Advertisement

Month: March 2024

ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ

ಬೆಣ್ಣೆಯಲ್ಲಿ ಕೂದಲು ತೆಗೆದಂತೆ, ವಿನಯವೇ ಮೂರ್ತಿವೆತ್ತಂತೆ ಗಿಳಿ ಮಾತಾಡುವ ಜಿನೇಶನಲ್ಲಿ ಇಂಥ ರಾಕ್ಷಸನಿರುವ ಸಾಧ್ಯತೆ, ಈ ಆರದ ಗಾಯದ ಸಾಕ್ಷಿ ಇರದಿದ್ದರೆ ನಂಬಲು ಸಾಧ್ಯವಾಗುತ್ತಿರಲಿಲ್ಲ. ಅವಳ ಬಾಳು ಕನಸಲ್ಲಿ ನಡೆದಂತೆ ಸುಸೂತ್ರವಾಗಿ ಸೌಖ್ಯದಿಂದಿದೆ ಎಂದು ಭಾವಿಸಿದ್ದರೆ ಅದೆಷ್ಟು ನೋವುಗಳನ್ನು ಒಡಲಲ್ಲಿಟ್ಟು ಬೇಯುತ್ತಿದ್ದಾಳೆ ಎನಿಸಿ ಸುಮಾಳ ಹೊಟ್ಟೆಗೆ ಬೆಂಕಿ ಬಿದ್ದು, ಕಣ್ಣಲ್ಲಿ ನೀರು ತುಂಬಿತು.
ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ “ಹಾಡು ಗುಬ್ಬಿ ಪಾಡು!”

Read More

ಸೇನಾಪಡೆ ನಿವೃತ್ತಿ ಜೀವನದ ಕಥೆಗಳು

ಸೇನೆಯು ಸೈನಿಕರ ದಿನನಿತ್ಯ ಜೀವನದ ಆಗುಹೋಗುಗಳ ಮೇಲೆ ಹದ್ದಿನಂತೆ ಕಣ್ಣಿಟ್ಟಿರುತ್ತದೆ, ಅವರು ಎಲ್ಲೇ ಹೋಗಲಿ ಬರಲಿ, ಯಾರನ್ನೇ ಭೇಟಿಯಾಗಲಿ, ಎಲ್ಲವೂ ದಾಖಲಾಗುತ್ತದೆ. ರಜೆ ಪಡೆದು ಮನೆಗೆ ಹೋದರು ಕೂಡ ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಮತ್ತೊಬ್ಬರು ಖಾತ್ರಿ ಪಡಿಸಿಕೊಳ್ಳುತ್ತಾರೆ. ಸದಾಕಾಲ ಕಾಲಿನ ಬೆರಳುಗಳ ಮೇಲೆ ನಿಂತಿರುವುದು ಮಾನಸಿಕ ಕ್ಷೋಭೆಗೆ ದಾರಿ ಮಾಡಿಕೊಡುತ್ತದೆ. ಖಾಸಗಿತನವೇ ಇಲ್ಲದೆ ಜೀವನ ಮಾಡುವ ಅವರ ಮಾನಸಿಕ ಸ್ಥಿತಿ ಹೇಗಿರುತ್ತದೆ…

Read More

ಮಾಯವಾದ ಬೆಟ್ಟದಹೂವಿನ ಪರಿಮಳ

ಪವರ್ ಸ್ಟಾರ್ ಎಂಬ ಬಿರುದಿದ್ದರೂ ವಿನಯ ಮತ್ತು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿಸಿದ್ದ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಹೋಗಿದ್ದಾರೆ.  ತಮ್ಮ ಹಾರ್ದಿಕ ನಗುವಿನಿಂದಲೇ ಎಲ್ಲರ ಮನಗೆಲ್ಲುತ್ತಿದ್ದ ಅವರು ಮಕ್ಕಳ ಪಾಲಿಗೆ ಪ್ರೀತಿಯ ಅಪ್ಪು.  ಹಾಗೆ ನೋಡಿದರೆ ಮಕ್ಕಳಿಗೆ ಮಾದರಿಯಾಗಿದ್ದ ಹೀರೋ ಅವರಾಗಿದ್ದರು. ರಿಯಾಲಿಟಿ ಶೋಗಳಲ್ಲಿ ಅವರು ಆಗೀಗ ಹೇಳುತ್ತಿದ್ದ ಮಾತುಗಳ ಹಿಂದೆ ಒಳ್ಳೆಯತನ, ಪ್ರಾಮಾಣಿಕತೆ….

Read More

ಮಕ್ಕಳನ್ನು ಓದಿಸಿದ ಮಾವಿನಮರಗಳು

ಅಡ್ವಾನ್ಸ್ ಕೊಟ್ಟೋದ ಸಾಬರು ಕೆಲವೊಮ್ಮೆ ರೇಟ್ ಬಿದ್ದೋಗಿದೆ ಎಂದು ಮರದಿಂದ ಹಣ್ಣು ಉದುರಿ ಹೋಗುತ್ತಿದ್ದರೂ ಬರುತ್ತಿರಲಿಲ್ಲ. ಅಪ್ಪ ಇನ್ನೂರೊ ಮುನ್ನೂರೊ ಅಡ್ವಾನ್ಸ್‌ಗೆ ಕಟಿಬಿದ್ದು ಉದುರುವ ಹಣ್ಣುಗಳನ್ನು ನೋಡಿಕೊಂಡು ಇನ್ನೊಬ್ಬರಿಗೂ ಕೊಡದೆ ಲಾಸ್ ಮಾಡಿಕೊಂಡದ್ದೂ ಇದೆ. ಸಾಬರು ಮರಗಳಿಗೆ ಕೊಟ್ಟೋದ ಅಡ್ವಾನ್ಸ್‌ ಹಣದಲ್ಲಿ ಅಪ್ಪ ಪ್ರತಿ ವರ್ಷ ನಮಗೆ ಬರೆಯುವ ನೋಟ್ ಬುಕ್ಕು ಕೊಡಿಸುತ್ತಿತ್ತು, ಪೂರ್ತಿ ಹಣ ಕೊಟ್ಟ ಮೇಲೆ ಅಕ್ಕಂದಿರಿಗೆ ಮತ್ತು ನಮಗೆ ಯೂನಿಫಾರ್ಮ್‌ ಕೊಡಿಸುತ್ತಿತ್ತು.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ