ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಕ್ಕೆ ಸಾಕ್ಷಿ ‘ಬದುಕೆಂಬ ಮಾಯೆ’: ಸುನಂದಾ ಕಡಮೆ ಬರಹ
‘ಭೂಮಿಗೆ ಗಟ್ಟಿಯಾಗಿ ಬಂಧಿಸಿದ ಯಾವ ಅನುಬಂಧವೂ ನನಗೆ ಒದಗಿ ಬಂದಿಲ್ಲ ಹಾಗಾಗಿ ಕಳೆದುಕೊಳ್ಳುವ ಭಯ ನನಗಿರಲಿಲ್ಲ’ ಎಂಬಂತಹ ಮಾತುಗಳನ್ನು ಒಬ್ಬ ಹೆಣ್ಣು ಹೇಳಬೇಕಾದರೆ, ಈ ಸಮಾಜ ಮತ್ತು ಈ ವ್ಯವಸ್ಥೆಯ ಪಾಲು ಎಷ್ಟು ಎಂಬ ಪ್ರಶ್ನೆಯನ್ನೂ ಸಹ ನಮಗೆ ನಾವೇ ಕೇಳಿಕೊಳ್ಳುವಂತಿದೆ. ‘ಹೆಣ್ಣಾಗಿ ಹುಟ್ಟಿದ ನನ್ನನ್ನು ಒಂದು ವ್ಯಕ್ತಿತ್ವವಾಗಿಸಿದ್ದು ಈ ಬಂಡಾಯದ ವಿಚಾರಧಾರೆ’ ಎನ್ನುವ ಸುಕನ್ಯಾ ಅವರ ಗುಂಡಿಗೆಯನ್ನು ಇನ್ನಷ್ಟು ಗಟ್ಟಿ ಮಾಡಿದ್ದು ತಾನು ಕಲಿತ ವಿದ್ಯೆ ಎಂದೇ ಮತ್ತೆ ಮತ್ತೆ ಅವರು ಸ್ಮರಿಸಿಕೊಳ್ಳುತ್ತಾರೆ.
ಕನ್ನಡದ ಹಿರಿಯ ಕವಿ ಪ್ರೊ. ಸುಕನ್ಯಾ ಮಾರುತಿಯವರ ಆತ್ಮಕತೆ ‘ಬದುಕೆಂಬ ಮಾಯೆ’ ಕುರಿತು ಸುನಂದಾ ಕಡಮೆ ಬರಹ ನಿಮ್ಮ ಓದಿಗೆ


