ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ-ಅಪರಾಧಿಗಳು ಕಟ್ಟಿದ ಆಸ್ಟ್ರೇಲಿಯಾ    
ಸುದರ್ಶನ್
ಗುರುವಾರ, 27 ಮಾರ್ಚ್ 2008 (03:43 IST)

ಆಸ್ಟ್ರೇಲಿಯಾ ಪೀನಲ್ ಕಾಲೊನಿ ಆಗಿತ್ತು ಅನ್ನೋದು ಸಣ್ಣ ಮಗೂಗು ಗೊತ್ತಿರೋ ವಿಷ್ಯ. ಅದನ್ನ ಹೇಳಿಕೊಂಡು ಪಕಪಕ ಅಂತ ಜನ ನಗ್ತಾರೆ ಕಳ್ಳಕಾಕರ ನಾಡು ಅನ್ನೋ ತಿರಸ್ಕಾರದಿಂದ. ಆದರೆ ಆಸ್ಟ್ರೇಲಿಯಾದ ಕೆಲವು ಒಳಮರ್ಮ, ಒಳಸುಳಿ ಹಲವರಿಗೆ ಗೊತ್ತಿಲ್ಲ. ಇಂಗ್ಲೆಂಡಿನ ಜೈಲೆಲ್ಲಾ ತುಂಬಿ ಹೋಗಿದ್ವು. ಹೊಸದಾಗಿ ತಪ್ಪು ಮಾಡಿದವರನ್ನ ಜೈಲಿಗೆ ಹಾಕೋಕೆ ಜಾಗ ಇರಲಿಲ್ಲ. ಆಗ ತಾನೆ ಭೂಮೂಲೆಯ ಆಸ್ಟ್ರೇಲಿಯಾ ಅವರ ಕಣ್ಣಿಗೆ ಬಿದ್ದಿತ್ತು. ಬಂಧಿಗಳನ್ನ ಬೋಟಲ್ಲಿ ತುಂಬಿ ಇಲ್ಲಿಗೆ ಕಳಿಸೋಕೆ ಶುರುಮಾಡಿದರು. ಎಲ್ಲರಿಗೂ ಗೊತ್ತಿರೋ ಚರಿತ್ರೆ ಇಷ್ಟು.

ಈ ವಿಶಿಷ್ಟ ಚರಿತ್ರೆಯಿಂದ ಹುಟ್ಟೋ ಒಂದೆರಡು ವಿಷ್ಯ ಕುತೂಹಲವಾದ್ದು. ಆಸ್ಟ್ರೇಲಿಯಾದವರಿಗೆ ಇಂಗ್ಲೆಂಡ್ ಅಂದರೆ ಆಳದಲ್ಲಿ ಸಿಟ್ಟು. ಮತ್ತೊಂದು ಕಡೆ ತಾಯಿ ನಾಡು ಅನ್ನೋ ವ್ಯಾಮೋಹ. ಈ ಸಿಟ್ಟಿನ ಮೇಲೆ ಸವಾರಿ ಮಾಡೋ ವ್ಯಾಮೋಹ ಹೇಗೇಗೋ ಕಾಣಿಸಿಕೊಳ್ಳತ್ತೆ. ಇಂಗ್ಲೆಂಡಿನ ಸುದ್ದಿ ಅಂದರೆ ಇಲ್ಲಿ ಜನ ಬಾಯಿ ಬಿಡೋದು ವ್ಯಾಮೋಹದಿಂದ. ಸುದ್ದಿ ಕೇಳಿ ಮೂಗು ಮುರಿಯೋದು ಸಿಟ್ಟಿನಿಂದ! ಆಳದಲ್ಲಿ ತಮ್ಮವರೇ ಎಂಬ ವ್ಯಾಮೋಹ, ತಮ್ಮವರೇ ತಮ್ಮನ್ನ ಕೆಟ್ಟದಾಗಿ ನಡೆಸಿಕೊಂಡರು ಅನ್ನೋ ಸಿಟ್ಟು. ಇದೆಲ್ಲಾ ಇಲ್ಲಿಯ ಜನ ಸಮೂಹದ ಚಹರೆಗೆ ವಿಚಿತ್ರ ಕಳೆ ಕೊಡತ್ತೆ. ತಮ್ಮ ಹತಾಶೆ ತೀರಿಸಿಕೊಳ್ಳೋಕೆ ಒಂದು ಕಡೆ ಸಿಟ್ಟು ಮಾಡಿಕೊಂಡರೆ, ಚಪಲ ತೀರಿಸಿಕೊಳ್ಳೋಕೆ ಮತ್ತೊಂದು ಕಡೆ ವ್ಯಾಮೋಹಿಗಳಾಗ್ತಾರೆ.

ಬೇರೆ ದೇಶದ ಜನಗಳ ಹಾಗೆ ತಮ್ಮ ವಂಶವೃಕ್ಷ ಹುಡುಕ್ಕೊಳ್ಳೋ ಹುಚ್ಚು ಇವರಿಗೂ ಇದೆ. ಆ ಹುಡುಕಾಟ ಕಡೆಗೆ ಒಬ್ಬ ಕಳ್ಳ, ಕೊಲೆಗಡುಕ ಅಥವಾ ಸೂಳೆಯ ಕಾಲುಬುಡಕ್ಕೆ ಬಂದು ನಿಲ್ಲಬಹುದು. ಆದರೆ ಅವರಿಗೆ ಅದರ ಬಗ್ಗೆ ಕಳವಳ ಇಲ್ಲ. ಯಾಕೆಂದರೆ ಆ ಮೂಲ ವ್ಯಕ್ತಿಗೆ ಆಗಿರಬಹುದಾದ ಅನ್ಯಾಯದ ಸೂಕ್ಷ್ಮ ಅರಿವು ಇವರಿಗೆ ಇದೆ. ಇಂಗ್ಲೆಂಡಿನವರು ಐರಿಶರನ್ನ ಕೆಟ್ಟದಾಗಿ ನಡೆಸಿಕೊಂಡಿರುವುದು ಈಗ ಚರಿತ್ರೆ. ಅದೇ ಚರಿತ್ರೆಯ ನೆರಳು ಆಸ್ಟ್ರೇಲಿಯಾದ ಬಿಳಿಯರ ಸಂಖ್ಯೆಯಲ್ಲಿ ಐರಿಶರು ಹೆಚ್ಚಾಗಿರುವಂತೆ ನೋಡಿಕೊಂಡಿದೆ! ಹಸಿವಿಗೆ ಬ್ರೆಡ್ ಕದ್ದಂಥ ಅತಿ ಸಣ್ಣ ತಪ್ಪಿಗೆ ಜೈಲಾಗಿದೆ. ತಿಂಗಳಾನುಗಟ್ಟಲೆ ಬೋಟಿನ ತಳದ ಕಿಂಡಿಯಿಂದ ನೀರೊಂದನ್ನೇ ನೋಡಿ ದಿಕ್ಕುದೆಸೆ ಕಾಣದೆ ಕಂಗೆಟ್ಟಿದ್ದಾರೆ. ಅಳಿದುಳಿದು ಇಲ್ಲಿಗೆ ಬಂದಿಳಿದು ಆಸ್ಟ್ರೇಲಿಯ ಕಟ್ಟಿದ್ದಾರೆ.

ಅಧಿಕಾರದ ಬಗ್ಗೆ ಅನುಮಾನ, ಅಪನಂಬಿಕೆ. ಜೀವನದಲ್ಲಿ ಗೆದ್ದೋರ ಬಗ್ಗೆ ಅಸಡ್ಡೆ. ಧರ್ಮ-ಕರ್ಮದ ವಿಷಯದಲ್ಲಿ ನಿರ್ಲಕ್ಷ್ಯ. ಸಮಾನತೆಯ ಬಗ್ಗೆ ವಿಶಿಷ್ಟವಾದ ಆಶಯ... ಇವೆಲ್ಲಾ ಈ ನಾಡಿನ ಚರಿತ್ರೆಯ ಅಮೂಲ್ಯವಾದ ಕೊಡುಗೆ. ಆಸ್ಟ್ರೇಲಿಯನ್ನರ ಅದಮ್ಯ ಹುಚ್ಚುತನಕ್ಕೆ ಐರಿಶರ ಬಳುವಳಿಯಿದೆ. ಅಬಾರಜಿನಿಗಳ ಮೇಲಿನ ಕ್ರೌರ್ಯದಲ್ಲಿ ಬ್ರಿಟೀಷ್ ಆಫೀಸರುಗಳ ದರ್ಪವಿದೆ. ಈಗ ವಲಸೆ ಬರುತ್ತಿರುವವರ ಮೇಲಿನ ಪ್ರೀತಿಯಲ್ಲಿ ಮುಂಚೆ ಬಂದ ವಲಸಿಗರ ತುಂಬು ಹೃದಯವಿದೆ. ಈಗೀಗ ಆ ಹುಚ್ಚು, ದರ್ಪ ಮತ್ತು ಪ್ರೀತಿಯ ನಡುವೆ ಒಂದು ಚೂರು ವ್ಯಂಗ್ಯಾನೂ ಸೇರಿಕೊಂಡು ಆತಂಕ ಹೆಚ್ಚಿಸ್ತಿದೆ. ಆದರೆ ಅದನ್ನೆಲ್ಲಾ ಇನ್ನು ಯಾವಾಗಲಾದರೂ ಹೇಳ್ತೀನಿ.

ಹಿಂದಿನ ಪ್ರತಿಕ್ರಿಯೆಗಳು

basavakumar t.n:

January 3rd, 2008 at 9:23 pm
dear sudarshan.
nimma australia article chennagide, neevu innu hechhu hechhu austriliadavara bagge bareyabeku,allina ottare sthiti hegide,rajakiyavaagi,dhaarmikavagi,bareyutttiri.

vandanegalau.
basavakumar.mangalore.

ಕೇಶವ:

January 6th, 2008 at 7:59 am
ಸುದರ್ಶನ್,

ಚೆನ್ನಾಗಿದೆ. ಉತ್ತರ ತುದಿಯ ಇಂಗ್ಲಂಡ್, ದಕ್ಷಿಣ ತುದಿಯ ಆಸ್ಟ್ರೇಲಿಯಾ - ಇದು ಅತ್ತೆ-ಸೊಸೆ ಸಂಬಂಧ, ಗಂಡ-ಹೆಂಡಿರ ಸಂಬಂಧದಂತೆ...

ಕೇಶವ

Girish:

January 12th, 2008 at 11:51 pm
Oh!
Nanage eega gottaitu sydneyalli Aus cricket team hageke vartisiddu endu....
Thanks for the good write up.

Raveesh Kumar:

January 13th, 2008 at 12:51 pm
hi,

australiyada moola katheya innondu mukhavannu lekhanadalli heliddeeri. dhanyavaadagalu.

Raveesh
Blog : Ee Prapancha (http://raveeshkumar.blogspot.com)

ಪುಟದ ಮೊದಲಿಗೆ
 
Votes:  1     Rating: 4    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ