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲ: ಒಂದು ಪರಿಚಯ
  ಸೂಫಿ ಕಥೆ: ‘ಬಗ್ದಾದಿಗೆ ಬಂದ ಮೃತ್ಯು ದೂತ’
  ಎತ್ತರದ ಹುಡುಗನ ಕಷ್ಟಗಳು
  ರಾಮಚಂದ್ರ ದೇವ ಬರೆದ ಒಂದು ಹಳೆಯ ಕವಿತೆ
  ಇನ್ನು ನಾವು ಬಲ್ಬಿಗೆ ವಿದಾಯ ಹೇಳಬಹುದೇ?
  ನೂರಏಳರ ಅಜ್ಜಿಗೆ ಇಪ್ಪತ್ಮೂರನೇ ಮದುವೆಯಾಗುವಾಸೆ!
  ಅನುಪಮಾ ಅನುವಾದಿಸಿದ ನಾಮದೇವ್ ಕವಿತೆ
  ಚೀನಾ: ದುಡಿವವರ ಕೈಗೆ ಅಂತರ್ಜಾಲ ಬಲ
  ಉಮಾ ಸಂಪಾದಕೀಯ:ತಿಮ್ಮಯ್ಯನೂ, ರಾಮಾಗಳೂ,ಲಿಂಗ ಲೆಕ್ಕಾಚಾರಗಳೂ
  ನಗರದ ದೃಶ್ಯಗಳು, ಕಾಡಿನ ಸದ್ದುಗಳು: ರಾಜೇಶ್ವರಿ ಬರಹ