ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಯುರೋಪ್ ಪ್ರವಾಸದ ಕಸಾನುಭೂತಿ: ನಾ.ದಾಮೋದರ ಶೆಟ್ಟಿ ಬರಹ    
ನಾ.ದಾಮೋದರ ಶೆಟ್ಟಿ.
ಶುಕ್ರವಾರ, 25 ಸೆಪ್ಟೆಂಬರ್ 2009 (06:10 IST)
ಧಮ್ ಮಾರೋ ಧಮ್...

ವರ್ಷಗಳ ಹಿಂದೆ ಇಂಗ್ಲೆಂಡಿಗೆ ಹೋಗಿದ್ದಾಗ ಅಲ್ಲಿನ ಶುಚಿತ್ವ ಬೆರಗು ಹುಟ್ಟಿಸಿತ್ತು. ನಮ್ಮ ಭಾರತದೇಶ ಹಲವು ಸಹಸ್ರ ವರ್ಷಗಳ ಇತಿಹಾಸಗಳಿಂದ ಕೂಡಿದ್ದು, ಹಳತಾಗಿ ಜಡ್ಡುಗಟ್ಟಿದೆ ಎಂದೂ  ಮಿತಿಮೀರಿದ ಜನಸಂಖ್ಯೆಯಿಂದ ಕೂಡಿದ್ದು ಹತೋಟಿ ಕಷ್ಟಸಾಧ್ಯವೆಂದೂ ಶುಚಿತ್ವ ಕಾಪಾಡುವುದು ಸುಲಭದ ಕೆಲಸವಲ್ಲವೆಂದೂ- ನಂಬಿಕೊಂಡಿದ್ದೆ. ಮತ್ತೊಮ್ಮೆ ಸಿಂಗಾಪುರದ ಬೀದಿಗಳಲ್ಲಿ ತಿರುಗಾಡಿದಾಗ ಅದು ಕೆಲವೇ ಶತಮಾನಗಳ ಇತಿಹಾಸದಿಂದ ಕೂಡಿದ್ದೆಂದೂ ಜನಸಂಖ್ಯೆ ಬಹಳ ಕಡಿಮೆಯೆಂದೂ ಅಲ್ಲಿ ಶುಚಿತ್ವ ಕಾಪಾಡುವುದು ಸುಲಭವೆಂದೂ ತೀರ್ಮಾನ ತಾಳಿದ್ದೆ. ಅಲ್ಲಿನ ಸ್ವಚ್ಛತೆ ನಿಜಕ್ಕೂ ಅದ್ಭುತವೇ ಸರಿ ಎಂದೂ ಬೆರಗುವಟ್ಟಿದ್ದೆ. ಕಸ ಕೈಯಲ್ಲಿ ಹಿಡಿದುಕೊಂಡು ಮೈಲುಗಟ್ಟಲೆ ನಡೆದರೂ ಅದನ್ನು ಕಸದ ಬುಟ್ಟಿಯಲ್ಲಲ್ಲದೆ ಇನ್ನೊಂದೆಡೆ ಹಾಕಲಾರರು. ಅಥವಾ  ತಮ್ಮ ವಾಹನದೊಳಗಿರುವ ಪುಟ್ಟ ಕಸದ ತೊಟ್ಟಿಯೊಳಕ್ಕೆ ಇಳಿಬಿಟ್ಟು, ಮನೆಗೆ ತಂದು ಮಾರನೆಯ ಬೆಳಗ್ಗಿನ ಕಸದ ಚೀಲದಲ್ಲಿ ಹಾಕಿಬಿಡುತ್ತಿದ್ದರು.

ಪ್ರತಿಮನೆಯಲ್ಲೂ ನಿತ್ಯದ ಕಸವನ್ನು ಎರಡಾಗಿ ವಿಭಜಿಸಿ ಜೀರ್ಣಗೊಳ್ಳುವ ಕಸವನ್ನು ಒಂದರಲ್ಲಿಯೂ ಪ್ಲಾಸ್ಟಿಕ್ ಜಾತಿಯ ಕಸವನ್ನು ಇನ್ನೊಂದರಲ್ಲಿಯೂ ತುಂಬಿಸಿಟ್ಟುಬಿಟ್ಟರೆ ಸರಿ; ಮನೆಯವರ ಕಸದ ವಿಲೇವಾರಿ ಅಲ್ಲಿಗೆ ಮುಗಿಯಿತು. ಕಸ ಸಂಬಂಧವಾದ ವಿದೇಶೀಯರ ಎಚ್ಚರಿಕೆ ಹಾಗೂ ಶಿಸ್ತಿಗೆ ನಿಜಕ್ಕೂ ನಾನು ಮಾರು ಹೋಗಿದ್ದೆ ಹಾಗೂ ಜಗತ್ತಿನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶದಂತಹ ಏಷ್ಯಾದ ದೇಶಗಳೇ ಕೊಳಕು ದೇಶಗಳೆಂಬ ತೀರ್ಮಾನಕ್ಕೆ ಬಂದಿದ್ದೆ.

ಅಜ್ಜನ ಬತ್ತದ ಸಿಗರೇಟ್ ಸೇದೋ ಉತ್ಸಾಹಇತ್ತೀಚೆಗೆ ಜರ್ಮನಿ, ಸ್ವಿಟ್ಸರ್ ಲ್ಯಾಂಡ್ ಹಾಗೂ ಫ್ರಾನ್ಸ್ ಗಳಿಗೆ ಭೇಟಿ ನೀಡಿದ್ದೆ. ಆಗಲೇ ಅವರ ಮನೆ ದೋಸೆ ಕೂಡಾ ತೂತು ಎಂಬುದು ಅರಿವಿಗೆ ಬಂದದ್ದು. ಈ ಯಾವುದೇ ರಾಷ್ಟ್ರಗಳಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಬಾರದೆಂಬ ನಿಯಮವಿಲ್ಲ. ಸೇದುವವರಿಗಾಗಿ ರೈಲ್ವೆ ನಿಲ್ದಾಣದಲ್ಲಿ, ಬಸ್ ಸ್ಟ್ಯಾಂಡಿನಲ್ಲಿ, ಎಲ್ಲೆಂದರಲ್ಲಿ ಬೂದಿಯ ಟ್ರೇಗಳನ್ನು ಸ್ಥಾಪನೆ ಮಾಡಿದ್ದಾರೆ. ಹಾಗಾಗಿ ಸೇದುವವರಿಗೆ ನಿರಾಳ. ಒಂದೊಂದು ಟ್ರೇಯ ಸುತ್ತಲೂ ಕೆಲವೊಮ್ಮೆ ಹತ್ತಾರು ಜನ ಜಮಾಯಿಸಿ ಬಸೋ ಬಸೋ ಎಂಬುದಾಗಿ ಹೊಗೆ ಬಿಡುತ್ತಿರುತ್ತಾರೆ. ಅವರೆಲ್ಲ ಬಿಸಾಕುವ ಬಡ್ಡುಗಳು ಟ್ರೇಗೆ ಬೀಳಬೇಕೆಂದೇನೂ ಇಲ್ಲ. ನಮ್ಮಂತೆಯೇ ಕಾಲಡಿಗೆ ಹಾಕಿ ಜಜ್ಜಿ ಬಿಡುವವರೂ ಜಜ್ಜದೆ ಬಿಡುವವರೂ ಬೇಕಾದಷ್ಟು ಜನ. ದೊಡ್ಡದೊಡ್ಡ ರೈಲ್ವೆ ಸ್ಟೇಶನ್ ಗಳಲ್ಲಿ ಉಸಿರು ಬಿಡಲಾಗದಷ್ಟು ಹೊಗೆವಾಸನೆ. ಗಂಡಸರಿಗಿಂತ ಹೆಂಗಸರು ಹೊಗೆ ಬಿಡುವುದರಲ್ಲಿ ಬಲಾಢ್ಯರು. ಗರ್ಭಿಣಿಹೆಂಗಸರು ಯಾವ ಮುಲಾಜೂ ಇಲ್ಲದೆ ತಮ್ಮ ಹೊಟ್ಟೆಯಲ್ಲಿರುವ ಕೂಸಿಗೆ ಅದಾಗಲೇ ಸಿಗರೇಟು ಸೇದುವುದನ್ನು ಕಲಿಸಿಕೊಡುವ ತರಾತುರಿಯಲ್ಲಿದ್ದವರಂತೆ ಕಾಣಿಸುತ್ತಾರೆ!

ಯಾರನ್ನಾದರೂ ಈ ಕುರಿತು ಪ್ರಶ್ನಿಸಿದರೆ ಇಲ್ಲಿನ ಹವಾಮಾನ ನಿಮ್ಮನ್ನೂ ಸೇದಿಸಿಬಿಡುತ್ತದೆ ಎನ್ನುತ್ತಾರೆ. ನನ್ನ ಪ್ರಶ್ನೆ ಅದಲ್ಲ; ರಾಶಿರಾಶಿ ಸಿಗರೇಟ್ ಬಡ್ಡುಗಳನ್ನು ಸ್ವಚ್ಛತೆಯ ಕುರಿತು  ಲವಲೇಶವೂ ಯೋಚಿಸದೆ ಸಿಕ್ಕಸಿಕ್ಕಲ್ಲಿ ಬಿಸಾಕುತ್ತಾರಲ್ಲಾ; ಇದಕ್ಕೇನನ್ನೋಣ? ಪಕ್ಕದಲ್ಲಿರುವವರೆಲ್ಲರೂ ಸಿಗರೇಟ್ ಸೇದುವವರೇ ಎಂಬ ಭ್ರಮೆ ಅಲ್ಲಿ ಪ್ರತಿಯೊಬ್ಬರಲ್ಲಿಯೂ ಇದೆ. ಒಂದೇ ಸಮಾಧಾನವೆಂದರೆ ಬಸ್ಸು, ಟ್ರೇನುಗಳ ಒಳಗಡೆ ಸೇದುವುದಿಲ್ಲ. ಆದರೆ ರಾತ್ರಿಯ ಬಸ್ಸುಗಳಲ್ಲಿ ಬಿಯರ್ ಕುಡಿಯುತ್ತ ಗಲಾಟೆ ಎಬ್ಬಿಸುತ್ತ ಸಾಗುವವರು ಅಲ್ಲೂ ಇದ್ದಾರೆ. ಟ್ರೇನುಗಳಲ್ಲಿ ತಿಂಡಿ ತಿನ್ನುವ ಖಯಾಲಿ ಅಲ್ಲಿ ಹೆಚ್ಚು. ಅದಕ್ಕಾಗಿ ಕಸಹಾಕುವ ವ್ಯವಸ್ಥೆ ಪ್ರತಿ ಸೀಟಿನ ಪಕ್ಕದಲ್ಲೂ ಇರುತ್ತದೆ. ಆದರೂ ಅಲ್ಲಿನ ಯುಜನತೆ ಕಸವನ್ನು ಎತ್ತಿಎತ್ತಿ ಟ್ರೇನಿನಿಂದ ಹೊರಕ್ಕೆ ಬಿಸಾಡುತ್ತಿರುತ್ತಾರೆ.

ಸ್ಮೋಕಿಂಗ್ ಉತ್ಸಾಹದಲ್ಲಿಈಗ ಆದದ್ದಿಷ್ಟೆ. ಯುರೋಪಿನ ಜನರು ಸ್ವಚ್ಛತೆಯ ಕಡೆಗೆ ವಿಶೇಷ ಗಮನ ಕೊಡುತ್ತಾರೆಂದು ಇಷ್ಟು ಕಾಲ ನಂಬಿಕೊಂಡು ಬಂದದ್ದು ಸುಳ್ಳಾಯಿತಲ್ಲ ಎಂಬುದು. ಅದರಲ್ಲೂ ಸಿಗರೇಟು ಬಡ್ಡುಗಳ ಮೇಲಾಟ ಕಳಂಕದೋಪಾದಿಯಲ್ಲಿ ಆ ರಾಷ್ಟ್ರಗಳನ್ನು ಆವರಿಸಿಕೊಂಡಿದೆಯಲ್ಲ. ಹದಿನೆಂಟು ವಯಸ್ಸಿಗೆ ಮೇಲ್ಪಟ್ಟವರು ಮಾತ್ರ ತಮ್ಮಲ್ಲಿರುವ ಕಾರ್ಡುಗಳನ್ನು ಬಳಸಿ ರಸ್ತೆಬದಿಯ ಯಾವುದೇ ಸಿಗರೇಟ್ ಯಂತ್ರದಿಂದ ಸಿಗರೇಟ್ ಖರೀದಿಸಬಹುದು ಎಂಬೊಂದು ನಿಯಮವಿದೆ. ಅದು ಕೂಡಾ ಇಡೀ ಪ್ಯಾಕೇಟ್! ಸಿಂಗಲ್ ಸಿಗರೇಟ್ ಮಾರುವ ವ್ಯವಸ್ಥೆ ಅಲ್ಲಿಲ್ಲ. ಅಂದರೆ ಸಿಗರೇಟ್ ಸೇದುವ ಕ್ರಿಯೆಯನ್ನು ಆ ದೇಶದವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರ್ಥ. ಮೇಲಾಗಿ ಸಿಗರೇಟಿನ ಯಂತ್ರದ ಬಳಿ ಯಾರೂ ಇರುವುದಿಲ್ಲ. ಅದೂ ಸೌಕರ್ಯವೇ. ಅದಲ್ಲದಿದ್ದರೂ ಸಿಗರೇಟ್ ಸೇದುವ ಬಗ್ಗೆ ಯಾರೂ ಯಾರ ಬಗ್ಗೆಯೂ ಹೆದರುವ ಕಾರಣವಿಲ್ಲ. ಅಲ್ಲಿ ಯಾವ ತಂದೆತಾಯಿಯೂ ತಮ್ಮ ಮಕ್ಕಳೆದುರು ಸಿಗರೇಟು ಸೇದುವುದಕ್ಕೆ ಸಂಕೋಚ ಪಡುವುದಿಲ್ಲ.

ಇದನ್ನೆಲ್ಲ ಕಂಡಾಗ ನಮ್ಮ ದೇಶವೇ ಹಂತಹಂತವಾಗಿ ಸ್ವಚ್ಛತಾ ಆಂದೋಲನವನ್ನು ಜಾರಿಗೆ ತರುವ ಪ್ರಯತ್ನದಲ್ಲಿದೆ ಹಾಗೂ ಯಶಸ್ವಿಯಾಗುವ ಹಂತದಲ್ಲಿದೆ ಎಂದು ತೋರಿಹೋದರೆ ಆಶ್ಚರ್ಯವಿಲ್ಲ.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  2     Rating: 3    
 
 
ಸಂಬಂಧಿಸಿದ ಲೇಖನಗಳು
  ಮನುಷ್ಯನ ಅಮಾನುಷ ಚಿತ್ರಸತ್ಯಗಳು
  ಕೋಮುಗಲಭೆಯೂ ಜೀವನ ಸರಪಳಿಯೂ:ಬಿ.ಕೆ.ಶಿವರಾಂ ನೆನಪುಗಳು
  ರಂಜಾನ್ ಎಂಬ ಉಪವಾಸ ಸಂಭ್ರಮ:ಫಕೀರ್ ಬರಹ
  ನಾವೆಲ್ಲ ಬೆಳೆದು ದೊಡ್ಡವರಾಗಿ!
  ಸೋಮವಾರ ಶಿವಮೊಗ್ಗದಲ್ಲಿ ತಾರಾನಾಥರ ಸರೋದ್
  ಶಿಕ್ಷಣವೆಂದರೆ ಶಿಕ್ಷೆಯೆಂದೇಕೆ ಕೆಲವೊಮ್ಮೆ ಕೇಳಿಸುತ್ತದೆ?
  ಮಾತಿನ ಮಳೆಯ ಯೋಗರಾಜ್ ಪಂಚರಂಗಿ
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು