ಗಜಲ್

ನಿನ್ನ ಕಣ್ಣ ಬಟ್ಟಲ ಬೆಳಕಿರಲು ಹಗಲಿಗೆ ಸೂರ್ಯನೇತಕೆ
ಹಿತವಾದ ಮುಗುಳುನಗೆ ಇರಲು ರಾತ್ರಿಗೆ ಚಂದಿರನೇತಕೆ

ತುಟಿಯ ಹನಿಯಲ್ಲಿ ಮಧುವಿರಲು ಮಧು ಶಾಲೆಯೇತಕೆ
ಅಂದದ ನಡುವು ಚೆಂದಾಗಿ ಕಾಡುತಿರಲು ಕಾಮನಬಿಲ್ಲೇತಕೆ

ಮಾತಲ್ಲೇ ಸವಿಜೇನು ತುಂಬಿರಲು ಆ ಮಧುವೇತಕೆ
ಏನೊಂದು ಲೋಪವಿಲ್ಲದ ಪುತ್ಥಳಿ ನೀನು ಕುಂಚವೇತಕೆ

ಮನದಿ ಒಲವ ಹಣತೆ ಬೆಳಗುತಿರಲು ನಕ್ಷತ್ರಗಳೇಕೆ
ನೀನಿಲ್ಲದ ಊರಲ್ಲಿ ಹಾಳಾದ ಈ ಕಾವಲೇತಕೆ

ನೀನಿಲ್ಲದ ಬರೀ ಖಾಲಿ ಜಿಂದಗಿ ಅಭಿಗೇತಕೆ
ಒಲಿದ ಜೀವಗಳು ಒಂದಾಗುವ ಖುಷಿಗೆ ಭಯವೇತಕೆ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು