Advertisement

ವ್ಯಕ್ತಿ ವಿಶೇಷ

ಛಂದ ಪ್ರಶಸ್ತಿ ಪಡೆದ ಫಾತಿಮಾ ರಲಿಯಾ….

ಛಂದ ಪ್ರಶಸ್ತಿ ಪಡೆದ ಫಾತಿಮಾ ರಲಿಯಾ….

ಕೆಂಡಸಂಪಿಗೆಯ ಮೂಲಕ ಬರಹಲೋಕಕ್ಕೆ ಕಾಲಿಟ್ಟ ಫಾತಿಮಾ ರಲಿಯಾ ಕವಿತೆಗಳನ್ನು ಬರೆಯಲಾರಂಭಿಸಿ ಪ್ರಬಂಧಗಳನ್ನು ತುಂಬಾ ಪ್ರೀತಿಸಿದರು. ಕರಾವಳಿಯ ಸಾಮಾಜಿಕತೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ  ಭರವಸೆಯ ಲೇಖಕಿ. ಅವರ ಕಥಾ ಸಂಕಲನದ ಹಸ್ತಪ್ರತಿಗೆ ಛಂದಪುಸ್ತಕ ಬಹುಮಾನ ಬಂದಿದೆ. ಕವಿತೆಯ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ತಾನು ಪ್ರಬಂಧಗಳ ಲೋಕದಲ್ಲಿ ವಿಹರಿಸಿ ಈ ಕಥಾಲೋಕವನ್ನು ಪ್ರವೇಶಿಸಿದ್ದೇನೆ ಎನ್ನುವ ಫಾತಿಮಾ ರಲಿಯಾ ಅವರು ತಮ್ಮಖುಷಿಯನ್ನು ಕೆಂಡಸಂಪಿಗೆಯ ಜೊತೆಗೆ ಹಂಚಿಕೊಂಡರು.  ಅವರೊಡನೆ ನಡೆಸಿದ ಮಾತುಕತೆಯ ಒಂದಿಷ್ಟು ವಿಚಾರಗಳು ಇಲ್ಲಿವೆ.

read more
ಅನುಭವ ಬುತ್ತಿಯನ್ನು ಅಕ್ಷರವಾಗಿಸಿದ ಲೇಖಕಿ ಅರ್ನಾಕ್ಸ್‌

ಅನುಭವ ಬುತ್ತಿಯನ್ನು ಅಕ್ಷರವಾಗಿಸಿದ ಲೇಖಕಿ ಅರ್ನಾಕ್ಸ್‌

ಅರ್ನಾಕ್ಸ್ ಬೆಳೆದಿದ್ದು ಫ್ರಾನ್ಸಿನ ನಾರ್ಮಂಡಿ ಪ್ರಾಂತ್ಯದ ಯ್ವೆಟೊಟ್ ಎಂಬ ಪುಟ್ಟ ನಗರದಲ್ಲಿ. ಅವರ ತಂದೆ ಅಲ್ಲಿ ಒಂದು ಕಿರಾಣಿ ಅಂಗಡಿ ಮತ್ತು ಕೆಫೆಯನ್ನು ನಡೆಸುತ್ತಿದ್ದರು. ಅಲ್ಲಿಯ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅವರಿಗೆ ಬಡತನವು ತಂದಿಡಬಹುದಾದ ಸಾಮಾಜಿಕ ತಾರತಮ್ಯದ ಅರಿವಾಯಿತು. ತಮ್ಮ ಬರವಣಿಗೆಯ ಐವತ್ತು ವರ್ಷಗಳಲ್ಲಿ ಅವರು ಬರೆದ ಕೃತಿಗಳ ಸಂಖ್ಯೆ ಇಪ್ಪತ್ತಕ್ಕಿಂತಲೂ ಹೆಚ್ಚು. ಹೆಚ್ಚಿನವು ಕಾದಂಬರಿಗಳಾದರೆ ಇನ್ನು ಕೆಲವು ನಾಟಕಗಳು, ಚಿತ್ರಕಥೆಗಳು. 2022ರ ನೊಬೆಲ್ ಪಾರಿತೋಷಕ ಫ್ರಾನ್ಸಿನ ಲೇಖಕಿ ಆನ್ ಅರ್ನಾಕ್ಸ್ ಕುರಿತು ಸುಧಾ ಆಡುಕಳ ಬರಹ

read more
ಗಾಂಧೀ ಎಂಬ ಶಾಶ್ವತ ಸತ್ಯ

ಗಾಂಧೀ ಎಂಬ ಶಾಶ್ವತ ಸತ್ಯ

ಗಾಂಧೀಜಿಗೆ ಅಹಿಂಸೆ ಕೇವಲ ಒಂದು ಪರಿಕಲ್ಪನೆಯಲ್ಲ. ಅದು ಯಾರಿಗೂ ಯಾವುದೇ ನೋವನ್ನುಂಟು ಮಾಡಬಾರದೆಂಬುದನ್ನು ಮನಗಾಣಿಸಬೇಕು; ಕಾರಣ ದುರಾಲೋಚನೆಯೂ ಹಿಂಸೆ, ಅಸಹನೆಯೂ ಹಿಂಸೆ. ಅನ್ಯರಿಗೆ ಕಡೆಗಣಿಸುವುದೂ ಹಿಂಸೆ. ಅಷ್ಟೇ ಏಕೆ ಲೋಕಕ್ಕೆ ಅವಶ್ಯಕವಾದುದನ್ನು ತಾನೊಬ್ಬನೇ ಇಟ್ಟುಕೊಳ್ಳುವದೂ ಹಿಂಸೆಯೆ. ಇದರಿಂದ ಅಹಿಂಸೆಯೆಂದರೆ ಒಂದು ರೀತಿಯ ನಕಾರಾತ್ಮಕ ಧೋರಣೆಯೆಂದು ತಿಳಿಯಬೇಕಿಲ್ಲ. ಹೇಡಿತನವಂತೂ ಖಂಡಿತ ಅಲ್ಲ. ಮನುಬಳಿಗಾರ್‌ ಅವರು ಮಹಾತ್ಮಾ ಗಾಂಧೀಜಿಯ ಕುರಿತು ಬರೆದ ಲೇಖನವೊಂದು ನಿಮಗಾಗಿ

read more
ಪುರಾಣ ವಾಙ್ಮಯದ ರಸಋಷಿ ದೇರಾಜೆ ಸೀತಾರಾಮಯ್ಯ

ಪುರಾಣ ವಾಙ್ಮಯದ ರಸಋಷಿ ದೇರಾಜೆ ಸೀತಾರಾಮಯ್ಯ

ಕಲೆಯು ಕಾಲಕ್ಕೆ, ಕಾಲವು ನಟನಿಗೆ ಅನುಗುಣವಾಗಿ ತಿರುವುಗಳನ್ನು ಪಡೆಯುತ್ತದೆ ಎನ್ನುವುದನ್ನು ಮರೆಯಬಾರದು.  “ಕಾವ್ಯದ ರಚನೆ ಎಂದರೆ ಅದು ಭಾವನೆಗಳಲ್ಲಿ ಮುಳುಗಿಹೋಗುವುದಲ್ಲ, ಆದರೆ ಭಾವನೆಗಳಿಂದ ಮುಕ್ತನಾಗುವುದು, ವ್ಯಕ್ತಿತ್ವವನ್ನು ಪ್ರದರ್ಶಿಸುವುದಲ್ಲ ಬದಲಾಗಿ ತನ್ನ ವ್ಯಕ್ತಿತ್ವದಿಂದ ಬಿಡುಗಡೆ ಹೊಂದುವುದು” ಎಂದು ಎಲಿಯಟ್‌ ಹೇಳುತ್ತಾನೆ. ದೇರಾಜೆಯವರ ಸಂದರ್ಭದಲ್ಲಿ ಇದನ್ನು ನಾವು ಚೆನ್ನಾಗಿ ಅನ್ವಯಿಸಬಹುದು. ನಾರಾಯಣ ಯಾಜಿ ಬರಹ

read more
ಕಥಾಲೋಕದ ಆಯಾಮಗಳನ್ನು ಬದಲಿಸಿದ ತಿರುಮಲೇಶರು

ಕಥಾಲೋಕದ ಆಯಾಮಗಳನ್ನು ಬದಲಿಸಿದ ತಿರುಮಲೇಶರು

ನವ್ಯ ಮತ್ತು ಈ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ. ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ- ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ. ಇಂದು ಕೆ.ವಿ. ತಿರುಮಲೇಶ್‌ ಅವರ ಹುಟ್ಟುಹಬ್ಬ. ಅವರು ಬರೆದ 
ʻಕೆಲವು ಕಥಾನಕಗಳುʼ  ಕಥಾಸಂಕಲನದ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ ಈ ಸಂದರ್ಭದ ಓದಿಗಾಗಿ

read more
ಬದಲಾದ ಜಗದಲ್ಲಿ ಕದಲದೆ ನಿಂತಿದ್ದ ರಾಣಿ

ಬದಲಾದ ಜಗದಲ್ಲಿ ಕದಲದೆ ನಿಂತಿದ್ದ ರಾಣಿ

ಜಗತ್ತಿನ ಅತಿದೊಡ್ಡ ನಗರ ಲಂಡನ್. ಆದರೆ ಸಂತಸ ನೆಮ್ಮದಿಗಳು ನೆಲೆಸಿರುವ ಊರಲ್ಲ. ಕಾರ್ಮಿಕರ ಸಂಕಟ, ಕ್ರಾಂತಿಯ ಭಯ, ಇಡೀ ಪಟ್ಟಣವನ್ನು ಸ್ತಬ್ದವಾಗಿಸಬಲ್ಲ ಮುಷ್ಕರಗಳು ವಿಜೃಂಭಿಸುತ್ತಿದ್ದ, ಎರಡನೆಯ ಮಹಾಯುದ್ಧದ ಭೀಕರ ಆಘಾತಗಳಿಂದ ಕಕ್ಕಾಬಿಕ್ಕಿಯಾದ ಜಾಗ. ಅಂತಹ ಪ್ರಕ್ಷುಬ್ದ ಕಾಲದಲ್ಲಿ ಎಲಿಜೆಬೆತ್ ಹುಟ್ಟಿದ್ದು.ಆ ಪ್ರಕ್ಷುಬ್ಧತೆಯ ಸಹವಾಸದಿಂದ ಅವರಿಗೆ ಎಂದೂ ಬಿಡುಗಡೆ ಸಿಗಲೇ ಇಲ್ಲ. ಬ್ರಿಟನ್ನಿನ ಜನಸಾಮಾನ್ಯರ, ಕಾಮನ್ ವೆಲ್ತ್ ದೇಶಗಳ ಜನರ ಅಷ್ಟೇ ಏಕೆ ಸಂಪರ್ಕಕ್ಕೆ ಬಂದ ಜಗತ್ತಿನ ಎಲ್ಲ ಪ್ರಧಾನಿಗಳ, ಅಧ್ಯಕ್ಷರ, ಮಹಾನಾಯಕರ ಅಪಾರ ಪ್ರೀತಿ ಅಭಿಮಾನವನ್ನು ಸಂಪಾದಿಸಿದ ಮಹಾರಾಣಿ ಒಂದು ಶತಮಾನದ ರಾಜಕೀಯ ಸಾಮಾಜಿಕ ಆರ್ಥಿಕ ವೈಜ್ಞಾನಿಕ ಆರೋಗ್ಯ ಕ್ಷೇತ್ರಗಳ ಪ್ರಗತಿ ಮತ್ತು ದುರಂತಗಳಿಗೆ ಸಾಕ್ಷಿಯಾದವರು ನಿನ್ನೆಯಷ್ಟೇ ಅಗಲಿದ್ದಾರೆ.  ಅವರ ಕುರಿತು ಯೋಗೀಂದ್ರ ಮರವಂತೆ ಬರೆದ ಲೇಖವೊಂದು ಇಲ್ಲಿದೆ. 

read more
ಭಾಷಾವಿಜ್ಞಾನದ ಕಡಲಿನಿಂದ ಹೊರತೆಗೆದ ನುಡಿಮುತ್ತು

ಭಾಷಾವಿಜ್ಞಾನದ ಕಡಲಿನಿಂದ ಹೊರತೆಗೆದ ನುಡಿಮುತ್ತು

ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡವರು ಸೃಜನಶೀಲ ಬರವಣಿಗೆಯನ್ನು ನಿರ್ಲಕ್ಷಿಸಬಾರದು ಎಂದು ಕಿವಿ ಮಾತು ಹೇಳುತ್ತಿದ್ದ ಬಹುಭಾಷಾ ವಿದ್ವಾಂಸ ಪ್ರೊ. ಕೋಡಿ ಕುಶಾಲಪ್ಪ ಗೌಡರು ಸ್ವತಃ ಸೃಜನಶೀಲ ಲೇಖಕರು. ಅವರ ಬೋಧನಾ ಶೈಲಿಯೂ ಅನೇಕ ಸಂಶೋಧಕರು, ಸೃಜನಶೀಲ ಬರಹಗಾರರಿಗೆ ಮಾರ್ಗದರ್ಶಿಯಂತಿತ್ತು. ಶಬ್ದಮಣಿದರ್ಪಣವನ್ನು ಹೇಗೆ ರಸವತ್ತಾಗಿ ಸಾಹಿತ್ಯಕೃತಿಯಂತೆಯೇ ಪಾಠ ಹೇಳಬಹುದೆಂಬುದನ್ನೂ ಅವರು ತೋರಿಸಿಕೊಡುತ್ತಿದ್ದರು. ಬಹುದೊಡ್ಡ ಶಿಷ್ಯ ಪರಂಪರೆಯನ್ನು ಹೊಂದಿದ್ದ ಹಿರಿಯ ಜೀವಿ ಪ್ರೊ. ಗೌಡರು ಶುಕ್ರವಾರ ಸಂಜೆ ನಿಧನರಾದರು. ಅವರ ಕುರಿತು ಡಾ. ಹರಿಕೃಷ್ಣ ಭರಣ್ಯ ಬರೆದ ಲೇಖನವೊಂದು ಕೆಂಡಸಂಪಿಗೆಯ ಓದುಗರಿಗಾಗಿ.

read more
ಜಂಕ್ಷನ್ ಪಾಯಿಂಟಿನ ಕಥೆಗಾರನಿಗೆ ಕೆಂಡಸಂಪಿಗೆಯ ಅಭಿನಂದನೆಗಳು

ಜಂಕ್ಷನ್ ಪಾಯಿಂಟಿನ ಕಥೆಗಾರನಿಗೆ ಕೆಂಡಸಂಪಿಗೆಯ ಅಭಿನಂದನೆಗಳು

ಕನ್ನಡದ ತರುಣ ಕತೆಗಾರ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ತಮ್ಮನ್ನು ಕಲಾಭ್ಯಾಸಿ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರ ಮೊದಲ ಕಥಾಸಂಕಲನ ‘ನೀಲಕುರಿಂಜಿ’ ಕೇಂದ್ರ ಸಾಹಿತ್ಯ ಅಕಾಡೆಮಿಯ 2022ರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಗಳು ಪ್ರಕಟವಾದಾಗ ಎದುರಾಗುವ ಸಂಭ್ರಮಗಳು, ಜೊತೆಗೇ ಬರುವ ಟೀಕೆಗಳು ಇತ್ಯಾದಿ  ಸಾಹಿತ್ಯ ಕೃತಿಗಳು ಎದುರಿಸಬೇಕಾದ ʻಮಂಥನʼ ಎಂದು ಹೇಳುತ್ತ ಈ ಕ್ಷಣವನ್ನು ಸ್ವೀಕರಿಸಿದ್ದೇನೆ ಎನ್ನುತ್ತಾರೆ ದಾದಾಪೀರ್ . ಕೆಂಡಸಂಪಿಗೆಯಲ್ಲಿ ‘ಜಂಕ್ಷನ್ ಪಾಯಿಂಟ್’ ಅಂಕಣ ಬರೆಯುತ್ತಿರುವ ದಾದಾಪೀರ್ ಪ್ರಶಸ್ತಿ ಪಡೆದ ಸಂಭ್ರಮವನ್ನು ಸಂಕೋಚದಿಂದಲೇ ಇಲ್ಲಿ ಹಂಚಿಕೊಂಡಿದ್ದಾರೆ.

read more
ʻನವ್ಯದ ನಂತರ ಕನ್ನಡ ಸಾಹಿತ್ಯ ಮರುಭೂಮಿ ಎನಿಸಿದೆʼ

ʻನವ್ಯದ ನಂತರ ಕನ್ನಡ ಸಾಹಿತ್ಯ ಮರುಭೂಮಿ ಎನಿಸಿದೆʼ

ಜಿ. ರಾಜಶೇಖರ ಅವರು ಸೇವಾ ನಿವೃತ್ತರಾಗುವ ತನಕವೂ ನಾನು ಊರಿಗೆ ಹೋದಾಗಲೆಲ್ಲ ಉಡುಪಿಯ ಅಜ್ಜರಕಾಡುವಿನಲ್ಲಿರುವ ಎಲ್ ಐ ಸಿ ಕಛೇರಿಗೆ ಹೋಗಿ ಅವರನ್ನು ಭೇಟಿ ಮಾಡಿ ಬರುತ್ತಿದ್ದೆ. ಅವರಲ್ಲಿ ಒಂದಷ್ಟು ಮಾತುಕತೆ ನಡೆಸಿದ ನಂತರ ಕ್ಯಾಂಟೀನ್ ನಲ್ಲಿ ಚಹ ಕುಡಿಸದೆ ಅವರೆಂದೂ ಕಳುಹಿಸಿದ್ದಿಲ್ಲ. ಆದರೆ ಅವರ ಮಾತುಗಳು ಸದಾ ಪ್ರೇರಣಾದಾಯಿ ಆಗಿಯೇ ಉಳಿದವೆ ಎನ್ನುವ ಶ್ರೀನಿವಾಸ ಜೋಕಟ್ಟೆ ಅವರು, ಎರಡು ದಶಕಗಳ ಹಿಂದೆ  ಜಿ.ರಾಜಶೇಖರ ಅವರೊಡನೆ ನಡೆಸಿದ  ಸಂದರ್ಶನವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಆ ಸಂದರ್ಶನದ ಕೆಲವು ಮುಖ್ಯಾಂಶಗಳು ಇಲ್ಲಿವೆ.

read more

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ