Advertisement

Month: April 2024

ಈ ಹೃದಯವೆಂಬ ಏಕಾಂಗಿ ಬೇಟೆಗಾರ

ಕೆಲ್ಲಿಯವರ ಮಗಳು ಹನ್ನೆರಡು ವರ್ಷದ ಮಿಕ್‌ಳೊಂದಿಗೆ ಸಿಂಗರ್‌ನ ಸ್ನೇಹ ಶುರುವಾಗುತ್ತದೆ. ಸಂಗೀತದಲ್ಲಿ ತೀವ್ರ ಆಸಕ್ತಿಯಿರುವ ಮಿಕ್‌ಳಿಗೆ ರೆಕಾರ್ಡ್ ಪ್ಲೇಟುಗಳನ್ನು ಉಡುಗೊರೆಯಾಗಿ ಕೊಡುತ್ತಾನೆ ಸಿಂಗರ್. ಆದರೆ ತನ್ನ ಸುತ್ತಲಿನ ಲೋಕದೊಂದಿಗೆ ಈತನ ಸಂವಹನವೇನಿದ್ದರೂ ಏಕ ಮುಖವಾದುದು. ಇವನ ಮನಸ್ಸು ಉಳಿದವರಿಗೆಲ್ಲ ಮುಚ್ಚಿದ ಬಾಗಿಲು. ಯಾರೇ ಮಾತನಾಡಬೇಕಿದ್ದರೂ, ಅವರ ತುಟಿಯ ಚಲನೆ ನೋಡಿದರೆ ಸಾಕು ಅವರು ಏನನ್ನು ಹೇಳುತ್ತಿದ್ದಾರೆ ಅನ್ನುವುದು ಸಿಂಗರ್‌ನಿಗೆ ತಿಳಿದು ಹೋಗುತ್ತದೆ.

Read More

ಕಾರ್ತಿಕ್ ಆರ್. ಬರೆದ ಈ ಭಾನುವಾರದ ಕತೆ

ಇಷ್ಟೆಲ್ಲ ನಡೆಯತ್ತಿದ್ದಾಗ, ಅವನೆಲ್ಲಿದ್ದ? ಎಂದೇನಾದರೂ ಕೇಳಿದರೆ ತಾರಾಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ತಮ್ಮಿಬ್ಬರ ನಡುವೆ ಏನಿತ್ತು? ಇದ್ದದ್ದು ಎಷ್ಟು ಗಾಢವಾಗಿತ್ತು? ಸಾಧ್ಯವಾಗಿದ್ದರೆ ಅವನ ಜೊತೆ ಓಡಿ ಹೋಗುತ್ತಿದ್ದೇನೇ ತಾನು? ಕೇಳಿಕೊಳ್ಳುತ್ತಾಳೆ ಕೆಲವೊಮ್ಮೆ! ಕೆಲಕಾಲ ಬಿಟ್ಟಿರಲಾರದಂತೆ ಬೆಸೆದುಕೊಂಡಿದ್ದ ತಾವಿಬ್ಬರೂ, ಅದೆಷ್ಟು ಬೇಗ ಒಂದೇ ಊರಿನಲ್ಲಿದ್ದೂ ದಶಕಗಟ್ಟಲೇ ಅಜ್ಞಾತರಾಗಿ ಬದುಕಿ ಬಿಡುವಷ್ಟು ಬದಲಾಗಿ ಹೋದೆವು? ಮಾತಿನಲ್ಲಿ ನೂರಾರು ಚಂದದ ಕನಸುಗಳನ್ನು ಹೆಣೆದುಕೊಡುತ್ತಿದ್ದ ಅವನು…”

Read More

ಯಾವುದನ್ನು ಬರೆದರೆ ಓದುಗರನ್ನು ತಲುಪಬಹುದೆಂಬ ಕುತೂಹಲ

ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು…”

Read More

ಕನ್ನಡವೆಂದರೆ ಕುಣಿದಾಡುವುದೆನ್ನೆದೆ..

ಚಿತ್ರ ಬಿಡಿಸುವ ಮಕ್ಕಳನ್ನು ಚಿತ್ರಕಲಾ ಶಾಲೆಗೆ ಸೇರಿಸಬೇಕು ಎನ್ನುವ ಜ್ಞಾನ ಈಗಲೂ ಬಹುತೇಕ ಪಾಲಕರಿಗೆ ಇಲ್ಲ. ಆದರೆ ಚಿತ್ರಕಲೆ ಗೊತ್ತಿದ್ದವರನ್ನು ಸೈನ್ಸ್ ವಿಭಾಗಕ್ಕೆ ಸೇರಿಸುವುದಕ್ಕೆ, ಇಮಾಮ್ ಸಾಬಿ ಮತ್ತು ರಾಮನವಮಿಯ ಸಂಬಂಧ ಎನ್ನಬಹುದು. ಅದೇ ರೀತಿಯಲ್ಲಿ ಇತ್ತೀಚಿನ ಕರ್ನಾಟಕದ ಬಹುತೇಕ ಪಾಲಕರು ಇಂಗ್ಲೀಷ್ ಭಾಷೆಯ ಕಲಿಕೆಯ ಮೇಲೆ ಮಕ್ಕಳ ಜ್ಞಾನವನ್ನು ಅಳಿಯುತ್ತಾರೆ. ಮಾತನಾಡುವಾಗ ಮಧ್ಯೆ ಮಧ್ಯೆ ಇಂಗ್ಲೀಷ್ ಉಪಯೋಗಿಸಿದರೆ ಬುದ್ಧಿವಂತರೆಂದು ಗುರುತಿಸಿಕೊಳ್ಳುತ್ತಾರೆ. ಹಾಗಾಗಿ ಬೆಂಗಳೂರಿಗರ ಕನ್ನಡದಲ್ಲಿ ಕನ್ನಡವನ್ನು ಭೂತಗನ್ನಡಿ ಹಾಕಿ ಹುಡುಕಬೇಕು ಎಂದು ಕೆಲವರು ಕುಹುಕವಾಡುತ್ತಾರೆ.
ಪ್ರಶಾಂತ್‌ ಬೀಚಿ ಬರೆಯುವ ಅಂಕಣ

Read More

ನವೋದಯದಿಂದ ನವ್ಯಕ್ಕೆ ಪೇಜಾವರ ಸದಾಶಿವ ರಾವ್

ಕನ್ನಡದ ಆಧುನಿಕ ಕವಿಗಳನ್ನೆಲ್ಲ ಓದಿ, ಬರೆದುಕೊಂಡು, ತಾವು ಸ್ವತಃ ಕವನಗಳನ್ನು ಬರೆದು ತಮ್ಮನ್ನು ಸ್ವತಃ ತಿದ್ದಿಕೊಂಡು, ಗೋಕಾಕರಂಥ ವಿಮರ್ಶಕರ ಅಭಿಪ್ರಾಯವನ್ನು ಕೇಳಿ ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ಅವರ ಸಾಹಿತ್ಯ ರಚನೆಯ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹೇಳಿ ತಾನೂ ಬೆಳೆದ ಪೇಜಾವರ ಸದಾಶಿವರಾಯರು ತಮ್ಮೊಂದಿಗೆ ಇತರರನ್ನೂ ಬೆಳೆಸಿದ ಸಾಹಿತಿ. ಚಿತ್ರಕಲೆ ಟೆನಿಸ್ ಆಟ, ಸಿತಾರ್ ನುಡಿಸುವುದು, ಫೋಟೋಗ್ರಫಿ, ಅಂಚೆಚೀಟಿ ಸಂಗ್ರಹ, ಚಾರಣ, ಮೌಂಟೆನಿಯರಿಂಗ್  ಮುಂತಾದ ಆಸಕ್ತಿಗಳನ್ನು ಹೊಂದಿದ್ದ ಜೀವನ್ಮುಖಿ ಅವರಾಗಿದ್ದರು. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ