ಪವಾಡದ ಮಲ್ಲಮ್ಮರು!: ಸುಕನ್ಯಾ ಕನಾರಳ್ಳಿ ಅಂಕಣ
ಸಾಮಾಜಿಕ ಶಕ್ತಿಗಳು, ಅದರಲ್ಲೂ ವಿಶೇಷವಾಗಿ ಧರ್ಮಗಳು, ಸ್ತ್ರೀಶೋಷಣೆ ಸಂಪ್ರದಾಯದಲ್ಲೇನೂ ಇರಲಿಲ್ಲ, ಅಂದೂ ಸಹ ಸ್ತ್ರೀಸ್ವಾತಂತ್ರ್ಯವಿತ್ತು, ನಮ್ಮ ಗಾರ್ಗಿ ಮೈತ್ರೇಯಿಯರ ಉದಾಹರಣೆಯನ್ನು ನೋಡಿದರೆ ಸಾಕಲ್ಲ ಎನ್ನುತ್ತಾ ‘ಸುವರ್ಣ ಯುಗ’ವೊಂದನ್ನು ಕಟ್ಟಿ ಹಾದಿ ತಪ್ಪಿಸಲು ಪ್ರಯತ್ನಿಸುತ್ತವೆ. ಹಾಗಿದ್ದರಿಂದಲೇ ಸಂಪ್ರದಾಯವೆನ್ನುವುದು ಆಧುನಿಕದ ಜೊತೆಗೆ ಸುಲಲಿತವಾಗಿ ಬೆರೆತು ಹರಿಯಿತು ಎಂದು ಸಂಪ್ರದಾಯದ ಗೋಡೆಯಲ್ಲಿ ಇರುವ ಘೋರ ಅರೆಕೊರೆಗಳನ್ನು ಮುಚ್ಚಿ ಸುಣ್ಣ ಬಳಿಯುವ ಪ್ರಯತ್ನ ಅದು. ಒಂದಾನೊಂದು ಕಾಲದಲ್ಲಿ ಸಹ ಎಲ್ಲವೂ ಚೆನ್ನಿತ್ತು, ಆ ಚೆನ್ನ ಚೆಲುವು ಇಂದು ಆಧುನಿಕದಲ್ಲಿ ಇನ್ನೊಂದು ರೂಪವನ್ನು ತಳೆದು ನಿಂತಿದೆ ಎಂದು ತಲೆ ಸವರುವ ಹುನ್ನಾರವೇ ಅದು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ಮೂರನೆಯ ಬರಹ


