ಇಲ್ಲಿ ಮಹಾರಾಣಿಯೂ ಕೇವಲ ಒಬ್ಬ ‘ಹೆಣ್ಣೇ’ !: ಸುಕನ್ಯಾ ಕನಾರಳ್ಳಿ ಅಂಕಣ
ಜನಪದ, ಪಠ್ಯ, ದೃಶ್ಯ ಹೀಗೆ ಮಾಧ್ಯಮ ಯಾವುದೇ ಇದ್ದರೂ ವೀರಗಾಥೆ ಎಂಬ ಪ್ರಕಾರ ಸರಾಗವಾಗಿ ಸಾಗುವುದನ್ನು ಬೇಡುತ್ತದೆ. ಚೆನ್ನಮ್ಮನ ಕಥಾನಕ ಸಹ ಅದಕ್ಕೆ ಹೊರತಾಗಿಲ್ಲ. ಎಲ್ಲವನ್ನೂ ಕಳೆದುಕೊಂಡ ಚೆನ್ನಮ್ಮ ಬಂಧನದಲ್ಲಿ ಐದು ವರ್ಷ ಕಳೆದು ಸಾವನ್ನಪ್ಪುತ್ತಾಳೆ. ಕಿತ್ತೂರು ಮತ್ತು ಚೆನ್ನಮ್ಮ ತದನಂತರದಲ್ಲಿ ದೇಶದಲ್ಲೆಲ್ಲಾ ಹಬ್ಬಿದ ಸ್ವಾತಂತ್ರ್ಯ ಹೋರಾಟದ ಮುಂದಾಳುಗಳೆಂದು ಸ್ತುತಿಸಲಾಗಿದೆ. ರಾಷ್ಟ್ರೀಯ ಹೋರಾಟದಲ್ಲಿ ಚೆನ್ನಮ್ಮ ಧ್ರುವತಾರೆಯಂತೆ ಮಿನುಗುತ್ತಿರುತ್ತಾಳೆ ಎಂದು ಹೊಗಳಲಾಗಿದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತಾರನೆಯ ಬರಹ


