Advertisement

ಹೆಣದ ಹಣ: ಜಿಮ್ ರವಿ ಜೀವನ ಚರಿತ್ರೆಯ ಅಧ್ಯಾಯ

ಮಣ್ಣು ಮುಚ್ಚಿದ್ದ ನಾಲ್ಕಾಣೆಯನ್ನು ಯಾರಿಗೂ ಕಾಣದಂತೆ ಅತಿ ವೇಗವಾಗಿ ತೆಗೆದುಕೊಳ್ಳುವಾಗ ಕೈ ತುಂಬಾ ಮಣ್ಣಿನ ಸಮೇತ ಜೇಬಿಗೆ ಹಾಕಿಕೊಂಡಿದ್ದರ ಪರಿವೆ ಅವನಿಗಿರಲಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡು `ಏನಿಲ್ಲ ಕಣಣ್ಣೋ ಅಲ್ಲಿ ಬಿದ್‌ಬಿಟ್ಟೆ ನಿಕ್ಕರ್ ಮಣ್ಣಾಯ್ತು ಅಷ್ಟೆ’ ಅಂದ. ಆದ್ರೆ ಆ ಆಸಾಮಿ `ಲೇ ಕಳ್ ನನ್ಮಗ್ನೆ ಬಿದ್ರೆ ಬರೀ ಜೇಬ್ ಮಾತ್ರಾ ಮಣ್ಣಾಗುತೇನ್ಲಾ ಏನೋ ಕಳ್ಗರ ಬಿಟ್ಟಿಂಗೆ ಕಾಣುತ್ತೆ. ನಿಮ್ಮವ್ವ ಸಿಗ್ಲಿ ಹೇಳ್ತೀನಿ ತಡಿ’ ಅಂದು ಹೋದ. ಯಾವುದು ಯಾರಿಗೂ ಗೊತ್ತಾಗಬಾರ್ದು ಅಂತ ಅಂದ್ಕೊಂಡಿದ್ನೋ ಅದರ ಸುಳಿವೆ ಬೇರೆಯವರಿಗೆ ಸಿಕ್ಕಿದ್ದು ರವಿಯ ಜಂಘಾಬಲವನ್ನೇ ಕುಸಿಯುವಂತೆ ಮಾಡಿತ್ತು.
ಡಾ. ಮಂಜುನಾಥ್‌ ಮಾಗೋದಿ ಜಿಮ್ ರವಿ ಅವರ ಜೀವನ ಚರಿತ್ರೆ ‘ರವಿ ನೀನು ಆಗಸದಲ್ಲಿ’ ಕೃತಿಯ ಒಂದು ಅಧ್ಯಾಯ

Loading

ಅಂಕಣ

Latest

 ಬಲುಘೋರವೋ ನಮ್ಮ ನಾಳೆ: ವಿನಾಯಕ ಅರಳಸುರಳಿ ಅಂಕಣ

ಎರೆಡು ದಶಕದಿಂದೀಚೆಗೆ ನಗರೀಕರಣದ ಹೆಸರಿನಲ್ಲಿ ತಾವು ಕಳೆದುಕೊಂಡಿರುವುದೇನೆನ್ನುವುದು ಇಲ್ಲಿ ಕನಿಷ್ಠ ಕೆಲ ಮಂದಿಗಾದರೂ ಅರ್ಥವಾಗಿದೆ. ‘ಕಳೆದುಕೊಳ್ಳುವಷ್ಟು ಹಸಿರೀಗ ನಮ್ಮ ಬಳಿ ಇಲ್ಲ’ ಎಂಬುದು ಅರಿವಾಗಿದೆ. ಆದರೆ ಸದಾ ಹಸಿರಿನ ನೆರಳಿನಲ್ಲೇ ಬದುಕುತ್ತಿರುವ, ಫಲಾಹಾರಗಳನ್ನು ನೇರ ಮರ-ಗಿಡಗಳಿಂದಲೇ ಕಿತ್ತು ತಿನ್ನುತ್ತಿರುವ ನಮ್ಮ ಹಳ್ಳಿಗರಲ್ಲೇಕೆ ಈ ಕನಿಷ್ಠ ಪ್ರಜ್ಞೆಯೂ ಇಲ್ಲ? ಹಸಿರಿನ ತಂಪು ತೊಟ್ಟಿಲುಗಳಂತಿದ್ದ ಹಳ್ಳಿಗಳೀಗ ಕಳೆದ ಕೆಲ ವರ್ಷಗಳಲ್ಲಿ ನಗರವಾಗುವ ಹುಚ್ಚು ಧಾವಂತಕ್ಕೆ ಬಿದ್ದಂತೆ ಬದಲಾಗುತ್ತಿದೆ. ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

ಸಾಹಿತ್ಯ

ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ “ನೆನಪುಗಳು”

ಕಣ್ಣ ಹೊಸಿಲ ದಾಟಿ ಹನಿಯೊಂದು ಮತ್ತೆ ಉಪ್ಪು ಕಡಲನ್ನು ಸೇರಿತು. ಅವನ ಜೊತೆ ಹಾಕಿದ ಹೆಜ್ಜೆಗಳು, ಮಾತು, ನಗು, ಮುದ್ದು, ಎದೆಬಡಿತ, ಆಣೆ, ಪ್ರಮಾಣ, ಕಣ್ಣೀರು, ನೋವು... ಯಾವುದೂ ಸುಳ್ಳಲ್ಲ. ಅವನು ಅಷ್ಟೊಂದು ದ್ರೋಹಿಯಾಗಿರಲು ಸಾಧ್ಯವಿಲ್ಲ. ಅದರ ಸತ್ಯ ನನಗೆ ಗೊತ್ತು. ತೀವ್ರ ಭಾವಗಳು ಹೃದಯದಿಂದಲೇ ಹುಟ್ಟುತ್ತವೆ. ಆದರೆ ಮನುಷ್ಯನಾದವನಿಗೆ ಅವನ್ನು ತನ್ನ ಸಮಯಸಾಧಕತನಕ್ಕೆ ಬಳಸಿಕೊಳ್ಳುವುದು ಗೊತ್ತು, ಸತ್ಯವಾಗುಳಿವ ಅವಕಾಶವಿದ್ದಾಗಲೂ. ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ "ನೆನಪುಗಳು"

ಸರಣಿ

ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಮಾನವನ ಹುಟ್ಟು, ವಲಸೆ, ನಾಗರಿಕ ತೊಟ್ಟಿಲುಗಳು, ಕೃಷಿ ಮತ್ತು ಗಣಿಗಾರಿಕತೆಗಳು ಎಲ್ಲವೂ ಜೊತೆಜೊತೆಯಾಗಿಯೇ ನಡೆಯಿತು. ಕೃಷಿ ಕಂಡುಕೊಂಡಾಗಲೇ ಲೋಹಗಳ ಮೇಲೆಯೂ ಮನುಷ್ಯನ ಕಣ್ಣು ಬಿದ್ದಿತು. ದಕ್ಷಿಣ ಭಾರತದಲ್ಲಿ ಕೊಳ್ಳದೇವತೆಗಳೆ ಕೃಷಿಗೆ ಕಾರಣ ಎನ್ನುವ ಮಾತಿದೆ. ಭಾರತೀಯ ಪ್ರಾಚೀನ ಗಣಿಗಾರಿಕೆಯ ಈ ಸಣ್ಣ ಕೃತಿಗೆ ಇಷ್ಟೆಲ್ಲ ಪ್ರವೇಶವನ್ನು ಬರೆಯಬೇಕಾಯಿತು. ಯಾಕೆಂದರೆ ಭಾರತೀಯ ಪ್ರಾಚೀನ ಗಣಿಗಾರಿಕೆ ಮಾನವನ ವಲಸೆ ಮತ್ತು ನಾಗರಿಕ ತೊಟ್ಟಿಲುಗಳಿಂದ ಬೆರೆತುಹೋಗಿದೆ. ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿ ಬರಹ ಇಂದಿನಿಂದ ಪ್ರತಿ ಸೋಮವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ

ಪ್ರವಾಸ

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಒತ್ತೊತ್ತಾಗಿ ಬದುಕುವುದಕ್ಕಿಂತ ಕಾಲು ಚಾಚಿ ಪ್ರಕೃತಿಯ ಮಡಿಲಲ್ಲಿ ಒಂದಾಗಿ ಸರಳ ಮನೆಗಳಲ್ಲಿ ಬದುಕುವ ಅಪರಿಮಿತ ಸೌಂದರ್ಯವೇ ಬೇರೆ! ನೂರಾರು ಇಲ್ಲಗಳ ನಡುವಿನ ವಿಶ್ರಾಂತ ಸುಖ. ಇಂತಹ ಹತ್ತಾರು ಅಳಿದ ಮನೆಗಳು ಹೊಳೆ ಹಾರುತ್ತಲೇ ಕಾಣಸಿಕ್ಕವು. ಅಲ್ಲಿಲ್ಲಿ ಪುಟಾಣಿ ವಿಶಾಲ ಅಂಗಳಗಳು. ನಾಗರೀಕತೆಯ, ಮನುಷ್ಯ ವಾಸದ ಕತೆಯನ್ನು ಅರಹುತ್ತದೆ. ಪ್ರಕೃತಿ ಮಡಿಲಲ್ಲಿ ಬದುಕಿದ ಇವರ ಬದುಕಿನ ಸಾಹಸಗಳೆಂತೂ. ಇವರು ಬದುಕಿದ ಕುರುಹಾಗಿ ಅಲ್ಲಲ್ಲಿ ತೆಂಗಿನ ಮರಗಳಿವೆ! ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕುಂಚಿಕಲ್‌ ಅಬ್ಬಿಯ ಕುರಿತ ಬರಹ ಇಲ್ಲಿದೆ

ವ್ಯಕ್ತಿ ವಿಶೇಷ

ಚಿದಂಬರ ಜಂಬೆಯವರಿಗೊಂದು ವಿದಾಯ ಪತ್ರ: ಡಾ.ಶ್ರೀಪಾದ ಭಟ್‌ ಬರಹ

ಮೈಸೂರು ರಂಗಾಯಣದ ಎರಡು ಕಾರ್ಯಕ್ರಮಕ್ಕೆ ನಾವಿಬ್ಬರೂ ಒಟ್ಟಿಗೆ ಅತಿಥಿಗಳಾಗಿ ಭಾಗವಹಿಸಿದ್ದೆವು. ಭಾಗೀರಥಿ ಬಾಯಿ ಕದಂ ಆಗ ನಿರ್ದೇಶಕರಾಗಿದ್ದರು. ಎರಡನೇ ಸಾರಿ ನಾವಿಬ್ಬರೂ ಭಾಗಿಯಾದ ಕಾರ್ಯಕ್ರಮ ಮುಗಿದ ರಾತ್ರಿ ನೀವೆಂದಿರಿ. “ಭಟ್ರೆ, ಭಾಗೀರಥಿಗೆ ನಾನು ಹೇಳಿದ್ದೆ. ಅವಳು ಕೇಳ್ತಾ ಇಲ್ಲೆ. ನಾವಿಬ್ಬರೂ ಬೇಕೋ ಬೇಡವೋ ಬ್ರಾಹ್ಮಣರು. ಬ್ರಾಹ್ಮಣ್ಯ ಆಚರಿಸ್ತೀವೋ ಬಿಡ್ತೀವೊ ಬೇರೆ ಪ್ರಶ್ನೆ. ಆದರೆ ಸಾಮಾಜಿಕ ಮುಖಕ್ಕೆ ಇದು ಸರಿ ಅಲ್ಲ. ಹೀಗಾಗಿ ಇನ್ಮುಂದೆ ನನ್ನ ಕರೆದ್ರೆ ಶ್ರೀಪಾದ ಭಟ್ಟರನ್ನು ಕರೀಬಾರ್ದು, ಅವರನ್ನ ಕರೆದ್ರೆ ನನ್ನ ಕರೀಬಾರ್ದು ಅಂತ ಹೇಳಿದ್ದಿ. ಸರಿ ಅಲ್ದಾ?”. ಇತ್ತೀಚೆಗೆ ತೀರಿಕೊಂಡ ಹಿರಿಯ ರಂಗಕರ್ಮಿ ಚಿದಂಬರ ಜಂಬೆಯವರಿಗೆ ಡಾ. ಶ್ರೀಪಾದ ಭಟ್‌ ಬರೆದ ಪತ್ರ

ಸಂಪಿಗೆ ಸ್ಪೆಷಲ್

ಹಳ್ಳಿಯೂರುಗಳಲ್ಲಿ ಗೌರಿಯ ಸಡಗರ: ಸುಮಾ ಸತೀಶ್ ಬರಹ

ಗಣಪತಿ ಬಪ್ಪ ಮೋರೆಯಾ ಅಂತ ಹಬ್ಬದ ಸಂಜೆ ಊರಿನ ಹೈಕಳೆಲ್ಲಾ ಗುಂಪುಗೂಡಿ ಮನೆಮನೆಗೆ ಹೋಗಿ ಗಣೇಶ ದರ್ಶನ ಮಾಡಿಕೊಂಡು ಬರುತ್ತಿದ್ದೆವು. ಗಣೇಶನ ಮೇಲೆ ಕಣ್ಣು ಅಂತ ನೋಡುವವರಿಗೆ ಅನ್ನಿಸಿದರೂ, ವಾರೆಗಣ್ಣಿನಲ್ಲಿ ಅವರ ಮನೆಯ ಚರ್ಪನ್ನು ಅಳೆಯುತ್ತಿದ್ದೆವು. ಬರ್ಫಿಯೋ, ಮಿಠಾಯೋ ಇದ್ರೆ, ಅವ್ರು ಭಾಳಾ ಧಾರಾಳ. ಕಡಲೆ ಹುಸ್ಲಿಯೋ, ಕಡಲೆಹಿಟ್ಟೋ ಇದ್ರೆ ಥೋ ಬಿಕನಾಸಿಗಳು ಅಂತ ಬೈಕೊಳ್ಳೋದು. ಎಲ್ಲರ ಮನೆಗೆ ಎಡತಾಕಿದ್ದು ಮುಗಿದ ನಂತರ, ಮನೆಯಲ್ಲಿ ಉಳಿದ ಕಡುಬು, ಉಂಡೆಗಳ ನೈವೇದ್ಯ ನಮ್ಮ ಪಾಲಿಗೇ. ಪಾಪ! ಗೌರಿ-ಗಣೇಶ ಹಬ್ಬಕ್ಕೆ ಸುಮಾ ಸತೀಶ್‌ ಬರಹ ನಿಮ್ಮ ಓದಿಗೆ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಗಜಲ್

"ಆ ರಸ್ತೆ ಆ ತಿರುವು ಆ ನೆರಳು ಆ ಬಿಸಿಲು ಈಗಿಲ್ಲ ಆ… ಸವಿ ಏಸು ಕನಸುಗಳು ಸುಟ್ಟು ಕರಕಲಾದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ" -ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಗಜಲ್

ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ “ನೆನಪುಗಳು”

ಕಣ್ಣ ಹೊಸಿಲ ದಾಟಿ ಹನಿಯೊಂದು ಮತ್ತೆ ಉಪ್ಪು ಕಡಲನ್ನು ಸೇರಿತು. ಅವನ ಜೊತೆ ಹಾಕಿದ ಹೆಜ್ಜೆಗಳು, ಮಾತು, ನಗು, ಮುದ್ದು, ಎದೆಬಡಿತ, ಆಣೆ, ಪ್ರಮಾಣ, ಕಣ್ಣೀರು, ನೋವು... ಯಾವುದೂ ಸುಳ್ಳಲ್ಲ. ಅವನು ಅಷ್ಟೊಂದು ದ್ರೋಹಿಯಾಗಿರಲು ಸಾಧ್ಯವಿಲ್ಲ. ಅದರ ಸತ್ಯ ನನಗೆ ಗೊತ್ತು. ತೀವ್ರ ಭಾವಗಳು ಹೃದಯದಿಂದಲೇ ಹುಟ್ಟುತ್ತವೆ. ಆದರೆ ಮನುಷ್ಯನಾದವನಿಗೆ ಅವನ್ನು ತನ್ನ ಸಮಯಸಾಧಕತನಕ್ಕೆ ಬಳಸಿಕೊಳ್ಳುವುದು ಗೊತ್ತು, ಸತ್ಯವಾಗುಳಿವ ಅವಕಾಶವಿದ್ದಾಗಲೂ. ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ "ನೆನಪುಗಳು"

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ