“ನಾಟಕ”ದ ಬದುಕಿನ ಹಾದಿಗಳು…: ಜುಲೇಖಾ ಬೇಗಂ ಜೀವನ ವೃತ್ತಾಂತ
ಒಂದು ದಿವಸಕ್ಕೆ ನಾಲ್ಕು ಕೆ.ಜಿ ಅಕ್ಕಿ ಹಾಕಿದರೆ ಎಲ್ಲರ ಹೊಟ್ಟೆ ತುಂಬುವಷ್ಟಾಗುತ್ತದಲ್ಲಾ. ಊರಿಂದ ಅಡುಗೆಯವರನ್ನೊಬ್ಬರನ್ನು ಕರೆತಂದರೆ ಸಮಸ್ಯೆ ಬಗೆಹರಿದಂತೆ. ಹಣ ಹರಿದುಬರುವುದನ್ನು ಬಲಪಡಿಸಿದರೆ, ವ್ಯರ್ಥ ಪೋಲಾಗುವುದು ನಿಂತರೆ ಕಂಪೆನಿ ಉದ್ಧಾರವಾಗದೇ ಏನು? ಈ ಮೂಲಭೂತ ತಿಳುವಳಿಕೆಯೇ ಇಲ್ಲದಿದ್ದರೆ ಕಂಪೆನಿ ನಡೆಸಲು ಖಂಡಿತಾ ಆಗುವುದಿಲ್ಲವೆಂದೆ. ಕಂಪೆನಿ ಕಟ್ಟಬೇಕೆಂಬ ಆಸೆ ಇದ್ದರಷ್ಟೆ ಸಾಲದು, ಅನುಭವಗಳೂ ಬೇಕು ಎಂಬುದು ಅವರಿಗೆ ಅರ್ಥವಾಗುವ ಹೊತ್ತಿಗೆ ಕಂಪೆನಿ ನಷ್ಟದ ಬಹುದೂರದ ಹಾದಿಯನ್ನು ಕ್ರಮಿಸಿಯಾಗಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೈದನೆಯ ಕಂತು


