ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾದಿಂದ ತಾಜಾ ಕ್ರಿಕೆಟ್ ಸಮಾಚಾರ :ನಮ್ಮ ವಿಜಯದ ಖುಷಿ ಅಲ್ಲಿ ಹೀಗಿದೆ    
ಸುದರ್ಶನ್
ಗುರುವಾರ, 27 ಮಾರ್ಚ್ 2008 (03:49 IST)

ಇಂಡಿಯದಿಂದ ಆಸ್ಟ್ರೇಲಿಯಾಕ್ಕೆ ವಲಸೆ ಬಂದವರಿಗೆ ಕ್ರಿಕೆಟ್ ಅನ್ನೋದು ಆಟಕ್ಕಿಂತ ಒಂದು ಪಟ್ಟು ಹೆಚ್ಚು. ಅದು ಧರ್ಮದಂತೆ ಎಂಬ ಅರ್ಥದಲ್ಲಿ ಅಲ್ಲ, ಆದರೆ ಅದೊಂದು ಸಾಧನ ಎಂಬ ಅರ್ಥದಲ್ಲಿ. ಇಲ್ಲಿಗೆ ಬಂದಿಳಿದ ಮೊದಲ ದಿನ ಯಾರಾದರೂ ಸ್ಥಳೀಯರೊಡನೆ ಹರಟೆ ಹೊಡೆಯಬೇಕೆಂದರೆ ಕ್ರಿಕೆಟ್ ಮಹಾ ಸಾಧನ. ವಲಸೆ ಬಂದ ಹಲವು ವರ್ಷಗಳವರೆಗೆ ಈ ಮಾತು ನಿಜ. ಕಾಲ್‌ಸೆಂಟರ್‍ ಆಗಲಿ, ಬಿ.ಪಿ.ಓ ಆಗಲಿ ಅವತರಿಸುವ ಮೊದಲಂತು ಇದರ ಮಹತ್ವ ಇನ್ನೂ ಹೆಚ್ಚು. ಈಗಲೂ ಅದರ ಮಹತ್ವ ಕಡಿಮೆಯೇನಿಲ್ಲ.

ಈ ಹಿನ್ನೆಲೆಯಲ್ಲಿ ಈ ವರ್ಷದ ಮೊದಲ ವಾರ ಇಲ್ಲಿಯ ಇಂಡಿಯನ್ನರಿಗೆ ಅತಿಭಾವುಕತೆಯ ದಿನಗಳು. ಎಷ್ಟೋ ಜನರು ತಲೆ ಕೆಡಿಸಿಕೊಳ್ಳುವಂತೆ ಮಾಡಿದ ದಿನಗಳು. ಹೊಸವರ್ಷದಲ್ಲಿ ಸ್ಟಾಕ್ ಬೆಲೆ ಕೆಳಕೆಳಗೆ ಜಾರುತ್ತಿರುವುದು, ಜಪಾನಿನ ವೇಲಿಂಗ್ ಹಡಗು ಆಸ್ಟ್ರೇಲಿಯಾದತ್ತ ಬರುತ್ತಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಇಂಡಿಯನ್ ಟೀಮಿನವರು ಅಳುಮುಂಜಿಗಳಂತೆ ಆಡ್ತಿದ್ದಾರೆ ಅಂತ ಕೆಲವು ಆಸ್ಟ್ರೇಲಿಯನ್ನರು ಹೇಳುತ್ತಿದ್ದರು. ಆದರೆ ಹಲವರಿಗಂತೂ ಆಸ್ಟ್ರೇಲಿಯಾದ ಟೀಮಿನ ಬಗ್ಗೆ ರೋಸಿ ಹೋದಂತೆ ಇತ್ತು. ನನ್ನ ಬಳಿ ಹಲವರು, ಪಾಂಟಿಂಗ್ ಟೀಮಿನ ಅಹಂ ಹತ್ತಿಕ್ಕಲು ನೀವೇ ಸರಿ ಎಂದು ಹೇಳಿದ್ದುಂಟು. ಇಂಡಿಯನ್ನರ ಜತೆ ಹಲವಾರು ಆಸ್ಟ್ರೇಲಿಯನ್ನರು ದನಿ ಗೂಡಿಸಿದ ಅಪರೂಪದ ದಿನಗಳಿವು. ಟೀವಿ, ರೇಡಿಯೋ ಬಿಡಿ - ಏನು ಹೇಳಬೇಕು ಅಂತ ಗೊತ್ತಾಗದೆ ತಡಬಡಾಯಿಸಿದ ದಿನಗಳು. ತಮ್ಮ ದೇಶದ ಟೀಮನ್ನೇ ತಾವು ಹೇಗೆ ಬಯ್ಯೋದು ಅನ್ನೋ ಆತಂಕ ಒಂದು ಕಡೆ, ಹೀಗೆ ಆಸ್ಟ್ರೇಲಿಯಾ ಹೇಗಾದರೂ ಮಾಡಿ ಗೆಲ್ತಾ ಹೋದರೆ ಏನು ಗತಿ ಅಂತ ಇನ್ನೊಂದು ಕಡೆ. ಆಸ್ಟ್ರೇಲಿಯಾ ಆಡ್ತಿದೆ ಅಂದರೆ ಯಾರೂ ಕ್ರಿಕೆಟ್ ನೋಡದ ದಿನಗಳು ಬಂದು ಬಿಟ್ಟರೆ?

ಇಲ್ಲೇ ಹುಟ್ಟಿದ, ಬೆಳೆದ ಹಲವಾರು ಜನ ಇಂಡಿಯನ್ ಮಕ್ಕಳು ತಮ್ಮ ಯಾವುದೋ ನಂಬಿಕೆಗೆ ಧಕ್ಕೆ ಬಂದಂತೆ ಕಂಗೆಟ್ಟು ಓಡಾಡುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆ ಮಾಡದೆ ಕೆಲಸಕ್ಕೆ ಬರುತ್ತಿದ್ದಂತೆ ಕಾಣುತ್ತಿತ್ತು. ಗಂಟೆಗಟ್ಟಲೆ ಮೋಬೈಲ್‌ನಲ್ಲಿ ತಮ್ಮ ಸಂಕಟ ಹಂಚಿಕೊಂಡು ಬಡಬಡಿಸುತ್ತಿದ್ದರು. ಮೊದಲ ತಲೆಮಾರಿನ ವಲಸಿಗರಿಗಿಂತ ಇವರಿಗೆ ಯಾಕೋ ಹೆಚ್ಚು ಪೆಟ್ಟಾದಂತೆ ಕಾಣುತಿತ್ತು. ಇವೆಲ್ಲಾ ಯಾಕೆ ಹೀಗೆ, ಇಲ್ಲಿ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಪರದಾಡುತ್ತಿದ್ದೆ. ಅಷ್ಟರಲ್ಲಿ ಕುಂಬ್ಳೆ-ಪಾಂಟಿಂಗ್ "ಸಂಧಾನ"ದ ವರದಿಗಳು ಬಂದವು. ಕ್ರಿಕೆಟ್ ಜಗತ್ತಿನಲ್ಲಿ "ಶಾಂತಿ" ಬಿಗಡಾಯಿಸಿದೆ ಎಂಬ ವರದಿಗಳು ಬಂದವು. ಎರಡು ಟೀಮಿನ ನಡುವೆ ಪ್ರೀತಿ ಮಧುರತೆ ಉಕ್ಕಿ ಹರಿಯುವಂತೆ ಕಾಣತೊಡಗಿತು. ಪರ್ತ್ ಟೆಸ್ಟ್ ಶುರು ಆಗಿಬಿಟ್ಟಿತು. ಕ್ರಿಕೆಟ್‌ನಲ್ಲಿ ಆಸಕ್ತಿಯಿಲ್ಲದವರೂ (ಅಂಥವರು ಇಲ್ಲಿ ಬಹಳ ಇದ್ದಾರೆ!) ಸ್ಕೋರ್‍ ಕೇಳಲು ಶುರುಮಾಡಿದ್ದರು. ಬರೇ ಒನ್-ಡೇ ನೋಡುತ್ತಿದ್ದವರು ಟೆಸ್ಟ್ ನೋಡಬೇಕೆಂದು ಗಾಬರಿ ಹುಟ್ಟಿಸುತ್ತಿದ್ದರು. ಟೀವಿ ಚಾನಲ್‌ಗಳು, ಸ್ಪಾಂಸರ್‌ಗಳು ಬಾಯಿ ಚಪ್ಪರಿಸಿದ್ದು ನಿಮಗೂ ಕೇಳಿರಬಹುದು.

ಸಿಡ್ನಿ ಟೆಸ್ಟಲ್ಲಿ ಯಾರು ಯಾರಿಗೆ ಯಾವಾಗ ಯಾಕೆ ಏನು ಹೇಳಿದರು ಅನ್ನೋದು ಒತ್ತಟ್ಟಿಗಿರಲಿ, ಅದನ್ನು ಸ್ವಲ್ಪ ಸಮಾಧಾನವಾಗಿ ಇನ್ನಾವಾಗಲಾದರೂ ನೋಡೋಣ. ಆದರೆ ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸೋಲುವಂತಿದ್ದ ಕಡೆಯ ಕ್ಷಣಗಳು. ನನಗೆ ಮೊಟ್ಟ ಮೊದಲು ಹುರುಪಿನಿಂದ "Go India!" ಎಂದು sms ಕಳಿಸಿದ ಸ್ಥಳೀಯ ಪಾಂಟಿಂಗಿನ ಬಗ್ಗೆ ನನ್ನೊಡನೆ ಮುಂಚೆ ಗೊಣಗಿದ್ದವ. ಅವನ ಅಜ್ಜ ಡಾನ್‌ ಬ್ರಾಡ್‌ಮನ್ ಜತೆ ಚಿಕ್ಕಂದರಲ್ಲಿ ಕ್ರಿಕೆಟ್ ಆಡಿದ್ದನಂತೆ. ಹೀಗೆಲ್ಲಾ ಇದೆಯಲ್ಲಾ - ಈ ಸಮಾಜದ ಜತೆಗಿನ ನಂಟು ಬಲೇ ಗೋಜಲು ಎಂದುಕೊಳ್ಳುತ್ತಿದ್ದೆ. ಆದರೆ ಇಂಡಿಯ ಗೆದ್ದೊಡನೆ ತಲೆಕೆಡಿಸಿಕೊಂಡಿದ್ದ ಇಂಡಿಯನ್ ಮಕ್ಕಳು ನಿಟ್ಟುಸಿರುಬಿಟ್ಟರು. ಗೋಜಲು ಕಳೆದಂತೆ ಸಮಾಧಾನದಿಂದ ನಕ್ಕರು. ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುತ್ತಿರುವುದು ಥಟ್ಟನೆ ನೆನಪಿಗೆ ಬಂತು. ಟೀವಿ ಚಾನಲ್ ತಿರುಗಿಸಿ ವೀನಸ್ ವಿಲಿಯಮ್ಸ್‌ ಎದುರು ಆಕೆ ಚೆನ್ನಾಗಿಯೇ ಆಡಿ ಸೋತದ್ದನ್ನು ನೋಡಿದರು. ಆದರೂ ನಿಶ್ಚಿಂತೆಯಿಂದ ಮಲಗಿದರು.

ಹಿಂದಿನ ಪ್ರತಿಕ್ರಿಯೆಗಳು

vidya:

January 21st, 2008 at 11:53 am
ಕ್ರಿಕೆಟ್ ಹಿಂದೆ ಇಷ್ಟೆಲ್ಲಾ? ವಿಜಯದ ಕದರು ಭಾರತೀಯವಾಗಿರುವಂತಿದೆ!

Ismail M K (Shivamogga) Abu dhabi. U A E:

January 22nd, 2008 at 3:41 am
When Indian " Hockey Team " won its' record ! in Indian History

But ""'

No Body talked about ? ? ? ? Hockey

But

Cricket ? ? ? ?

ಸುಪ್ರೀತ್.ಕೆ.ಎಸ್:

January 31st, 2008 at 5:37 pm
ತುಂಬಾ ಚೆನ್ನಾಗಿ ಆಸ್ಟ್ರೇಲಿಯಾದ ನೆಲದಲ್ಲಿನ ದನಿಗಳ ಬಗ್ಗೆ ಬರೆದಿದ್ದೀರಿ. ಹೆಚ್ಚು ವಿವರಣೆಯಿದ್ದಿದ್ದರೆ, ಸ್ವಲ್ಪ ಹೆಚ್ಚು ಸಮಯ ಕೊಟ್ಟಿದ್ದರೆ ಸರ್ವಕಾಲಿಕವಾದ ಬರಹವಾಗುತ್ತಿತ್ತು.
‘ಸೊಕ್ಕು ಮುರಿದ' ಭಾರತ ಅಂತಲೇ ಭಾರತದ ಇಡೀ ದೇಶದ ಜನರು ಉದ್ಗರಿಸಿದ್ದರು.

ಪುಟದ ಮೊದಲಿಗೆ
 
Votes:  0     Rating: 0    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು