ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ-ಬತ್ತಲಾಗಿಯೂ ಬಯಲು ಸಿಕ್ಕಲಿಲ್ಲ    
ಸುದರ್ಶನ್
ಶನಿವಾರ, 5 ಏಪ್ರಿಲ್ 2008 (08:16 IST)

ಸಿಡ್ನಿಯ ಮೊದಲ ಫೈನಲ್‌ನಲ್ಲಿ ತೆಂಡುಲ್ಕರ್ ಸೆಂಚುರಿ ಹೊಡೆದರು. ಇಂಡಿಯ ಮ್ಯಾಚ್ ಗೆದ್ದು ಎದೆಯುಬ್ಬಿಸಿತು. ಮಾರನೇ ದಿನ ಆಸ್ಟ್ರೇಲಿಯಾದ ಮಾಧ್ಯಮಗಳು ಹರ್ಭಜನ್ ಕಂಕುಳು ಕೆರಕೊಂಡದ್ದನ್ನು ಅನುಮಾನಿಸಿ ದೊಡ್ಡ ಸುದ್ದಿ ಮಾಡಿದವು. ಎರಡನೇ ಫೈನಲ್  ಕೂಡ ಗೆದ್ದ ಇಂಡಿಯಾ ಏಕದಿನ ಸರಣಿಯನ್ನೇ ಗೆದ್ದು ಕುಣಿದಾಡಿತು. ಅದರ ಮಾರನೇ ದಿನ, ಆಂಡ್ರೂ ಸೈಮಂಡ್ಸ್  ಬೆತ್ತಲೆಯಾಗಿ ಓಡಿಬಂದ ಪ್ರೇಕ್ಷಕನನ್ನು ತಡೆದು ಉರುಳಿಸಿದ್ದನ್ನು ದೊಡ್ಡ ಸುದ್ದಿ ಮಾಡಿದರು. ಅಂದ ಹಾಗೆ, ಇಂಡಿಯ ಗೆದ್ದಿತು ಎಂದು ಕಡೆಯ ಪ್ಯಾರಾದಲ್ಲಿ ಚಿಕ್ಕದಾಗಿ ಸೇರಿಸಿದರು. ಇದಕ್ಕೆಲ್ಲಾ ಸಿಟ್ಟಾಗುತ್ತೇವೆ, ಸೇಡು ತೀರಿಸಿಕೊಂಡೆವೆಂದು ಒಳಗೊಳಗೇ ನಗುತ್ತೇವೆ. ಹರ್ಭಜನ್ ವಿಷಯದಲ್ಲಿ ಏನೆಲ್ಲಾ ಮಾಡಿ ಕಡೆಗೂ ಅವನ ಮಾನ ಉಳಿಸಿದ ಸಂಗತಿ ನೆನಪಾಗಿ ಆ ನಗುವಿಗೆ ಗೆದ್ದ ಕಳೆ ಸೇರಿಕೊಳ್ಳುತ್ತದೆ.

ಅದೆಲ್ಲಾ ಇರಲಿ. ಆದರೆ ಆಂಡ್ರೂ ಸೈಮಂಡ್ಸನಿಂದ ಗುದ್ದಿಸಿಕೊಂಡ ಬೆತ್ತಲೆಯವನ ಸಮಾಚಾರ ಒಂದೆರಡು ದಿನ ಮುಂದುವರೆಯಿತು. ಅವನು ಬ್ರಿಸ್ಬೆನ್ನಿನ ಕೋರ್ಟಲ್ಲಿ ಹಾಜರಾದ. ಗಂಟೆ ಆಡಿಸಿಕೊಂಡು ದೋಣುಕುಂಡಿಯಾಗಿ ಓಡಿದ್ದಕ್ಕೆ ಒಂದೂವರೆ ಸಾವಿರ ಡಾಲರ್‍ ದಂಡವಾಯಿತು. ಆದರೆ ಅವನ ಹೆಸರಿಗೆ ಯಾವುದೇ ಕನ್ವಿಕ್ಷನ್ ದಾಖಲಾಗಲಿಲ್ಲ.

ಹಿಂದೆಲ್ಲಾ ಸೆಂಚುರಿ ಹೊಡೆದಾಗ, ಪಂದ್ಯ ಮುಗಿದಾಗ ಜನ ಕ್ರೀಡಾಂಗಣಕ್ಕೆ ಲಗ್ಗೆ ಇಡುವುದು ನೋಡಿದ್ದೇವೆ. ತಮ್ಮ ನೆಚ್ಚಿನ ಆಟಗಾರರ ಬೆನ್ನು ತಟ್ಟುವುದು ನೋಡಿದ್ದೇವೆ. ಅವರೊಡನೆ ಪೆವಿಲಿಯನ್‌ವರೆಗೂ ಕುಣಿಯುತ್ತಾ ಹೋಗುವುದು ನೋಡಿದ್ದೇವೆ. ಆದರೀಗ ಕ್ರಿಕೆಟ್ ಅತ್ಯಂತ ಹಣದ ವಹಿವಾಟಿನ ಆಟವಾಗಿ ಬದಲಾದ ಮೇಲೆ ಅವೆಲ್ಲ ಇಲ್ಲ. ಎಲ್ಲವೂ ಕಟ್ಟುನಿಟ್ಟಾಗಿ, ಬಂದೋಬಸ್ತಿನಲ್ಲಿ ನೋಡುಗರನ್ನು ದೂರದಲ್ಲೇ ಇಟ್ಟು ಆಟ ನಡೆಯುತ್ತದೆ. ಆಟಗಾರರನ್ನು ಹತ್ತಿರದಿಂದ ನೋಡಬೇಕನಿಸಿದವರು ಮನೆಯಲ್ಲಿ ಟೀವಿಯಲ್ಲಿ ಕ್ಲೋಸಪ್ ನೋಡಬೇಕಷ್ಟೆ. ನನಗಂತೂ ಮಕ್ಕಳನ್ನಾದರೂ ಕ್ರೀಡಾಂಗಣಕ್ಕೆ ಲಗ್ಗೆ ಇಡಲು ಬಿಡಬೇಕು ಎಂದು ಹಲವು ಸಲ ಅನಿಸಿದೆ. ಆ ಉತ್ಸಾಹ ಮತ್ತು ನೆನಪು ಅವರನ್ನು ತುಂಬಾ ದಿನ ಹುರಿದುಂಬಿಸಬಲ್ಲುದು ಎಂಬ ಆಸೆ.

ಆತ ಬಟ್ಟೆತೊಟ್ಟುಕೊಂಡೇ ಕೋರ್ಟಿನಿಂದ ಹೊರಬಂದು ಟೀವಿ ರೇಡಿಯೋಗೆ ವಿವರಿಸಿದ- "ಬಿಯರ್‍ ಕುಡಿದಿದ್ದೆ. ಗೆಳೆಯರ ಶರತ್ತೊಂದಕ್ಕೆ ಮಾರುತ್ತರ ಕೊಡಬೇಕಾಗಿತ್ತು. ನಾನು ಅದನ್ನು ಮಾಡಲೇಬೇಕಾಗಿತ್ತು. ನೀವು ಒಂದೇ ಸಲ ಬದುಕುವುದು" ಎಂದು ಹೇಳಿ ಹೊರಟುಬಿಟ್ಟ. ರೇಡಿಯೋ ಹಾಗು ಟೀವಿಯವರು ಅವನನ್ನು ಬೆನ್ನಟ್ಟಿ ಮಾತಾಡಿಸಿದರು. ಅವನ ಬದುಕಿನ, ಯೋಚನೆಯ ವಿವರಗಳಲ್ಲಿ ಏನಾದರೂ ರೋಚಕವಾದದ್ದು ಇದೆಯೇ ಎಂದು ತಡಕಾಡಿದರು. ಆ ತಡಕಾಟದ ಪರಿಣಾಮವಾಗಿ ಟೀವಿ ಒಂದಕ್ಕೆ ಸಂದರ್ಶನ ಕೊಟ್ಟು ಏಳೂವರೆ ಸಾವಿರ ಡಾಲರ್‌ಗಳನ್ನು ಪಡೆದ. ಕೂಡಿ ಕಳೆದು ಅವನಿಗೆ ಆರು ಸಾವಿರ ಲಾಭವೇ ಆಯಿತು. ಕನ್ವಿಕ್ಷನ್ ಏನಾದರೂ ದಾಖಲು ಮಾಡಿದ್ದರೆ ಅವನು ಸಂದರ್ಶನ ಕೊಟ್ಟು ದುಡ್ಡು ಪಡೆಯುವುದು ಕಾನೂನು ಬಾಹಿರವಾಗುತ್ತಿತ್ತು. ಈಗ ಹಾಗಿಲ್ಲ. ಅವನು ನಗುತ್ತಲೇ ಇದ್ದ. ಎಲ್ಲಿಯೂ ನಾಚಿಕೆ ಹಾಗು ಮಾನದ ಬಗ್ಗೆ ಪ್ರಶ್ನೆಯಾಗಲಿ ಚರ್ಚೆಯಾಗಲಿ ನಡೆದಂತೆ ಕಾಣಲಿಲ್ಲ. ಇಂಥವು ಪಾಶ್ಚಿಮಾತ್ಯರ ಹುಚ್ಚಾಟ ಎಂದು ತಳ್ಳಿಹಾಕುವ ಮೊದಲು, ಕನಸು ಮನಸ್ಸಿನಲ್ಲೂ ಅವನಂತೆ ಮಾಡಲಾರದವರೇ ಇಲ್ಲಿ ಹೆಚ್ಚು ಎಂಬುದೂ ನೆನಪಿಡಬೇಕು.

ಇನ್ನೊಂದು ಬಗೆಯಲ್ಲೂ ಇದನ್ನು ನೋಡಬಹುದು. ಆಟದ ಸುತ್ತುಮುತ್ತ ಬಂದೋಬಸ್ತು ಹಾಗು ಕಟ್ಟುನಿಟ್ಟು ಮಿತಿಮೀರಿದೆ. ಇದರಿಂದಾಗಿಯೇ ಬಟ್ಟೆ ಬಿಚ್ಚಿಕೊಂಡು ಓಡುವ ಸ್ಟ್ರೀಕರ್‍ ಪ್ರವೃತ್ತಿ ಹೆಚ್ಚುತ್ತಿದೆಯೆ ಎಂದೂ ಕೇಳಬಹುದು. ಮಾಡಕೂಡದೆಂದು ವಿಧಿಸಿದ್ದನ್ನು ಮಾಡುವುದು ನಮ್ಮೆಲ್ಲರ ಗುಣ. ಮಾನ-ಅವಮಾನ ಇವೆಲ್ಲವನ್ನು ಮೀರಿದ ಮಾತಿದು. ಮನುಷ್ಯನ ಮಾನದ ಮಿತಿ ಸದಾ ಪ್ರಶ್ನೆಗೊಳಗಾಗುತ್ತಿರುವ ಇಂದಿನ ಜಗತ್ತಿನಲ್ಲಿ ಬೆತ್ತಲೆ ಓಡುವುದನ್ನು ಹೇಗೆ ನೋಡುವುದು? ಬೆತ್ತಲೆ ಓಡಿದವನ ಮಾನ ನಿಜವಾಗಿಯೂ ಹೋಯಿತೆ? ಅಷ್ಟು ಸಣ್ಣ ವಿಷಯಕ್ಕೆ ಮಾನ ಹೋಗಬಹುದೆ? ವಿಕೃತವಾದ ಹಲವು ಬಗೆಯ ಕೋಟಲೆಯನ್ನು ಸುತ್ತಲಿನವರಿಗೆ ಕೊಡುತ್ತಿರುವ ಮಂದಿ ನಮ್ಮ ನಡುವೆಯೇ ಇರುವಾಗ? ಅದೂ ಮಾನವಂತರಾಗಿಯೇ ಬದುಕುತ್ತಿರುವಾಗ? ಬೇರೆಯವರಿಗೆ ತೊಂದರೆ ಕೊಡದೆ ತನ್ನ ಸ್ವೇಚ್ಛೆಯನ್ನು ಬಳಸುವುದಕ್ಕೆ ಸದಾ ಅವಕಾಶವಿರುವುದು ಒಳ್ಳೆಯದೆ. ಸಂಪ್ರದಾಯವಾದೀ ಸಮಾಜಕ್ಕೂ ಈ ಮಾತು ಒಪ್ಪುತ್ತದೆ. ಮುಕ್ತ ಮನಸ್ಸನ್ನು ಹಾಗೂ ಸೃಜನಶೀಲ ಮನಸ್ಸನ್ನು ರೂಪಿಸುವುದಕ್ಕೆ ಇವು ಅಮೂಲ್ಯ ಸವಲತ್ತುಗಳು. ಕೆಲವೊಮ್ಮೆ ಅತಿರೇಕ ಅನಿಸಿದರೂ ಕೂಡ.

ಪುಟದ ಮೊದಲಿಗೆ
 
Votes:  4     Rating: 4.25    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು