Advertisement

ಸಂಪಿಗೆ ಸ್ಪೆಷಲ್

ವಸ್ತುಗಳ ನಡುವೊಂದು ವಾಸ್ತವ: ಸೌರಭಾ ಕಾರಿಂಜೆ ಬರಹ

ವಸ್ತುಗಳ ನಡುವೊಂದು ವಾಸ್ತವ: ಸೌರಭಾ ಕಾರಿಂಜೆ ಬರಹ

ಡಿಕ್ಲಟರಿಂಗ್ ನಮ್ಮ ದೇಹದ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಸೇರಿಕೊಂಡ ಅನೇಕ ವಸ್ತುಗಳು ಹಲವು ರೀತಿಯ ರೋಗಗಳಿಗೆ ಕಾರಣವಾಗುವ ಧೂಳಿಗೆ, ಅಸ್ತಮಾದಂತಹ ಖಾಯಿಲೆಗಳಿಗೆ ಕಾರಣವಾಗಬಹುದು. ಆಗಾಗ ಡಿಕ್ಲಟರಿಂಗ್ ಮಾಡುವುದರಿಂದ ಅದನ್ನು ತಡೆಯಬಹುದು. ಅಂತೂ ಈ ಡಿಕ್ಲಟರಿಂಗ್‌ನ ಹಿಂದೆ ಎಲ್ಲದಕ್ಕಿಂತ ಮುಖ್ಯವಾಗಿ ಯಾವುದು ಸಂತೋಷವನ್ನು ನೀಡುತ್ತದೆಯೋ ಅದನ್ನು ಮಾಡಿ ಮತ್ತು ಸಂತೋಷವನ್ನು ತರುವಂತಹ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಿ ಎನ್ನುವ ಸಂದೇಶವಿದೆ.
“ಡಿಕ್ಲಟರಿಂಗ್‌” ಕುರಿತು ಸೌರಭಾ ಕಾರಿಂಜೆ ಬರಹ ನಿಮ್ಮ ಓದಿಗೆ

read more
ಕೊಕ್….ಕೊಕ್ಕ್… ಕುಕ್ಕುಟಾಯಣ: ವಸಂತಕುಮಾರ್ ಕಲ್ಯಾಣಿ ಪ್ರಬಂಧ

ಕೊಕ್….ಕೊಕ್ಕ್… ಕುಕ್ಕುಟಾಯಣ: ವಸಂತಕುಮಾರ್ ಕಲ್ಯಾಣಿ ಪ್ರಬಂಧ

ಸುಮಾರು ನಾಲ್ಕು ಮೂವತ್ತಕ್ಕೆ ಯಾವುದೋ ಕನಸಿನ ಲೋಕದಲ್ಲಿದ್ದವನಿಗೆ, ಎಂಪಿ ಶಂಕರ್ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಶಕ್ತಿಪ್ರಸಾದ್ ಮುಂತಾದವರೆಲ್ಲ ಒಟ್ಟಿಗೆ ಗಹಗಹಿಸಿ ನಕ್ಕ ಹಾಗೆ ದನಿ ಕೇಳಿ ಎಚ್ಚರವಾಯಿತು. ಕೆಲಕ್ಷಣದ ನಂತರ ಅದು ಚೇಚಿ ಮನೆಯ ಕೋಳಿಯ ಕೂಗು ಎಂಬ ಕಟು ವಾಸ್ತವ ಅರಿವಿಗೆ ಬಂತು. ಸರಿ ‘ಸುಸು’ ಮಾಡಿ ನೀರು ಕುಡಿದು ಮಲಗಿದರಾಯಿತು ಎಂದು, ಎಲ್ಲ ಮುಗಿಸಿ ಮಲಗಿದರೆ, ಅದರ ಆರ್ಭಟ ಇನ್ನಷ್ಟು ಹೆಚ್ಚಾಯಿತು.
ವಸಂತಕುಮಾರ್ ಕಲ್ಯಾಣಿ ಪ್ರಬಂಧ ನಿಮ್ಮ ಓದಿಗೆ

read more
ನಮ್ಮ ಓದನ್ನು ರೂಪಿಸಿದ ಮಾಯಾದರ್ಪಣದ ಮಾಯಾವಿ: ಎಂ. ಎಸ್. ಶ್ರೀರಾಮ್ ಬರಹ

ನಮ್ಮ ಓದನ್ನು ರೂಪಿಸಿದ ಮಾಯಾದರ್ಪಣದ ಮಾಯಾವಿ: ಎಂ. ಎಸ್. ಶ್ರೀರಾಮ್ ಬರಹ

ದಿವಾಕರ್‌ಗೆ ಸಾಹಿತ್ಯದ ಬಗ್ಗೆ ಇರುವ ಆಳವಾದ ಒಳನೋಟಗಳು, ಸಂಗೀತ ಮತ್ತು ಸಿನಿಮಾಗಳ ಬಗ್ಗೆಯೂ ಇದೆ. ಬೇಂದ್ರೆಯವರ ಅನೇಕ ಕವಿತೆಗಳಿಗೆ ದಿವಾಕರ್ ರಾಗಸಂಯೋಜನೆ ಮಾಡಿದ್ದಾರೆ. ‘ಮಲ್ಲಿಗೆ’ಯಲ್ಲಿದ್ದಾಗ ಅನೇಕ ಪುಸ್ತಕಗಳ ಮುಖಪುಟಗಳನ್ನೂ ವಿನ್ಯಾಸ ಮಾಡಿದ್ದರು.
ಎಂಭತ್ತರ ಹೊಸ್ತಿನಲ್ಲಿರುವ ಹಿರಿಯ ಕಥೆಗಾರ ಎಸ್. ದಿವಾಕರ್ ಅವರ ಸಾಹಿತ್ಯ ಸಂಭ್ರಮದ ಕೃತಿ “ಪರಿಮಳದ ಪಡಸಾಲೆ”ಗೆ ಎಂ.ಎಸ್.‌ ಶ್ರೀರಾಮ್‌ ಬರೆದ ಬರಹ ನಿಮ್ಮ ಓದಿಗೆ

read more
“ನಾವುಗಳಿಲ್ಲಿ ಪರಸ್ಪರರು”: ಮಹಾಲಕ್ಷ್ಮೀ ಕೆ. ಎನ್. ಬರಹ

“ನಾವುಗಳಿಲ್ಲಿ ಪರಸ್ಪರರು”: ಮಹಾಲಕ್ಷ್ಮೀ ಕೆ. ಎನ್. ಬರಹ

ಇಳೆಗೆ ತಂಪು ಬೇಕು ವರುಣನಿಗೆ ಕಾಯ್ತಾಳೆ. ಅವನಿಗೆ ನೆಲೆಬೇಕು ಇವಳನ್ನೇ ಅರಸುತ್ತಾನೆ. “ಇವರಿಬ್ಬರದ್ದೂ ಇಲ್ಲಿ ಪರಸ್ಪರತೆ”. ಇದ್ದಕ್ಕಿದ್ದಂತೆ ಮೋಡ ಹೆಪ್ಪುಗಟ್ಟುತ್ತೆ, ಕಪ್ಪುಗಾಗುತ್ತೆ, ಕತ್ತಲಿನಂತಾಗುತ್ತೆ, ಎಲ್ಲವೂ ನಿಶ್ಶಬ್ಧವಾಗುತ್ತೆ, ಹಕ್ಕಿ ಹಿಂಡು ಗೂಡನ್ನರಸಿ ಚಿಲಿಪಿಲಿಗುಟ್ಟುತ್ತಾ ಬರುತ್ವೆ, ಜೋರುಗಾಳಿ ನಿಲ್ಲುತ್ತೆ, ಎಲ್ಲರೂ- ಎಲ್ಲವೂ ಬಾನಿಗೆ ಮುಖಮಾಡಿ ನೋಡುವಷ್ಟರಲ್ಲಿ ಧೋ…. ಅಂತ ಜಡಿ ಮಳೆ ಬಂದೇಬಿಡುತ್ತೆ.
ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

read more
ಭಾವಗಳ ‘ತೇರ’ ಯಾತ್ರೆ….: ರಾಮ್ ಪ್ರಕಾಶ್ ರೈ ಕೆ ಬರಹ

ಭಾವಗಳ ‘ತೇರ’ ಯಾತ್ರೆ….: ರಾಮ್ ಪ್ರಕಾಶ್ ರೈ ಕೆ ಬರಹ

ಜೈಲಿನ ಕೈದಿಯೊಬ್ಬರು “ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ” ಎಂದರೆ, ಇನ್ನೊಮ್ಮೆ “ಜೈಲು ಹೆರಿಗೆ ಮನೆಯಂತೆ, ಇಲ್ಲಿಗೆ ಬಂದವರು ಹೊಸ ಹುಟ್ಟು ಪಡೆದೇ ಹೊರಹೋಗುವುದು” ಎನ್ನುತ್ತಾರೆ. ಸುಖದ ಬದುಕು ಸಾಗುತ್ತಿರಬೇಕಾದರೆ ಹಿರಿಯ ಮಹಿಳೆಗೆ ಬಸ್ಸಿನ ಸೀಟು ಬಿಟ್ಟುಕೊಡುವ ಪ್ರಿಯ, ಕಷ್ಟ ಕಾಲಿಟ್ಟಾಗ ಆ ಮಹಿಳೆಯ ಕಡೆಗೆ ನಿರ್ಭಾವುಕ ನೋಟವನ್ನು ಬೀರುವ ಪರಿ, ಆ ಬದಲಾವಣೆಯಂತೂ ಮಾನವ ಬದುಕಿನ ವಾಸ್ತವ ನಡುವಳಿಕೆಗೆ ಹಿಡಿದ ದರ್ಪಣದಂತೆ ಕಾಣುತ್ತದೆ.
ಹೇಮಂತ್‌ ರಾವ್‌ ನಿರ್ದೇಶನದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಕುರಿತು ರಾಮ್ ಪ್ರಕಾಶ್ ರೈ ಕೆ ಬರಹ

read more
ಬಾಗಿಲಿಗೆ ಬಂದಿಹನು ಬಳೆಗಾರ: ಸ್ಮಿತಾ ರಾಘವೇಂದ್ರ ಬರಹ

ಬಾಗಿಲಿಗೆ ಬಂದಿಹನು ಬಳೆಗಾರ: ಸ್ಮಿತಾ ರಾಘವೇಂದ್ರ ಬರಹ

ನನಗೂ ಒಳಗೊಳಗೇ ಗಾಭರಿ; ಮದುವೆಗೂ ಮುಂಚೆ ಡಜನ್ ಗಟ್ಟಲೆ ಬಳೆ ತುಂಬಿಕೊಂಡು ಒಂದೂ ಒಡೆಯದಂತೆ ಇಟ್ಟುಕೊಳ್ಳುತ್ತಿದ್ದೆನಲ್ಲ.. ಈಗ ಏನಾಯ್ತು. ಗಡಿಬಿಡಿಯಲ್ಲಿ ಕೆಲಸ ಮಾಡಿದ್ರೆ ಬಳೆ ಒಡದೆ ಹೋಗ್ತದೆ ನೋಡು ಅಂದ ಅಮ್ಮನ ಮಾತು ನೆನಪಾಗಿ ಸಮಾಧಾನವಾಗುತ್ತಿತ್ತಾದರೂ ಈ ಅಪಶಕುನ ಎನ್ನುವ ಭಯದಿಂದ ತಪ್ಪಿಸಿಕೊಳ್ಳಲು ಗಾಜಿನ ಬಳೆ ತೊಡುವುದನ್ನು ಕ್ರಮೇಣ ಬದಲಿಸಿದ್ದೆ.
ಬಳೆಗಾರ ಮತ್ತು ಬಳೆಗಳ ಕುರಿತು ಸ್ಮಿತಾ ರಾಘವೇಂದ್ರ ಕಲ್ಲೇಶ್ವರ ಬರಹ ನಿಮ್ಮ ಓದಿಗೆ

read more
ಮಕ್ಕಳನ್ನು ಪೊರೆವ ಮಾತೃಭಾಷೆ ಕಲಿಸಿ: ಸದಾಶಿವ ಸೊರಟೂರು ಬರಹ

ಮಕ್ಕಳನ್ನು ಪೊರೆವ ಮಾತೃಭಾಷೆ ಕಲಿಸಿ: ಸದಾಶಿವ ಸೊರಟೂರು ಬರಹ

ಆರಂಭದಲ್ಲಿ ಮಗುವಿನ ಭಾಷೆಯಲ್ಲದೆ ಬೇರೆ ಭಾಷೆಯಲ್ಲಿ ಕಲಿಸುವ ವಿಚಾರಗಳು ಮಗುವಿಗೆ ಆಪ್ತವಾಗುವುದಿಲ್ಲ. ಬೇರೆ ಭಾಷೆಯಿಂದ ತಿಳುವಳಿಕೆ ಸಿಗಬಹುದು, ಒಳ್ಳೆಯ ನೌಕರಿ ಸಿಗಬಹುದು; ಬದುಕಿನ ರುಚಿ ಸಿಗುವುದಿಲ್ಲ. ನೆನಪಿರಲಿ ಮಗು ಕನ್ನಡ ಕಲಿತಿದೆ ಅಂದರೆ ಬರೀ ಭಾಷೆ ಕಲಿಯುತ್ತಿದೆ ಎಂದರ್ಥವಲ್ಲ; ಕನ್ನಡದ ಸಂಸ್ಕೃತಿಯನ್ನು ಕಲಿಯುತ್ತಿದೆ ಎಂದರ್ಥ.
ಕನ್ನಡ ರಾಜ್ಯೋತ್ಸವದ ನಿಮಿತ್ತ ಯಾವುದೇ ಕಲಿಕೆಗೂ ಮಾತೃಭಾಷೆ ಮಕ್ಕಳಿಗೆ ಎಷ್ಟು ಮುಖ್ಯ ಎಂಬುದರ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ

read more
ಮರ್ಯಾದೆ ಉಳಿಸಿದ ಒಂದು ರೂಪಾಯಿ!: ಬಸವನಗೌಡ ಹೆಬ್ಬಳಗೆರೆ ಬರಹ

ಮರ್ಯಾದೆ ಉಳಿಸಿದ ಒಂದು ರೂಪಾಯಿ!: ಬಸವನಗೌಡ ಹೆಬ್ಬಳಗೆರೆ ಬರಹ

ಈಗಿನಂತೆ ಆಗ ಮಕ್ಕಳಿಗೆ ನೋಟ್ ಬುಕ್ಕಿನ ರಾಶಿ ಇರುತ್ತಿರಲಿಲ್ಲ. ಆರು ಪುಸ್ತಕವಿದ್ದರೆ ಆರು ನೋಟ್ಸ್, ಒಂದು ಆಲ್ ರಫ್ ಅಷ್ಟೇ. ಸಮಾಜ ನೋಟ್ಸ್‌ನಲ್ಲಿ ಇರುವ ಪಾಠಕ್ಕನುಗುಣವಾಗಿ ಪೌರನೀತಿ, ಭೂಗೋಳ, ಇತಿಹಾಸ ಎಂದು ಭಾಗ ಮಾಡಿ ಬಳಸಿಕೊಳ್ಳುತ್ತಿದ್ದೆವು. ಆಗ ಫೇಮಸ್ ಆಗಿದ್ದ ರೇನಾಲ್ಡ್ಸ್ ಪೆನ್ನನ್ನು ಪರೀಕ್ಷೆ ಬರೆಯಲು ಮಾತ್ರ ತೆಗೆದುಕೊಳ್ಳುತ್ತಿದ್ದೆನು. ಒಂದೊಮ್ಮೆ ಅದರ ಇಂಕ್ ಮುಗಿದು ಹೋದರೆ ಅದರ ಕಡ್ಡಿಯನ್ನು‌ ಎಸೆಯುತ್ತಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರಹ ನಿಮ್ಮ ಓದಿಗೆ

read more
ವಿಶ್ವಕಪ್ ಹೋರಾಟಕ್ಕೆ ಅಣಿಯಾದ ಬಲಾಢ್ಯರು: ವೆಂಕಟೇಶ ಬಿ.ಎಂ. ಬರಹ

ವಿಶ್ವಕಪ್ ಹೋರಾಟಕ್ಕೆ ಅಣಿಯಾದ ಬಲಾಢ್ಯರು: ವೆಂಕಟೇಶ ಬಿ.ಎಂ. ಬರಹ

ಕೆಲವು ವರ್ಷಗಳ ಹಿಂದೆ ಭಾರತ ಪಾಕಿಸ್ತಾನ ಪಂದ್ಯವೆಂದರೆ ಥೇಟ್ ಯುದ್ಧದ ರೀತಿ ಇರುತ್ತಿತ್ತು. ಅಂದಿನ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುವಾಗ ಆವೇಶಭರಿತರಾಗಿ ಎದುರಾಳಿಗಳನ್ನು ಹುರಿದು ಮುಕ್ಕುವ ರೀತಿ ಆಡುತ್ತಿದ್ದರು. ಆದರೆ ಈಗಿನ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುತ್ತಿದ್ದೇವೆ ಎನ್ನುವ ಪರಿವೆಯೇ ಇಲ್ಲದೆ ನಗಾಡಿಕೊಂಡು ಚಡ್ಡಿದೋಸ್ತಿಗಳ ಜೊತೆ ಆಡುವಂತೆ ವರ್ತಿಸುತ್ತಾರೆ ಎಂದು ಗೆಳೆಯ ಹೇಳಿದ.
ಕ್ರಿಕೆಟ್‌ ವಿಶ್ವಕಪ್‌ ಕುರಿತ ವೆಂಕಟೇಶ್‌ ಬಿ.ಎಂ. ಬರಹ ನಿಮ್ಮ ಓದಿಗೆ

read more

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ