ಮೀನ ಮೋಹ

ಮೀನ ಧ್ಯಾನಕ್ಕೆ
ತಥಾಗತನೇ
ಮಾರುಹೋಗಿರಬೇಕು

ತಥಾಗತನ ನರನಾಡಿಗಳನ್ನೆಲ್ಲ
ಹೀರಬಲ್ಲ ಮೀನು
ಕಡಲಿನ ಸಂಕಟವನ್ನ ಕುಡಿಯಲೇಬೇಕು
ಕನಸಿದ ಅಂಗಾಲ ಸ್ಪರ್ಶಿಸಲೇಬೇಕು

ಮೀನಿನಂಥ ಬುದ್ಧ
ಬುದ್ಧನಂಥ ಮೀನು
ಎದುರುಗೊಳ್ಳಲು
ಇನ್ನಷ್ಟು ದಿನ ದೂಡಲೇಬೇಕು

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು