ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ- ವೂಲ್‌ಗೂಲ್‌ಗಾದಲ್ಲೂ ಪಂಜಾಬಿಗಳು    
ಸುದರ್ಶನ್
ಸೋಮವಾರ, 5 ಮೇ 2008 (05:20 IST)
ಆಸ್ಟ್ರೇಲಿಯಾದಲ್ಲಿರುವ ಗುರುದ್ವಾರ

ಸಿಡ್ನಿಯಿಂದ ಉತ್ತರಕ್ಕೆ ಇರುವ ವೂಲ್‌ಗೂಲ್‌ಗಾ (Woolgoolga) ಎಂಬ ಊರಿನ ಕೆಲವು ಮಂದಿಯನ್ನು ಸಿಡ್ನಿಯಲ್ಲಿ ಮೊನ್ನೆ ನೋಡಿದೆ. ಬಣ್ಣ ಬಣ್ಣದ ರುಮಾಲು. ಉದ್ದ ಗಡ್ಡ. ಕೈಯಲ್ಲಿ ಹೊಳೆವ ಕಡಗ. ಮೊಣಕಾಲಿಗಿರುವ ಚಡ್ಡಿ ಇಲ್ಲಾ ಮಾಸಿದ ಜೀನ್ಸ್. ಸ್ಪೈಡರ್‌ಮನ್‌ ಟೀ ಶರ್ಟು ತೊಟ್ಟ ಮಕ್ಕಳ ಕಣ್ಣಲ್ಲಿ ಹೊಸ ಊರಿನ ಕುತೂಹಲ ಮತ್ತು ದಾರಿ ಎತ್ತ ಎಂಬಂತ ಪ್ರಶ್ನೆ. ಗುಂಪಿನ ಹಿರಿಯನಿಗೆ ಮಾತ್ರ ಮುಂಜಾವದ ನಿದ್ದೆಯ ಝಂಪು. ಕೂತಲ್ಲೇ ನಿದ್ದೆ. ಹುಡುಗರ ಕೈಯಲ್ಲಿ ಮೊಬೈಲ್; ಅದರಲ್ಲೇ ಕಳೆದುಹೋಗುವಂತ ಆಟ. ಬಾಯಿ ಬಿಟ್ಟರೆ ಅಪ್ಪಟ ಆಸೀ ಇಂಗ್ಲಿಷ್. ನಡುನಡುವೆ ತುಣುಕು ಪಂಜಾಬಿ. ಹಿರಿಯರೊಡನೆ ಆಗಾಗ ಅಪ್ಪಟ ಪಂಜಾಬಿಯೂ. ಯಾರಿವರು ಎಂದು ನಿಮ್ಮ ತಲೆಯಲ್ಲಿ ಹುಳ ಎದ್ದಿರಬೇಕು. ಮೂಲತಃ ಪಂಜಾಬಿನ ಈ ಜನರ ಊರು ವೂಲ್‌ಗೂಲ್‌ಗ.

ಹಾಗೆ ನೋಡಿದರೆ, ಇವರ ಅಪ್ಪ-ಅಮ್ಮ ಅಜ್ಜ-ಅಜ್ಜಿಯರದೂ ಕೂಡ. ನೂರಾರು ವರ್ಷದಿಂದ, ಅಂದರೆ ೧೮ನೇ ಶತಮಾನದ ಕೊನೆಯಿಂದಲೇ ಈ ನಾಡಿಗೆ ಬಂದು, ನೂರಾರು ಎಕರೆ ಬಾಳೆ ತೋಪು ಬೆಳೆಸಿಕೊಂಡು, ನಾಡಿನ ಒಳಗೆಂದರೆ ಒಳಗಿನವರಾಗಿ ಹೊರಗೆಂದರೆ ಹೊರಗಿನವರಾಗಿ ಉಳಿದಿರುವ ಮಂದಿ ಇವರು. ಬಿಳಿಯರನ್ನು ಲಗ್ನವಾದ ಮನೆಯ ಮಕ್ಕಳನ್ನು ನಿರ್ದಯವಾಗಿ ಹೊರಗಿಟ್ಟವರು. ಮನೆಯ ಮಕ್ಕಳಿಗೆ ಇಂಡಿಯಾದಿಂದಲೇ ಹೆಣ್ಣು ನೋಡುವ, ಗಂಡು ಹುಡುಕುವ ಸಂಪ್ರದಾಯದವರು. ಈಗಿನ ತಲೆಮಾರಿನ ಕೆಲವರು ಬಾಳೆ ತೋಪಲ್ಲೇ ಬಾಳ್ವೆ ಅಂದುಕೊಂಡವರು. ಇನ್ನು ಕೆಲವರು ಹಲವು ದಾರಿ ಹಿಡಿದು ಹರಡಿಕೊಂಡವರು.

ತಾವು ಬೀಡು ಬಿಟ್ಟ ಊರಿಗೆ ಹೊಸ ಕಳೆ ತಂದುಕೊಟ್ಟವರು. ಬೀದಿ, ಬೀಚುಗಳ ಜತೆ ಬಾಳೆ ತೋಟದ ಮಾಯೆಯನ್ನು ಬೆರೆಸಿದವರು. ಟೋಪಿ ಬಿಚ್ಚಿಡಬೇಕೆಂಬ ನಿಯಮವಿರುವ ನಿವೃತ್ತ ಯೋಧರ ಕ್ಲಬ್ಬಿಗೆ ರುಮಾಲು ಸುತ್ತಿಕೊಂಡೇ ಹೋಗಿ, ನಿಷೇಧವೆಂದಾಗ ಕೋರ್ಟಿಗೆ ಹೋಗಿ ಗೆದ್ದು ಬಂದವರು. ತಾವು ತಾವೇ ಎಂಬುದನ್ನು ಒಂದು ಕ್ಷಣವೂ ಎಂತ ತಾಕಲಾಟದ ನಡುವೆಯೂ ಮರೆಯದವರು. ಗುರುದ್ವಾರದಂತ ಸಮುದಾಯ ಕಟ್ಟಡ, ಸಮುದಾಯ ಕಟ್ಟಡದಂತ ಗುರುದ್ವಾರ ಕಟ್ಟಿಕೊಂಡು ಹೆಜ್ಜೆ ಬಲಪಡಿಸಿಕೊಂಡವರು. ಆ ದಾರಿಯಾಗಿ ಬಂದವರಿಗೆಲ್ಲಾ ಇಂದಿಗೂ ಕೂರಿಸಿ ಊಟ ಬಡಿಸಿ ಕಳಿಸುವವರು. ಸಂಜೆ ಹಾರ್ಮೋನಿಯಂ ತಬಲದ ಜತೆ ಭಜನೆಗಿಟ್ಟುಕೊಳ್ಳುವವರು. ನಾವಿಂತವರು ಎಂಬ ನೆನಪು ಕೆದರಿಕೊಂಡು ಹಾಡುವವರು.

ಈವತ್ತಿನ ತಲೆಮಾರಿಗೂ ತಮ್ಮ ಮುತ್ತಾತಂದಿರ ನೆನಪು ಮಾಸದೆ ಉಳಿಸಿಕೊಂಡವರು. ಇಂದಿನ ಬಾಳಿನಲ್ಲಿ ಕೊಚ್ಚಿಹೋಗಬಹುದಾದ ಎಳೆಯರನ್ನು ಹಿಡಿದಿಡಲು ಸಹಸ್ರ ಬಗೆಗಳನ್ನು ಕಂಡುಕೊಂಡವರು. "ಬಾಳೆ ಬೆಳೆಯುವ ಮಣ್ಣು ಹುಡುಕಿಕೊಂಡು ಸಾವಿರಾರು ಮೈಲಿ ಅಲೆದವರು ನಮ್ಮ ಹಿರೀಕರು" ಎಂದು ತಮ್ಮ ಮಕ್ಕಳಿಗೆ, ಕೇಳಲು ಕೂತವರಿಗೆ ಎದೆಯುಬ್ಬಿಸಿ ಹೇಳುವವರು. ಸಾವಿರಾರು ಮೈಲು ನಡೆದು ದಕ್ಷಿಣದ ವಿಕ್ಟೋರಿಯಾ ಪ್ರಾಂತ್ಯದಿಂದ ಉತ್ತರದ ನ್ಯೂಸೌತ್ ವೇಲ್ಸ್‌ವರೆಗೂ ನಡೆದು ಬಂದ ಕತೆಯನ್ನು ಅತೀವ ಹೆಮ್ಮೆಯಿಂದ ಹೇಳಿ ಹುಚ್ಚು ಹಿಡಿಸುವವರು. ವೈಟ್ ಆಸ್ಟ್ರೇಲಿಯಾ ಪಾಲಿಸಿಯ ಮುಂಚೆಯೂ, ನಂತರವೂ ಅದರ ಶಾಖವನ್ನು ತಡೆದುಕೊಂಡು ಒಮ್ಮೊಮ್ಮೆ ತಲೆ ತಗ್ಗಿಸಿ, ಕೂಡಲೇ ನಿಮಿರಿ ನಿಂತುದನ್ನು ವಿವರಿಸುವವರು. ನೀವು ಹುಬ್ಬೇರಿಸಿದರೆ ಸಹಜವಾಗಿ ನಗುವವರು.

ನೋಡಿ - ಯಾರ ಊರು? ಯಾರ ಮಣ್ಣು? ಯಾರ ಗೆಯ್ಮೆ? ಯಾರಿಗೆ ಏನು ಸೇರಿದ್ದು? ಎಂಬುದೆಲ್ಲಾ ಹುರಳಿಲ್ಲದ ಪ್ರಶ್ನೆಯಾಗಿಸುವ ಛಲದವರು.

ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು