ಏನು ಬರೆಯುವುದು?: ಎಂ.ವಿ. ಶಶಿಭೂಷಣ ರಾಜು ಬರಹ
ತಮ್ಮ ಖಯಾಲಿಗೋ, ಸಾಮಾಜಿಕ ಜವಾಬ್ದಾರಿಯಿಂದಲೋ, ಸಮಾಜಕ್ಕೆ ತನ್ನದೊಂದು ಅಳಿಲ ಸೇವೆ ಎಂದೋ ಪ್ರಖ್ಯಾತಗೊಳ್ಳಲೋ ಬರೆಯುವರಿಗೆ ಸ್ವಲ್ಪ ಭಯ ಇದ್ದೇ ಇರುತ್ತದೆ. ಏಕೆಂದರೆ ಸಹಾಯ ಮಾಡಿಸಿಕೊಂಡವರೇ ಎದುರು ತಿರುಗುವುದು, ಹಿಂದೆ ಕೆಟ್ಟದಾಗಿ ಆಡಿಕೊಳ್ಳುವುದು, ಕಷ್ಟಕೊಡುವುದು ಹೀಗೆ ಅನೇಕ ರೀತಿಯಲ್ಲಿ ನೋವು ಕೊಡುವುದರಿಂದ, ನನಗ್ಯಾಕೆ ಇಲ್ಲದ ಉಸಾಬರಿ ಎಂದುಕೊಳ್ಳುವವರು ಸಂಖ್ಯೆ ಹೆಚ್ಚಾಗುತ್ತಿದೆ.
ಎಂ.ವಿ. ಶಶಿಭೂಷಣ ರಾಜು ಬರಹ ನಿಮ್ಮ ಓದಿಗೆ
ಮೈಸೂರಿನ ಸಂಕ್ರಾಂತಿಯ ವೈಶಿಷ್ಟ್ಯ: ಡಾ. ಪುನೀತ್ ಕುಮಾರ್ ಪದ್ಮನಾಭನ್ ಬರಹ
ಪ್ರಕೃತಿಮಾತೆಯು ಹೇಗೆ ಸೂರ್ಯನ ಮುಖಾಂತರ ನಮಗೆ ಬೇಕಾದ್ದನ್ನು ಕೊಡುತ್ತಾಳೆಯೋ, ಬದಲಿಗೆ ಯಾವುದನ್ನೂ ನಮ್ಮಿಂದ ಅಪೇಕ್ಷಿಸುವುದಿಲ್ಲವೋ, ಅಂತಹಾ ಒಂದು ಶಕ್ತಿಗೆ, ಪ್ರಕೃತಿಗೆ ನಮ್ಮ ಸಂಕ್ರಾಂತಿಯ ಪೂಜೆ. ಸಂಕ್ರಾಂತಿಯ ದಿನದಂದು ಪೂಜೆಯನ್ನು ಕೃತಜ್ಞತಾ ಭಾವದಿಂದ ಪ್ರಕೃತಿಮಾತೆಗೆ ಮಾಡುವುದೆ ಸಂಕ್ರಾಂತಿಹಬ್ಬದ ವಿಶೇಷತೆ.
ಸಂಕ್ರಾಂತಿ ಹಬ್ಬದ ನಿಮಿತ್ತ ಮೈಸೂರಿನ ಸಂಕ್ರಾಂತಿಯ ಹಿನ್ನೆಲೆ ಹಾಗೂ ಅದರ ವೈಶಿಷ್ಟ್ಯತೆಗಳ ಕುರಿತು ಡಾ. ಪುನೀತ್ ಕುಮಾರ್ ಪದ್ಮನಾಭನ್ ಬರಹ
ಕ್ಯಾಂಟೀನ್ ಗೆಳೆಯರ ಆಲೋಚನೆಗಳು: ಶರಣಗೌಡ ಬಿ. ಪಾಟೀಲ ತಿಳಗೂಳ ಪ್ರಬಂಧ
ಆ ಯುವತಿಯನ್ನ ನೋಡಿದರೆ ಯಾವುದೋ ಕಛೇರಿಯಲ್ಲಿ ಕೆಲಸ ಮಾಡುವವಳಂತೆ ಕಾಣಿಸ್ತಿದ್ದಾಳೆ. ಅವಳ ವೇಷ ಭೂಷಣ ಹಾಗೇ ಇದೆ. ಯಾರೋ ಕಛೇರಿಯವರಿಗೇ ಕಾಯ್ತಿರಬೇಕು” ಅಂತ ಅಭಿಪ್ರಾಯ ಹೊರ ಹಾಕಿದ. ನಿನ್ನ ಮಾತು ನಾನು ಒಪ್ಪೋದಿಲ್ಲ. ಕಛೇರಿ ಸಮಯ ಈಗಾಗಲೇ ಮುಗಿದು ಹೋಗಿದೆ. ಕಛೇರಿ ಕೆಲಸ ಏನಾದ್ರು ಇದ್ದಿದ್ದರೆ ಕಛೇರಿಯಲ್ಲೇ ಮುಗಿಸಿ ಬರ್ತಾರೆ. ಯಾರೂ ರಸ್ತೆಯಲ್ಲಿ ಕಾಯೋದಿಲ್ಲ ಅಂತ ತನ್ನ ಮಾತಿಗೆ ಅಂಟಿಕೊಂಡ.
ಶರಣಗೌಡ ಬಿ. ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ
ಕಳೆದ ವರ್ಷದ ಹಲವು ಬಣ್ಣಗಳು..: ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಐಸ್ಕ್ಯಾಂಡಿ ತೆಗೆದುಕೊಳ್ಳಬೇಕೆಂಬ ಯೋಚನೆ ಮೊದಲು ಬಂದದ್ದು ಅಣ್ಣನಿಗೆ. ಹೋಗಿ ನಿಂತ ನಾವು ಮೂರು ಐಸ್ಕ್ಯಾಂಡಿ ಕೊಡಲು ಹೇಳಿದೆವು. ನನಗೆ ಆಮೇಲೆಯೇ ಹೊಳೆದದ್ದು, ಮನೆಯಲ್ಲಿ ಅಮ್ಮ ಇದ್ದಾಳೆ. ಅಮ್ಮನಿಗೆಂದು ಇನ್ನೊಂದು ಐಸ್ಕ್ಯಾಂಡಿ ಕೊಡಲು ಹೇಳಿದೆ. ನಾನು ಎರಡು ಕೈಗಳಲ್ಲಿಯೂ ಐಸ್ಕ್ಯಾಂಡಿ ಹಿಡಿದು ಹೊರಟೆ. “ಮನೆ ಮುಟ್ಟುವಷ್ಟರಲ್ಲಿ ಅದು ಕರಗಿಹೋಗಿರುತ್ತದೆ. ಬೇಡ” ಎಂದು ಹೇಳಿದ ಅಪ್ಪನ ಮಾತು ನನ್ನ ಕಿವಿಯನ್ನೇ ಹೊಕ್ಕಿರಲಿಲ್ಲ.
೨೦೨೩ನೇ ವರ್ಷ ಬದುಕಿಗೆ ಹಚ್ಚಿದ ಹಲವು ಬಣ್ಣಗಳ ಕುರಿತು ವಿಶ್ವನಾಥ ಎನ್. ನೇರಳಕಟ್ಟೆ ಬರಹ
ನಮ್ಮನ್ನು ನಾವು ತಿದ್ದಿಕೊಳ್ಳುವುದೇ ಹೊಸತನ: ಕೀರ್ತನ ಎಂ. ಬರಹ
ಈಗಿನ ಓಡುವ ಕಾಲದಲ್ಲಿ ಸಂಕಲ್ಪ ಮಾಡಿದರೆ ಸಾಲದು ದೃಢ ಸಂಕಲ್ಪ ಮುಖ್ಯ. ಅದನ್ನು ಪಾಲಿಸುವ ಅನುಸರಿಸುವ ಏಕ ಮನಸ್ಥಿತಿ ಮುಖ್ಯ. ಅಂದುಕೊಂಡಿದ್ದನ್ನು ಮಾಡಿ ಸಾಧಿಸುತ್ತೇನೆ ಎನ್ನುವ ಗಟ್ಟಿ ಮನಸ್ಸು, ಹಟ, ಛಲ ಮುಖ್ಯ. ಅದೆಲ್ಲವೂ ನಮ್ಮನ್ನು ಒಳ್ಳೆಯ ಮಾರ್ಗದಲ್ಲಿ ಕರೆದುಕೊಂಡು ಹೋಗುವುದರಲ್ಲಿ ನಿರತವಾಗಿರಬೇಕು.
ಹೊಸ ವರ್ಷವನ್ನು ಆರಂಭಿಸುವುದರ ಕುರಿತು ಕೀರ್ತನ ಎಂ. ಬರಹ ನಿಮ್ಮ ಓದಿಗೆ
ಹೊಸ ವರುಷಕೆ… ಹೊಸ ಹರುಷಕೆ..: ಪ್ರಕಾಶ್ ಪೊನ್ನಾಚಿ ಬರಹ
ಬದುಕು ನಿಂತ ನೀರಲ್ಲ, ಬದಲಾವಣೆ ಜಗದ ನಿಯಮ ಎಂದುಕೊಂಡೇ ಮನುಷ್ಯ ಬದಲಾವಣೆಗೊಳಪಟ್ಟುಕೊಂಡು ಹೊಸ ರೂಪಾಂತರಗಳನ್ನು ಆವಿಸ್ಕರಿಸಿ ಹೊಸ ಜಗದ ಸೃಷ್ಟಿಗೆ ನಾಂದಿ ಹಾಡುತ್ತಾ ಬಂದ. ಪ್ರತಿ ವರ್ಷವೂ ಹೊಸದೊಂದು ಜನ್ಮವೆಂದುಕೊಂಡೆ ಹೊಸ ಸೃಷ್ಟಿಗಳಿಗೆ ಬುನಾದಿ ಹಾಕಲಾರಂಭಿಸಿದ. ಎಲ್ಲಾ ಎಲ್ಲೆಗಳನ್ನು ಮೀರಿ ಲೋಕದೊಳಿತಿಗೆ ಸ್ಪೃಷ್ಯ ಯಾವುದೋ ಅವುಗಳ ಸೃಷ್ಟಿಯಲ್ಲಿ ತಲ್ಲೀನನಾದ.
ಹಳ್ಳಿಗಳಲ್ಲಿನ ಹೊಸ ವರ್ಷದಾಚರಣೆಯ ಕುರಿತು ಪ್ರಕಾಶ್ ಪೊನ್ನಾಚಿ ಬರಹ ನಿಮ್ಮ ಓದಿಗೆ
ಬದುಕಿಗಿಷ್ಟು ಸಾಕೆಂದರೆ ಆಗುವುದಿಲ್ಲವೆ?: ರೂಪಶ್ರೀ ಕಲ್ಲಿಗನೂರ್ ಬರಹ
ನಾನು ನಾನೆಂದು ಬದುಕಿದ ನನ್ನ ಬದುಕು ಎಲ್ಲಿ ಹೋಗುತ್ತದೆ… ಸಿಟ್ಟಿಗೆ, ಸಂತೋಷಕ್ಕೆ, ತ್ಯಾಗಕ್ಕೆ, ಭೋಗಕ್ಕೆ… ಏನಾದರೂ ಅರ್ಥ ಉಳಿಯಬಹುದ? ಕೆಟ್ಟವನಾಗಿದ್ದರೆ ನಾಲ್ಕು ಜನರೊಂದಿಗೆ ಸಿಟ್ಟು, ಒಳ್ಳೆಯವನಾಗಿದ್ದರೆ ಅದೇ ನಾಲ್ಕು ಜನರೊಂದಿಗೆ ಪ್ರೀತಿ… ಅಷ್ಟೇ… ಇಷ್ಟು ಬದುಕಿನಲ್ಲಿ ನಮಗಾಗಿ ನಾವು ಏನು ಮಾಡಿಕೊಂಡರೂ, ಅದೂ ನಮ್ಮ ಜೀವಿತಾವಧಿಯ ನೆಮ್ಮದಿಗಾಗಿ ಅಷ್ಟೇ ಅಲ್ಲದೇ ಬೇರೇನೂ ಅಲ್ಲ.
ಬದುಕಿನ ಕುರಿತು ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ
ಡಾ. ಅಂಬೇಡ್ಕರ್ ಬರೆದ ಪ್ರೇಮಪತ್ರ…: ಸದಾನಂದ ಆರ್. ಅನುವಾದ
ಮೊದಲಿಗೆ, ಉಕ್ಕಿ ಹರಿಯುವ ಪ್ರೀತಿಯನ್ನು ನಿಯಂತ್ರಿಸಲು ನಾವು ಕಲಿಯಬೇಕು. ನೀನೀಗ ಪ್ರೀತಿಯ ಬಲಿಪಶುವಾಗಿರುವೆ ಎನ್ನುವ ಆತಂಕ ನನ್ನದು. ನನ್ನಿಂದ ದೂರವಿರಲು ನಿನ್ನಿಂದ ಸಾಧ್ಯವಿಲ್ಲ ಅನ್ನುವುದನ್ನು ನಾನು ಬಲ್ಲೆನು. ನನಗೂ ನೀನು ನನ್ನ ಹತ್ತಿರ ಇರಬೇಕೆಂಬ ಆಸೆಯಿದೆ. ಆದರೆ ನೀನು ನನಗೆ ಒಂದಿಷ್ಟು ಸಮಯಾವಕಾಶ ನೀಡಬೇಕೆಂದು ಕೋರುವೆ. ನಿನ್ನ ತಾಳ್ಮೆಯನ್ನು ನಾನು ಖಂಡಿತ ಪರೀಕ್ಷಿಸುವುದಿಲ್ಲ ಎನ್ನುವುದಂತೂ ಖಾತ್ರಿ.
ಡಾ. ಬಿ.ಆರ್. ಅಂಬೇಡ್ಕರ್ ತಮ್ಮ ಮದುವೆಗೂ ಮುನ್ನ ತಮ್ಮ ಪತ್ನಿಗೆ ಬರೆದಿದ್ದ ಪತ್ರವನ್ನು ಸದಾನಂದ ಆರ್. ಕನ್ನಡಕ್ಕೆ ಅನುವಾದಿಸಿದ್ದಾರೆ
ನಾವೂನೂ ಹಕ್ಕಿಗಳಾಗೋಣ ಬಾರಾ: ಮಹಾಲಕ್ಷ್ಮೀ ಕೆ. ಎನ್. ಬರಹ
ರೇಷ್ಮೆ ಲಂಗದ ಅಕ್ಕ ಮತ್ತು ಅವಳ ಪುಟ್ಟ ತಮ್ಮ ಹಿಡಿಯಲು ಹೋದಾಗ ಕೈಗೆ ಸಿಗದವು, ಮನುಷ್ಯ ಮುಟ್ಟಿದರೆ ತನ್ನ ಮೈಯನ್ನ ಸ್ವಚ್ಛ ಮಾಡಿಕೊಳ್ಳುವಂತವು, ಈ ನೆಲದಲ್ಲಿ ನಿಧಿಯಿದೆ; ಏಳು ಎಡೆಯ ಸರ್ಪ ಅದನ್ನ ಕಾಯ್ತಿದೆ ಎಂಬ ಅವರ ಈರಪ್ಪನ ಮಾತಿನ ಮೇಲಿನ ಅವರ ಎಳೆಯ ನಂಬಿಕೆ, ಅಂತ್ಯದಲ್ಲಿ ಸಮಯ ಕಳೆದಂತೆ ಬಳ್ಳಾರಿಯಲ್ಲಿನ ಗಣಿಗಾರಿಕೆಗೆ ಹಸಿರುಟ್ಟ ನೆಲವೆಲ್ಲ ಬರಡಾಗಿ ದಾರಿತುಂಬಾ ಧೂಳು ತುಂಬಿ, ಗಿಳಿಯಬಣ್ಣವೂ ಕೆಂಪಾಗಿಯೇ ಬಿಡುವ ಧಾರುಣ ವಾಸ್ತವದ ಕತೆ ನೆನಪಾಗುತ್ತೆ.
ಮಹಾಲಕ್ಷ್ಮೀ. ಕೆ. ಎನ್ ಬರಹ ನಿಮ್ಮ ಓದಿಗೆ