ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ - ಇದು ಬರಿ ಬೆಳಗಲ್ಲೋ ಅಣ್ಣಾ    
ಸುದರ್ಶನ್
ಮಂಗಳವಾರ, 20 ಮೇ 2008 (05:52 IST)

ಏನು ಬರೆಯಲಿ? ಏನು ಬರೆಯಬಹುದು? ದೂರದ ಊರಲ್ಲಿ ನಮ್ಮ ಚಿಂತೆ ಚಿಂತನೆಗಳು ನಿಮಗಲ್ಲಿ ಹಾಸ್ಯಾಸ್ಪದವೋ ಅಥವಾ ಮಹಾ ಗಂಭೀರವೋ ಆಗಿ ಕಾಣುವ ಅಪಾಯವಿದೆ. ಅದಕ್ಕೆಲ್ಲಾ ತಲೆಗೊಡಬಾರದು ಅಂತ ಹತ್ತಾರು ಸಲ ಹೇಳಿಕೊಂಡಿದ್ದೇನೆ. ಮಹಾ ಗಂಭೀರವೆಂದು ನಕ್ಕರೂ, ಹಾಸ್ಯಾಸ್ಪದವೆಂದು ಅಸಡ್ಡೆ ಮಾಡಿದರೂ ಪರವಾಗಿಲ್ಲ. ಹಾಗನ್ನುವಾಗಲೇ ಹಾಗನ್ನಿಸಿಕೊಳ್ಳುವಾಗಲೇ ಏನೋ ಆಗುತ್ತಿದೆ ಅಂತ ಸಮಾಧಾನ ಮತ್ತು ಉತ್ಸಾಹ.

ಅಲ್ಲಿಯಂತೆ ಇಲ್ಲಿ - ದೂರದಲ್ಲಿ ಅಲ್ಲಾ ಕೂಗಿ ಎಚ್ಚರವಾಗುವುದಿಲ್ಲ. ಯಾವುದೋ ಕೋಳಿ ಕೂಗಿ ಬೆಳಗಾಗುವುದಿಲ್ಲ. ಹಾಲಿನವನ ಸೈಕಲ್ ಬೆಲ್ಲು ಕಚಗುಳಿಯಿಡುವುದಿಲ್ಲ. ಪಕ್ಕದ ವಠಾರದ ಬಾವಿಯ ರಾಟೆಯ ಜೀಕಾಟವಿಲ್ಲ. ಇವೆಲ್ಲಾ ಯಾವುದೋ ಮಾಯಾಲೋಕದ ಸಂಗತಿಗಳಂತೆ ಇಲ್ಲಿ ಅನಿಸುತ್ತದೆ. ಅಥವಾ ಇಲ್ಲೂ ನಡೆಯುತ್ತಿದೆ ಆದರೆ ನಮಗೆ ಕಾಣುತ್ತಿಲ್ಲ, ಕೇಳುತ್ತಿಲ್ಲ. ಯಾಕೆ ಅಂತ ಹಲವಾರು ಸಲ ಅನಿಸಿದೆ. ಈ ಎಲ್ಲ ಇಲ್ಲಗಳ ನಡುವೆ ಇಲ್ಲಿ ಮುಂಜಾನೆಯೆಂದರೇನು? ಅದಕ್ಕೆಂತ ತಾಜಾತನವಿರಲು ಸಾಧ್ಯ? ಪ್ರಶ್ನೆಗಳೇಳುವುದು ಸಹಜವೇ ಅಲ್ಲವೆ?

ಆದರೂ ಇಲ್ಲಿನ ಬೆಳಗಿಗೆ ತಾಜಾತನವಿಲ್ಲ ಎಂದರೆ ಸುಳ್ಳಾಡಿದಂತೆ ನೋಡಿ. ಬೆಳಗಾಗ ಕಣ್ಣುಬಿಡುವಾಗ ಸುತ್ತಲಿನ ಮರಗಳಿಂದ ಯಾವುಯಾವುದೋ ಹಕ್ಕಿಗಳ ಪರಿಚಯವಿರದ ಕರೆಯುವಾಟವಿದೆ. ದೂರದ ಮೋಟರ್‌ವೇನಲ್ಲಿ ಕಾರುಗಳ ಗುಂಯ್‌ಗುಡುವ ಮಂದ್ರನಾದವಿದೆ. ಮನೆ ಬಾಗಿಲಿಗೆ ಪೇಪರು ಧಪ್ಪನೆ ಬೀಳುವ ಸದ್ದಿನ ಗುದ್ದಿದೆ. ಕಸ ಒಯ್ಯುವ ಲಾರಿಯ ಗುಡುಗುಡು ಸೋಮವಾರ ಎಂದು ನೆನಪಿಸುತ್ತದೆ. ರಸ್ತೆಗೆ ನೀರು ಸಿಂಪಡಿಸಿ ಗುಡಿಸುವ ಲಾರಿಯ ಗಿರಿಗಿರಿ ಗುರುವಾರ ಎಂದು ಅರಿವಿಗೆ ತರುತ್ತದೆ. ಇದಕ್ಕೆಲ್ಲಾ ಮೆಲುಗಾಳಿಗೂ ಕುಣುಕುಣುಗುಟ್ಟುವ ಹಿತ್ತಲಿನ ವಿಂಡ್‌ಚೈಮಿನ ಕಿಣಿಕಿಣಿ ಅಲಂಕಾರವಿದೆ. ಅದಕ್ಕೆ ದೂರದ ದೇವಾಲಯದ ಗಂಟೆಯ ಕಳೆಯಿದೆ.

ಇವೆಲ್ಲಾ ಚಂದ ಅಂದರೆ ಚಂದ, ಅಲ್ಲ ಅಂದರೆ ಅಲ್ಲ. ಆದರೆ ಆವರಿಸುವ ಸಂಗತಿಗಳೆನ್ನುವುದು ಮಾತ್ರ ತಪ್ಪಿಸಿಕೊಳ್ಳಲಾಗದ ದಿಟ. ಜೇನ್ನೊಣದ ಝೇಂಕಾರದಂತೆ ದೂರದ ಮೋಟರ್‌ವೇನಲ್ಲಿ ಯಾವು ಯಾವುದೋ ಮನೆಗಳಿಂದ ಗಡಿಬಿಡಿಯಲ್ಲಿ ಕೆಲಸಕ್ಕೆ ಹೊರಟವರ ಕಾರುಗಳು ಅಂದೆನಲ್ಲ. ಅದರಲ್ಲಿ ಕಣ್ಣುಜ್ಜಿಕೊಂಡು, ಬಿಸಿ ಕಾಫಿ ಕುಡಕೊಂಡು, ಪಕ್ಕದ ಕಾರವರನ್ನು ದಿಟ್ಟಿಸಿಕೊಂಡು ಹೊರಟ ನೂರಾರು, ಸಾವಿರಾರು ಮಂದಿ ಕಾರ್ಮಿಕರು. ಅಂಗಳದ ಹುಲ್ಲಿನ ಇಬ್ಬನಿಗೆ ಸುದ್ದಿ ಒದ್ದೆಯಾಗದಂತೆ ಪ್ಲಾಸ್ಟಿಕ್ ಸುತ್ತಿಕೊಂಡು ಬಿದ್ದಿರುವ ಕೊಳವೆಯಂಥ ಪೇಪರಿನ ಕಟ್ಟು. ಅದನ್ನು ಬೆಳಕು ಹರಿಯುವ ಮೊದಲೇ ಎಸೆದು ಹೋದವನು ಯಾರಿರಬಹುದು? ಆ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲವಲ್ಲ ಎಂಬ ಚಡಪಡಿಕೆ. ಸೋಮವಾರವೋ ಗುರುವಾರವೋ ಆದರೆ ಕಸ ಎತ್ತೊಯ್ಯುವ, ಅಥವಾ ಬೀದಿ ಗುಡಿಸುವ ಲಾರಿ ಅಂದೆನಲ್ಲ. ಅದರ ಡ್ರೈವರ್‍ ಕತ್ತಲಿರುವಾಗಲೇ ನಿದ್ದೆಯಲ್ಲಿರುವ ತನ್ನ ಮಕ್ಕಳನ್ನು ಮುತ್ತಿಟ್ಟು ಬೀಳ್ಕೊಟ್ಟು ಕೆಲಸಕ್ಕೆ ಬಂದಿರುವ ಒಬ್ಬ ತಂದೆ. ಹೀಗೆ ನಮ್ಮನ್ನು ಎಬ್ಬಿಸಲೋ ಅನ್ನುವಂತೆ ನಮ್ಮ ಸುತ್ತಲೂ ಹಬ್ಬಿ ಆವರಿಸುವ ಸದ್ದಿನ ಕಾಯಕಗಳು ಮತ್ತು ಅದರ ಹಿಂದಿನ ಮನಸ್ಸು-ದೇಹಗಳು.

ಇದ್ದಕ್ಕಿದ್ದ ಹಾಗೆ ಇಲ್ಲೂ ಒಂದು ದಿನ ಮುಂಜಾನೆ ದೂರದಲ್ಲಿ ಕೋಳಿ ಕೂಗಿತು. ಕಣ್ಣುಜ್ಜಿಕೊಂಡೆ. ಕೂಗು ಕೇಳಿದ್ದು ಎಲ್ಲಿ? ಸವಿಗನಸಿನೊಳಗ ಅಥವಾ ನಿಜದಲ್ಲ ಎಂದು ಇತ್ಯರ್ಥಮಾಡಿಕೊಳ್ಳಲು ಹೆಣಗಿದೆ. ಎಲ್ಲೋ ಮಲಗಿ ಎಲ್ಲೋ ಏಳುತ್ತಿದ್ದೇನೆಯೆ ಎಂಬ ಅನುಮಾನವನ್ನು ನೀಗಿಕೊಳ್ಳಲು ಹೆಣಗಿದೆ. ಕೊಯ್ದಿಟ್ಟಂತಿದ್ದ ಎರಡು ಜಗತ್ತು ಡಿಕ್ಕಿ ಹೊಡೆದಂತನಿಸತು. ಹೀಗನಿಸುವುತ್ತಿರುವದೇ ಕೊಯ್ದಿಡಲಾಗದ್ದು ಎಂದು ಸೂಚಿಸುತ್ತದೆ ಅಂತಲೂ ಅನಿಸಿತು. ಅಂಥ ಯೋಚನೆಯಲ್ಲೇ ಮೆಲ್ಲನೆ ಪೂರ್ತಿ ಎಚ್ಚರವಾಗುತ್ತದೆ.

ಯಾವುದೋ ಪಕ್ಕದ ಬೀದಿಯ ಮನೆಯಲ್ಲಿ ಮಕ್ಕಳು ತಂದಿಟ್ಟುಕೊಂಡ ಕೋಳಿ ಇರಬೇಕು ಎಂದು ನಿದ್ದೆ ತಿಳಿದೆದ್ದಾಗ ಅರಿವಿಗೆ ಬರುತ್ತದೆ. 'ಇದು ಬರಿ ಬೆಳಗಲ್ಲೋ ಅಣ್ಣ' ತಲೆಯಲ್ಲಿ ಆಡುತ್ತದೆ. ಅಲ್ಲಿಯಾದರೂ ಅಷ್ಟೆ, ಇಲ್ಲಿಯಾದರೂ ಅಷ್ಟೆ.

ಪುಟದ ಮೊದಲಿಗೆ
 
Votes:  3     Rating: 4    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ