ಓಹೋ ಗ್ರಾಮವಂತೆ, ಆಹಾ ಸಮುದಾಯವಂತೆ: ಕೆ. ಸತ್ಯನಾರಾಯಣ ಕಥಾ ಸರಣಿ
ನಿಮ್ಮ ಸೋದರತ್ತೆ ಒಬ್ಬಳು ಕ್ಷಯದಿಂದ ಬೇಗ ತೀರಿ ಹೋದಳು. ಅವಳಿಗೆ ಮುಂಚೆ ಅವಳ ಗಂಡ ಕೂಡ ಕ್ಷಯದಿಂದಲೇ ತೀರಿ ಹೋಗಿದ್ದ. ಸೋದರತ್ತೆ ಮಗನಿಗೆ ಸರಿಯಾಗಿ ವಿದ್ಯೆ ಹತ್ತಲಿಲ್ಲ. ಅವನಿಗೊಂದು ಮನೆ ಕಟ್ಟಬೇಕು ಅಂತ ನಿಮ್ಮಜ್ಜಿ ಹೊರಟಾಗ, ನೆರವಾಗ್ತೀನಿ ಅಂತ ಮೊದಲು ಗೋಪಿನಾಥರಾಯ, ನಂತರ ಅಚ್ಯುತರಾಯ, ಆಮೇಲೆ ರಂಗಶೆಟ್ಟಿ ಎಲ್ಲರೂ ಮುಂದೆ ಬಂದರು. ಅವನು ಕಳ್ಳ ಅಂತ ಇವನು, ಇವನು ಕಳ್ಳ ಅಂತ ಅವನು. ಒಬ್ಬರ ಮೇಲೆ ಒಬ್ಬರು ಚಾಡಿ ಹೇಳಿ, ಒಟ್ಟಾರೆ ನಿಮ್ಮಜ್ಜಿಗೆ ಟೋಪಿ ಹಾಕುತ್ತಿದ್ದರು. ರಾಮೇಗೌಡ ಇಟ್ಟಿಗೆ ಗೂಡಿನ ವ್ಯಾಪಾರ ಶುರು ಮಾಡಿದ್ದೇ ನಿಮ್ಮಜ್ಜಿ ಹತ್ತಿರ ಹೊಡೆದ ಹಣದಿಂದ ಅನ್ನೋ ಸಾವಯವ ಕಲ್ಪನೆ ಇಡೀ ಗ್ರಾಮಕ್ಕೆ ಗೊತ್ತಿತ್ತು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”


