ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಎತ್ತರದ ಹುಡುಗನ ಕಷ್ಟಗಳು    
ಜಿತೇಂದ್ರ
ಶುಕ್ರವಾರ, 18 ಸೆಪ್ಟೆಂಬರ್ 2009 (09:27 IST)
ಲಂಡನ್ನಿನಲ್ಲಿ ಸುಲ್ತಾನ್
ಟರ್ಕಿಯ ಸುಲ್ತಾನ್ ಕೊಸೆನ್ ಎನ್ನುವ ಈ ವ್ಯಕ್ತಿಯ ಎತ್ತರ ಬರೋಬ್ಬರಿ ೮ ಅಡಿ ೧ ಅಂಗುಲ. ೨೦೧೦ರಲ್ಲಿ ಹೊರಬರಲಿರುವ ಗಿನ್ನಿಸ್ ರೆಕಾರ್ಡ್ ಆವೃತ್ತಿಯಲ್ಲಿ ‘ವಿಶ್ವದ ಅತಿ ಎತ್ತರದ ಮನುಷ್ಯ’ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುತ್ತಿದ್ದಾನೆ. ಮಾತ್ರವಲ್ಲ, ಅತಿ ಉದ್ದದ ಅಂಗೈ ಉಳ್ಳ, ಅತಿ ಉದ್ದದ ಪಾದಗಳುಳ್ಳ ದಾಖಲೆಗಳೂ ಇತನ ಹೆಸರಿಗೆ ಸಲ್ಲುತ್ತಿವೆ.

೨೭ ವರ್ಷದ ಇತನ ಅಂಗೈಗಳು ಸುಮಾರು ೧೦.೮ ಅಂಗುಲವಿದೆಯಂತೆ. ಅಂತೆಯೇ ಪಾದ ೧೪.೩ ಅಂಗುಲ ಉದ್ದವಿದೆ. ದೇಹದಲ್ಲಿನ ಅಧಿಕ ಹಾರ್ಮೋನು ಉತ್ಪತ್ತಿಯಿಂದಾಗಿ ಈ ‘ಬೆಳವಣಿಗೆ’ ಕಂಡುಕೊಂಡಿರುವ ಕೊಸೆನ್, ಸದ್ಯ ಹುಡುಗಿಯ ಹುಡುಕಾಟದಲ್ಲಿದ್ದಾನೆ.

‘ನನ್ನ ಎತ್ತರಕ್ಕೆ ಹೊಂದುವಂತಹ ಕಾರನ್ನ ಹುಡುಕಿಕೊಳ್ಳುವುದು ನನ್ನ ಮೊದಲ ಆದ್ಯತೆ. ಆದರೆ, ಅದಕ್ಕಿಂತ ಮೊದಲು, ನಾನು ಒಬ್ಬ ಚೆಲುವೆಯನ್ನ ಮದುವೆಯಾಗಬಯಸುತ್ತೇನೆ.’ ಅಂತ ತಮ್ಮ ಮನದ ಇಂಗಿತ ವ್ಯಕ್ತಪಡಿಸುತ್ತಾರೆ ಕೊಸೆನ್.

‘ಈವರೆಗೆ ನನಗೊಬ್ಬಳು ಗರ್ಲ್ ಫ್ರೆಂಡನ್ನ ಹುಡುಕಿಕೊಳ್ಳುವುದು ಸಾಧ್ಯವಾಗಿಲ್ಲ. ಎಲ್ಲ ಹುಡುಗಿಯರೂ ನನ್ನ ನೋಡಿದರೆ ಭಯ ಪಡುತ್ತಾರೆ. ಈಗಲಾದರೂ ಹುಡುಕುವ ಪ್ರಯತ್ನ ಮಾಡುತ್ತೇನೆ. ಈಗ ಸ್ಪಲ್ಪ ಫೇಮಸ್ ಆದ್ರೆ ಹೆಚ್ಚೆಚ್ಚು ಹುಡುಗಿರನ್ನ ಭೇಟಿ ಮಾಡಬಹುದು. ಆಗ ವಿವಾಹದ ಅದೃಷ್ಟ ಕೈಗೂಡಲೂ ಬಹುದು.’ ಅಂತ ಆಸೆ ವ್ಯಕ್ತಪಡಿಸುತ್ತಾರೆ.

ತಮ್ಮ ಎತ್ತರಕ್ಕೆ ತಕ್ಕಂತ ಬಟ್ಟೆ ಸಿಗದಿರುವುದು, ಸಾಮಾನ್ಯ ಕಾರಿನಲ್ಲಿ ಕೂರಲು ಆಗದಿರುವುದು-ಕೂತರೂ ಮುದುರಿ ಕೂರಬೇಕಾಗುವುದು ಅವರ ಇನ್ನಿತರ ಕಷ್ಟಗಳು. ‘ನಾನು ಎಲ್ಲರಂತೆ ಶಾಪಿಂಗಿಗೆ ಹೋಗುವುದೂ ಸಾಧ್ಯವಿಲ್ಲ. ನನಗೆಂದೇ ವಿಶೇಷ ಬೇಡಿಕೆ ಇಟ್ಟು ಬಟ್ಟೆ ಹೊಲಿಸಬೇಕು. ಬಾಗಿಲುಗಳ ಮುಂದೆ ಬಗ್ಗಿಯೇ ನಡೆಯಬೇಕು’ ಅಂತ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

‘ನನ್ನೀ ಎತ್ತರದಿಂದ ಆಗಿರುವ ಉಪಯೋಗ ಅಂದರೆ, ದೂರದಿಂದಲೇ ನಾನು ವ್ಯಕ್ತಿಗಳನ್ನ ಗುರುತಿಸಬಲ್ಲೆ. ಆದರೆ ಜನ ನನ್ನನ್ನ ವಿದ್ಯುತ್ ಬಲ್ಬ್ ಗಳನ್ನ ಬದಲಾಯಿಸಲಿಕ್ಕೆ, ಮನೆಯ ಪರದೆಗಳನ್ನ ನೇತುಹಾಕಲಿಕ್ಕೆ.... ಇಂತಹ ಕೆಲಸಕ್ಕೆ ಹೆಚ್ಚು ಉಪಯೋಗಿಸಿಕೊಳ್ತಾರೆ.’ ಅಂತ ಬೇಸರ ವ್ಯಕ್ತಪಡಿಸುತ್ತಾರೆ.

ಗಿನ್ನಿಸ್ ರೆಕಾರ್ಡ್ ವಕ್ತಾರರ ಹೇಳಿಕೆಯಂತೆ, ಕಳೆದ ಒಂದು ದಶಕದಲ್ಲಿ ಎಂಟು ಅಡಿ ಮೇಲ್ಪಟ್ಟು ಎತ್ತರ ಹೊಂದಿರುವ ವ್ಯಕ್ತಿಯಾಗಿ ದಾಖಲಾದ ಮೊದಲ ವ್ಯಕ್ತಿ ಈತನಾಗಿದ್ದಾನೆ.

ತನ್ನ ಹತ್ತನೇ ವರ್ಷದವರೆಗೂ ಸಾಮಾನ್ಯ ಬೆಳವಣಿಗೆ ಹೊಂದಿದ್ದ ಕೊಸೆನ್, ಬಳಿಕ ಪಿಟ್ಯೂಟರಿ ಗ್ರಂಥಿಯಲ್ಲಿನ ಬದಲಾವಣೆಯಿಂದಾಗಿ ಹೀಗೆ ಅಡ್ಡಾದಿಡ್ಡಿ ಬೆಳೆದಿದ್ದಾರೆ. ಕಳೆದ ವರ್ಷ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನ ಕಿತ್ತೊಗೆಯಲಾಗಿದ್ದು, ಅಲ್ಲಿಗೆ ಅವರ ದೈಹಿಕ ಬೆಳವಣಿಗೆ ನಿಂತಿದೆ.

ಸದ್ಯ ಲಂಡನ್ನಿನಲ್ಲಿ ಸುತ್ತುತ್ತ ಆಕರ್ಷಣೆಯ ಕೇಂದ್ರವಾಗಿರುವ ಸುಲ್ತಾನ್, ಮುಂದೆ ಅಮೆರಿಕಾ ಹಾಗೂ ಜರ್ಮನಿಗಳಿಗೂ ಭೇಟಿ ನೀಡಲಿದ್ದಾರೆ.
ಪುಟದ ಮೊದಲಿಗೆ
 
Votes:  1     Rating: 2    
 
 
ಸಂಬಂಧಿಸಿದ ಲೇಖನಗಳು
  ಮನುಷ್ಯನ ಅಮಾನುಷ ಚಿತ್ರಸತ್ಯಗಳು
  ಕೋಮುಗಲಭೆಯೂ ಜೀವನ ಸರಪಳಿಯೂ:ಬಿ.ಕೆ.ಶಿವರಾಂ ನೆನಪುಗಳು
  ರಂಜಾನ್ ಎಂಬ ಉಪವಾಸ ಸಂಭ್ರಮ:ಫಕೀರ್ ಬರಹ
  ನಾವೆಲ್ಲ ಬೆಳೆದು ದೊಡ್ಡವರಾಗಿ!
  ಸೋಮವಾರ ಶಿವಮೊಗ್ಗದಲ್ಲಿ ತಾರಾನಾಥರ ಸರೋದ್
  ಶಿಕ್ಷಣವೆಂದರೆ ಶಿಕ್ಷೆಯೆಂದೇಕೆ ಕೆಲವೊಮ್ಮೆ ಕೇಳಿಸುತ್ತದೆ?
  ಮಾತಿನ ಮಳೆಯ ಯೋಗರಾಜ್ ಪಂಚರಂಗಿ
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು