ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಪೂರ್ಣಚಂದ್ರ ತೇಜಸ್ವಿಯವರ ಮೂರು ಕವಿತೆಗಳು    
ಪೂರ್ಣಚಂದ್ರ ತೇಜಸ್ವಿ
ಶನಿವಾರ, 5 ಏಪ್ರಿಲ್ 2008 (07:18 IST)

ಪೂರ್ಣಚಂದ್ರ ತೇಜಸ್ವಿಯವರು ಮರೆಯಾಗಿ ಇಂದಿಗೆ ಒಂದು ವರ್ಷ. ತೇಜಸ್ವಿಯವರನ್ನು ಕವಿ ಅಂತ ಯಾರೂ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ಅದಕ್ಕೋ ಏನೋ ಅವರು ನಳಿನಿ ದೇಶಪಾಂಡೆ ಎಂಬ ಹೆಸರಿನಲ್ಲಿ ಮೊದಲು ಕವಿತೆ ಬರೆಯುತ್ತಿದ್ದರು. ತೇಜಸ್ವಿಯವರು ಬಹಳ ವರ್ಷಗಳ ಹಿಂದೆ ಅವರ ನಿಜವಾದ ಹೆಸರಿನಲ್ಲಿ ಬರೆದ ಮೂರು ಅಪರೂಪದ ಕವಿತೆಗಳು ಇಲ್ಲಿವೆ.   

 

 

ಯೂನಿವರ್ಸಿಟಿ ಕವಿ

ಲಿಪ್‌ಸ್ಟಿಕ್ಕು, ಲಿಂಗ್ವಿಸ್ಟಿಕ್ಕು,
ಕೆಮಿಸ್ಟ್ರಿ, ಜ್ಯಾಮೆಟ್ರಿ,
ಯೂನಿವರ್ಸಿಟಿ ಪೊಯಿಟ್ರಿ.

ಅಹಹಹ, ವಹವ್ವಾ
ಎದೆಗುದಿತ ಎರೆಯಲೆರಕ
ಎಲಿಯಟ್ಟಿನ ಗೋಲಕ.

ಮೂವ್ವತ್ತರ ಹರೆಯದಲ್ಲು
ಮರೆಯದ ಭಂಗಿಮಾತ್ರ.
ಬಾಯ್ ಬೆರಳಿನ ಬಾಲಕ
ಮೂರ್ಖ-------

ಎಂದೆ ನಾನು ಯಾರಿಗೊ;
ಆ ಅವನೊಡನೆ ನನಗು ಕೂಡಿ
ಅಂದೇ ಬಿಡಿ ದಿsಕ್ಕಾರ:

ಬೆರಗು ಈಗ ಅರಗಿನ ಮನೆ!
ಉಸುರಲ್ಲಿ ಹತ್ತರ್ಥ ಹುಗಿಸಿ
ನಡೆಸುವೀ ಕುಸುರಿ ಕೆಲಸಕ್ಕೆ
ಹೇಸಿದ್ದೇನೆ--ಈಗ;

ಪೆಚ್ಚುಗೊಳಿಸುವುದರಲ್ಲೇನು
ಹೆಚ್ಚುಗಾರಿಕೆ ಇತ್ತು?
ವ್ಯರ್ಥ ಚತುರೋಕ್ತಿಗಳ
ಮೆಚ್ಚಿಕೊಂಡವರ ಕಂಡೆನಲ್ಲ!

ಕೀಲುಗೊಂಬೆಯ ಪಕ್ಕ
ಸಜೀವ ಕವನಕ್ಕೆ,
ನಾಡಿಯಾಡುವ ಜಾಡ ನೋಡಬಲ್ಲ
ಬಲ್ಲಿದ ಮಾತ್ರ ಸಿಕ್ಕಲಿಲ್ಲ!
ಪಂಚೇಂದ್ರಿಯ ಗ್ರಸ್ತ
ನಗು ಹಾಸ ಕೋಪತಾಪಪ್ರವೀಣಸ್ಥಿಮಿತ ಚಿತ್ತ;

(ಲಹರಿ-೧, ೧೯೬೪)

೨. ನವಯತ್ನ ಕಲ್ಪ ಅಥವ ನವ್ಯ ವಿಮರ್ಶಕನಿಗೆ

ಕಾಲ ಕಾಲಕ್ಕೆ ಸರಿಯಾಗಿ ಸ್ಥಳದಲ್ಲಿರಲು
ಸಂಚರಿಸುತ್ತಾರೆ ಇವರು ಯಾವಾಗಲು
ಹತ್ತಿ ಮೋಟಾರು ಸ್ಕೂಟರು ರೈಲು
ಇಂತಿಂಥ ಊರ ಇಂತಿಂಥ ಹೋಟಲಿನ
ತಂತಿ ವಿಳಾಸ, ಇಂತಿಷ್ಟೆ ನಂಬರಿನ ಫೋನು
ಇತ್ಯಾದಿ ಸಮಗ್ರ ಸುದ್ದಿಗಳನ್ನು ಪ್ರಕಟಿಸಿ
ಇಂತಿಂಥವಕ್ಕೆ ಇವರಲ್ಲಿಯೇ ವ್ಯವಹರಿಸಿ:
ಎಂದು ಕೊಡುತ್ತಾರೆ ಎದೆ ತಟ್ಟಿ, ಉದ್ದುದ್ದ ಪಟ್ಟಿ.

ವಾತ, ಪಿತ್ತ, ಕಫ, ಛಳಿ, ಛಳುಕು
ಅತಿ ಭಾವುಕತೆ; ಪ್ರಾಸಕ್ಕೆ ದಾಸರಾಗುವುದು,
ಅನಗತ್ಯ ಚಿತ್ತೋನ್ಮಾದ ಹಾಗೂ
ರಕ್ತನಾಳಗಳಲ್ಲಿ ಛಂದಸ್ಸಿನೊತ್ತಡ
ಕೀಲು ಕೀಲುಗಳಲ್ಲಿ ಸಂಸ್ಕೃತದ ಕಿರಿಕಿರಿ.
ಇಷ್ಟೇ ಅಲ್ಲಯ್ಯಾ, ನಿನ್ನ ಗುಹ್ಯಾಂಗಗಳಲ್ಲಿ ಮೊಳೆವ
ಆತ್ಮೀಯರಿಗೆ ಮಾತ್ರ ಪಿಸುಮಾತಲ್ಲುಸುರುವ
ಒಳ ಪ್ರಜ್ಞೆಯಪಸ್ಮಾರಗಳಿಗೂ ಇವೆ ಇವರ ಬಳಿ

ಲೀವೀಸ್ ಎಲಿಯಟ್ ಇತ್ಯಾದಿಯಾದ
ಹೊರದೇಶದೇಳು ಕೊರಳುಗಳ
ಅಪೂರ್ವ ಸಂಯೋಗ, ಅದೇ ನವಯತ್ನ ಕಲ್ಪ,
ಇದನರಿತೆಯೋ ಕವಿ ಕಿಶೋರ; ನೀನಲ್ಲ ಅಲ್ಪ.
ಮಠ ಗುಂಪು ಪಟಾಲಂಗಳನು ಕಟ್ಟಿ
ಅದೀಯೇ ನೀನೂ ಜಗಜ್ಜಟ್ಟಿ.

(೧೯೬೭)

೩. ಜಗ್ಗದ ಜಗದ್ಗುರು

ಕಾಮಿನಿ ಕಾಂಚನ ತೊರೆದಿದ್ದಾನೊ?
ಪರಿಕಿಸದಿದ್ದರೆ ವಂಚಿತ ನಾನು!
ಇಂದೇ ನೋಡುವೆನೆಂದೇ ನರೇಂದ್ರ
ಹಾಸಿಗೆಯೊಳಗಡೆ ರೂಪಾಯೊಂದ
ಹುದುಗಿಸಿ ನಡೆದ; ಮರೆಯಿಂದ ||೧||

ರಾಮಕೃಷ್ಣರು ಮುಟ್ಟಿದ ಕೂಡಲೆ
ಮುಟ್ಟಿದ ಹಾಗೆ ಕೆಂಡದ ಕಡಲ
ಹಾಸಿಗೆ ಪರಿದಿsಯಾಚೆಗೆ ಹಾರಿ!
ನಿಂತರು ದಿಗ್ಭ್ರಾಂತರ ತರ ಹೌಹಾರಿ.
ಕೇವಲ ಯಃಕಶ್ಚಿತ್ ಒಂದೇ ರೂಪಾಯಿ
-ಗೆ ಹೆದರಿದನಲಾ ಈ ಅವತಾರಿ! ||೨||

ಆದರೆ ನೋಡಿ ನಮ್ಮ ಜಗದ್ಗುರು
ಆರಿಷಡ್ವರ್ಗಕೆ ಸೆಡ್ಡು ಹೊಡೆವರು!
ಕಾಮಿನಿ ಏನು! ಕಾಂಚನವೇನು!
ಆ ಪರಮಾತ್ಮನ ಲೀಲೆ ಇದೆಂದು
ಅಂಜದೆ ಅಳುಕದೆ ಸ್ವೀಕರಿಸುವರು.
ತಮ್ಮನು ತಾವೇ ಸಮರ್ಪಿಸುವರು. ||೩||

ರೂಪಾಯೊಂದಕೆ ತತ್ತರಗುಟ್ಟಿದ
ಕಾಳೀಮಾತೆಯ ಪುಕ್ಕಲು ಸಿಪಾಯಿ!
ಜಗ್ಗರು ಜಗ್ಗರು ನಮ್ಮ ಜಗದ್ಗುರು
ಪಲ್ಲಕ್ಕಿ ಇರಲಿ! ಅವಲಕ್ಕಿ ಇರಲಿ!
ಹಾಸಿಗೆಯೊಳಗೋ! ಹಾಸಿಗೆ ಮೇಲೋ!
ರೂಪಾಯಿರಲಿ! ರೂಪಸಿ ಇರಲಿ!
ಜಗ್ಗರು ಜಗ್ಗರು ನಮ್ಮ ಜಗದ್ಗುರು!! ||೪||

ಹಾಸಿಗೆಯೊಳಗಿನ ಕಾಸಿಗೆ ಹೆದರಿದ
ಪರಮ ಹಂಸರಿಗಿಂತಲು ಇವರು
ಪವಾಡ ಪುರುಷರು ಮಿಗಿಲಾದವರು!
ನೆತ್ತಿನ ಮೇಲೆ ಹೊತ್ತಿದ್ದಾರೆ
ವಜ್ರ ವೈಢೂರ್ಯದ ಹೊನ್ನ ಕಿರೀಟ!
ಪರಮ ಹಂಸನೂ; ಆ ಸಿದ್ಧಾರ್ಥನು
ಬಿಡೋ ಇವನೆದುರು ಕ್ಷುಲ್ಲಕ ಕೀಟ!
ಭಕ್ತವರೇಣ್ಯರಿಗಿವನೇ ಕೊಡುವನು
ಮೋಕ್ಷ ಪ್ರಾಪ್ತಿಗೆ ನೇರ ತಿಕೀಟ! ||೫||

(೧೯೭೨)


  

ಪುಟದ ಮೊದಲಿಗೆ
 
Votes:  3     Rating: 4    
 
 
ಸಂಬಂಧಿಸಿದ ಲೇಖನಗಳು
  ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ
  ಕೃಷ್ಣ ಜನ್ಮಾಷ್ಟಮಿಗೆ ಹೇಮಾ ಕವಿತೆಗಳು
  ಸಂಧ್ಯಾ ಬರೆದ ದಿನದ ಕವಿತೆ
  ಪ್ರಾಚೀ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈದೇಹಿ `ಸೂರ್ಯ ಸಾಂಗತ್ಯ'
  ಬೊಳುವಾರು ಗಾಂಧಿ ಕತೆಗೆ ಕೇಂದ್ರ ಸಾಹಿತ್ಯ ಸಮ್ಮಾನ
  ನಾ.ಡಿಸೋಜಾ ಬರೆದ ಒಂದು ‘ಲೈನ್’ ಪ್ರಕರಣ
  ಅರವಿಂದ ಬರೆದ ದಿನದ ಕವಿತೆ
  ವಿವೇಕ ಶಾನಭಾಗ ಕಂಡ ಜಯಂತ ಕಾಯ್ಕಿಣಿ `ಸ್ವಪ್ನದೋಷ'
  ಜಯಂತ ಕಾಯ್ಕಿಣಿ ಕತೆ `ಸ್ವಪ್ನ ದೋಷ'
  ಕೃತಿಯೂ, ಕರ್ತಾರನ ಪೂರ್ವಗ್ರಹಗಳೂ
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ಬೆಡ್ ರೂಮಿಂದ ಈಚೆಗ ಬರದ ಭೈರಪ್ಪನವರ ಕವಲು
  ಸರ್ಜಾಶಂಕರ್ ಬರೆದ ಹರಳಿಮಠ ಪುರಾಣ
  ಭೈರಪ್ಪ ಎಂದರೆ ಏಕೆ ಕನಲುವಿರಿ?:ಸುಪ್ರೀತ್ ಬರಹ
  ರವಿಪ್ರಕಾಶ್ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್'
  ವಿಜಯಕಾಂತ ಪಾಟೀಲರ ಎರಡು ಕವಿತೆಗಳು
  ಸುಧೀರ್ ಕಾರ್ಕಳ ಬರೆದ ಬಿಯರ್ ಕವಿತೆ
  ಕನ್ನಂಬಾಡಿ ಶಿವಶಂಕರ್ ಕವಿತೆಗಳು
  ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ'
  ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು
  ರಶೀದ್ ಅನುವಾದಿಸಿದ ಒಂದು ಫ್ರೆಂಚ್ ಕವಿತೆ
  ಭಾನುವಾರದ ವಿಶೇಷ: ನಾ. ಡಿಸೋಜ ಕತೆ `ಮೂರು ಕೈ'
  ಹೊನ್ನವಳ್ಳಿ ಆರ್. ದಿಲೀಪ ಬರೆದ ಹತ್ತು ಹೊಳಹು
  ವೈಶಾಲಿ ಕನ್ನಡದಲ್ಲಿ ರಿಲ್ಕ್ ಮತ್ತು ಝೆನ್
  ‘ಹೊಸತೇನೂ ಹೇಳದ ಭೈರಪ್ಪನವರ ‘ಕವಲು’
  ರಜನಿ ಭಟ್ ಕತೆ `ಮಾರಪ್ಪನು ಹಾಗು ಸೋಡಾ ಕುಪ್ಪಿಯೂ..'
  ಎನ್.ಶಂಕರ್ ಬರೆದ ದಿನದ ಕವಿತೆ
  ತಿರುಮಲೇಶ್ ಕನ್ನಡಿಸಿದ ಎಜ್ರಾ ಪೌಂಡ್ ಕವಿತೆಗಳು
  ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್
  ವೆಂಕಟ್ ಮೋಂಟಡ್ಕ ಬರೆದ ಅಪೂರ್ಣ ಕಥೆ
  ದಿವ್ಯಪ್ರಕಾಶ್ ಬರೆದ ದಿನದ ಕವಿತೆ
  ವಿನಾಯಕ ಭಟ್ ತದ್ದಲಸೆ ಬರೆದ ದಿನದ ಕವಿತೆ
  ರಾಘವೇಂದ್ರ ಹೆಗಡೆ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ನಾಲ್ಕು ಕವಿತೆಗಳು
  ವೈಶಾಲಿ ಹೆಗಡೆ ಕತೆ `ಬೋಳುಮರಕ್ಕೊಂದು ಬಾನು'
  ರೇವನ್ ಜೇವೂರ್ ಬರೆದ ಹನಿಗವಿತೆಗಳು
  ಹರ್ಷಾದ್ ವರ್ಕಾಡಿ ಬರೆದ ದಿನದ ಕವಿತೆ
  ಆನಂದ ಈ.ಕುಂಚನೂರ ಬರೆದ ದಿನದ ಕವಿತೆ
  ಬಾಗೇಶ್ರೀ ಅನುವಾದಿಸಿದ ಬಿಲ್ಕಿಸ್ ಕವಿತೆ
  ವಿಶ್ವ ಶರ್ಮ ಬರೆದ ದಿನದ ಕವಿತೆ
  ಭಾಗೀರಥಿ ಹೆಗಡೆ ಬರೆದ ಕತೆ `ವಂದೇ ಮಾತರಂ'
  ಪದ್ಮನಾಭ ಭಟ್ ಶೇವ್ಕಾರ್ ಬರೆದ ಒಂದಿಷ್ಟು ಕವಿತೆಗಳು
  ರಮೇಶ್ ಸೋಗೆಮನೆ ಬರೆದ ದಿನದ ಕವಿತೆ
  ಎಸ್.ಕುಮಾರ್ ಅನುವಾದಿಸಿದ ಕ್ಯೂಬನ್ ಕವಿತೆ
  ಅನು ಪಾವಂಜೆ ಬರೆದ ದಿನದ ಕವಿತೆ
  ಕವಿ ಮತ್ತು ಕುಣಿಕೆದಾರನ ಯುಗದ ಕುಂದೇರಾ
  ಡಿ.ಎಸ್.ರಾಮಸ್ವಾಮಿ ಬರೆದ ದಿನದ ಕವಿತೆ
  ಬಸವಣ್ಣೆಪ್ಪ ಕಂಬಾರ ಬರೆದ ದಿನದ ಕವಿತೆ
  ಲಕ್ಷ್ಮಿ ಟಿ.ಎನ್. ಬರೆದ ದಿನದ ಕವಿತೆ
  ‘ಮಾಸ್ತಿ’ ಹುಟ್ಟು ಹಬ್ಬಕ್ಕೆ ನಿಸಾರ್ ಬರೆದ ಕವಿತೆ
  ಕಲಿಗಣನಾಥ ಗುಡದೂರು ಬರೆದ ಕತೆ `ಗಾಂಧಿಕಟ್ಟೆ'
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ಎರಡು ಕವಿತೆಗಳು