ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ- ಡೇವಿಡನ ದುಗುಡಗಳು    
ಸುದರ್ಶನ್
ಗುರುವಾರ, 27 ಮಾರ್ಚ್ 2008 (03:55 IST)

ಬೇಲಿ ಪಕ್ಕ ನಿಂತು ಪಕ್ಕದ ಮನೆಯ ಡೇವಿಡ್ ಜತೆ ಮಾತಾಡುತ್ತಿದ್ದೆ. ಅವನು ಒಂದು ರೀತಿಯ ದುಗುಡದಲ್ಲಿದ್ದ. ಹೇಗಿದ್ದೀ ಎಂಬುದಕ್ಕೆ ಚಿನಕುರಳಿಯಂತೆ ಪಟಪಟ ಎನ್ನಬೇಕಾದವನು ಎಳೆದೆಳದು ಏನೋ ಇದ್ದೇನೆ ಅಂದ. ನಾವು ಈ ಮನೆಗೆ ಬಂದ ಹೊಸತರಲ್ಲಿ ಅವನು ಮತ್ತು ಅವನ ಹೆಂಡತಿ ಜಗಳವಾಡುತ್ತಿದ್ದುದು ರಾತ್ರಿ ತುಂಬಾ ಹೊತ್ತಿನವರೆಗೆ ನಮಗೆ ನಿದ್ದೆಗೊಡುತ್ತಿರಲಿಲ್ಲ. ಅಸ್ಪಷ್ಟ ಮಾತುಗಳು. ಕಿವಿಯನ್ನು ಚುರುಕುಗೊಳ್ಳಿಸುತ್ತದೆ. ಅದು ಎಷ್ಟೇ ವ್ಯರ್ಥವಾಗಿದ್ದರೂ ಕೂಡ. ಜತೆಗೆ ಏನು ತೊಂದರೆಯೋ ಎಂಬ ಸಣ್ಣ ಚಿಂತೆ ಬೇರೆ. ಕಿವಿ ಹಾಗೂ ಮನಸ್ಸಿಗೆ ಸುಸ್ತಾಗಿ ನಿದ್ದೆ ಹತ್ತುತ್ತಿತ್ತು. ಮರುದಿನ ಬೆಳಗ್ಗೆ ಅವರು ಎಂದಿನಂತೆ ಇರುತ್ತಿದ್ದರು. ರಾತ್ರಿ ಹತ್ತಿಕೊಂಡಿದ್ದ ದೆವ್ವ ಏನಿರಬಹುದು ಎಂದು ಗುಟ್ಟಾಗಿಯೇ ಉಳಿದುಬಿಡುತ್ತಿತ್ತು.

ಪ್ರಿಂಟಿಂಗ್ ಕೆಲಸ ಮಾಡುವ ಡೇವಿಡ್ ಏಳಡಿ ಹತ್ತಹತ್ತಿರದ ಆಳು. ಅದಕ್ಕೆ ಹೊಂದುವಂಥ ಮೈಗಾತ್ರ ಕೂಡ. ನೋಡಿದವರಲ್ಲಿ ಹಿಂಜರಿಕೆ ಮೂಡಿಸಬಹುದಾದ ಆಕೃತಿ. ಲೆಬನೀಸ್‌ ಜನರ ಬಗ್ಗೆ ಕೀಳಾಗಿ ಮಾತಾಡುತ್ತಾನೆ. ಅವರನ್ನು ಕಂಡರೆ ತನಗೆ ಆಗದು ಎಂದು ನೇರವಾಗಿ ಹೇಳುತ್ತಾನೆ. ಅವರನ್ನು ರೇಸಿಸ್ಟ್ ಮಾತುಗಳಿಂದ ಹೀನಾಮಾನ ಬಯ್ಯುತ್ತಾನೆ. ಅದು ಸರಿಯಲ್ಲ ಎಂದು ನಾನು ಹೇಳುವುದನ್ನು ಅವನು ಕೇಳಿಸಿಕೊಳ್ಳುವುದೇ ಇಲ್ಲ. ಆದರೆ ಈವತ್ತು ಯಾಕೋ ಸ್ವಲ್ಪ ದುಗುಡದಲ್ಲಿ ದನಿ ತಗ್ಗಿಸಿ ಮಾತಾಡುತ್ತಿದ್ದಾನೆ. ಆಗಾಗ ತಲೆ ನೇವರಿಸಿಕೊಳ್ಳುತ್ತಾನೆ. ಜತೆಗೆ ಬೇಲಿಯನ್ನು ದಿಟ್ಟಿಸಿ ಅರೆಕ್ಷಣ ಮಾತು ನಿಲ್ಲಿಸುತ್ತಾನೆ. ನಿಟ್ಟುಸಿರಿಡುತ್ತಾನೆ. ಇದು ನನಗೆ ಗೊತ್ತಿದ್ದ ಪಕ್ಕದ ಮನೆಯ ಡೇವಿಡ್ ಅಲ್ಲವೇ ಅಲ್ಲ.

ಇವನ ದೊಡ್ಡ ಮಗಳಿಗೆ ಬಾಯ್‌ಫ್ರೆಂಡ್ ಸಿಕ್ಕಾಗ ಅದನ್ನು ತುಂಬ ಖುಷಿಯಲ್ಲಿ ಹೇಳಿದ್ದ. ಆ ಖುಷಿ ಮತ್ತೊಂದು ಜೀವವನ್ನು ಆಕರ್ಷಿಸಿ ಹಿಡಿದಿಡಬಲ್ಲ ಮಗಳ ತಾಕತ್ತು, ಚಂದದ ಬಗ್ಗೆಯೋ ಅಥವಾ ಹುಡುಗ ಒಳ್ಳೆಯವನಾಗಿದ್ದು ಅವಳ ಜೀವನಕ್ಕೊಂದು ದಾರಿಯಾಯಿತೆಂದೋ ಹೇಳುವುದು ಕಷ್ಟ. ಅಥವಾ ಇಂಥದೇ ಹತ್ತಾರು ಭಾವಗಳ ಕೊಲಾಜ್ ಇರಬಹುದು. ಆದರೂ ಉತ್ಸಾಹ ಮಾತ್ರ ಪುಳಪುಳ ಅನ್ನುತ್ತಿತ್ತು. ನಂತರ ಮಗಳು ಹಾಗು ಅವಳ ನಲ್ಲ ಬೇರೆ ಮನೆ ಮಾಡುತ್ತಿದ್ದೇವೆ ಅಂದಾಗಲೂ ಹಾಗೇ ಖುಷಿಪಟ್ಟಿದ್ದ. ಈ ರೀತಿಯ ಜೀವನೋತ್ಸಾಹಕ್ಕೆ ಮದುವೆಯ ತೋರಣ ಬೇಕೆಂಬ ಒತ್ತಾಯವೇ ಇಲ್ಲ. ಇದೇ ವಿಷಯದ ನನ್ನ ಇನ್ನೊಬ್ಬ ಗೆಳೆಯನ ಬಗ್ಗೆ ಇನ್ನಾವಗಲಾದರೂ ಹೇಳುತೀನಿ.

ಮೂರು ಮಕ್ಕಳ ತಂದೆಯಾದ ಡೇವಿಡ್‌ಗೆ ಮತ್ತೊಬ್ಬ ಪುಟ್ಟ ಮಗಳಿದ್ದಾಳೆ. ಈಗ ತಾನೆ ಹೈಸ್ಕೂಲಿಗೆ ಬಂದಿರುವ ಅವಳ ಬಗ್ಗೆ ಡೇವಿಡ್‌ಗೆ ತುಂಬಾ ಹೆಮ್ಮೆ. ಚೆನ್ನಾಗಿ ಓದುತ್ತಾಳೆ. ಕ್ಲಾಸಿನಲ್ಲಿ ಮುಂದಿದ್ದಾಳೆ. ಯಾವಾಗಲೂ ಪುಸ್ತಕ ಹಿಡಿದು ಕೂತಿರುತ್ತಾಳೆ ಎಂಬ ಹೆಗ್ಗಳಿಕೆ. ಅವಳು ಚೆನ್ನಾಗಿ ಓದಿ ಮುಂದಕ್ಕೆ ಬರುತ್ತಾಳೆ ಎಂದು ಒಳಗೊಳಗೇ ಪಡುವ ಸಂತಸ ಅವನ ಮಾತುಗಳಲ್ಲಿ ನನಗೆ ಕಾಣುತಿತ್ತು.

ಆದರೆ ಈಗ ಡೇವಿಡ್‌ನ ದುಗುಡ ತನ್ನ ಮಗನ ಬಗ್ಗೆಯಾಗಿತ್ತು. "ಹತ್ತನೇ ಕ್ಲಾಸಾಗುತ್ತಲೇ ಸ್ಕೂಲು ಬಿಟ್ಟಿದ್ದಾನೆ. ಏನು ಮಾಡುವುದಕ್ಕೂ ಉತ್ಸಾಹವಿಲ್ಲದವನಂತೆ ಇರುತ್ತಾನೆ. ಅಪ್ರೆಂಟಿಸ್‌ಶಿಪ್ ಮಾಡು ಎಂದು ಹೇಳಿದರೂ ಕೇಳುತ್ತಿಲ್ಲ. ನಾನು ಹೇಳಿದೆ ಅಂತ ಹೇಳಬೇಡ - ಯಾವಾಗಲಾದರೂ ಸಿಕ್ಕರೆ ಅವನಿಗೆ ನೀನೂ ಬುದ್ಧಿ ಹೇಳು" ಅಂದ. ನಾನು ಗೋಣಾಡಿಸಿದೆ. "ಮನೆ ಬಿಟ್ಟು ಹೋಗು ಎನ್ನುವ ಹಾಗಿಲ್ಲ. ಹಾಗೇನಾದರೂ ಆದರೆ ಕುಡಿತ ಡ್ರಗ್ಸ್ ಅಂತ ನಾಶವಾಗಿ ಹೋಗ್ತಾನೆ. ಜವಾಬ್ದಾರಿ ಅರ್ಥಮಾಡಿಸೋಕೆ ಆಗ್ತಿಲ್ಲ. ನಾನೇನು ಮಾಡಲಿ" ಅಂತ ನಿಟ್ಟುಸಿರುಬಿಟ್ಟ.

ಅಯ್ಯೋ ಬಿಡಯ್ಯ-ಒಂದೆರಡು ದಿನ ಅವನೇ ಸರಿ ಹೋಗ್ತಾನೆ. ಒಳ್ಳೆ ಹುಡುಗಾನೆ ಅಲ್ಲವ? ಯಾಕೆ ಸುಮ್ಮನೆ ಚಿಂತೆ ಮಾಡ್ತ್ಯ? ಏನು ಮಾಡ್ತಾ ಇದ್ಯ ಅಂತ ಆಗಾಗ ಕೇಳ್ತಿರು. ಅವನು ಬಯ್ದರೂ ಪರವಾಗಿಲ್ಲ ಸಹಿಸಿಕೋ. ನಮ್ಮ ಮಕ್ಕಳನ್ನ ಅಲ್ಲದೆ ಇನ್ನಾರನ್ನ ಸಹಿಸಬೇಕು ನಾವು. ಹಿಂಗೆಲ್ಲಾ ಸಮಾಧಾನ ಮಾಡಬೇಕು ಅಂತ ಅನ್ಸಿತ್ತು. ಆದರೆ, ಅವನ ದುಗುಡದ ಆಳದಲ್ಲಿ ನನಗೆ ಕಾಣೋದಕ್ಕಿಂತ ಹೆಚ್ಚೇನೋ ಇದೆ ಅನ್ನಿಸಿ ಸುಮ್ಮನಾದೆ. "ಡೋಂಟ್ ವರಿ, ಹಿ ವಿಲ್ ಬಿ ಆಲ್‌ ರೈಟ್" ಅಂದೆ. "ಹೋಪ್‌ ಸೋ" ಅನ್ನುತ್ತಾ ಮನೆಯೊಳಗೆ ಕಾಲೆಳೆದುಕೊಂಡು ಹೋದ.

ಶಿಶಿರದಲ್ಲಿ ಅವರ ಮನೆಯ ಮುಂದಿರುವ ದೊಡ್ಡ ಮರದ ಅಗಲವಾದ ಎಲೆಗಳೆಲ್ಲಾ ಉದುರಿ ನಮ್ಮ ಮನೆಯ ಅಂಗಳದ ತುಂಬಾ ಮುಚ್ಚಿಕೊಳ್ಳುತ್ತದೆ. ಅದನ್ನು ಗುಡಿಸಿ ತೆಗೆಯುವುದೇ ಒಂದು ದೊಡ್ಡ ಕೆಲಸ. ಈಗೀಗ ಹಾಗೇ ತುಂಬಾ ದಿನ ಬಿಟ್ಟುಬಿಟ್ಟಿರುತ್ತೇವೆ. ಅವರ ಮನೆಯಲ್ಲಿ ನೆಟ್ಟ ಜಾಜಿ ಗಿಡದ ಬಳ್ಳಿಯೂ ಬೇಲಿಯೆಲ್ಲಾ ಹಬ್ಬಿ ನಮ್ಮತ್ತಲೂ ಹೂ ಬಿಡುತ್ತದೆ. ವಸಂತದಲ್ಲಿ ನೋಡಲು ಅದು ತುಂಬಾ ಚಂದ.

ಹಿಂದಿನ ಪ್ರತಿಕ್ರಿಯೆಗಳು

k.aravind mitra:

February 13th, 2008 at 7:21 pm
NAMASTE,

The magazine is good,but articles written by people from non-literature field is just entertainig and many a times out of the topic.To patch it up tey add some aesthetic sence to the same.These articles look like a caricature of Ravi Belegere's style.But it is not possible for all.The article wriiten on gay is an explanation of an event with comic touch, but this comic mode has lessen the seriousness of the matter.Inspite magazine has many other good articles by literary stalwarts.

Namaste

belli:

February 13th, 2008 at 10:14 pm
The is very good and the way you explained it is really beautiful.

Thanks sir

Ashok:

February 14th, 2008 at 12:17 am
Interesting to see your observation on ‘racist' comments by your friend. I would love to hear how conservative Australia repsonded to the recent ‘apology' by its PM.

ಪುಟದ ಮೊದಲಿಗೆ
 
Votes:  0     Rating: 0    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು