ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ - ವಿವಾದದಲ್ಲಿ ಚಿತ್ರಕಾರ    
ಸುದರ್ಶನ್
ಗುರುವಾರ, 5 ಜೂನ್ 2008 (05:39 IST)

ಬರ್ಮಾದ ಚಂಡಮಾರುತ, ಚೈನಾದ ಭೂಕಂಪ, ಅಫ್ಘಾನಿಸ್ತಾನದ ಸಾವುಗಳು, ಇರಾಕಿನ ಮಾರಣ ಹೋಮದ ನಡುವೆ ಇಲ್ಲೊಂದು ಹೊಸ ವಿವಾದ ಎದ್ದಿದೆ. ಈ ಹದಿಮೂರು ವರ್ಷದ ನಗ್ನ ಮಕ್ಕಳ ಚಿತ್ರ ನೋಡಿ. ಅದರ ಫೋಟೋ ತೆಗೆದಾತ ಬಿಲ್ ಹೆನ್ಸನ್ ಎಂಬ ವಿಶ್ವವಿಖ್ಯಾತ ಆಸ್ಟ್ರೇಲಿಯನ್ ಫೋಟೋಗ್ರಾಫರ್. ಸುಮಾರು ಇಪ್ಪತ್ತೈದು ವರ್ಷಗಳಿಂದ ಈತ ಹಲವು ತರದ ಫೋಟೋಗಳನ್ನು ತೆಗೆಯುತ್ತಾ ಬಂದಿದ್ದಾನೆ. ಆದರೆ ಹೋದ ವಾರ, ಅವನ ಒಂದು ಹೊಸ ಪ್ರದರ್ಶನವನ್ನು ಪೋಲೀಸರು ಬಂದು ಮುಚ್ಚಿಸಿದರು. ಅವನ ಹಲವು ಫೋಟೋಗಳನ್ನು ಮುಟ್ಟುಗೋಲು ಹಾಕಿಕೊಂಡು ಹೋದರು. ಚೈಲ್ಡ್ ಪ್ರೊಟೆಕ್ಷನ್ ಎಂದು ಯಾರೋ ಕೊಟ್ಟ ದೂರನ್ನು ಪೋಲೀಸರು ತನಿಖೆಗೆ ಎತ್ತಿಕೊಂಡಿದ್ದರು. ಇನ್ನೊಂದತ್ತ, ಪ್ರಧಾನಿ ಕೆವಿನ್ ರಡ್, ಯೆಮ್ಮ ಎಂಬ ರಾಜ್ಯದ ಮುಖ್ಯಮಂತ್ರಿ ಎಲ್ಲ ಈ ಚಿತ್ರಗಳನ್ನು ಛೀ ಥೂ ಎಂದು ಬೈದಾಡಿಬಿಟ್ಟರು.

ಇಲ್ಲಿ ಗಲಾಟೆ ಎಬ್ಬಿಸಿರುವುದು ನಗ್ನತೆಯಲ್ಲ. ನಗ್ನತೆಯ ಪ್ರದರ್ಶನವಲ್ಲ. ಆದರೆ, ಹದಿಮೂರು ವರ್ಷದ ಚಿಕ್ಕ ಹುಡುಗಿಯನ್ನು ಸೆರೆಹಿಡಿದಿದ್ದಾನೆಂಬ ಸಂಗತಿ. ಎಳೆಯ ದೇಹಗಳ ನಗ್ನತೆಯನ್ನು, ಅಶ್ಲೀಲತೆಯನ್ನು ಗುಟ್ಟಾಗಿ ಆವಾಹಿಸುವುದರ ಬಗ್ಗೆ ಇರುವ ರೊಚ್ಚಿನ ವಾತಾವರಣದಲ್ಲಿ ಈ ಗೊಂದಲ ಎದ್ದಿದೆ.

ಚಿತ್ರಗಳನ್ನು ಮುಟ್ಟುಗೋಲು ಹಾಕಿಕೊಂಡು, ಪ್ರದರ್ಶನ ನಿಲ್ಲಿಸಿದ ಪೋಲೀಸರು ಇನ್ನೂ ಗ್ಯಾಲರಿಯವರ ಮೇಲಾಗಲಿ, ಛಾಯಾಗ್ರಾಹಕನ ಮೇಲಾಗಲೀ ಯಾವುದೇ ಆರೋಪ ಹೊರಿಸಿಲ್ಲ. ಲಾಯರ್ ಒಬ್ಬನ ಪ್ರಕಾರ, ಕೋರ್ಟಿನಲ್ಲಿ ಸಾಬೀತಾಗಲೂ ಯಾವುದೇ ಕೃತ್ಯಕ್ಕೂ ಎರಡು ಅಂಶಗಳು ಇರಬೇಕು. ಒಂದು ತಪ್ಪು ಕೃತ್ಯ ಮತ್ತು ಎರಡನೆಯದು ಆ ಕೃತ್ಯದ ಹಿಂದಿನ ಕೆಟ್ಟ ಮನಸ್ಸು/ಮೋಟಿವ್. ಆತನ ಪ್ರಕಾರ ಅದು ಯಾವ ಆಧಾರದ ಮೇಲೆ ಪೋಲೀಸರು ಕೋರ್ಟಿನಲ್ಲಿ ಇದನ್ನು ದುಷ್ಕೃತ್ಯ ಎಂದು ಸಾಬೀತು ಮಾಡಬಲ್ಲರೋ ಎಂದು ಉದ್ಗಾರ ತೆಗೆದಿದ್ದಾನೆ.

ಹೆನ್ಸನ್ ಚಿತ್ರಗಳ ಕಲಾತ್ಮಕತೆಯ ಮಾತೇನೇ ಇರಲಿ. ಅದು ಎಲ್ಲರಿಗೂ ಇಷ್ಟವಾಗಬಲ್ಲಂತದ್ದೇನೂ ಅಲ್ಲ. ಬಾಲ್ಯ ಕಳೆದು, ಇನ್ನೂ ಯೌವ್ವನ ಮುತ್ತಿಕೊಂಡಿರದ ಕೌಮಾರ್ಯದಲ್ಲಿರುವವರ ಲೈಂಗಿಕತೆ ಇವನ ಚಿತ್ರಗಳ ಮಾದರಿಗಳು. ಮೊದಲ ಬಾರಿಗೆ ತಮ್ಮ ಲೈಂಗಿಕತೆಯನ್ನು ಕಂಡುಕೊಳ್ಳುವಲ್ಲಿನ ಆನಂದ ಮತ್ತು ಆತಂಕವನ್ನು ಹಿಡಿದಿಡುವುದು ಅದರ ಮೂಲ ಆಶಯ. ಎಂಬತ್ತರ ದಶಕದಿಂದ ಈ ಬಗೆಯ ಚಿತ್ರಗಳನ್ನು ತೆಗೆಯುತ್ತಾ ಬಂದಿರುವ ಇವನಿಗೆ ಧಡಕ್ಕನೆ ಶನಿಕಾಟ ಶುರುವಾಗಿರುವುದು ಹಲವು ಕಲಾವಿದರ ಹುಬ್ಬೇರಿಸಿದೆ. ಕೇಟ್ ಬ್ಲಾಂಚೆಟ್‌ನಂತಹವರೆಲ್ಲಾ ಈತನ ಬೆಂಬಲಕ್ಕೆ ನಿಂತಿದ್ದು ಪ್ರಧಾನಿಯನ್ನು ತೆಗಳಿದ್ದಾರೆ. ಇದ್ದಕಿದ್ದಂತೆ ಕಲೆಯ ವಿಚಾರದಲ್ಲಿ ನೂರು ವರ್ಷ ಹಿಂದಕ್ಕೆ ಹೋಗಿಬಿಟ್ಟಿರುಂತಿದೆ ಎಂದು ಇನ್ನು ಕೆಲವರು ಗೊಣಗುತ್ತಿದ್ದಾರೆ.

ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ನೈತಿಕತೆಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಲೇ ಇರುತ್ತವೆ. ಅವುಗಳನ್ನು ಎಲ್ಲ ದೇಶದ ಸುದ್ದಿಗಳಲ್ಲೂ ಕೇಳುತ್ತಲೇ ಇರುತ್ತೇವೆ. ಎಲ್ಲರೂ ಸಮಾಜವನ್ನು ಕಾಪಾಡುವ ಮಾತೇ ಆಡುತ್ತಿರುತ್ತಾರೆ. ಕಲಾ ಚರಿತ್ರೆಯ ನೂರಾರು ವರ್ಷಗಳ ಹಲವಾರು ಪ್ರಕರಣಗಳು ನಿಮಗೆ ನೆನಪಿರಬಹುದು. ಸಮಕಾಲೀನದಲ್ಲೂ, ಎಂ.ಎಫ್.ಹುಸೇನರ ಮೇಲಿನ ದಾಳಿಯೂ ನಿಮಗೆ ಗೊತ್ತಿರಬಹುದು. ಏನೇ ಆದರೂ, ಕಲೆಯ ನೈತಿಕತೆ ಇವೆಲ್ಲವುಗಳ ಹೊರಗುಳಿಯಬೇಕಾಗುತ್ತದೆ. ಆಗಲೇ ಸಮಾಜದ ಹಲವು ನಿಲುವುಗಳನ್ನು ಕೆಣಕಬಹುದು, ಪ್ರಶ್ನಿಸಬಹುದು. ಅವುಗಳನ್ನು ಹೊಸ ದಿಗಂತದತ್ತ ದೂಡಬಹುದು. ಇಲ್ಲದಿದ್ದರೆ ನಿಂತ ನೀರಾಗುವ ಅಪಾಯವೇ ಹೆಚ್ಚು.

[photo - Adam Hollingworth]

ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ