ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಭಾನುವಾರದ ವಿಶೇಷ: ಕಾಫ್ಕ ಬರೆದ ಸಣ್ಣಕಥೆ ‘ನ್ಯಾಯದ ಬಾಗಿಲು’    
ಸುದರ್ಶನ್
ಶನಿವಾರ, 25 ಜುಲೈ 2009 (09:28 IST)

ಇಪ್ಪತ್ತನೇ ಶತಮಾನ ಕಂಡ ಮಹತ್ವದ ಬರಹಗಾರ ಫ್ರಾನ್ಸ್ ಕಾಫ್ಕ. ಈತ ಬರೆದ ‘ಭಿಫೋರ್ ದ ಲಾ’ ಕಥೆಯ ಅನುವಾದ ಈ ಭಾನುವಾರದ ನಿಮ್ಮ ಓದಿಗಾಗಿ. ಅನುವಾದಿಸಿದ್ದಾರೆ ತಿಂಗಳ ಅತಿಥಿ ಸಂಪಾದಕ ಅನಿವಾಸಿ ಸುದರ್ಶನ್. 

ಕಾನೂನಿನ ಎದುರು ಒಬ್ಬ ದ್ವಾರಪಾಲಕ ನಿಂತಿದ್ದಾನೆ. ಹಳ್ಳಿಯವನೊಬ್ಬ ಅವನ ಹತ್ತಿರ ಬಂದು ಕಾನೂನಿನ ಬಳಿಗೆ ಬಿಡು ಅಂತ ಕೇಳಿದ್ದಕ್ಕೆ ಆ ದ್ವಾರಪಾಲಕ ‘ಈವಾಗ ಬಿಡೋಕೆ ಆಗಲ್ಲ’ ಅಂತಾನೆ. ಬಂದವನು ಯೋಚಿಸಿ, ‘ಹಾಗಾದರೆ ಆಮೇಲೆ ಬಿಡಬಹುದು ಅಂತ ಅರ್ಥಾನ’ ಅಂತ ಕೇಳ್ತಾನೆ. ದ್ವಾರಪಾಲಕ ‘ಆಗಬಹುದೇನೋ, ಆದರೆ ಈಗಲ್ಲ’ ಅನ್ತಾನೆ. ಕಾನೂನಿನ ಹತ್ತಿರ ಬಿಡೋ ಗೇಟು ತೆಕ್ಕೊಂಡೇ ಇರೋದರಿಂದ, ದ್ವಾರಪಾಲಕ ಪಕ್ಕಕ್ಕೆ ನಿಂತಿದ್ದರಿಂದ, ಇವನು ಬಾಗಿಲಿಂದ ಒಳಕ್ಕೆ ಇಣುಕಿ ನೋಡಲು ಬಗ್ಗುತ್ತಾನೆ. ಅದನ್ನು ನೋಡಿ ದ್ವಾರಪಾಲಕ ‘ನಿನಗೆ ಅಷ್ಟೊಂದು ಆಸೆ ಇದ್ದರೆ ನನ್ನ ಮಾತು ಮೀರಿ ಒಳಗೆ ಹೋಗು ನೋಡಣ. ಆದರೆ ನೆನಪಿಟ್ಕೊ: ನಾನು ಬಲಶಾಲಿ. ಅಲ್ಲದೆ ನಾನು ಅತಿ ಕೆಳಗಿನ ಕಾವಲಿನವನು. ಒಳಗೆ ಒಂದೊಂದು ಕೋಣೆಲೂ ಕಾವಲಿನವರು ಇದ್ದಾರೆ. ಒಬ್ಬೊಬ್ಬರೂ ಮುಂಚಿನವರಿಗಿಂತ ಬಲಶಾಲಿಗಳು. ಮೂರನೇ ಕಾವಲುಗಾರನ್ನ ನಾನು ಕಣ್ಣೆತ್ತಿ ನೋಡೋಕೆ ಕೂಡ ಆಗಲ್ಲ.’ ಅಂತ ನಗುತ್ತಾನೆ.

ಕಾಫ್ಕ ರಚಿಸಿದ ಕಲಾಕೃತಿಹಳ್ಳಿಯಿಂದ ಬಂದವ ಇಷ್ಟೆಲ್ಲಾ ತಾಪತ್ರಯ ಇರತ್ತೆ ಅಂದುಕೊಂಡಿರಲಿಲ್ಲ. ಅವನು ಅನ್ನಿಸೋದು ಕಾನೂನು ಎಲ್ಲರಿಗೂ ಯಾವಾಗಲೂ ನಿಲುಕೋ ಹಾಗಿರಬೇಕು ಅಂತ. ಆದರೆ ಈ ದಪ್ಪ ಚರ್ಮದ ಕೋಟು ಹಾಕ್ಕೊಂಡಿರೋ ದ್ವಾರಪಾಲಕನ ನೋಡಿದರೆ, ಅವನ ಚೂಪಾದ ದೊಡ್ಡ ಮೂಗು, ಅವನ ಉದ್ದದ ಸಪೂರದ ಕಪ್ಪು ಗಡ್ಡ ನೋಡಿದರೆ, ಅವನೇ ಅನುಮತಿ ಕೊಡೋ ತನಕ ಕಾಯೋದು ಒಳ್ಳೇದು ಅಂತ ತೀರ್ಮಾನಿಸಿಕೋತಾನೆ. ದ್ವಾರಪಾಲಕ ಅವನಿಗೆ ಒಂದು ಬೆನ್ನಿಲ್ಲದ ಕುರ್ಚಿಕೊಟ್ಟು ಬಾಗಿಲ ಒಂದು ಪಕ್ಕ ಕೂತುಕೊಳ್ಳೋಕೆ ಬಿಡುತಾನೆ. ಅಲ್ಲಿ ಆ ಹಳ್ಳಿಯವನು ತುಂಬಾ ದಿನಗಳು, ವರ್ಷಗಳು ಕೂತುಕೊಂಡೇ ಇರ್ತಾನೆ. ಬೇಕಾದಷ್ಟು ಸಲ ಅನುಮತಿಗಾಗಿ ಪ್ರಯತ್ನ ಪಡ್ತಾನೆ, ಮೇಲಿಂದ ಮೇಲೆ ಇವನ ಬೇಡಿಕೆಗಳಿಂದ ದ್ವಾರಪಾಲಕನನ್ನ ಬೇಜಾರು ಮಾಡಿಬಿಡ್ತಾನೆ. ಕಾವಲುಗಾರ ಇವನಿಗೆ ಆಗಾಗ ಚಿಕ್ಕ ಪುಟ್ಟ ಪರೀಕ್ಷೆ ಮಾಡ್ತಾ ಅವನ ಊರು ಮನೆ ಬಗ್ಗೆ, ಆಮೇಲೆ ಇನ್ನೂ ಏನೇನೋ ಕೇಳ್ತಾನೆ. ಆದರೆ ಆ ಪ್ರಶ್ನೆಗಳಾವುದೂ ಆಪ್ತವಾದ್ದಲ್ಲ. ಬರೇ ಸಭ್ಯರು ಕೇಳೋ ಹಾಗೆ. ಪ್ರತಿಸಲಾನೂ ಕೊನೆಗೆ ಮತ್ತೆ ‘ಒಳಗೆ ಬಿಡೋಕೆ ಆಗಲ್ಲ’ ಅಂತ ಮಾತು ಮುಗಿಸ್ತಾ ಇದ್ದ. ಹಳ್ಳಿಯವನು ಈ ಪ್ರಯಾಣಕ್ಕೆ ಚೆನ್ನಾಗೇ ತಯಾರಾಗಿ ಬಂದಿದಾನೆ. ತನ್ನ ಬಳಿ ಇದ್ದ ಬೆಲೆ ಬಾಳೋದನ್ನೆಲ್ಲಾ ದ್ವಾರಪಾಲಕನಿಗೆ ಲಂಚ ಕೊಟ್ಟು ಕೊಟ್ಟು ಕೈ ಖಾಲಿ ಮಾಡಿಕೊಂಡಿದಾನೆ. ದ್ವಾರಪಾಲಕ ಕೊಟ್ಟಿದ್ದೆಲ್ಲಾ ಒಪ್ಪಿಸ್ಕೊಂಡು, ತಗೊಳ್ತಾ ‘ನಾನು ತಗೊಳ್ತಾ ಇರೋದು, ನೀನು ಯಾವುದೋ ಪ್ರಯತ್ನ ಮಾಡದೆ ಬಿ‌ಟ್ಟೆನಲ್ಲ ಅಂತ ಬೇಜಾರು ಮಾಡ್ಕೋಬಾರ್ದು ಅದಕ್ಕೆ’ ಅಂತ ಹೇಳ್ತಾನೆ.

ಆ ಹಲವು ವರ್ಷಗಳುದ್ದಕ್ಕೂ ಹಳ್ಳಿಯವನು ದ್ವಾರಪಾಲಕನ್ನ ಎಡೆಬಿಡದೆ ಗಮನಿಸ್ತಾನೇ ಇದ್ದಾನೆ. ಅವನಿಗೆ ಬೇರೆ ಕಾವಲುಗಾರರೆಲ್ಲಾ ಮರತೇ ಹೋದರು, ಈ ಮೊದಲನೆಯವನೇ ಕಾನೂನಿನ ಹತ್ತಿರ ಹೋಗೋಕೆ ಇರೋ ಅಡ್ಡಿ ಅನ್ನೋ ಹಾಗೆ ಕಾಣತ್ತೆ. ಮೊದಮೊದಲ ವರ್ಷಗಳಲ್ಲಿ ಜೋರಾಗಿ ಸಿಟ್ಟಿಂದ ತನ್ನ ದುರ್ದೆಸೆನ ಬೈಕೋತಾ ಇದ್ದ. ಆಮೇಲೆ ವಯಸ್ಸಾದ ಹಾಗೆ ತನಗೆ ತಾನೇ ಬರೇ ಗೊಣಗಿಕೊಂಡು ಇದ್ದು ಬಿಟ್ಟ. ಬರಬರ್ತಾ ಮಕ್ಕಳ ತರ ಎಳಸಎಳಸಾಗಿ ಆಡ್ತಾನೆ, ದ್ವಾರಪಾಲಕನನ್ನ ಉದ್ದಕ್ಕೂ ಗಮನಿಸ್ತಾ ಅವನ ಮೇಲಂಗಿಯ ಕೊರಳಪಟ್ಟಿಲಿ ಹುಳಗಳು ಇರೋದು ಕಂಡುಹಿಡಕೊಳ್ತಾನೆ. ಕಾವಲಗಾರನ ಮನಸ್ಸು ಬದಲಾಯಿಸೋಕೆ ನೆರವಾಗಿ ಅಂತ ಅವುಗಳ ಹತ್ತಿರಾನೂ ಬೇಡ್ಕೋಳ್ತಾನೆ. ಕೊನೆಗೆ ಅವನ ಕಣ್ಣು ಮಂದ ಆಗ್ತಾ ಆಗ್ತಾ ಸುತ್ತಲೂ ಕತ್ತಲಾಗ್ತಾ ಇದೆಯಾ ಅಥವಾ ಅವನು ಕಣ್ಣು ಮೋಸ ಮಾಡ್ತಾ ಇದೆಯಾ ಅಂತಲೂ ಅವನಿಗೆ ಗೊತ್ತಾಗಲ್ಲ. ಆದರೂ ಕತ್ತಲಲ್ಲಿ ಕಾನೂನಿನ ಬಾಗಲಿಂದ ಮುಚ್ಚಿಹಾಕೋಕೆ ಆಗದಂತ ಬೆಳಕಿನ ಹೊಳೆ ಬರ್ತಿದ್ದುದ್ದು ಗೊತ್ತಾಗತ್ತೆ.

ಬರಹಗಾರ ಫ್ರಾನ್ಸ್ ಕಾಫ್ಕಇನ್ನು ಹೆಚ್ಚು ದಿನ ಅವನು ಬದುಕಲ್ಲ. ಸಾಯೋಕೆ ಮುಂಚೆ, ಅಷ್ಟು ವರ್ಷದ ಅನುಭವ ಎಲ್ಲಾ ಅವನ ತಲೇಲಿ ಠಳಾಯಿಸಿ ದ್ವಾರಪಾಲಕನ್ನ ಯಾವತ್ತೂ ಕೇಳದೇ ಇರೋ ಒಂದು ಪ್ರಶ್ನೆಯ ರೂಪ ಪಡಿಯತ್ತೆ. ಅವನು ಕಾವಲಗಾರನನ್ನ ಕೂತ್ತಲ್ಲಿಂದಲೇ ಕರಿತಾನೆ ಯಾಕಂದರೆ ಅವನಗೀಗ ತನ್ನ ಸೆಟಕೊಂಡ ಮೈನ ಎತ್ತೊಕೂ ಅಗ್ತಿಲ್ಲ. ದ್ವಾರಪಾಲಕ ಈಗ ಬಗ್ಗಿ ಅವನನ್ನ ನೋಡಬೇಕು. ಹಳ್ಳಿಯವನಿಗೆ ಅನುಕೂಲವಲ್ಲದಂತೆ ಅವರಿಬ್ಬರ ನಡುವಿನ ಎತ್ತರದ ಅಂತರ ತುಂಬಾ ಜಾಸ್ತಿ ಆಗಿದೆ. ‘ಈಗಲೂ ನಿನಗೆ ಅದೇನು ತಿಳಕೊಳೋ ಕಾತರ?’ ಅಂದು ದ್ವಾರಪಾಲಕ ‘ನಿನ್ನ ದಾಹ ಯಾವತ್ತಿಗೂ ಆರಲ್ಲ!’ ಅನ್ನುತ್ತಾನೆ. ಅದಕ್ಕೆ ಹಳ್ಳಿಯವನು ‘ಎಲ್ಲರೂ ಕಾನೂನನ್ನು ತಲುಪಬೇಕು ಅಂತ ಕಷ್ಟ ಪಟ್ಟೇ ಪಡ್ತಾರೆ, ಆದು ಹೇಗೆ ಇಷ್ಟು ವರ್ಷ ನನ್ನ ಬಿಟ್ಟು ಬೇರೆ ಯಾರೂ ಒಳಗೆ ಹೋಗಬೇಕು ಅಂತ ಕೇಳಿಲ್ಲ?’ ಅಂತ ಕೇಳ್ತಾನೆ. ದ್ವಾರಪಾಲಕನಿಗೆ ಆ ಹಳ್ಳಿಯವನ ಕೊನೆಗಾಲ ಬಂದಿದೆ ಅಂತ ಗೊತ್ತಾಗಿ, ಅವನ ಮಂದ ಕಿವಿಗೆ ಕೇಳಲಿ ಅಂತ ದನಿಯೇರಿಸಿ ‘ಬೇರೆ ಯಾರನ್ನೂ ಇಲ್ಲಿ ಬಿಡೋ ಹಾಗಿರಲಿಲ್ಲ ಯಾಕೆಂದರೆ ಈ ದ್ವಾರ ನಿನಗೆ ಮಾತ್ರ ಮೀಸಲಾಗಿತ್ತು. ಈಗ ಅದನ್ನು ನಾನು ಮುಚ್ತೀನಿ’ ಅಂತ ಕೂಗಿ ಹೇಳ್ತಾನೆ.

(ಈ ಕಥೆಯಲ್ಲಿ ಬಳಸಲಾಗಿರುವ ಚಿತ್ರಗಳನ್ನು ಸ್ವತಃ ಕಾಫ್ಕ ತನ್ನ ಪುಸ್ತಕದಲ್ಲಿ ಬಿಡಿಸಿಟ್ಟುಕೊಂಡಿದ್ದ.)

ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ
  ಕೃಷ್ಣ ಜನ್ಮಾಷ್ಟಮಿಗೆ ಹೇಮಾ ಕವಿತೆಗಳು
  ಸಂಧ್ಯಾ ಬರೆದ ದಿನದ ಕವಿತೆ
  ಪ್ರಾಚೀ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈದೇಹಿ `ಸೂರ್ಯ ಸಾಂಗತ್ಯ'
  ಬೊಳುವಾರು ಗಾಂಧಿ ಕತೆಗೆ ಕೇಂದ್ರ ಸಾಹಿತ್ಯ ಸಮ್ಮಾನ
  ನಾ.ಡಿಸೋಜಾ ಬರೆದ ಒಂದು ‘ಲೈನ್’ ಪ್ರಕರಣ
  ಅರವಿಂದ ಬರೆದ ದಿನದ ಕವಿತೆ
  ವಿವೇಕ ಶಾನಭಾಗ ಕಂಡ ಜಯಂತ ಕಾಯ್ಕಿಣಿ `ಸ್ವಪ್ನದೋಷ'
  ಜಯಂತ ಕಾಯ್ಕಿಣಿ ಕತೆ `ಸ್ವಪ್ನ ದೋಷ'
  ಕೃತಿಯೂ, ಕರ್ತಾರನ ಪೂರ್ವಗ್ರಹಗಳೂ
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ಬೆಡ್ ರೂಮಿಂದ ಈಚೆಗ ಬರದ ಭೈರಪ್ಪನವರ ಕವಲು
  ಸರ್ಜಾಶಂಕರ್ ಬರೆದ ಹರಳಿಮಠ ಪುರಾಣ
  ಭೈರಪ್ಪ ಎಂದರೆ ಏಕೆ ಕನಲುವಿರಿ?:ಸುಪ್ರೀತ್ ಬರಹ
  ರವಿಪ್ರಕಾಶ್ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್'
  ವಿಜಯಕಾಂತ ಪಾಟೀಲರ ಎರಡು ಕವಿತೆಗಳು
  ಸುಧೀರ್ ಕಾರ್ಕಳ ಬರೆದ ಬಿಯರ್ ಕವಿತೆ
  ಕನ್ನಂಬಾಡಿ ಶಿವಶಂಕರ್ ಕವಿತೆಗಳು
  ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ'
  ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು
  ರಶೀದ್ ಅನುವಾದಿಸಿದ ಒಂದು ಫ್ರೆಂಚ್ ಕವಿತೆ
  ಭಾನುವಾರದ ವಿಶೇಷ: ನಾ. ಡಿಸೋಜ ಕತೆ `ಮೂರು ಕೈ'
  ಹೊನ್ನವಳ್ಳಿ ಆರ್. ದಿಲೀಪ ಬರೆದ ಹತ್ತು ಹೊಳಹು
  ವೈಶಾಲಿ ಕನ್ನಡದಲ್ಲಿ ರಿಲ್ಕ್ ಮತ್ತು ಝೆನ್
  ‘ಹೊಸತೇನೂ ಹೇಳದ ಭೈರಪ್ಪನವರ ‘ಕವಲು’
  ರಜನಿ ಭಟ್ ಕತೆ `ಮಾರಪ್ಪನು ಹಾಗು ಸೋಡಾ ಕುಪ್ಪಿಯೂ..'
  ಎನ್.ಶಂಕರ್ ಬರೆದ ದಿನದ ಕವಿತೆ
  ತಿರುಮಲೇಶ್ ಕನ್ನಡಿಸಿದ ಎಜ್ರಾ ಪೌಂಡ್ ಕವಿತೆಗಳು
  ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್
  ವೆಂಕಟ್ ಮೋಂಟಡ್ಕ ಬರೆದ ಅಪೂರ್ಣ ಕಥೆ
  ದಿವ್ಯಪ್ರಕಾಶ್ ಬರೆದ ದಿನದ ಕವಿತೆ
  ವಿನಾಯಕ ಭಟ್ ತದ್ದಲಸೆ ಬರೆದ ದಿನದ ಕವಿತೆ
  ರಾಘವೇಂದ್ರ ಹೆಗಡೆ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ನಾಲ್ಕು ಕವಿತೆಗಳು
  ವೈಶಾಲಿ ಹೆಗಡೆ ಕತೆ `ಬೋಳುಮರಕ್ಕೊಂದು ಬಾನು'
  ರೇವನ್ ಜೇವೂರ್ ಬರೆದ ಹನಿಗವಿತೆಗಳು
  ಹರ್ಷಾದ್ ವರ್ಕಾಡಿ ಬರೆದ ದಿನದ ಕವಿತೆ
  ಆನಂದ ಈ.ಕುಂಚನೂರ ಬರೆದ ದಿನದ ಕವಿತೆ
  ಬಾಗೇಶ್ರೀ ಅನುವಾದಿಸಿದ ಬಿಲ್ಕಿಸ್ ಕವಿತೆ
  ವಿಶ್ವ ಶರ್ಮ ಬರೆದ ದಿನದ ಕವಿತೆ
  ಭಾಗೀರಥಿ ಹೆಗಡೆ ಬರೆದ ಕತೆ `ವಂದೇ ಮಾತರಂ'
  ಪದ್ಮನಾಭ ಭಟ್ ಶೇವ್ಕಾರ್ ಬರೆದ ಒಂದಿಷ್ಟು ಕವಿತೆಗಳು
  ರಮೇಶ್ ಸೋಗೆಮನೆ ಬರೆದ ದಿನದ ಕವಿತೆ
  ಎಸ್.ಕುಮಾರ್ ಅನುವಾದಿಸಿದ ಕ್ಯೂಬನ್ ಕವಿತೆ
  ಅನು ಪಾವಂಜೆ ಬರೆದ ದಿನದ ಕವಿತೆ
  ಕವಿ ಮತ್ತು ಕುಣಿಕೆದಾರನ ಯುಗದ ಕುಂದೇರಾ
  ಡಿ.ಎಸ್.ರಾಮಸ್ವಾಮಿ ಬರೆದ ದಿನದ ಕವಿತೆ
  ಬಸವಣ್ಣೆಪ್ಪ ಕಂಬಾರ ಬರೆದ ದಿನದ ಕವಿತೆ
  ಲಕ್ಷ್ಮಿ ಟಿ.ಎನ್. ಬರೆದ ದಿನದ ಕವಿತೆ
  ‘ಮಾಸ್ತಿ’ ಹುಟ್ಟು ಹಬ್ಬಕ್ಕೆ ನಿಸಾರ್ ಬರೆದ ಕವಿತೆ
  ಕಲಿಗಣನಾಥ ಗುಡದೂರು ಬರೆದ ಕತೆ `ಗಾಂಧಿಕಟ್ಟೆ'
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ಎರಡು ಕವಿತೆಗಳು