ಬಾಂಧವ್ಯದ ಕುಲುಮೆಯಲ್ಲಿ ಅರಳುವ ಸ್ವಾತಂತ್ರ್ಯದ ಓಟ…: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ
ಶಿಬಿರದಲ್ಲಿನ ಜನರ ಆತಂಕ ಭಾರತ ಸರ್ಕಾರದ ಗಾಳಿಗೋಪುರದಂತ ಆಶ್ವಾಸನೆಗಳ ಜೊತೆಗೆ ‘ಬೋಲೋ ಭಾರತ್ ಮಾತಾ ಕಿ ಜೈ’ ಎಂಬ ಕೂಗು, ರಣಭೀಕರದಂತೆ ಕೇಳಿಸುತ್ತಿತ್ತು. ಪಾಕಿಸ್ತಾನದಲ್ಲಿ ಗಳಿಸಿದ ಆಸ್ತಿಯನ್ನು ಅಲ್ಲೇ ಬಿಟ್ಟು ಬಂದವರ ನೋವು ಹೇಳತೀರದು. ಮತ್ತೆ ಭಾರತದಲ್ಲಿ ಹೊಸ ಜೀವನ ಕಟ್ಟಿಕೊಳ್ಳಬೇಕೆಂಬ ಹೆಜ್ಜೆಯ ಭಾರ ಅಧಿಕವಾಗಿತ್ತು. ಆಸ್ತಿ ಪಾಸ್ತಿಗಿಂತ ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು ಬಂದ ಹಿಂದೂ ಮುಸ್ಲಿಮರ ಸಂಕಟದ ಸ್ಥಿತಿ. ಬಾಲ್ಯದ ದಿನಗಳನ್ನು ಕಳೆದುಕೊಂಡು ಅನಾಥ ಪ್ರಜ್ಞೆಯ ಛಾಯೆ ಒಡಮೂಡಿತ್ತು.
“ಸ್ವಾತಂತ್ರ್ಯದ ಓಟ…” ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ


