Advertisement

ಎಂಜಿ ರೋಡಿನಲ್ಲೊಂದು ಸುತ್ತು: ವಿನಾಯಕ ಅರಳಸುರಳಿ ಅಂಕಣ

ಅದೇನೂ ಭಾರೀ ದೊಡ್ಡ ಪಬ್ಬಲ್ಲದಿದ್ದರೂ ಅಲ್ಲಿ ವೈಭವಗಳಿಗೇನೂ ಕಮ್ಮಿಯಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಆ ಪಬ್ಬು ಮುಚ್ಚಲ್ಪಟ್ಟು, ಮುಂದೊಮ್ಮೆ ಆ ರಸ್ತೆಯಲ್ಲಿ ಹೋಗುವಾಗ ಮತ್ಯಾವುದೋ ಹೆಸರಿನ ಕಂಪನಿಯೊಂದು ಬೋರ್ಡು ತೊಟ್ಟುಕೊಂಡು ನಿಂತಿರುವುದು ಕಣ್ಣಿಗೆ ಬಿದ್ದಿತ್ತು. ಈ ಮಹಾನಗರಿಯ ಚಂಚಲತೆಯೇ ಅಂಥದ್ದು‌. ನೆನ್ನೆ ಹಳಕಲು-ಪೊದೆಗಳಿದ್ದ ಜಾಗದಲ್ಲಿ ಬೆಳಗಾಗುವಷ್ಟರಲ್ಲಿ ರಂಗ್ ಬಿರಂಗೀ ಕಟ್ಟವೊಂದು ತಲೆಯೆತ್ತಿಬಿಡುತ್ತದೆ. ಮನೆಯಂತೆ ಕಾಣುವ ಬಿಲ್ಡಿಂಗ್ ನೊಳಗೆ ನೂರಿನ್ನೂರು ಉದ್ಯೋಗಿಗಳಿರುವ ಕಂಪನಿಯೇ ಅಡಗಿಕೊಂಡಿರುತ್ತದೆ. ನೆನ್ನೆಯಷ್ಟೇ ಪ್ರಾರ್ಥನಾ ಮಂದಿರವಾಗಿದ್ದು, ಹತ್ತಾರು ಜನರ ಓಂಕಾರದಿಂದ ತುಂಬಿಹೋಗಿದ್ದ ಸಮುಚ್ಚಯವೊಂದು ನಾಳೆಯಾಗುವಷ್ಟರಲ್ಲಿ ಹತ್ತಾರು ಬಾಡಿಬಿಲ್ಡರ್‌ಗಳ ಕಸರತ್ತು ಶಾಲೆಯಾಗಿ ಬದಲಾಗಿಬಿಡುತ್ತದೆ! ಇಲ್ಲಿ ಯಾವ ರೂಪವೂ ಶಾಶ್ವತವಲ್ಲ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Loading

ಅಂಕಣ

Latest

ಆಸ್ಟ್ರೇಲಿಯಾ-ಭಾರತೀಯರ ಕತೆಗಳ ಜುಗಲ್ ಬಂದಿ: ಡಾ. ವಿನತೆ ಶರ್ಮ ಅಂಕಣ

ಒಮ್ಮೊಮ್ಮೆ ಇಲ್ಲಿ ಬಂದು ಸಂದ ಮೇಲೆ ಅಲ್ಲಿನ ತವರಿಗೆ ಭೇಟಿ ಕೊಟ್ಟಾಗ ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋ ಎಡಬಿಡಂಗಿತನ ಧುತ್ತನೆ ಎದುರು ನಿಲ್ಲುತ್ತದೆ. ಆದರೆ ಆ ಎಡಬಿಡಂಗಿತನದಲ್ಲಿದೆ ಒಂದಷ್ಟು ನಗು, ಹರ್ಷ, ಉಲ್ಲಾಸ, ಪರಸ್ಪರತೆ, ಜೊತೆಯಾಗುವುದು. ಕುತೂಹಲ ಮೂಡಿಸುವುದು ಕಿರಿವಯಸ್ಸಿನ ಕತೆಗಾರರ ಅನುಭವ ಮೂಸೆಯಲ್ಲಿ ಪರಿಮೂಡುವ ಆಸ್ಟ್ರೇಲಿಯನ್-ಭಾರತೀಯತೆ ಕಲ್ಪನೆ ಮತ್ತು ಹೊಂದಾಣಿಕೆ. ಇವಷ್ಟೇ ಅಲ್ಲ. ಮಧ್ಯಮ ಮತ್ತು ಹಿರಿವಯಸ್ಸಿನ ಕತೆಗಾರರ ದನಿಯಲ್ಲಿ ಚಿತ್ರಿತವಾಗುವ ಹೊಸದೇಶ, ಅಪರಿಚಿತ ಸಮಾಜದ, ಅಲ್ಲಿನ ವ್ಯವಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನಗಳು, ಅವಲ್ಲಿರುವ ಸಾಹಸಗಳು, ಸೋಲು-ಗೆಲುವು, ಆಂತರಿಕ ಒಳನೋಟಗಳು. ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಸಾಹಿತ್ಯ

ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು”

ನೆತ್ತಿಯ ಮೇಲಿನ ಕಣ್ಣ ಸ್ವಾಮೀಜಿ ಈಗ ಸಮಾಧಾನದಲ್ಲಿದ್ದು ಬೆವರುವುದನ್ನು ನಿಲ್ಲಿಸಿದ್ದರು. ಉಂಗುರಗಳನ್ನು ಹಾಕಿದ್ದ ಹಿತ್ತಾಳೆ ಚೊಂಬಿನ ನೀರನ್ನು ಇಬ್ಬರಿಗೂ ತೀರ್ಥದಂತೆ ಕೊಟ್ಟು ತಾವೂ ಬಲಗೈ ಗೆ ಬಗ್ಗಿಸಿಕೊಂಡರು. ಸ್ವಾಮೀಜಿ ಏನು ಮಾಡುತ್ತಾರೋ ಅದನ್ನೇ ಮಾಡಲು ತಯಾರಾದ ದಂಪತಿಗಳು ಅವರನ್ನೇ ನೋಡುತ್ತಿದ್ದರು. ಸ್ವಾಮೀಜಿ ನೀರಿದ್ದ ಕೈಯನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಗಟಕ್ಕೆಂದು ಆ ನೀರನ್ನು ಕುಡಿದರು. ನಂತರ ಅಂಗೈಯನ್ನು ಮುಂಡಾಸಿನ ಬಳಿ ತಗೊಂಡುಹೋದರು. “ಅಯ್ಯೋ, ಪೇಟವನ್ನ ತೆರೆದು ಮೂರನೇ ಕಣ್ಣಿಗೆ ಒರಸಿಬಿಡುತ್ತಾರೇನೋ?” ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ "ನೆತ್ತಿಯ ಕಣ್ಣು" ನಿಮ್ಮ ಓದಿಗೆ

ಸರಣಿ

ಮಹಿಳಾ ದಿನಾಚರಣೆ ಅಂದರೆ…: ಸುವರ್ಣ ಚೆಳ್ಳೂರು ಸರಣಿ

ಆ ಗ್ವಾಡಿಗಳನ್ನ ಮೇಲಿಂದ ಕೆಳಗ ನೋಡುವಾಗ್ಲೆ ಗೊತ್ತಾದದ್ದು, ಆ ಗ್ವಾಡಿ ನಡಕ ಅವ್ವ, ಅತ್ತಿನೂ ಒದ್ದಾಡತಿದ್ರು. ಆ ಗ್ವಾಡಿಯನ್ನ ನೋಡ್ತಾ ನೋಡ್ತೂ ಅದೆಷ್ಟೊ ಹೆಣ್ಮಕ್ಕಳು ಇದ್ರಲ್ಲೆ ಇರೋದು ನೋಡಿ, ಅವರ ಬಾಯಿಗೆ ಕಟ್ಟಿದ ಹೂವಿನಿಂದ ಸಿಂಗರಿಸಿದ್ದ ಹಗ್ಗ, ದಿನದಿಂದ ದಿನಕ್ಕೂ ಬೆಳಿಯೋದನ್ನ ನೋಡಿ, ಹಗ್ಗದ ಗಂಟು ದಿನ ದಿನಕ್ಕೂ ಬಿಗಿಯಾಗೋದನ್ನ ನೋಡಿ, ಇದ್ಯಾಕೆ ಇದನ್ನ ಯಾರೂ ಬಿಳಸೊಕೆ ಆಗ್ತಿಲ್ಲ? ಯಾರಿದನ್ನ ಹೊರಗಿಂದ ಕಟ್ತಿರೊದು? ಅನ್ನೊ ಪ್ರಶ್ನೆಗಳೆಲ್ಲಾ ತಲೆ ತುಂಬಿದ್ವು. ಆದ್ರ ಇವಾಗ ಸಾಲಿಗೆ ಹೋಗಬಹುದು ಅನ್ನೊದು ನೆನಸ್ಕೊಂಡು ಒಂಥರಾ ಖುಷಿ ಆಯ್ತು. ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಆರನೆಯ ಬರಹ

ಪ್ರವಾಸ

ಸೋಲೆಂಬ ಅಲ್ಪ ವಿರಾಮದ ನಡುವೆ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಈ ಜನ್ಮದಲ್ಲಂತು ಇಂತಹ ಭೀಕರ ಮಳೆ ಕಂಡಿದ್ದಿಲ್ಲಾ!! ಕೆಳಗಿಳಿಯುತ್ತಾ ಜೀವಾದಿಗಳು ತಲ್ಲಣಿಸುತ್ತಿದ್ದವು. ತರಗಲೆಗಳ ತೂರಾಟ, ಹನಿಗಳ ಆರ್ಭಟ. ಕೆಳಗಿಳುತ್ತಲೇ ಮಳೆ ಕಡಿಮೆ ಆಗುವುದನ್ನೇ ತಲೆಗೊಂದು ಸೂರು ಹುಡುಕಿ ಹೊರಟೆವು. ಅಷ್ಟು ಮಳೆಯಲ್ಲೂ ಒಂದೆರಡು ಚಿತ್ರ ತೆಗೆದುದರಿಂದ ಎಲ್ಲರಿಗಿಂತ ಹಿಂದುಳಿದಿದ್ದ ನಾನು ಸ್ನೇಹಿತರಿಗಾಗಿ ಹುಡುಕಿದೆ. ಯಾರೂ ಕಾಣಲಿಲ್ಲ. ಭಟ್ಟರ ಹಿಂದೇ ಹೋದರೋ ಹೇಗೆ? ಭೈರವನಿಗೆ ಪೂಜೆ ಮುಗಿಸಿ ಭಟ್ಟರು ಆಗಲೇ ಹೋಗಿಯಾಗಿತ್ತು. ಭೈರವನ ಗುಡಿಯಲ್ಲಿ ಅಡಗುವ ಆಸೆ ಬಿಟ್ಟೆವು. ಸನಿಹದಲ್ಲೇ ಚಿಕ್ಕ ಗುಡಿಸಿಲಿನಂತಹ ಮಾಡಿತ್ತು. ಕಳ್ಳನಂತೆ ಅಲ್ಲಿ ಅಡಗಿಕೊಳ್ಳಲು ಹೊರಟೆ. ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

ವ್ಯಕ್ತಿ ವಿಶೇಷ

ಬಣ್ಣ ಹಚ್ಚುವ ಆಸೆಯೂ… ನನ್ನ ಅರಣ್ಯರೋಧನವೂ: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂಬತ್ತು ವರ್ಷದವಳಾದ ನನ್ನ ಕೈ ಬೆರಳುಗಳು ಇನ್ಹೇಗೆ ಇರುತ್ತದೆ ಹೇಳಿ! ಎಳೆಯ ಕೈಗಳಿಂದಲೇ ಆದಷ್ಟು ತೊಳೆದೆ. ಅವರಿಗೆ ಸಮಾಧಾನ ನೀಡಲಿಲ್ಲ. ‘ಆಯ್ತು, ಪರವಾಗಿಲ್ಲ ಇನ್ನೊಂದು ಅವಕಾಶ’ ಎಂದು ನಾಟಕದ ಕರಪತ್ರ ಕೊಡುವುದಕ್ಕೆ ಮತ್ತೆ ಅಂಟಿಸುವುದಕ್ಕೆ ಹೋಗೆಂದರು. ಇರುವ ಕೆಲಸಗಳನ್ನು ಬೇಗ ಮುಗಿಸಿ, ಸಮಯ ಹೊಂದಿಸಿಕೊಂಡು ಹೋಗುತ್ತಿದ್ದೆ. ‘ನಮ್ ನಾಟ್ಕಕ್ ಬನ್ರಿ’ ಎಂದು ಕೂಗಿ, ಕರೆದು ಹೆಚ್ಚುವರಿ ಕೆಲಸಗಳನ್ನೂ ಮಾಡುತ್ತಿದ್ದೆ. ಗೌರಿ ಪಾತ್ರವನ್ನು ಕಂಡು ಕಂಡು, ಸಂಭಾಷಣೆಗಳೆಲ್ಲ ಬಾಯತುದಿಯಲ್ಲೇ ಇತ್ತು. ಅಷ್ಟೇ ಅಲ್ಲ, ಪಾತ್ರಕ್ಕೆ ಬೇಕಾದ ವೈಯ್ಯಾರವನ್ನೂ ಮಾಡುತ್ತಿದ್ದೆ. ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ"

ಸಂಪಿಗೆ ಸ್ಪೆಷಲ್

ಸರ್ಕಲ್ ಆಫ್ ಲೈಫ್- ಬಾಲ್ಯ, ಹದಿಹರೆಯ, ವೃದ್ಧಾಪ್ಯಗಳ ಆಲಿಂಗನ: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಮಾತೇ ಮಾಣಿಕ್ಯ ಎನ್ನುವವರಿಗೆ ಮಾತು ಮಾಣಿಕ್ಯವಲ್ಲ ಮೌನ ಮಾಣಿಕ್ಯ ಎಂಬ ಸೂತ್ರಕ್ಕೆ ತಕ್ಕಂತೆ ಮಕ್ಕಳು ಅಣಿಯಾಗಿದ್ದರು. ಬೊಂಬೆ ಆಟದಲ್ಲಿ ಪ್ರಾವಿಣ್ಯತೆ ಪಡೆದ ಕ್ರಿಯಾಶೀಲರು ಗೊಂಬೆಯನ್ನು ಬಹಳ ಅಮೋಘವಾಗಿ ಓಡುವುದನ್ನು, ನಡೆಯುವುದನ್ನು, ಹಾರಾಡುವುದನ್ನು, ನಿಧಾನಗತಿಯ ಚಲನೆಯನ್ನು, ಬೈಕ್ ಸವಾರಿ ಮಾಡುವುದನ್ನು, ಕನಸು ಕಾಣುವ ವೈಶಿಷ್ಟ್ಯತೆಯನ್ನು ಅದ್ಭುತವಾಗಿ ರಚಿಸಿಕೊಂಡಿದ್ದರು. ಹದಿಹರೆಯದಲ್ಲಿರುವಾಗ ಮನುಷ್ಯನ ಆಸೆ ಆಕಾಂಕ್ಷೆಗಳು ಕೇವಲ ಮಾತುಗಳಲ್ಲಿಲ್ಲ ಭಾವನೆಗಳಲ್ಲಿವೆ. ಕಲ್ಬುರ್ಗಿ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ 'ಸರ್ಕಲ್ ಆಫ್ ಲೈಫ್' ಪಪೇಟ್ ಶೋ ಕುರಿತು ಡಾ. ರಾಜೇಂದ್ರಕುಮಾರ್‌ ಮುದ್ನಾಳ್‌ ಬರಹ

ಈ ದಿನದ ಚಿತ್ರ

ರವಿಶಂಕರ ಪಾಟೀಲ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ರವಿಶಂಕರ ಪಾಟೀಲ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದವರಾದ ರವಿಶಂಕರ ಅವರು ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು. ಸಣ್ಣಕತೆ ಪದ್ಯ ಅವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು. “ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ಗೀತಾ ದೊಡ್ಮನೆ ಬರೆದ ಈ ದಿನದ ಕವಿತೆ

"ಮುಸ್ಸಂಜೆ ಮನೆ ಹೊರಗೆ ಗದ್ದೆಹಾಳಿಯ ಮೇಲೆ ಬಿದ್ದುಗಿದ್ದುಬಿಟ್ಟಾನೆಂದು ಆತಂಕದಿಂದ ಹಿಂದೆ-ಹಿಂದೆಯೇ ಬೇಡವೆಂದರೂ ಬಂದ ಮಗನ ಕೈಗೆ, ಅಂಗಡಿಯಲ್ಲಿ ಕೊಂಡ ಇನ್ನೊಂದು ಬಿಸಿ ಬೋಂಡದ ಪೊಟ್ಣ ಕೊಟ್ಟು ಉಫ್ ಎಂದು ಊದುತ್ತ, ವಾರ್ಧಕ್ಯದ ಊದಿಕೊಂಡ ಕಾಲುಗಳಿಗೆ ಸವಾಲೊಡ್ಡಿದ್ದವನು"-ಗೀತಾ ದೊಡ್ಮನೆ ಬರೆದ ಈ ದಿನದ ಕವಿತೆ

ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು”

ನೆತ್ತಿಯ ಮೇಲಿನ ಕಣ್ಣ ಸ್ವಾಮೀಜಿ ಈಗ ಸಮಾಧಾನದಲ್ಲಿದ್ದು ಬೆವರುವುದನ್ನು ನಿಲ್ಲಿಸಿದ್ದರು. ಉಂಗುರಗಳನ್ನು ಹಾಕಿದ್ದ ಹಿತ್ತಾಳೆ ಚೊಂಬಿನ ನೀರನ್ನು ಇಬ್ಬರಿಗೂ ತೀರ್ಥದಂತೆ ಕೊಟ್ಟು ತಾವೂ ಬಲಗೈ ಗೆ ಬಗ್ಗಿಸಿಕೊಂಡರು. ಸ್ವಾಮೀಜಿ ಏನು ಮಾಡುತ್ತಾರೋ ಅದನ್ನೇ ಮಾಡಲು ತಯಾರಾದ ದಂಪತಿಗಳು ಅವರನ್ನೇ ನೋಡುತ್ತಿದ್ದರು. ಸ್ವಾಮೀಜಿ ನೀರಿದ್ದ ಕೈಯನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಗಟಕ್ಕೆಂದು ಆ ನೀರನ್ನು ಕುಡಿದರು. ನಂತರ ಅಂಗೈಯನ್ನು ಮುಂಡಾಸಿನ ಬಳಿ ತಗೊಂಡುಹೋದರು. “ಅಯ್ಯೋ, ಪೇಟವನ್ನ ತೆರೆದು ಮೂರನೇ ಕಣ್ಣಿಗೆ ಒರಸಿಬಿಡುತ್ತಾರೇನೋ?” ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ "ನೆತ್ತಿಯ ಕಣ್ಣು" ನಿಮ್ಮ ಓದಿಗೆ

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ