ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಚೀನಾ: ದುಡಿವವರ ಕೈಗೆ ಅಂತರ್ಜಾಲ ಬಲ    
ಜಿತೇಂದ್ರ
ಬುಧವಾರ, 16 ಸೆಪ್ಟೆಂಬರ್ 2009 (10:08 IST)
‘QQ ’ ನೆಟ್ ವರ್ಕ್
ಕಳೆದ ಮೂರು ವರ್ಷದ ಹಿಂದೆ ಜಿಯಾಂಗ್ ಡಬಾವೊ ಎಂಬ ವ್ಯಕ್ತಿ ಚೀನಾದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಯಂತ್ರಕ್ಕೆ ಸಿಕ್ಕು ತನ್ನ ಕೈ ಕಳೆದುಕೊಂಡ. ಆತನ ಬಾಸ್ ಪರಿಹಾರ ನೀಡಲು ನಿರಾಕರಿಸಿದ. ಉದ್ಯೋಗವನ್ನೂ ಕಳೆದುಕೊಂಡ ಜಿಯಾಂಗ್, ದಿಕ್ಕು ತೋಚದೆ ಅಂತರ್ಜಾಲದ ಮೊರೆ ಹೋದ. ಅಲ್ಲಿ, QQ ಎನ್ನುವ ಪ್ರಸಿದ್ಧ ಸೋಷಿಯಲ್ ನೆಟ್ ವರ್ಕ್ ತಾಣವೊಂದರಲ್ಲಿ ವಕೀಲರೊಬ್ಬರು ಸಹಾಯಕ್ಕೆ ಬಂದರು. ಅಂತೂ ಜಿಯಾಂಗ್ ೩೦,೦೦೦ ಡಾಲರ್ ಪರಿಹಾರವನ್ನ ಪಡೆಯುವಲ್ಲಿ ಯಶಸ್ವಿಯಾದ.

ಜಿಯಾಂಗ್ ನ ಈ ಪ್ರಕರಣ ಚೀನಾದಲ್ಲಿ ವೆಬ್ ಬಳಕೆ ಹೆಚ್ಚಾಗುತ್ತಿರುವುದಕ್ಕೆ ಮತ್ತು ಸರ್ವವ್ಯಾಪಿಯಾಗುತ್ತಿರುವುದಕ್ಕೆ ಸಾಕ್ಷಿ. ಅದರಲ್ಲೂ ವೆಬ್ ತಾಣಗಳು ಅಲ್ಲಿನ ಕಾರ್ಮಿಕ ವರ್ಗದ ಧ್ವನಿಯಾಗುವತ್ತ ಮುನ್ನಡೆದಿವೆ.

ವೆಬ್ ಬಳಕೆಯಲ್ಲಿನ ಈ ಬೆಳವಣಿಗೆ ಅಲ್ಲಿನ ಆಡಳಿತ ಮತ್ತು ಕಾರ್ಖಾನೆಗಳ ನಿದ್ದೆಕೆಡಿಸಿದ್ದು, ವೆಬ್ ಫೋರಂಗಳತ್ತ ಕಣ್ಣಿಡುವಂತೆ ಮಾಡಿವೆ. ಕಾರ್ಮಿಕರ ದೂರುಗಳಿಗೆ ಸ್ಪಂದಿಸುವಂತಹ ತಾಣಗಳನ್ನ ಮುಚ್ಚಿಸಲಾಗುತ್ತಿದೆ ಅಥವಾ ಕಾರ್ಮಿಕರ ಪ್ರತಿಭಟನೆ ಇನ್ನಿತರ ಸುದ್ದಿಗಳನ್ನ ವೆಬ್ ಗಳಿಂದ ಬಲವಂತವಾಗಿ ತೆಗೆಯಲಾಗುತ್ತಿದೆ.

ಕಳೆದ ಜುಲೈನಲ್ಲಿ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಉಯಿಘರ್ ಗಳನ್ನ ಗಲಭೆಗೆ ಪ್ರಚೋದಿಸಲು ಮೂಲಭೂತವಾದಿಗಳು ಅಂತರ್ಜಾಲವನ್ನ ಬಳಸಿಕೊಂಡಿದ್ದರು ಎನ್ನುವುದು ಚೀನಾದ ಆಡಳಿತಾಧಿಕಾರಿಗಳ ವಾದ: ಪರಿಣಾಮ ಆ ಪ್ರದೇಶದಲ್ಲಿನ ಅಂತರ್ಜಾಲ ಸೇವೆಯನ್ನ ಕೆಲವು ದಿನಗಳ ವರೆಗೆ ಕಡಿತಗೊಳಿಸಲಾಗಿತ್ತು.

‘ಚೀನಾದ ಕಾರ್ಮಿಕ ವರ್ಗ ಯಾವಾಗ ದಂಗೆ ಏಳುತ್ತಾರೆ ಅಂತ ಯಾರೂ ಭವಿಷ್ಯ ಹೇಳಲಾರರು. ಅದು ಎಂದಾದರೂ ಒಮ್ಮೆ ಸಂಭವಿಸಿದರೂ,ಅದರಿಂದಾಗುವ ಪರಿಣಾಮ ಅಗಾಧ’ ಅಂತಾರೆ ಚೀನೀಸ್ ಯುನಿವರ್ಸಿಟಿ ಆಫ್ ಹಾಂಕಾಂಗ್ ನ ಪ್ರಾಧ್ಯಾಪಕ ಜಾಕ್ ಕ್ಯೂ.

ಕೆಲವು ವರ್ಷಗಳ ಹಿಂದಷ್ಟೇ ಚೀನಾದ ಕಾರ್ಮಿಕ ವರ್ಗಕ್ಕೆ ಕೈಗೆಟುಕದಾಗಿದ್ದ ಅಂತರ್ಜಾಲ ಈಗ ಇಂಟರ್ನೆಟ್ ಕೆಫೆಗಳ ವ್ಯಾಪಕ ಹೆಚ್ಚಳ ಹಾಗೂ ಮೊಬೈಲ್ ನಲ್ಲಿ ಅಂತರ್ಜಾಲ ಸೇವೆಯಿಂದಾಗಿ ಹೆಚ್ಚು ಬಳಕೆಗೆ ಬರುತ್ತಿದೆ. ಫೇಸ್ ಬುಕ್, ಟ್ವಿಟರ್ ಗಳಂತಹ ತಾಣಗಳು ಸೆನ್ಸಾರ್ ಗೆ ಒಳಪಟ್ಟಿರುವ ಚೀನಾದಲ್ಲಿ ಕಾರ್ಮಿಕ ತಾಣಗಳು ಸಂವಹನಕ್ಕೊಂದು ವೇದಿಕೆಯಾಗಿವೆ.

ಅಂತರ್ಜಾಲ ಸಂವಹನದಲ್ಲಿನ ಈ ಬೆಳವಣಿಗೆ, ಕಾರ್ಖಾನೆಗಳಲ್ಲೂ ಇಂಟರ್ನೆಟ್ ಕೇಂದ್ರಗಳನ್ನ ಹೊಂದಲು ಪ್ರೇರಣೆ ನೀಡಿವೆ. ಫಾಕ್ಸ್ ಕಾನ್ ನಂತಹ ದೊಡ್ಡ ದೊಡ್ಡ ಕಂಪನಿಗಳು ಈ ಸೌಲಭ್ಯ ಒದಗಿಸುತ್ತಿವೆ. ಈ ಕಂಪನಿ ತಮ್ಮದೇ ಆದ ಪ್ರತ್ಯೇಕ ವೆಬ್ ತಾಣವನ್ನ ಹೊಂದಿದ್ದು, ಈ ಮೂಲಕ ತಮ್ಮ ಕಾರ್ಮಿಕರಿಗೆ ವಾರ್ತಾ ಪತ್ರಗಳ ರವಾನೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಸಂವಹನ ನಡೆಸುತ್ತಿವೆ. ಕೆಲ ತಿಂಗಳ ಹಿಂದೆ ಇದೇ ಕಂಪನಿಯ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸಂದರ್ಭ ಸುದ್ದಿಗಾಗಿ ಈ ತಾಣಕ್ಕೆ ಸಾಕಷ್ಟು ಮಂದಿ ಭೇಟಿ ಕೊಟ್ಟಿದ್ದರು.

ಜಿಗರ್ ಅನ್ನುವ ಇನ್ನೊಂದು ತಾಣ ಅಲ್ಲಿನ ಕಾರ್ಮಿಕರ ಧ್ವನಿಗಳಿಗೆ ವೇದಿಕೆಯಾಗಿದ್ದು, ಇದರಲ್ಲಿ ಪ್ರತಿ ತಿಂಗಳು ಸುಮಾರು ಸಾವಿರದಷ್ಟು ಲೇಖನಗಳು ಪ್ರಕಟವಾಗುತ್ತವೆ. ಅವುಗಳಲ್ಲಿ ಬಹುತೇಕ ಲೇಖನಗಳು ಅಲ್ಲಿನ ಸರ್ಕಾರಿ ಕಾರ್ಖಾನೆಗಳ ನೌಕರರು ಖಾಸಗೀಕರಣ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ ಬರೆದ ಬರಹಗಳಾಗಿರುತ್ತವೆ.

‘ಚೀನಾದ ಮುಖ್ಯವಾಹಿನಿ ಮಾಧ್ಯಮ ಇಂತಹ ಲೇಖನಗಳನ್ನ ಪ್ರಕಟಿಸುವುದಿಲ್ಲ. ಕೆಲವು ವೆಬ್ ತಾಣಗಳಲ್ಲೂ  ಇವುಗಳಿಗೆ ಅವಕಾಶವಿಲ್ಲ. ಆದರೆ ನಮ್ಮಲ್ಲಿ ನಿರ್ಬೀಡೆಯಿಂದ ಪ್ರಕಟಿಸುತ್ತೇವೆ’ ಅಂತಾರೆ ವೆಬ್ ನ ಸ್ಥಾಪಕರು.
ಪುಟದ ಮೊದಲಿಗೆ
 
Votes:  0     Rating: 0    
 
 
ಸಂಬಂಧಿಸಿದ ಲೇಖನಗಳು
  ಕೋಮುಗಲಭೆಯೂ ಜೀವನ ಸರಪಳಿಯೂ:ಬಿ.ಕೆ.ಶಿವರಾಂ ನೆನಪುಗಳು
  ರಂಜಾನ್ ಎಂಬ ಉಪವಾಸ ಸಂಭ್ರಮ:ಫಕೀರ್ ಬರಹ
  ನಾವೆಲ್ಲ ಬೆಳೆದು ದೊಡ್ಡವರಾಗಿ!
  ಸೋಮವಾರ ಶಿವಮೊಗ್ಗದಲ್ಲಿ ತಾರಾನಾಥರ ಸರೋದ್
  ಶಿಕ್ಷಣವೆಂದರೆ ಶಿಕ್ಷೆಯೆಂದೇಕೆ ಕೆಲವೊಮ್ಮೆ ಕೇಳಿಸುತ್ತದೆ?
  ಮಾತಿನ ಮಳೆಯ ಯೋಗರಾಜ್ ಪಂಚರಂಗಿ
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....