ಮಾಕಳ್ಳಿಯ ಮಾಂತ್ರಿಕ ಕಥಿಕರು: ಎಸ್. ಗಂಗಾಧರಯ್ಯ ಅನುಭವ ಕಥನ
ಮುಂದೆ ಬುಡುಗೊಚ್ಚ ತಮಗೆ ಬೇಕಾದಾಗಲೆಲ್ಲಾ ಎಡಬಿಡದೆ ಹಾಗೇ ಮಾಡಿದರಂತೆ. ಅದರಂತೆ ಸಾವಿರಾರು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಂಡರಂತೆ. ಒಂದು ದಿನ ಹೀಗೆ ಅಜ್ಜ ಹತ್ತಾರು ಹೂಗಳನ್ನು ಒಟ್ಟಿಗೇ ಬೊಗಸೆಯಲ್ಲಿ ಹಿಡಿದುಕೊಂಡು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಳ್ಳುತ್ತಿರಬೇಕಾದರೆ, ಆ ಹೂಗಳು `ಇನ್ನು ನಿನ್ನ ಹಿತ್ತಲಿನಲ್ಲಿ ನಮ್ಮ ಸರದಿ ಮುಗಿಯಿತು, ನಾವಿನ್ನು ಹೊರಡುತ್ತೇವೆ,’ ಅಂದವಂತೆ. ಅಜ್ಜನಿಗೆ ವಿಪರೀತ ದುಃಖವಾಗಿ ಪರಿ ಪರಿಯಾಗಿ ಬೇಡಿಕೊಂಡರಂತೆ. ಅಜ್ಜನ ಯಾವ ಬೇಡಿಕೆಗೂ ಸೊಪ್ಪು ಹಾಕದೆ ಆ ಹೂಗಳು, ಅವುಗಳ ಬಳ್ಳಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಬಿಟ್ಟವಂತೆ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹತ್ತನೆಯ ಕಂತು


