ಸಮೃದ್ಧ ಜೀವನಾನುಭವವೇ ಸಾಹಿತ್ಯದ ಜೀವ: ನಾ. ಮೊಗಸಾಲೆ
ತಲೆಮಾರು ಎನ್ನುವುದು ಮುಂದುವರಿಯುತ್ತಾ ಹೋದ ಹಾಗೆ ಕೌಶಲ್ಯ ಎನ್ನುವುದು ಹಿಂದಿಗಿಂತ ಹೆಚ್ಚು ಶಕ್ತ ಅಥವಾ ಹೆಚ್ಚೋ ಎಂಬಂತೆ ಮುಂದುವರಿಯುವುದು ನಮ್ಮ ಅನುಭವ ಅಥವಾ ಪ್ರಕೃತಿ ನಿಯಮ. ಪ್ರತಿಭೆ, ಕೌಶಲ್ಯ, ಮತ್ತು ಚಿಂತನೆಗಳಲ್ಲಿ ನಾವು ನಮ್ಮ ಹಿರಿಯರಿಗಿಂತ ಮುಂದುವರಿದಿದ್ದೇವೆ ಎನ್ನುವುದನ್ನು ನಾನೂ ನೀವೂ ಒಪ್ಪಿಕೊಳ್ಳುವುದಾದರೆ ನಮ್ಮ ಮುಂದಿನ ಪೀಳಿಗೆಯೂ ಖಂಡಿತ ನಮಗಿಂತ ಮುಂದಿರುತ್ತದೆ ಎನ್ನುವುದನ್ನು ಒಪ್ಪಬೇಕು.
ಡಾ. ನಾ. ಮೊಗಸಾಲೆಯವರೊಟ್ಟಿಗೆ ನಡೆಸಿದ ಮಾತುಕತೆಯನ್ನು ಹಂಚಿಕೊಂಡಿದ್ದಾರೆ ಡಾ. ಸುಭಾಷ್ ಪಟ್ಟಾಜೆ
ಆಚೆ ಕೇರಿಯ ಭಾಗ್ಯಮ್ಮ ಮತ್ತು ಈಚೆ ಕೇರಿಯ ದೇವಮ್ಮ
ಮಾರ್ಗೋಡನಹಳ್ಳಿಯ ಒಕ್ಕಲುಗೇರಿಯ ಭಾಗ್ಯಮ್ಮ ಬನ್ನೂರು ಬಸ್ಟಾಂಡಿನ ಬಳಿ ಸೊಪ್ಪು ಮಾರುತ್ತಿದ್ದವರು. ಸಮಯ ಸಿಕ್ಕಾಗ ದನದ ದಲ್ಲಾಳಿ ಕೆಲಸ, ಹೆಣ್ಣು ತೋರೋದು, ನಾಟಿ ಕೀಳೋದೂ ಇತ್ಯಾದಿಗಳನ್ನೂ ಮಾಡುತ್ತಿದ್ದರು. ಇವರ ಗೆಳತಿ ದಲಿತರ ಕೇರಿಯ ದೇವಮ್ಮನದು ಕೂಲಿಯ ಕೆಲಸ. ಸಮಯ ಒದಗಿ ಬಂದಾಗ ಭಾಗ್ಯಮ್ಮನ ಜೊತೆ ಸೊಲ್ಲು ಹೇಳಲು ಹೋಗುತ್ತಾರೆ. ಇವರಿಬ್ಬರು ಸೊಲ್ಲೆತ್ತಿ ಹಾಡಲು ತೊಡಗಿದರೆ ಇಬ್ಬರಲ್ಲಿ ಯಾರು ಹಿಂದು ಯಾರು ಮುಂದು, ಯಾರು ಜಾಣೆ ಯಾರು ಮುಗ್ಧೆ ಎಂಬುದು ಗೊತ್ತಾಗುವುದಿಲ್ಲ. ಕಳೆದ ಮಂಗಳವಾರ ಇರುಳು ತೀರಿಹೋದ ಭಾಗ್ಯಮ್ಮನವರ ನೆನಪಿನಲ್ಲಿ ಸೂರ್ಯಪುತ್ರ ಈ ಹಿಂದೆ ಬರೆದಿದ್ದ ಬರಹ
ಮೂವತ್ತು ವರ್ಷಗಳ ಹಿಂದೆ ಸಾರಾ ಉಮ್ಮಾ ಜೊತೆಗೆ
ನಾಲ್ಕು ದಶಕಗಳ ಹಿಂದೆ ತನ್ನ ನಲವತ್ತೆರಡನೆಯ ವಯಸ್ಸಿನಲ್ಲಿ ಬರೆಯಲು ಶುರು ಮಾಡಿದ ಸಾರಾ ಅಬೂಬಕ್ಕರ್ ಕನ್ನಡಕ್ಕೆ ಸಂಭವಿಸಿದ ಒಂದು ಅಚ್ಚರಿ. ಬಹುಶಃ ಕನ್ನಡಕ್ಕೆ ಸಂಭವಿಸಿದ ಇನ್ನೊಂದು ಅಚ್ಚರಿಯಾದ ಪಿ. ಲಂಕೇಶರು ಇಲ್ಲದಿದ್ದರೆ ಸಾರಾ ಕನ್ನಡದಲ್ಲಿ ಬರೆಯುತ್ತಲೇ ಇರಲಿಲ್ಲವೇನೋ.ಸುಮಾರು ಮೂವತ್ತು ವರ್ಷಗಳ ಹಿಂದೆ ಆಗ ಇನ್ನೂ ಮೂವತ್ತರ ಹರೆಯದ ತರುಣನಾಗಿದ್ದ ಕನ್ನಡದ ಕಥೆಗಾರ ಅಬ್ದುಲ್ ರಶೀದ್ ಲಂಕೇಶ್ ಪತ್ರಿಕೆಗಾಗಿ ಸಾರಾ ಅವರೊಡನೆ ನಡೆಸಿದ್ದ ಮಾತುಕತೆಯ ಪಠ್ಯ ಇಲ್ಲಿದೆ
ಸಾರಾ ಉಮ್ಮಾ ತೀರಿಕೊಂಡರು…
ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಮಂಗಳವಾರ ಮಧ್ಯಾಹ್ನ ತೀರಿಕೊಂಡರು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ಸಾರಾ, ಲೇಖಕಿಯಾಗಿಯಷ್ಟೇ ಅಲ್ಲ, ಉದಾರವಾದಿ ಚಿಂತಕಿಯಾಗಿಯೂ ಗುರುತಿಸಿಕೊಂಡರು. ಅವರ ಕುರಿತು ಕಳೆದ ವರ್ಷ ಕೆಂಡಸಂಪಿಗೆಯಲ್ಲಿ ಪ್ರಕಟವಾದ ಬರಹವೊಂದು ಇಲ್ಲಿದೆ.
ಕೋಲಾರದಲ್ಲಿ ಕಂಡ ‘ಕಾಮರೂಪಿ
‘ಅಯ್ಯೋ ನನ್ನ ಇಂಟರ್ನೆಟ್ ಹಾಳಾಗಿ ಹೋಗಿದೆ. ನಿನ್ನಂತಹ ಖಳರೊಡನೆ ಸಂಪರ್ಕಿಸಲು ಇದ್ದ ಈ ಭೂಲೋಕದ ಇದೊಂದು ಕೊಂಡಿಯೂ ಹೊರಟು ಹೋಗಿದೆ’ ಎಂದು ಪರದಾಡುತ್ತಿರುವ ಮಗುವಿನಂತಹ ಹಿರಿಯ ಲೇಖಕ ಕಾಮರೂಪಿ. `ತಡೀರಿ ಸಾರ್ ನಾನೂ ಒಂದು ಕೈ ನೋಡಿಯೇ ಬಿಡುತ್ತೇನೆ’ ಎಂದು ಕಲಿತ ವಿದ್ಯೆಯನ್ನೆಲ್ಲ ಬಳಸಿ ಇಂಟರ್ನೆಟ್ ಸರಿ ಮಾಡಲು ನೋಡಿದೆ. ಆಗಲಿಲ್ಲ. ನೋಡಿದರೆ ಫೋನೇ ಸತ್ತು ಹೋಗಿತ್ತು.
ಬಸವರಾಜು ಕುಕ್ಕರಹಳ್ಳಿ ಎಂಬ ಕಥೆಗಾರನೊಟ್ಟಿಗಿನ ಕೆಲವು ನೆನಪುಗಳು
ಈ ಹಿಂದಿನಿಂದಲೂ ಕಾವ್ಯ ಬರೆಯಿರಿ ಎಂದು ಪೀಡಿಸುತ್ತದ್ದ ನನಗೆ ಕರೋನಾ ಸಂದರ್ಭದಲ್ಲಿ ಕರೆ ಮಾಡಿ ಭೇಟಿ ಮಾಡುವಂತೆ ತಿಳಿಸಿದರು ಅಂತೂ ಖುಷಿಪಟ್ಟು ಅವರನ್ನು ರಾಮಕೃಷ್ಣ ನಗರದ ಪಾರ್ಕೊಂದರಲ್ಲಿ ಭೇಟಿಯಾದೆ. ಒಂದು ಟೈಪಿಸಿದ ಹಾಳೆಗಳ ಗುಚ್ಚವನ್ನು ನೀಡುತ್ತಾ “ನೋಡಪ್ಪ ಇವು ಕವಿತೆ ಎನಿಸಿದರೆ ಪ್ರಕಟಿಸೋಣ, ಇಲ್ಲವೆಂದರೆ ಬೇಡ” ಎಂದು ಮೌನವಾದರು.
ನೆನ್ನೆ ಕತೆಗಾರ ಬಸವರಾಜು ಕುಕ್ಕರಹಳ್ಳಿ ನಿಧನರಾದರು. ಅವರೊಂದಿಗೆ ಒಡನಾಡಿದ ಒಂದಷ್ಟು ನೆನಪುಗಳನ್ನು ಅಭಿಷೇಕ್ ವೈ.ಎಸ್. ಇಲ್ಲಿ ಹಂಚಿಕೊಂಡಿದ್ದಾರೆ.
ಬೆಟ್ಟ ಅಗೆದು ಗಂಗೆಯನ್ನು ತಂದವರು
ಅಮೈ ಮಹಾಲಿಂಗ ನಾಯ್ಕ ಅವರು ಬಂಟ್ವಾಳದ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ಎಂಬ ಊರಿನ ನಿವಾಸಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜೀವನವು ಮರೆಯಾಗುತ್ತಿದೆ ಎಂಬ ಆತಂಕ ಕವಿಯುತ್ತಿರುವ ಸಂದರ್ಭದಲ್ಲಿ ಅಮೈ ಮಹಾಲಿಂಗ ನಾಯ್ಕರು ಬೋಳುಗುಡ್ಡವನ್ನು ಹಸನು ಮಾಡುವ ಕಾಯಕದಲ್ಲಿ ನಿರತರಾಗಿದ್ದರು. ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟಿದ್ದಾರೆ. ಅವರು ಜೀವನದಲ್ಲಿ ಪ್ರಯತ್ನಗಳಿಗೆ ಎಂದೂ ‘ರಜಾ’ ತೆಗೆದುಕೊಂಡಿದ್ದೇ ಇಲ್ಲ. ಅವರ ಬಗ್ಗೆ ಕೋಡಿಬೆಟ್ಟು ರಾಜಲಕ್ಷ್ಮಿ ಅವರ ಬರಹ ಇಲ್ಲಿದೆ.
ಏಳು ಪುಣ್ಯದ ಕೆರೆಗಳನ್ನು ಕೊಟ್ಟವರು ತೀರಿಹೋದರು
ನೋಡಲು ಬಿಕಾರಿಯಂತೆ ತೋರುವ ಆದರೆ ಮಾತನಾಡಲು ತೊಡಗಿದರೆ ಸಂತನಂತೆ ಕಾಣುವ ಕಾಮೇಗೌಡರು ಒಣ ಪ್ರದೇಶವಾದ ಮಳವಳ್ಳಿ ತಾಲ್ಲೂಕಿನ ಕುಂದೂರು ಬೆಟ್ಟದ ಪಾದದಲ್ಲಿ ಕೈಯ್ಯಾರೆ ತೋಡಿರುವ ಈ ಏಳು ಕೆರೆಗಳು ಕರ್ಮಯೋಗಿಯೊಬ್ಬ ನಲವತ್ತು ವರ್ಷಗಳಿಂದ ನಡೆಸಿರುವ ಕಾಯಕದಂತೆ ಬೆಳಗುತ್ತಿವೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರು ತಾವು ಕಟ್ಟಿದ ಹದಿನಾರು ಕೆರೆಗಳನ್ನು ಇಲ್ಲೇ ಬಿಟ್ಟು ತಾವು ಮಾತ್ರ ಇಂದು ಬೆಳಗ್ಗೆ ತೀರಿಹೋದರು. ಅವರ ಕುರಿತು ಅಬ್ದುಲ್ ರಶೀದ್ ಬರೆದಿದ್ದ ವ್ಯಕ್ತಿಚಿತ್ರ ನಿಮ್ಮ ಓದಿಗೆ
ಕತೆ ಹೇಳಿಸಿಕೊಳ್ಳುವ ಉಮ್ಮ, ಪುಸ್ತಕ ಕೊಡಿಸು ಎನ್ನುವ ಬಾಪಾ
ತಾನು ಕತೆಗಾರನೆಂದು ಹೇಳಿಕೊಳ್ಳುವ ಮುನವ್ವರ್ ಜೋಗಿಬೆಟ್ಟು ಅವರ ಅಂತರಂಗದಲ್ಲೊಂದು ಹಾಡಿದೆ. ಅದು ಅವರ ಪರಿಸರ ಪ್ರೀತಿಯ ಹಾಡು. ಅದೇ ಪ್ರೀತಿಯಲ್ಲಿ ಅವರು ಕೆಂಡಸಂಪಿಗೆಗೆ ಸರಣಿ ಬರಹಗಳನ್ನು ಬರೆಯುತ್ತಾ ತಮ್ಮ ಬರವಣಿಗೆಯನ್ನು ಮತ್ತಷ್ಟು ಚಂದಮಾಡಿಕೊಂಡರು. ʻಇಷ್ಕಿನ ಒರತೆಗಳುʼ ಎಂಬ ಕವನ ಸಂಕಲನ ಪ್ರಕಟಿಸಿದರು. ಅವರಿಗೆ ಇಂದು ವಿಜಯಕರ್ನಾಟಕ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ. ಈ ಬಹುಮಾನ ಬಂದ ಖುಷಿಯಲ್ಲಿ ತುಂಬಾ ಮಾತನಾಡಿದರು.