ಭಲೇ ಸ್ವಾಮೀಜಿ ಎಂದ ಮಾರ್ಕ್ ಟುಲಿ: ಕೆ. ಸತ್ಯನಾರಾಯಣ ಕಥಾ ಸರಣಿ
ಹೋಟೆಲಿಗೆ ಬಂದ ನಂತರ, ಟುಲಿ ಇದ್ದಕ್ಕಿದ್ದಂತೆ ಮೌನವಾಗಿಬಿಟ್ಟರು. ಒಂದೈದು ನಿಮಿಷ ಕಣ್ಣುಮುಚ್ಚಿ ಧ್ಯಾನಿಸುತ್ತಿರುವಂತೆ ಕಂಡರು. ಏಸಿ ಆರಿಸಿ, ಕಿಟಕಿ ಬಾಗಿಲು ತೆರೆದರು. ಚಿಂತಾಕ್ರಾಂತರಾಗಿ ಆಕಡೆ, ಈ ಕಡೆ ಹೆಜ್ಜೆ ಹಾಕುತ್ತಾ, ಕಿಟಕಿಯ ಹೊರಗಡೆ ಕಾಣುವ ವಾಹನಗಳ ಓಡಾಟ, ಜನಗಳ ಗಡಿಬಿಡಿಯನ್ನೇ ಗಮನವಿಟ್ಟು ನೋಡುತ್ತಿದ್ದರು. ಕ್ಷಣ ಕ್ಷಣಕ್ಕೂ ಮುಖದಲ್ಲಿ ಗಾಂಭೀರ್ಯ ಹೆಚ್ಚುತ್ತಿತ್ತು. ಒಂದೆರಡು ಸಲ ಮುಖ ಕಿವುಚಿಕೊಂಡ ಹಾಗಾಯಿತು. ಟೀಪಾಯ್ ಬಳಿ ಬಂದು ಗ್ಲಾಸಿಗೆ ನೀರು ಬಗ್ಗಿಸಿಕೊಂಡು ಕುಡಿದರು. ಆದರೂ ಸಮಾಧಾನಗೊಂಡಂತೆ ಕಾಣಲಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”


