ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅತಿಥಿ ಸಂಪಾದಕೀಯ : ಹೋಮಿಯೋಪತಿ ಎಂದು ಮಗಳನ್ನೇ ಕೊಂದರೆ?    
ಸುದರ್ಶನ್
ಶನಿವಾರ, 1 ಆಗಸ್ಟ್ 2009 (05:24 IST)
ಶಿಕ್ಷೆಯ ಹೊಸ್ತಿಲಲ್ಲಿ ಭಾರತೀಯ ದಂಪತಿ

ನೋಡನೋಡುತ್ತಾ ತಿಂಗಳು ಸರಿದಿದೆ. ಕೆಂಡಸಂಪಿಗೆಗೆ ನಿಮ್ಮ ಸಹಕಾರ ಹಾಗು ಬೆಂಬಲ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತಾ ಕಡೆಗೆ ಒಂದು ಚಂದದ ಸಂಪಾದಕೀಯ ಬರೆಯಬೇಕು ಅಂದುಕೊಂಡಿದ್ದೆ. ಆದರೆ ಇತ್ತೀಚೆಗೆ ಸುದ್ದಿ ಮಾಡಿದ ಒಂದು ಘಟನೆ ಮನಸ್ಸನ್ನು ಕಲಕಿತ್ತು. ಆ ಘಟನೆ ಹಾಗು ಅದರ ಬಗ್ಗೆ ನನ್ನ ಅನಿಸಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳುವುದು ಹೆಚ್ಚು ಅರ್ಥಪೂರ್ಣ ಅನಿಸಿತು.

ಹನ್ನೊಂದು ತಿಂಗಳ ಮಗುವಿನ ಸಾವಿಗೆ ಸಂಬಂಧಿಸಿದಂತೆ ಸಿಡ್ನಿಯ ನ್ಯಾಯಾಲಯದಲ್ಲಿ ಕೇಸೊಂದು ವಿಚಾರಣೆಗೆ ಬಂದಿತ್ತು. ಆ ಮಗುವಿನ ಭಾರತೀಯ ತಂದೆತಾಯಿಯ ವಿರುದ್ಧ ಕೇಸು ದಾಖಲಾಗಿತ್ತು. ವಿಚಾರಣೆ ನಡೆದು, ಕಡೆಗೆ ಆ ಮಗುವಿನ ಸಾವಿಗೆ ಹೆತ್ತವರೇ ಕಾರಣ ಎಂದು ತೀರ್ಪಾಯಿತು. ಶಿಕ್ಷೆ ಏನೆಂದು ಇನ್ನು ನಿರ್ಣಯವಾಗಬೇಕಿದೆ.

ಆ ಮಗುವಿಗೆ ಎಕ್ಸಿಮಾ ಎಂಬ ಚರ್ಮದ ತೊಂದರೆ ಇತ್ತು. ಮಗುವಿನ ತಂದೆ ಹೋಮಿಯೋಪತಿ ಪ್ರಾಕ್ಟಿಷನರ್ ಆಗಿದ್ದರಿಂದ ಮಗುವಿಗೆ ಹೋಮಿಯೋಪತಿ ಮದ್ದನ್ನೇ ಕೊಡುತ್ತಾ ಹೋದರು. ಸ್ಥಳೀಯ ಡಾಕ್ಟರ್ ಒಬ್ಬರು ಚರ್ಮದ ಸ್ಪೆಷಲಿಸ್ಟರನ್ನು ಕಾಣಲು ಪತ್ರ ಬರೆದುಕೊಟ್ಟರೂ ತೋರಿಸದೇ ಹೋದರು. ಅಷ್ಟರಲ್ಲಿ ಸಂಬಂಧಿಕರ ಮದುವೆಗೆಂದು ಭಾರತಕ್ಕೆ ಭೇಟಿಯಿತ್ತರು. ಮದುವೆ ಗದ್ದಲದಲ್ಲಿ ಅಳುವ ಮಗುವನ್ನು ಕೇಳುವವರಿಲ್ಲದೆ ಅದರ ಸ್ಥಿತಿ ಉಲ್ಬಣಿಸುತ್ತಾ ಹೋಯಿತು. ಹೋಮಿಯೋಪತಿ ಮದ್ದು ಮುಂದುವರೆಯಿತು. ಹಿಂದಿರುಗಿ ಸಿಡ್ನಿಗೆ ಬರುವಾಗ ದಾರಿಯುದ್ದಕ್ಕೂ ಮಗು ಕಿರುಚಿಕೊಳ್ಳುತ್ತಲೇ ಇತ್ತಂತೆ. ಪ್ಲೇನಿನಲ್ಲಿದ್ದವರು ಕೋರ್ಟಿನಲ್ಲಿ "ಹಾಗೆ ಮಗು ಅಳುವುದನ್ನು ನಾವು ಹಿಂದೆಂದೂ ಕೇಳಿರಲಿಲ್ಲ" ಎಂದು ಸಾಕ್ಷಿ ನುಡಿದರು.

ಸಿಡ್ನಿಗೆ ಹಿಂತಿರುಗಿದ ಮೇಲೆ ಮಗುವಿನ ಕಡೆಗಾಲದಲ್ಲಿ ಆಸ್ಪತ್ರೆಗೆ ಕೊಂಡೊಯ್ದಾಗ, ಅದರ ಒಂದು ಕಣ್ಣಿನ ದೃಷ್ಟಿ ಪೂರ್ಣವಾಗಿ ಕಳಕೊಂಡಿತ್ತು. ಚರ್ಮದ ತೊಂದರೆಯಿಂದಾಗಿ ಹಲವು ಇನ್ಫೆಕ್ಷನ್ ತಗುಲಿ ನಾಕೈದು ದಿನದಲ್ಲಿ ಅಸುನೀಗಿತು. ಡಾಕ್ಟರೊಬ್ಬರು ಮಗುವನ್ನು ಯಾಕೆ ಸ್ಪೆಷಲಿಸ್ಟ್ ಬಳಿ ಕರೆದೊಯ್ಯಲಿಲ್ಲ ಎಂದು ಕೇಳಿದಾಗ ಆ ತಾಯಿ ಏನೂ ಹೇಳದೆ ಗಳಗಳ ಅತ್ತಳಂತೆ. ಮಗುವಿನ ತಂದೆ "ಅಲೋಪತಿ ಮದ್ದು ಕೊಟ್ಟಿದ್ದರೆ, ಮಗು ನೋವಿನಲ್ಲೇ ಇನ್ನೂ ಹೆಚ್ಚು ದಿನ ನರಳುತ್ತಿತ್ತು ಅಷ್ಟೆ" ಎಂದು ಕಟುವಾಗಿ ನುಡಿದನಂತೆ.

ವಿಚಾರಣೆಯ ಹೊತ್ತಲ್ಲಿ "ತಂದೆ ತಾಯಿ ಭಾರತದವರು. ಅವರು ಹೋಮಿಯೋಪತಿ ಮದ್ದು ಕನ್ವೆನ್ಷನಲ್ ಮದ್ದುಗಳ ಹಾಗೆ ಅಂದುಕೊಂಡಿದ್ದನ್ನು ತಪ್ಪೆಂದು ಪರಿಗಣಿಸಬಾರದು" ಎಂದು ಅವರ ಪರ ವಕೀಲ ಹೇಳಿದ್ದು ಕೇಳಿ ಹೌದೇ ಅನಿಸಿತು. ನಂತರ ಭಾರತದಲ್ಲಿ ನೂರಾರು ಸಂಖ್ಯೆಯಲ್ಲಿ ಹೋಮಿಯೋಪತಿ ಕಾಲೇಜುಗಳಿವೆ ಎಂದು ಗೊತ್ತಾಗಿ ಆಶ್ಚರ್ಯವಾಯಿತು. ಆ ಕಾಲೇಜುಗಳಲ್ಲಿ ಏನು ಹೇಳಿಕೊಡುತ್ತಾರೋ ಅವರ ಪಠ್ಯಕ್ರಮವೇನೋ ಗೊತ್ತಿಲ್ಲ. ಆದರೆ, ಹೋಮಿಯೋಪತಿಯ ಮೂಲ ಸಂಗತಿಗಳನ್ನು ಗಮನಿಸಿದವರಿಗೆ ಅದರಲ್ಲಿರುವ ಮೌಢ್ಯ ಕಾಣಿಸದೇ ಹೋಗದು. ಒಂದಂಶದ ಮದ್ದನ್ನು ಹತ್ತಾರು ಸಾವಿರ ಅಂಶ ನೀರಿನಲ್ಲಿ ಕರಗಿಸಿ ಮದ್ದನ್ನು ದುರ್ಬಲ ಮಾಡಿ ಕೊಡುವ ಪದ್ಧತಿ ಅದು. ಅಷ್ಟೊಂದು ನೀರಾಗಿಸಿದರೆ ಪರಿಣಾಮ ಹೇಗಾಗುತ್ತದೆ ಎಂಬ ಪ್ರಶ್ನೆಗೆ "ನೀರಿಗೆ ಮದ್ದಿನ ನೆನಪಿರುತ್ತದೆ" ಎಂಬಂತ ಉತ್ತರ ಕೊಡುವ ಪದ್ಧತಿ ಅದು. ‘ಲೈಕ್ ಫಾರ್ ಲೈಕ್’ ಎಂಬ ಅಪಾಯಕಾರಿ ಸಿದ್ಧಾಂತದ ಆಧಾರದ ಮೇಲೆ ಕಲ್ಪಿಸಿಕೊಂಡಿರುವ ಪದ್ಧತಿ ಅದು. ರೋಗ ಉಲ್ಪಣವಾಗುವುದೇ ಗುಣವಾಗುವುದರ ಸಂಕೇತ ಎಂದು ವರ್ಣಿಸುವ ಪದ್ಧತಿ ಅದು. ಇದನ್ನೆಲ್ಲಾ ಆ ಕಾಲೇಜುಗಳಲ್ಲಿ ವಿಜ್ಞಾನ ಎಂದು ಹೇಳಿಕೊಡುತ್ತಾರೆಯೆ? ಮೂಲಭೂತವಾಗಿ ವಿಜ್ಞಾನದಲ್ಲಿರಬೇಕಾದ ಸಂಶೋಧನೆ, ಫಲಿತಾಂಶ, ನಿರ್ಣಯವನ್ನು ಹೋಮಿಯೋಪತಿಯ ಸಂದರ್ಭದಲ್ಲಿ ಹೇಗೆ ದಾಖಲಿಸಿದ್ದಾರೆ? ಇವೆಲ್ಲ ಪ್ರಶ್ನೆಗಳಿಗೆ ಆ ಕಾಲೇಜುಗಳಲ್ಲಿ ಏನು ಉತ್ತರ ಕೊಡತ್ತಾರೋ?

ಹೋಮಿಯೋಪತಿ ಮದ್ದಿನ ಸೀಸೆಗಳುಜನರಿಗೆ ಪ್ರಾಥಮಿಕ ಆರೋಗ್ಯ ಸೌಕರ್ಯ ಸಿಕ್ಕದಿದ್ದಾಗ, ಆರೋಗ್ಯಕ್ಕೆ ಕುತ್ತು ಬಂದ ಹೊತ್ತಲ್ಲಿ ತಜ್ಞರ ಸೌಕರ್ಯ ನಿಲುಕದಾಗ ಹಲವು ಬಗೆಯ ಮೂಢೋಪಚಾರಗಳು ಹರಡುವುದು ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ ಮೂಢೋಪಚಾರಗಳಿಗೆ ಮೊರೆ ಹೋಗುವವರಿಗೆ ಹಾಗೆ ಮಾಡಬೇಡಿ ಅನ್ನುವುದು ತಪ್ಪಾಗುತ್ತದೆ. ಜಗತ್ತಿನ ಮುಂದುವರಿದ ದೇಶಗಳಲ್ಲೂ ಅಲೋಪತಿ ಡಾಕ್ಟರರು ಜನರೊಂದಿಗೆ ಹೆಚ್ಚು ವೇಳೆ ಕಳೆಯಲಾಗದೇ ಇರುವುದು ಹೋಮಿಯೋಪತಿ ತಳವೂರಲು ಕಾರಣವಾಗಿದೆಯಂತೆ. ಎಕ್ಸಿಮಾದಂತ ಗುಣಪಡಿಸಲಾಗದ, ಆದರೆ ತಹಬಂದಿಯಲ್ಲಿ ಇಡಲಷ್ಟೇ ಸಾಧ್ಯವಿರುವ ವ್ಯಾಧಿಯಿರುವಾಗ ಹೋಮಿಯೋಪತಿ ಆಕರ್ಷಕವಾಗಿ ಕಾಣುವುದು ಹೌದು. ಆದರೆ ಅದರಿಂದ ಗುಣವಾಗುತ್ತದೆ ಎನ್ನುವುದು ಎಷ್ಟು ಜವಾಬ್ದಾರಿಯುತವಾದ ಮಾತು?

ಎಲ್ಲ ಪಾಶ್ಚಿಮಾತ್ಯ ವಿಚಾರಗಳ ಬಗ್ಗೆ ಅತಿರೇಕದ ಅನುಮಾನ, ಎಲ್ಲದರಲ್ಲೂ ಪಿತೂರಿಗಳನ್ನೇ ಕಾಣುವ ಮನೋಭಾವ ಈ ಸಮಸ್ಯೆಯ ಒಂದು ಮಗ್ಗುಲಷ್ಟೆ. ಆರೋಗ್ಯೋಪಚಾರ ತೀವ್ರ ವ್ಯಾಪಾರೀಕರಣಗೊಂಡಿರುವುದು ಸಮಸ್ಯೆಯ ಮತ್ತೊಂದು ಮಗ್ಗಲು. ಇವರೆಡರ ಪೂರ್ಣ ಲಾಭ ಪಡಕೊಂಡು ಹೋಮಿಯೋಪತಿಯಂತಹ ಔಷಧ ಪದ್ಧತಿ ಬೇರೂರಲು ತೊಡಗುತ್ತವೆ. ಒಂದು ಕಡೆ - ಯಾವುದೇ ಬಗೆಯ ಔಷಧೋಪಚಾರವಾದರೂ ಜನರಿಗೆ ಸತ್ಯ ಹೇಳುವ, ಇರುವುದನ್ನು ಪ್ರಚುರ ಪಡಿಸುವ ಕೆಲಸದ ಅಗತ್ಯವಿದೆ. ಇನ್ನೊಂದು ಕಡೆ ಜನರಿಗೆ ಅಗತ್ಯವಾದ ಸವಲತ್ತುಗಳನ್ನು ಕೊಡುವ ಜವಾಬ್ದಾರಿಯನ್ನು ಸರ್ಕಾರಗಳಿಗೆ ಪ್ರಜ್ಞಾವಂತರೂ ಸದಾ ನೆನಪಿಸುತ್ತಲೇ ಇರಬೇಕಾಗುತ್ತದೆ. "ಆಲ್ಟರ್ನೇಟ್ ಸೈನ್ಸ್" ಎಂಬ ಫಲಕದಡಿ ಮೂಢಾಚಾರಗಳನ್ನು ಬೆಂಬಲಿಸುವ ತಪ್ಪನ್ನು ನಮ್ಮ ಪ್ರಜ್ಞಾವಂತರೂ ಮಾಡತೊಡಗಿದರೆ ಅದು ದಿಟವಾಗಿಯೂ ಕಳವಳಕಾರಿ ಸಂಗತಿ.

ನಮಸ್ಕಾರ.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  8     Rating: 4    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?