ಫೆಬ್ರವರಿ ೪, ೨೦೧೨
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಇಂಜನಿಯರಿಂಗ್‌ ಸೇರುವ ಕನಸು ಒಡೆದ ಮೇಲೆ ಬಿಎಸ್ಸಿ ಸೇರಲು ಸಿದ್ಧನಾದೆ. ನ್ಯಾಷನಲ್‌ ಕಾಲೇಜಿಗೆ ನಮಸ್ಕಾರ ಹೇಳಲೆ ಬೇಕಾಯಿತು. ಅಲ್ಲಿಗೆ ಅರ್ಜಿಯನ್ನು ಹಾಕಿರಲೆ ಇಲ್ಲ. ನ್ಯಾಷನಲ್‌ ಕಾಲೇಜಿನಲ್ಲಿ ಬಿ.ಇ ಸಂದರ್ಶನ ಮುಗಿಯುವ ಮೊದಲೆ ಪ್ರವೇಶ ಮುಗಿಸುವರು. ಅವರು ಆಗಲೆ ಪಾಠ ಪ್ರವಚನ ಪ್ರಾರಂಭಿಸಿದ್ದರು. ಕೆಲವರು ಅಲ್ಲಿಯೂ ಪ್ರವೇಶ ಪಡೆದು ನಂತರ ಬಿಇ ಸೀಟು ಸಿಕ್ಕಿದರೆ ಆ ಕಾಲೇಜಿಗೆ ಹೋಗುತಿದ್ದರು. ಕಟ್ಟಿದ ಶುಲ್ಕ ಹೋಗುತಿತ್ತು. ನಾನು ಯಥಾರೀತಿ ದುಡ್ಡು ದಂಡವಾಗುವುದೆಂದು ಅದರ ಯೋಚನೆ ಮಾಡಲೆ ಇಲ್ಲ. ಬೇರೆ ಕಡೆ ಸೇರಲೆ ಬೇಕಾಯಿತು. ಸೆಂಟ್ರಲ್‌ ಕಾಲೇಜಿನ ಭವ್ಯತೆ ಭಯ ಹುಟ್ಟಿಸಿತು. ಸಮೀಪ ಎಂದು ಆನಂದರಾವ್‌ ಸರ್ಕಲ್ಲಿನ ಹತ್ತಿರದ ರೇಣುಕಾಚಾರ್ಯ ಕಾಲೇಜು ಆರಿಸಿದೆ. ಅದು ಮೊದಲು ಬಸಪ್ಪ ಇಂಟರಮಿಡಿಯಟ್‌ ಕಾಲೇಜು ಎಂದು ಹೆಸರಾಗಿತ್ತು. ಆಗ ಪಿಯುಸಿ ಬದಲು ಎರಡು ವರ್ಷದ ಇಂಟರ್‌ಮಿಡಿಯಟ್‌ ಇದ್ದಿತು... ಅಲ್ಲಿಯೆ ಬಿಎಸ್‌ಸಿ ತರಗತಿಗೆ  ಪ್ರವೇಶ ಪಡೆದೆ. ಆಗ ಪದವಿಗೆ ಎರಡು ಮೇಜರ್‌ ಮತ್ತು ಒಂದು ಮೈನರ್‌ ಓದಬೇಕಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ ಮೇಜರ್‌ ವಿಷಯವಾಗಿ ಆರಿಸಿಕೊಂಡೆ. ಗಣಿತ ಮೈನರ್‌ ಆಗಿತ್ತು ಎರಡುವಾರ ತರಗತಿಗೆ ಹೋಗಿರಲಿಲ್ಲ, ನನಗೆ ಅದೇಕೋ ರಸಾಯನಶಾಸ್ತ್ರದ  ಪ್ರಯೋಗಾಲಯದಲ್ಲಿ ವಾರಕ್ಕೆ ಎರಡುದಿನ ಕೆಲಸ ಮಾಡುವುದು ಆಗದು ಎನ್ನಿಸಿತು. ಅಲ್ಲಿನ ವಾಸನೆ ಹಿಡಿಸಲಿಲ್ಲ. ಜತೆಗೆ ಕಡ್ಡಾಯವಾಗಿ ಪ್ರತಿವಾರ ಎರಡು ಪ್ರಯೋಗಗಳ  ರೆಕಾರ್ಡ್ ಗಳನ್ನು ಬರೆಯಲೇಬೇಕಿತ್ತು. ಅದಕ್ಕೆ ಗಣಿತವನ್ನೆ ಮೇಜರ್‌ ವಿಷಯವಾಗಿ...

 ಅಲ್ಲಿಯೂ ಇಲ್ಲಿಯೂ ಗಾಂಧಿ:ಸುದರ್ಶನ್ ಆಸ್ಟ್ರೇಲಿಯಾ ಪತ್ರ

ಆಸ್ಟ್ರೇಲಿಯಾದ ಕ್ಯಾಂಗರೂ ದ್ವೀಪಕ್ಕೆ ಅಲ್ಲಿನ ಕಡಲು, ಕಡಲುತೀರ, ಸೀಲ್‌ಗಳು ಹಾಗು ದಟ್ಟ ಕಾಡನ್ನು ನೋಡಲು ಹೋಗಿದ್ದೆವು. ಹಡಗಿನಲ್ಲಿ ಕಾರನ್ನೂ ಸಾಗಿಸಿ ಎರಡು ದಿನ ಅಲೆದಾಡಿ ಖುಷಿಪಟ್ಟೆವು. ಆದರೆ ನಂತರ, ಆ ನಡುಗುಡ್ಡೆಯ ಒಂದು ನಿರ್ಜನ ಮಣ್ಣು ರಸ್ತೆಯಲ್ಲಿ ನಮ್ಮ ಕಾರು ಹಠಾತ್ತನೆ ಜಾರಿ, ಪಕ್ಕಕ್ಕೆ ಉರುಳಿ, ಅಪಘಾತಕ್ಕೆ ಈಡಾದೆವು. ಕಾರಿನಲ್ಲಿದ್ದ ನಾವು ನಾಲ್ವರಿಗೂ ತರಚುಗಾಯವಷ್ಟೇ ಆಗಿ ಬಹುದೊಡ್ಡ ಗಂಡಾಂತರದಿಂದ ಪಾರಾಗಿದ್ದೆವು. ನಜ್ಜುಗುಜ್ಜಾದ ಕಾರನ್ನು ಅಲ್ಲೇ ಬಿಟ್ಟು ಇನ್ಷುರೆನ್ಸಿನವರ ನೆರವಿನಿಂದ ಈಚೆ ಬಂದೆವು. ಅಪಘಾತವಾದಾಗ ಬಂದ ಎಮರ್ಜೆನ್ಸಿ ದಳವಾಗಲೀ, ಪೋಲೀಸಾಗಲೀ, ಆಂಬುಲೆನ್ಸಿನವರಾಗಲೀ 'ನೀವು ಅದೃಷ್ಟವಂತರು' ಎಂದು ಹೇಳಿದರಷ್ಟೇ ಹೊರತು "ಅಯ್ಯೋ" ಎಂದು ಕರುಣೆಯಾಗಲೀ, ಅನುಕಂಪವಾಗಲೀ ತೋರಿಸಲಿಲ್ಲ. ಆದರೆ ಕೂಡಲೆ ಎಲ್ಲರನ್ನೂ ದೈಹಿಕವಾಗಿ ತಪಾಸಣೆ ಮಾಡಿ, ಪಕ್ಕದಲ್ಲಿ ಕೂರಿಸಿ ತಮ್ಮ ಕೆಲಸದಲ್ಲಿ ತೊಡಗಿಕೊಂಡರು. ಪೋಲೀಸವ ಕಡೆಗೆ ನಮ್ಮ ಸಾಮಾನುಗಳನ್ನು ತನ್ನ ವ್ಯಾನಿನಲ್ಲಿ ಹಾಕಿಕೊಂಡು ನಾವಿದ್ದ ಕಾಟೇಜಿಗೆ ಬಿಟ್ಟು ಕೈಕುಲುಕಿ- 'ಒಳ್ಳೆಯದಾಗಲಿ' ಎಂದು ಹೇಳಿ ಹೋದ.

ಇದಾಗಿ ಒಂದೆರಡು ದಿನಕ್ಕೆ ಜನವರಿ ೨೬. ಭಾರತದಲ್ಲಿ ಗಣರಾಜ್ಯ ದಿನವಾದರೆ, ಇಲ್ಲಿ 'ಆಸ್ಟ್ರೇಲಿಯಾ ಡೇ' ಹಾಗು...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
‘ಆಡುಜೀವನ’ದ ಹದಿನೈದನೇ ಕಂತು

ಎರಡೇ ಎರಡು ದಿನಗಳ ಪರಿಚಯ ಮಾತ್ರ, ಅದನ್ನು ಪರಿಚಯ ಎಂದೇ ಹೇಳಬಹುದೇನೋ  ಎಂದು ತಿಳಿಯದು. ಪರಸ್ಪರ ಮಾತನಾಡಿರುವುದು ಒಂದಷ್ಟು ನುಡಿಗಳು ಮಾತ್ರ. ಹೆಸರು ಗೊತ್ತಿಲ್ಲ. ಊರು ಗೊತ್ತಿಲ್ಲ. ಏನೂ ಗೊತ್ತಿಲ್ಲ. ಹಾಗಿದ್ದರೂ ಆ ಭೀಕರರೂಪಿ ಹೊರಟು ಹೋದ ಎಂದು ಕೇಳಿದಾಗ ನನ್ನ ಹೃದಯಕ್ಕೆ ಅದೆಷ್ಟು ಘಾಸಿಯಾಯಿತು. ಆ ವೇದನೆಯ ಕಾರಣವೇನೆಂದು ನನಗೆ ತಿಳಿಯದು. ಪ್ರಾಯಶಃ ಅತ್ಯಂತ...

ಮಾಸ್ತಿ ಎಂಬ ಮಹಾಮರದ ಹನಿಗಳು:ವಿಮಲಾ ನೆನಪು

ಮಕ್ಕಳು ಮರಿ ಆಗಿ, ಮೊಮ್ಮಕ್ಕಳು ಹುಟ್ಟಿದ ಮೇಲೂ, ಆಗಾಗ ಮನಸ್ಸು ಅನಿರೀಕ್ಷಿತವಾಗಿ ಬಾಲ್ಯದ ದಿನಗಳತ್ತ ಸುಳಿಯುವುದುಂಟು. ಮನಸ್ಸು ಆ ದಾರಿ ಹಿಡಿದಾಗೆಲ್ಲ ನನ್ನ ಸ್ಮೃತಿಪಥದಲ್ಲಿ ಬಂದುಹೋಗುವ ವಿಶೇಷ ವ್ಯಕ್ತಿ ಎಂದರೆ, ನನ್ನ ಎಳೆತನದಿಂದಲೂ ನನಗೆ ಅತ್ಯಂತ ಪ್ರೀತಿಪಾತ್ರ ಹಿರಿಯ ವ್ಯಕ್ತಿಗಳಲ್ಲೊಬ್ಬರಾದ ಮಾಸ್ತಿಯವರು. ಈ ಬಾರಿ ಅವರನ್ನು ನೆನೆಯುತ್ತಿದ್ದಂತೆ ನನ್ನ...

ಕಟಾವ್ ಮಿಷನ್ನೂ, ಪ್ಲಾಸ್ಟಿಕ್ ಹಾಸೂ:ಸ್ವರೂಪ್ ಬರಹ

ಇದು ಸುಗ್ಗಿಯ ಸಮಯ. ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕಟಾವ್ ಮಾಡಿ ಶೇಖರಿಸಿ ಇಡುವಲ್ಲಿ ಸಕ್ರಿಯವಾಗಿರುತ್ತಾರೆ. ಈ ಸಮಯದಲ್ಲಿ ನೀವು ತುಂಗಭದ್ರೆಯ ಕೃಪೆಗೆ ಒಳಗಾದ ಕೃಷಿ ಜಮೀನಗಳ ಸುತ್ತಾ ನಡೆದಾಡಿದರೆ ಭತ್ತದ ಕಟಾವ್ ಕೆಲಸ ಜೋರಾಗಿ ಸಾಗಿರುವುದನ್ನು ಕಾಣಬಹುದು. ಜೊತೆಗೆ ಈ ಪ್ಲಾಸ್ಟಿಕ್ ಹಾಸುಗಳನ್ನು ಮಾರುವವರನ್ನು ಕಾಣುತ್ತೇವೆ. ಇವರು ರಸ್ತೆಯ...

 
 ಬಾಬು ಕರಡಿ ಸರಣಿ:ಕರಡಿ ಕುಲದ ಮೂಲದ ಕುರಿತು

ಅದು ೨೦೦೬ ಇರಬೇಕು ಬೆಂಗಳೂರಿನ ಹೊಸಕೋಟೆಯ ಬಳಿ ೬ ಕರಡಿಗಳನ್ನು ಸಂರಕ್ಷಿಸಲಾಗಿದೆ ಎಂಬ ಸುದ್ದಿ ಕರಡಿಗಳ ಫೋಟೊ ಸಮೇತ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಅಷ್ಟೊತ್ತಿಗಾಗಲೇ ಕರಡಿ ಆಡಿಸುವವರ ಬೆನ್ನಹಿಂದೆ ಬಿದ್ದು ಸಮುದಾಯದ ಮೂಲ ಯಾವುದು ಎನ್ನುವುದರ ಹುಡುಕಾಟದಲ್ಲಿ ತೊಡಗಿಕೊಂಡಿದ್ದೆ. ಇಂಟರ‍್ನೆಟ್‌ನಲ್ಲಿ ಅಲ್ಲೊಂದು ಇಲ್ಲೊಂದು ಮಾಹಿತಿ ಸಿಕ್ಕಿತು, ಅದು ಸಾಕಾಗಲಿಲ್ಲ ಎನ್ನುವ ಕೊರಗು ಒಂದು ಕಡೆ. ಕನ್ನಡದಲ್ಲಿ ಏನಾದರೂ ಮಾಹಿತಿ ಸಿಗಬಹುದು ಅಂತ ಹುಡುಕಿದೆ ಅಂತಹ ವಿಶೇಷವಾದ ಮಾಹಿತಿ ಏನೂ ಕಾಣಿಸಲಿಲ್ಲ. ಎರಡನೆಯ ಹಿಂದುಳಿದ ಆಯೋಗದ ವರದಿಯಲ್ಲಿ ಮಾದಾರಿ ಎನ್ನುವ ಸಮುದಾಯದ ಉಲ್ಲೇಖವಿದ್ದು ಆ ಸಮುದಾಯದ ಕಸುಬಿನ ಬಗ್ಗೆ ಏನೂ ಮಾಹಿತಿಯಿಲ್ಲ. ಉತ್ತರಭಾರತದಲ್ಲಿ ಈ ಸಮುದಾಯದ ಹೆಸರು ಖಲಂದರ್, ಕರ್ನಾಟಕದಲ್ಲಿ ಕರಡಿ ಆಡಿಸುವವರು ಹೇಳುವ ಪ್ರಕಾರ ಅವರು ಮಾದಾರಿಗಳು. ಈ ಬಗ್ಗೆ ಖ್ಯಾತ ಸಮಾಜಶಾಸ್ತ್ರಜ್ಞ ಕೆ.ಎಸ್.ಸಿಂಗ್ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ. ಬಾಜಿಗರ್ ಸಮುದಾಯದ ಭಾಗವಾಗಿ ಖಲಂದರ್ ಬರುತ್ತಾರೆ, ಮದಾರಿಗಳೆಂದರೆ, ಹಾವು, ಕರಡಿ ಮತ್ತು ಕೋತಿ ಆಡಿಸುವವರೆಂದು ಸ್ಥೂಲವಾಗಿ ಹೇಳಬಹುದು. ಈ ಚರ್ಚೆ ಏನೇ ಇರಲಿ, ತೀರ ಬೇಸರವಾಗುವ ಸಂಗತಿಯೆಂದರೆ, ಕರ್ನಾಟಕದ ಅಕ್ಷರ ಪರಂಪರೆಯಲ್ಲಿ ಈ ಈ ಸಮುದಾಯದ ಬಗ್ಗೆ ಏನೂ ಸಿಗುವುದಿಲ್ಲ. ಜಾನಪದ ಮತ್ತು ಮೌಖಿಕ ಪರಂಪರೆಗಳಲ್ಲಿ ಈ ಬಗ್ಗೆ ಅಲ್ಲಲ್ಲಿ ಮಿಂಚುಹುಳಗಳು ಕಾಣಿಸುತ್ತವೆ. ಅಂತಹದೇ ಒಂದು ಕತೆ ಇಲ್ಲಿದೆ.

ಡಾ.ಜೆ.ಸೋಮಣ್ಣರವರು ತಮ್ಮ ದಲಿತ ಲೋಕದ ನೋವು-ನಲಿವು ಕೃತಿಯಲ್ಲಿ ಜೇನು ಕುರುಬರ ದಾಸಪ್ಪ ಹೇಳುವ ಜೇನು ಕುರುಬರಿಗೂ ಮತ್ತು ಕರಡಿಗೂ ಇರುವ ಕರುಳು ಬಳ್ಳಿಯ ಸಂಬಂಧಗಳ ವಿಶಿಷ್ಟ ಕತೆ ಹೀಗಿದೆ:

’ನಮ್ಮದು ಕರಡಿಕುಲ’. ಆದಿಕಾಲದಲ್ಲಿ ನಮ್ಮ ಅಜ್ಜ ಮತ್ತು ಅಜ್ಜಿ ಜನ್ಮ ತಾಳಿ ಬಂದರು. ಅದೇ  ಸಂದರ್ಭದಲ್ಲಿಕಾಡಿನಲ್ಲಿ ಕರಡಿಯೊಂದು ಹುಟ್ಟಿತು. ಅಜ್ಜಅಜ್ಜಿ ಜೊತೆಯಾಗಿ ಸುಖದ ಜೀವನ...

Font Help
Site Web
ಜನಮತ
ನಂಗೆ ಕ್ಯಾಲೆಂಡರ್ ಅಂದ್ರೆ ಮುಖ್ಯವಾಗಿ
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige