ಓದಿ ತಿಳಿ ಗಿಡವ ನೆಟ್ಟು ಕಲಿ
ಮಣ್ಣು ನಿರ್ಜೀವ ವಸ್ತು ಅಲ್ಲ ಅದು ಜೀವಂತ! ಅದರಲ್ಲಿ ಎಷ್ಟೋ ಕ್ರಿಮಿ ಕೀಟಗಳು, ಶಿಲೀಂದ್ರಗಳು, ಬಹುಮುಖ್ಯವಾಗಿ ಎರೆ ಹುಳುಗಳು ಇವೆಲ್ಲ ಇರಲೇಬೇಕು, ಅವುಗಳನ್ನು ಹೇಗೆ ಹೆಚ್ಚಿಸಬೇಕು, ಮಣ್ಣಿಗೆ ಹೊದಿಕೆ ಹೇಗೆ ಮಾಡಬೇಕು, ಸಸ್ಯಗಳನ್ನು ಸಹಜವಾಗಿ ಹೇಗೆ ಪೋಷಿಸಬೇಕು ಎಂಬೆಲ್ಲ ಹೊಸ ಹೊಸ ವಿಷಯಗಳ ಅರಿವು ನನಗೆ ಈ ಮಹಾನುಭಾವರು ಬರೆದ ಪುಸ್ತಕಗಳ ಮೂಲಕ ತಿಳಿದಿತ್ತು. ಇನ್ನೂ ಹಲವಾರು ಟಿಪ್ಪಣಿ ಮಾಡಿಟ್ಟುಕೊಂಡ ನನ್ನ ಹೊತ್ತಿಗೆಗಳು ಬೃಹದಾಕಾರವಾಗಿ ಬೆಳೆದಿದ್ದವು. ಈಗ ಗಿಡಗಳನ್ನು ಬೆಳೆಯುವ ಸಮಯ ಬಂದಿತ್ತು! ಇದು ಹೊಸದಾಗಿ ರೈತರಾಗುವವರಿಗೆ ಎದುರಾಗುವ ಸಮಸ್ಯೆ. ಸಿಕ್ಕಾಪಟ್ಟೆ ಮಾಹಿತಿಗಳ ಕೇಳಿ ತಬ್ಬಿಬ್ಬಾಗಿ ಬಿಡುತ್ತಾರೆ. ಗುರುಪ್ರಸಾದ್ ಕುರ್ತಕೋಟಿ ಬರೆಯುವ ಅಂಕಣ “ಗ್ರಾಮ ಡ್ರಾಮಾಯಣ”
ʻದ ಡಿಪಾರ್ಟೆಡ್ʼ: ಕ್ರೈಮ್ ಕಥನದ ಅಂತರ್ಮುಖಿ ಪಯಣ
ಕಾಲಿನ್ ಸಲ್ಲಿವನ್ ಎಂಬ ಯುವ ಕ್ರಿಮಿನಲ್ ಪೊಲೀಸ್ ಇಲಾಖೆಯ ಒಳಗೆ ನುಸುಳಿಕೊಂಡು ಅಲ್ಲಿನ ಎಲ್ಲ ವಿದ್ಯಮಾನಗಳನ್ನು ಗ್ಯಾಂಗ್ ಲೀಡರ್ ಗೆ ರವಾನಿಸುವ ಕೆಲಸ ನಿರ್ವಹಿಸಬೇಕಾಗಿರುತ್ತದೆ. ಇದು ಕಥನದ ಪ್ರಾರಂಭಿಕ ಭಾಗವಾದರೆ ಚಿತ್ರ ಮುಂದುವರಿದಂತೆ ಅವರು ತಮ್ಮ ನಿಯೋಜಿತ ಕೆಲಸಗಳಲ್ಲಿ
ತೊಡಗುತ್ತಾರೆ. ಇದರಲ್ಲಿ ನಿರತರಾದಾಗ ಬಿಲ್ಲಿ ಕಾಸ್ಟಿಗನ್ ಮತ್ತು ಕಾಲಿನ್ ಸಲ್ಲಿವನ್ ಅಂತರಂಗದಲ್ಲಿ ಸಂಭವಿಸುವ ಸಂಘರ್ಷದ ಪದರುಗಳನ್ನು ಪ್ರಕಟಿಸುವುದೇ ನಿರ್ದೇಶಕನ ಉದ್ದೇಶ. ಇಂಥದನ್ನು ಪ್ರಕಟಿಸುವ ಏಕಾಂತ ಕ್ಷಣಗಳಲ್ಲಿ ಪಾತ್ರಗಳ ಅಭಿನಯ ಪರಿಣಾಮಕಾರಿ. ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಅಮೆರಿಕದ ʻದ ಡಿಪಾರ್ಟೆಡ್ʼ ಸಿನಿಮಾದ ವಿಶ್ಲೇಷಣೆ
ಒಳಗುದಿಯ ದೀಪ ಉರಿಯುತಿತ್ತು
ಆಗ ನನಗೆ ಒಂದು ಸುಂದರ ಹವ್ಯಾಸ ಇತ್ತು. ಈಗಲೂ ಅದನ್ನು ಬಿಟ್ಟಿಲ್ಲ… ಹಳೆಯ ಹಿಂದಿ ಸಿನಿಮಾ ಹಾಡುಗಳನ್ನು ಕೇಳುತ್ತಲೇ ಇರುವುದು… ಆ ಮುಖೇಶ್, ರಫೀ, ಸೈಗಲ್, ಕಿಶೋರ್ ಕುಮಾರ್, ಲತಾ ಅವರ ಕೊನೆ ಮೊದಲಿಲ್ಲದ ಹಾಡುಗಳ ನನ್ನ ಪೂರ್ವಿಕರಿಗೆಲ್ಲ ಕೇಳಿಸಬೇಕು ಎಂಬಂತೆ ಸುಪ್ತ ಪ್ರಜ್ಞೆಯಲ್ಲಿ ಮಲಗಿದ್ದ ಅವರನ್ನೆಲ್ಲ ಎಬ್ಬಿಸಿ ಈ ಹಾಡನ್ನು ಕೇಳಿ… ಈ ಅನಂತ ಹಿಂದೂಸ್ತಾನಿ ಸಂಗೀತದ ಸಮುದ್ರದ ಅಲೆಯ ರಾಗಗಳ ಆಲಿಸಿ ಎನ್ನುತ್ತಿದ್ದೆ. ನನ್ನ ಅಳಲನ್ನು ಈ ಸಂಗೀತಗಾರರು ಅದೆಷ್ಟು ಸಲ ಸಂತೈಸಿದ್ದಾರೊ ಏನೊ..ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆಯ 33ನೇ ಕಂತು
ಒಲಿವಿಯಾ ನ್ಯೂಟನ್ ಜಾನ್ ಮತ್ತು ಬೆಂಗಳೂರು ಒಳ ಚರಂಡಿ ಆಫೀಸು
ಮ್ಯಾಕ್ಸ್ ಬೋರ್ನ್ ಬೆಂಗಳೂರಿನಲ್ಲಿದ್ದ ಕೆಲವೇ ತಿಂಗಳುಗಳಲ್ಲಿ, ರಾಮನ್ರ ಮೂಲಕ ಅವರಿಗೆ ಮೈಸೂರು ಸಂಸ್ಥಾನದ ಅಂದಿನ ಹಲವಾರು ಗಣ್ಯರ ಪರಿಚಯವಾಯಿತು. ಹೀಗೆ ಪರಿಚಯವಾದವರಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಸಾಹೇಬರೂ ಒಬ್ಬರು. ಆ ಕಾಲದಲ್ಲಿ, ಇಸ್ಮಾಯಿಲ್ ಸಾಹೇಬರು ಬೆಂಗಳೂರಿನಲ್ಲಿ ಹಲವಾರು ಸಾರ್ವಜನಿಕ ಮೂಲ ಸೌಕರ್ಯ ಮತ್ತು ಕಟ್ಟಡಗಳನ್ನು ನಿರ್ಮಿಸುವ ಆಲೋಚನೆಯಲ್ಲಿದ್ದರು. ಈ ಕಟ್ಟಡಗಳನ್ನು ವಿನ್ಯಾಸ ಮಾಡಲು ಅವರು ಒಬ್ಬ ನುರಿತ ಆರ್ಕಿಟೆಕ್ಟ್ಗಾಗಿ ಹುಡುಕಾಟದಲ್ಲಿದ್ದರು.
ಶೇಷಾದ್ರಿ ಗಂಜೂರು ಬರಹ
ಪಡುವಣದ ಗಾಳಿಯಲಿ ಅಧ್ಯಾತ್ಮದ ಗಂಧ ಹರಡಿದ ಅಲೆಮಾರಿ ಬೋಧಕ
ವಿವೇಕಾನಂದರು ನೀಡಿದ ಅನೇಕ ಉಪನ್ಯಾಸಗಳು 1896ರಲ್ಲಿ ಪ್ರಕಟವಾಗಿವೆ. ಪಶ್ಚಿಮದ ಅಧ್ಯಾತ್ಮ ಓದುಗರ ಕುತೂಹಲ ಆಸಕ್ತಿಗಳನ್ನು ಹೆಚ್ಚಿಸಿವೆ. ಹಿಂದೂ ನಂಬಿಕೆಗಳಲ್ಲಿ ಅಂತರ್ಗತವಾಗಿರುವ ದೇವರ ಕಲ್ಪನೆಯ ಪ್ರಚಾರಕನಾಗಿ ಬ್ರಿಟನ್ನಿಗೆ ಬಂದರು , ಎಲ್ಲ ಧರ್ಮಗಳ ಅರಿವಿನ ಪರಿಧಿಯನ್ನು ಹೆಚ್ಚಿಸಿ ಹೋದರು. ಭಾರತದಲ್ಲಿ ಜನಪ್ರಿಯವಾಗಿರುವ ವಿವಿಧ ನಂಬಿಕೆಗಳಿಂದ ನೇರ ಉದಾಹರಣೆಗಳನ್ನು ಆಧಾರವಾಗಿಸಿ ವಿವರಿಸುತ್ತಿದ್ದರು.ಎಲ್ಲ ನಂಬಿಕೆಗಳ ಒಳಹರಿವಾಗಿ , ಭಾರತೀಯ ಯೋಚನಾಕ್ರಮವನ್ನು ಆಧರಿಸಿದ ತತ್ವಶಾಸ್ತ್ರವನ್ನು ಬೋಧಿಸಿದರು. ವೇದ ಉಪನಿಷತ್ತು ಭಗವದ್ಗೀತೆಗಳನ್ನು ಉಲ್ಲೇಖಿಸಿದರು. ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ ಇಲ್ಲಿದೆ.
ನನ್ನ ತಂದೆ ಶರಣರಂತೆ, ಸಂತರಂತೆ
ಅವರು ಜೀವನದಲ್ಲಿ ಸಾಲವನ್ನೇ ಮಾಡಲಿಲ್ಲ. ದುಡಿಮೆಯೆ ಅವರ ಬ್ಯಾಂಕು. ವಾಪಸ್ ಮಾಡುವ ಶಕ್ತಿಇಲ್ಲವೆಂದ ಮೇಲೆ ಸಾಲ ಮಾಡಬಾರದು ಎಂಬುದು ಅವರ ನೀತಿಯಾಗಿತ್ತು. ಸಮಾಜ ಜಾತಿ ಉಪಜಾತಿಗಳ ಬಂಧನದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಅಸ್ಪೃಶ್ಯತೆ ಆಚರಿಸುತ್ತಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ‘ನೀವು ಹಾಗಿರಬೇಕು, ಹೀಗಿರಬೇಕು’ ಎಂದು ಯಾರಿಗೂ ಉಪದೇಶ ಮಾಡಲಿಲ್ಲ. ಆದರೆ ಸ್ವಂತಕ್ಕೆ ಜಾತಿ, ಧರ್ಮ ಮತ್ತು ಅಸ್ಪೃಶ್ಯತೆ ಮುಂತಾದವುಗಳನ್ನು ಮೀರಿ ಬದುಕಿದವರು. ನಾನು ಶನಿವಾರ ಜನಿಸಿದ್ದರಿಂದ ಪ್ರತಿ ಶನಿವಾರ ನನ್ನನ್ನು ಕರೆದುಕೊಂಡು ಶನಿದೇವರ ಗುಡಿಗೆ ಹೋಗುತ್ತಿದ್ದರು. ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿ
ಅಸ್ಪೃಶ್ಯ ಆಕಾಶದ ಚಲನೆ
ಚಲುವರಾಜನ ತಮ್ಮ ಚಂದ್ರ ಹಾಸ್ಟಲಲ್ಲೆ ಇದ್ದ. ಇನ್ನು ಚಿಕ್ಕವನು. ಬಾರೋ ಎಂದು ಕರೆದೊಯ್ದು ಎಲ್ಲ ಕ್ಲೀನ್ ಮಾಡಿಸಿದೆ. ಆ ಬ್ಯಾಗಲ್ಲಿದ್ದ ಅಕ್ಕಿ ಎಂತಾವು ನೋಡು ಎಂದೆ. ಯೋಗ್ಯ ಇದ್ದರೆ ಕೊಂಡೊಯ್ಯುವ ಎನಿಸಿತ್ತು. ಕಲ್ಲು ಮಿಶ್ರತ ಹುಳು ಹಿಡಿದ ಬೂಸ್ಲು ನುಚ್ಚಕ್ಕಿಯಾಗಿದ್ದವು. ಆ ನಾಯಿಗೆ ಇದನ್ನು ಬೇಯಿಸಿ ಹಾಕುತ್ತಿದ್ದರೆ ಈ ಪ್ರಾಧ್ಯಾಪಕರು.. ‘ನೀನೂ ಅದನ್ನೆ ಊಟ ಮಾಡಪ್ಪ’ ಎಂದಿದ್ದನಲ್ಲ ಮಹಾಶಯ! ಆ ನಾಯಿ ಮನೆ ಬಿಟ್ಟು ಹೋಗಿರುವುದರಲ್ಲಿ ನಮ್ಮ ಪಾಲು ಎಷ್ಟಿದೆಯೊ ಏನೊ!
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 32ನೇಯ ಕಂತು.
ಈ ಒಂಟೆಗೇಕೆ ಮರಿಯ ಮೇಲಿಷ್ಟು ಸಿಟ್ಟು..
ಚಿತ್ರದ ಕಥಾವಸ್ತು ಹುಬ್ಬೇರಿಸುವಂಥಾದ್ದು. ಒಂಟೆಯೊಂದು ಬಿಳಿ ಬಣ್ಣದ ಮರಿ ಹಾಕಲು ಎರಡು ದಿನ ತೆಗೆದುಕೊಂಡ ನಂತರ ಮರಿಗೆ ಪ್ರೀತಿ ನಿರಾಕರಿಸಿ ಹಾಲು ಕುಡಿಯಲು ಬಿಡುವುದಿಲ್ಲ. ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ ಕೊನೆಗೆ ತಾಯಿ ಒಂಟೆಗೆ ಅದರ ಮರಿಯ ಮೇಲೆ ಪ್ರೀತಿ ಹುಟ್ಟಿಸುವುದಕ್ಕೆ ಪಿಟೀಲು ವಾದನ ಕೇಳಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ಒಂದು ರೀತಿಯಲ್ಲಿ ಚಿತ್ರ ಸುಖಾಂತ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಮಂಗೋಲಿಯ ʻದ ಸ್ಟೋರಿ ಆಫ್ ವೀಪಿಂಗ್ ಕ್ಯಾಮೆಲ್ʼ ಸಿನಿಮಾದ ವಿಶ್ಲೇಷಣೆ
ಅರುವತ್ತು ವರ್ಷಗಳ ರಾಜಕೀಯ ಅರಿವು
ನನಗೆ ಬಾಲ್ಯದಲ್ಲೇ ರಾಜಕೀಯ ಪ್ರಜ್ಞೆ ಮೂಡತೊಡಗಿತು. ಆಗ ಎಲ್ಲ ರಾಜಕೀಯ ಪಕ್ಷದವರು ತಮ್ಮ ಚುನಾವಣಾ ಚಿಹ್ನೆಗಳುಳ್ಳ ಬಿಲ್ಲೆಗಳನ್ನು ಚುನಾವಣಾ ಭಾಷಣದ ಸಂದರ್ಭದಲ್ಲಿ ಹಂಚುತ್ತಿದ್ದರು. ಕಾಂಗ್ರೆಸ್ ಚಿಹ್ನೆ ನೊಗಹೊತ್ತ ಜೋಡೆತ್ತು ಇದ್ದರೆ, ಜನಸಂಘದ್ದು ಅಲ್ಲಾವುದ್ದೀನ ಚಿರಾಗದಂಥ ದೀಪದ ಚಿಹ್ನೆಯಾಗಿತ್ತು. ಸ್ವತಂತ್ರ ಪಕ್ಷದ್ದು ನಕ್ಷತ್ರ ಆಗಿತ್ತು. ಈ ಪ್ಲ್ಯಾಸ್ಟಿಕ್ ಅಥವಾ ತಗಡಿನ ಬಿಲ್ಲೆಗಳನ್ನು ಸಂಗ್ರಹಿಸುವುದಕ್ಕಾಗಿ ನಾವು ಹುಡುಗರು ಎಲ್ಲ ಪಕ್ಷಗಳ ಚುನಾವಣಾ ಸಭೆಗಳಿಗೆ ಹೋಗುತ್ತಿದ್ದೆವು. ಅವರ ಭಾಷಣಗಳನ್ನು ನಾನಂತೂ ತದೇಕಚಿತ್ತದಿಂದ ಕೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 40ನೆಯ ಕಂತು.