ಬಯಲ ಬದುಕು ….

ಹಚ್ಚಲು ದೀಪವಿಲ್ಲ
ಹೊದ್ದು ಮಲಗಲು ಹಚ್ಚಡವಿಲ್ಲ
ನೆಲದ ಬುತ್ತಿ ಉಂಡು
ಮೈಯ ಉಸಿರ ಬಸಿದು
ದಣಿವರಿದು ಮರೆವ ಎಲ್ಲ
ಇಹ ಪರದ ನಾಕವ

ಊರು ಯಾವುದಾದರೇನು ?
ದಾರಿ ಹೇಗಿದ್ದರೇನು?
ಅಂಜು -ಅಳುಕಿಗೆ
ಇಲ್ಲಿ ತಾವಿಲ್ಲಾ ….

ಒಲೆ ಉರಿದಷ್ಟೇ ತಾಪ
ಬದುಕಿಗೂ ಇದ್ದರು
ಕ್ಷೀಣಿಸದ ಭರವಸೆ ಚಿಂತೆಗಳಿಗೆ ಇಲ್ಲಿ
ಜಾಗವಿಲ್ಲ ಹೋಗುವ ಹಾದಿಗೆ
ಜೊತೆಯಿಲ್ಲ…..

ಹಸಿದು ಉಣ್ಣುವದು ಗೊತ್ತು
ಬಯಲ ರುಚಿಗೆ ಸಮಯಾವುದಿತ್ತು ?
ಬಟ್ಟೆ ಹರಿದರು ಹೃದಯ ಒಡೆದಿಲ್ಲ
ಯಾಕೆಂದರೆ ಅದು
ನಂಜಿನ ತಾಣವಲ್ಲ ….

ಬಯಲ ಬಾಳಿಗೆ
ಒಲುಮೆ ಜೋಳಿಗೆ
ಹರಿಯುತಿಹುದು ಜೀವನ
ಪಾತ್ರಗಳ ಬದಲಿಸುತ ನಿಂತ
ನೀರಾಗದೆ ನಿರಾಳವಾಗಿ …..

ರೇಶ್ಮಾಗುಳೇದಗುಡ್ಡಾಕರ್ ಬಳ್ಳಾರಿ ಜಿಲ್ಲೆಯ, ಕೊಟ್ಟೂರು ಪಟ್ಟಣದವರು 
ಓದುವುದು ಇವರ ಹವ್ಯಾಸ