ಜುಲೈ ೨೭, ೨೦೦೮
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಚರಿತ
ಚಿತ್ರಕಲೆಯಲ್ಲಿ ಮೈಸೂರಿನ ಕೃಷ್ಣರಾಜೇಂದ್ರ ದೃಶ್ಯಕಲಾ ಅಕಾಡೆಮಿಯಿಂದ ಪದವಿಯನ್ನು, ಶಾಂತಿನಿಕೇತನದ ಕಲಾ ಭವನದಿಂದ ಸ್ನಾತಕೋತ್ತರ ಪದವಿಯನ್ನೂ ಪದೆದಿದ್ದಾರೆ, ಸದ್ಯ ಮೈಸೂರಿನಲ್ಲಿ ಚಿತ್ರಕಲೆಯಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
 
ಚಂದಮಾಮ್
ಚಂದಮಾಮ್ ಒಂದು ಕಾಲದಲ್ಲಿ ಬರುತ್ತಿದ್ದ ಭಾವನಾ ಮಾಸಿಕದ ಕೊನೆಯ ಪುಟದಲ್ಲಿ ಬರೆಯುತ್ತಿದ್ದವರು. ಉದ್ಯೋಗದ ನಿಮಿತ್ತ ಬಹಳ ವರ್ಷಗಳನ್ನು ದೇಶಾಂತರದಲ್ಲಿ ಕಳೆದ ಇವರು ಈಗ ಗೃಹಸ್ಥರಾಗಿದ್ದಾರೆ. ಆಗಾಗ ಕೆಂಡಸಂಪಿಗೆಯಲ್ಲಿ ಬೆಳದಿಂಗಳಿನಂತೆ ಕಾಣಿಸಿಕೊಳ್ಳಲಿದ್ದಾರೆ.
ಚೇತನಾ ತೀರ್ಥಹಳ್ಳಿ
ಓ ನನ್ನ ಚೇತನಾ ಎಂಬ ಬ್ಲಾಗ್ ಒಡತಿ, ಅಂಕಣಕಾರ್ತಿ.
 
ಟೀನಾ
ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಅಧ್ಯಯನ  ಮಾಡಿದ್ದಾರೆ.  ಕವಯತ್ರಿ. ಅಂಕಣ ಬರಹ, ಬ್ಲಾಗ್ ಬರಹಗಳಿಂದ ಪರಿಚಿತರಾಗಿದ್ದಾರೆ.
ಎಚ್.ಎಸ್.ರಾಘವೇಂದ್ರ ರಾವ್

ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿದ್ದು ಈಗ ನಿವೃತ್ತರಾಗಿದ್ದಾರೆ. ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರು. ಅತಿರೇಕವಿಲ್ಲದ ಸಮಚಿತ್ತದ ಬರವಣಿಗೆ ಅವರ ವಿಮರ್ಶೆಯ ಮುಖ್ಯ ಲಕ್ಷಣ. ನವೋದಯದ ಕವಿಗಳ ವೈಶಿಷ್ಟ್ಯವನ್ನು ಅಧ್ಯಯನ ಮಾಡಿರುವ 'ಹಾಡೆ ಹಾದಿಯ ತೋರಿತು' ಪಶ್ಚಿಮ ಬಂಗಾಳ ಪ್ರವಾಸವನ್ನು...

 
ಎನ್. ಎ. ಎಂ. ಇಸ್ಮಾಯಿಲ್
ಇಸ್ಮಾಯಿಲ್  ಕನ್ನಡದ ಹೊಸ ತಲೆಮಾರಿನ ಪ್ರತಿಭಾವಂತ ಪತ್ರಕರ್ತರು. ಸದ್ಯಕ್ಕೆ ಬೆಂಗಳೂರಿನಲ್ಲಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ನಲ್ಲೂರಿನವರಾದ ಇಸ್ಮಾಯಿಲ್ ಕನ್ನಡದಲ್ಲಿ ಅಂತರ್ಜಾಲ ಸಾಹಸಗಳಿಗೆ ಮುನ್ನುಗ್ಗಿದ ಮೊದಲಿಗರಲ್ಲಿ ಒಬ್ಬರು. ಕಂಪ್ಯೂಟರ್, ಅರ್ಥಶಾಸ್ತ್ರ, ಕೃಷಿಸಾಲ ಹಾಗೂ ಸಾಹಿತ್ಯ ಇವರ ಇಷ್ಟದ ವಿಷಯಗಳು.
ಎಸ್.ಮಂಜುನಾಥ್
ಇಂದಿನ ಮುಖ್ಯ ಕವಿಗಳಲ್ಲಿ ಒಬ್ಬರು. ಇಂಗ್ಲಿಷ್ ಎಂಎಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿ ಈಗ ಕೆ ಆರ್ ನಗರದಲ್ಲಿ ಬಿಎಸ್ಎನ್ಎಲ್ ಅಧಿಕಾರಿಯಾಗಿದ್ದಾರೆ. ಹಕ್ಕಿ ಪಲ್ಟಿ, ಬಾಹುಬಲಿ, ಕಲ್ಲ ಪಾರಿವಾಳಗಳ ಬೇಟ ಇವರ ಮುಖ್ಯ ಸಂಕಲನಗಳು. ಸುಮ್ಮನಿರುವ ಸುಮ್ಮಾನ ಎಂಬುದು ತಾವೋ ಚಿಂತನೆಗಳ ಅನುವಾದ.
 
ಎಸ್.ಗಂಗಾಧರಯ್ಯ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹುಟ್ಟಿದ ಊರು. ವೃತ್ತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ. ವೈಕಂ ಕಥೆಗಳು, ಲೋರ್ಕಾ-ನಾಟಕ ಎರ್ಮಾ, ಹಲವು ರೆಕ್ಕೆಯ ಹಕ್ಕಿ, ಚರಮಗೀತೆ ಅನುವಾದಿತ ಕೃತಿಗಳು. ನವಿಲ ನೆಲ ಇವರ ಕಥಾಸಂಕಲನ.  ವೈಕಂ ಕಥೆಗಳು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ಎಂ ಎಸ್ ನಾಗರಾಜ

ಡಾ. ಎಂ ಎಸ್ ನಾಗರಾಜ ಹಾಸನದ ಕೃಷಿ ವಿಜ್ಝಾನ ಕೇಂದ್ರದಲ್ಲಿ ಭೂ ವಿಜ್ಝಾನ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್  ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 
ಎಂ ವ್ಯಾಸ
ಎಂ.ಎಸ್.ಮೂರ್ತಿ
ಪ್ರಸಿದ್ಧ ಕಲಾವಿದರು. ಬೆಂಗಳೂರಿನ ಸಮೀಪದಲ್ಲಿ ಭೂಮಿ ಎಂಬ ಸ್ಟುಡಿಯೋ ಮತ್ತು ಕಲಾಭೂಮಿಯನ್ನು ಸೃಷ್ಟಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಅವರ ಚಿತ್ರಗಳ ಪ್ರದರ್ಶನ ನಡೆದಿದೆ. ಬುದ್ಧನನ್ನು ಕುರಿತ ಚಿತ್ರ ಸರಣಿ ವಿಶೇಷ ಮನ್ನಣೆಯನ್ನು ಪಡೆದಿದೆ. ಕಲೆ ಮತ್ತು ಕಲಾಮೀಮಾಂಸೆ, ಸಾಮಾಜಿಕ ಚಿಂತನೆ, ಸಾಹಿತ್ಯಾಸಕ್ತಿ ಇವೆಲ್ಲ ಸೇರಿರುವ ದೇಸಿ ನಗು ಅವರ ಪ್ರಬಂಧಗಳ ಸಂಕಲನ.
 
ಎಂ.ಎಸ್.ಶ್ರೀರಾಮ್
ಶ್ರೀರಾಂ, ಎಂ. ಎಸ್. (೧೬ ಮೇ, ೧೯೬೨). ಸದ್ಯದಲ್ಲಿ ಅಹ್ಮದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರಾಧ್ಯಾಪಕರಾಗಿದ್ದಾರೆ. ಉದ್ಯೋಗಿ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಗ್ರಾಮೀಣ ಅಭಿವೃದ್ಧಿ ಇವರ ಪರಿಣತಿಯ ವಿಷಯ. ಸಮಕಾಲೀನ ಸಾಹಿತ್ಯ, ರಂಗಭೂಮಿ, ಸಿನಿಮಾ ಇವರ ಆಸಕ್ತಿಯ ವಿಷಯಗಳು. ಮಾಯಾದರ್ಪಣ (೧೯೯೧) ಮತ್ತು ಆವರವರ...
ಡಾ. ಪದಾಚಾರ್ಯ

ಡಾ. ಪದಾಚಾರ್ಯ

 
ಡಾ.ಎಲ್ .ಸಿ ಸುಮಿತ್ರಾ
ತೀರ್ಥಹಳ್ಳಿ ಸಮೀಪದ ಲಕ್ಷ್ಮೀಪುರ ಊರು. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ. ಈಗ ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರು. ಇವರ ವಿಮರ್ಶೆ,ಕಥೆ, ಕವಿತೆ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಭಾವ, ಕಾಡು-ಕಡಲು,ನಿರುಕ್ತ -ವಿಮರ್ಶೆಗಳು. " ಬಕುಲದದಾರಿ' ಕವನಸಂಗ್ರಹ. ಅಮೃತಾಪ್ರೀತಮ್ ಅವರ "ಪಿಂಜರ್" ಕಾದಂಬರಿಯನ್ನು ಕನ್ನಡಕ್ಕೆ...
ಡಾ.ರಾಜೇಂದ್ರ ಚೆನ್ನಿ
ರಾಜೇಂದ್ರ ಚೆನ್ನಿ (೧೯೫೫) ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ನಾಗರಗಾಳಿಯಲ್ಲಿ ಹುಟ್ಟಿದ್ದು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ ಮುಗಿಸಿ ಸರ್ಕಾರಿ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಬಿ. ಆರ್. ಪ್ರಾಜೆಕ್ಟಿನಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರು ಮತ್ತು...
 
ಡಾ.ವಿ.ರಾಜೇಂದ್ರ
ಮೈಸೂರಿನ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರು, ಸುಪ್ರಸಿದ್ಧ ವೈದ್ಯರು.
ಡಾ.ಗುರುಪ್ರಸಾದ್ ಕಾಗಿನೆಲೆ

ಡಾ.ಗುರುಪ್ರಸಾದ್ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗ. ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರ್ಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಮತ್ತು ಎಂ.ಡಿ. ಪದವಿ ಪಡೆದು ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ. ಅನಂತರ ದೆಹಲಿಯ ಭತ್ರೆ ಆಸ್ಪತ್ರೆಯ ನೆಫ್ರಾಲಜಿ ವಿಭಾಗದಲ್ಲಿ ಸೀನಿಯರ್...

 
ತನ್ಮಯಿ.ಎಸ್
ಖಾಸಗಿ ಮಾಧ್ಯಮ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ತನ್ಮಯಿ ಕನ್ನಡ ಚಲನಚಿತ್ರಗಳ ಅಭಿಮಾನಿ. ಈಗಷ್ಟೇ ವಿಮರ್ಶೆಗಳನ್ನೂ ಬರೆಯಲು ಆರಂಭಿಸಿದ್ದಾರೆ.
ತೇಜಸ್ವಿನಿ ಹೆಗಡೆ
ಹೆಸರು ತೇಜಸ್ವಿನಿ ಹೆಗಡೆ. ಮೂಲ ಊರು ಶಿರಸಿ. ಈಗ ಇರುವುದು ಬೆಂಗಳೂರಿನಲ್ಲಿ. 'ಚಿಗುರು', 'ಪ್ರತಿಬಿಂಬ' - ಎರಡು ಕವನ ಸಂಕಲನಗಳು. 'ಕಾಣ್ಕೆ' ಕಥಾಸಂಕಲನ.
 
ದೇವನೂರ ಮಹಾದೇವ

ದೇವನೂರ ಮಹಾದೇವ ಹುಟ್ಟಿದ್ದು ೧೯೪೮ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ. ದೇವನೂರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ. ಕೆಲಕಾಲ ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಕೆಲಸ ಮಾಡಿ ಅಲ್ಲಿಯ ವೃತ್ತಿಗೆ ರಾಜೀನಾಮೆ ನೀಡಿ ವ್ಯವಸಾಯದಲ್ಲಿ ತೊಡಗಿದ್ದಾರೆ.

ಇವರ ‘ಒಡಲಾಳ' ಕೃತಿಯನ್ನು ಕಲ್ಕತ್ತಾದ ಭಾರತೀಯ ಪರಿಷತ್ ೧೯೮೪ರ ಉತ್ತಮ...

ದೇವು ಪತ್ತಾರ

ಲೇಖಕ, ಪತ್ರಕರ್ತ

 
ದೇವು ಪತ್ತಾರ್

ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್ ನ ಬೀದರ್ ಜಿಲ್ಲಾ ವರದಿಗಾರರಾಗಿರುವ ದೇವು ಪತ್ತಾರ್ ಆಗೀಗ ಕವಿತೆಗಳನ್ನೂ ಬರೆಯುವ ಅಭ್ಯಾಸವುಳ್ಳವರು. ಇತ್ತೀಚೆಗಷ್ಟೇ ಛಾಯಾಗ್ರಾಹಕ ಗುಲಾಂ ಮುಂತಕ ಅವರ ಕುರಿತು ಬರೆದ ಪುಸ್ತಕವೊಂದನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ.

ದೀಪಾ ಗಣೇಶ್
ಪತ್ರಕರ್ತೆ ದೀಪಾ ಗಣೇಶ್  ಸಂಗೀತ, ಸಾಹಿತ್ಯ, ರಂಗಭೂಮಿಗಳ ಬಗ್ಗೆ ನಿಯತವಾಗಿ ಬರೆಯುತ್ತಾರೆ.  ಅನಿಕೇತನ, ಭಾವನಾ, ಇಂಡಿಯನ್ ಲಿಟರೇಚರ್, ಮತ್ತು ದೇಶಕಾಲ ನಿಯತಕಾಲಿಕಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಯು.ಆರ್. ಅನಂತಮೂರ್ತಿಯವರ ಲೇಖನವನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಗಂಗೂಬಾಯಿ ಹಾನಗಲ್ ಅವರನ್ನು ಕುರಿತು ಕೃತಿರಚನೆಯಲ್ಲಿ ತೊಡಗಿದ್ದಾರೆ.
 
ನರೇಂದ್ರ ಪೈ
ಕನ್ನಡದ ಹೊಸ ಮುಖ್ಯ ಕಥೆಗಾರರಲ್ಲಿ ಒಬ್ಬರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಸದ್ಯಕ್ಕೆ ಮಂಗಳೂರಿನಲ್ಲಿ ವಾಸ. ನರೇಂದ್ರ ಅವರು 'ಗಂಭೀರ ಆಸಕ್ತಿಯ ಕಥೆಗಾರರು...ವಿನಂಮ್ರತೆ ಮತ್ತು ಅಸಹಾಯಕತೆ' ಅವರ ಬರವಣಿಗೆಯಲ್ಲಿ ಎದ್ದು ಕಾಣುವ ಗುಣ ಎಂದು ಕೆ. ಸತ್ಯನಾರಾಯಣ ಗುರುತಿಸಿದ್ದಾರೆ. ಟಿಕ್ ಟಿಕ್ ಪೆನ್ನು ನರೇಂದ್ರ ಪೈ ಅವರ ಕಥಾಸಂಕಲನ. ಅಂಕೋಲೆಯ ರಾಘವೇಂದ್ರ...
ನಾ.ದಾಮೋದರ ಶೆಟ್ಟಿ.
 
ನಾಗಪ್ರಸಾದ್ ಎನ್.ಎಸ್
ನಾಗರಾಜ ಶೆಟ್ಟರು
ಶಿಕಾಗೋ ನಿವಾಸಿ.
 
ನಾಗರಾಜ ವಸ್ತಾರೆ

ನಾಗರಾಜ ವಸ್ತಾರೆ. (೧೯೬೮). ತಾಯಿ ಶಾಂತಾಮಣಿ. ಪತ್ನಿ ಅಪರ್ಣಾ.

ಆರ್ಕಿಟೆಕ್ಟ್. ಯಾವುದೇ ಬಗೆಯ ವಿನ್ಯಾಸದ ಬೋಧೆ ಮತ್ತು ಕಲಿಕೆಯಲ್ಲಿ ವಿಶೇಷ ಆಸ್ಥೆ. ಬೆಂಗಳೂರಿನ ಬಹುತೇಕ ಎಲ್ಲ ವಾಸ್ತುಶಿಲ್ಪ ಶಾಲೆಗಳಲ್ಲಿ ಸಂದರ್ಶನ ಅಧ್ಯಾಪನ. ಸ್ವಂತ ಉದ್ದಿಮೆ. ಕಳೆದ ಹತ್ತು ವರ್ಷಗಳಿಂದ ಹತ್ತಾರು ಪ್ರತಿಷ್ಠಿತ ಪ್ರಾಜೆಕ್ಟುಗಳ ವಿನ್ಯಾಸ ಮತ್ತು ಕಟ್ಟಡ ಉಸ್ತುವಾರಿ. ೨೦೦೨ರಲ್ಲಿ...

ಪಿ ಕೆ ರಾಜಶೇಖರ್
ಪಿ ಕೆ ರಾಜಶೇಖರ್ ನಮ್ಮ ನಡುವಿನ ಮುಖ್ಯ ಜಾನಪದ ವಿದ್ವಾಂಸರು ಜೊತೆಗೆ ಕಲಾವಿದ ಕೂಡ. ಮೈಸೂರು ವಿಶ್ವವಿದ್ಯಾಲಯದಲ್ಲಿ  ಕನ್ನಡ ಅದ್ಯಾಪಕರಾಗಿದ್ದು , ನಿವೃತ್ತರಾಗಿರುವ ಅವರು ಈಗ ಪೂರ್ಣ ಪ್ರಮಾಣದ ಜಾನಪದ ಕಲಾವಿದ ಹಾಗೂ ಸಂಗ್ರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಕೆಲವು ಪ್ರಮುಖ ಕೃತಿಗಳು- ಜನಪದ ರಾಮಾಯಣ, ಜನಪದ ಮಹಾಕಾವ್ಯ ಮಲೆಯ ಮಾದೇಶ್ವರ, ಪುರುಷನ ಪುಣ್ಯ...
 
ಪ್ರಭಾಮಣಿ ಎಚ್.ಡಿ
ಪ್ರಭಾಮಣಿ ಎಚ್.ಡಿ ಪ್ರಸ್ತುತ ಹಾಸನ ಜಿಲ್ಲೆಯ ದೊಡ್ಡ ಕಣಗಾಲು ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿ ಹಾಗೂ ಸಹಾಯಕ ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಅನೇಕ ಕತೆ, ಕವನ, ಲಲಿತ ಪ್ರಬಂಧಗಳು ಕನ್ನಡದ ವಿವಿಧ ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ‘ಗರಿಕೆ’, ‘ಗುಟುಕು’, ‘ಜಿರಲೆ ಉಂಡೆ’,...
 
Pages [1] 2 3 4 of 4    First | Previous | Next | Last