Advertisement

Month: April 2024

ಕಾವ್ಯಮಾಲೆಯ ಕಾಣದ ಹೂಗಳು

ಕನ್ನಡ  ಕಾವ್ಯ ಲೋಕದಲ್ಲಿ ಪ್ರಸಿದ್ಧರ ಕವನಗಳು, ಪ್ರಸಿದ್ಧವಾದ ಕವನಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ ಎಷ್ಟೋ ಅತ್ಯುತ್ತಮವಾದ ಕವನಗಳು ಕಂಡೂ ಕಾಣದಂತೆ ಮರೆಯಾಗಿವೆ.  ಗದ್ಯಪ್ರಕಾರದಲ್ಲಿ ಹೆಚ್ಚು ಬರಹಗಳನ್ನು ಬರೆದವರೂ ಒಳ್ಳೆಯ ಪದ್ಯಗಳನ್ನು ಬರೆದುದುಂಟು. ಅಂತಹ ಅಪರೂಪದ ಕವನಗಳನ್ನು ಹುಡುಕಿ ನಿಮ್ಮ ಮುಂದೆ ಇರಿಸುವ ಪ್ರಯತ್ನವನ್ನು ಕೆಂಡಸಂಪಿಗೆ ಮಾಡಲಿದೆ. ಈ ಸರಣಿಯಲ್ಲಿ ಮೊದಲ ಕವನವಾಗಿ ಸೋಮಶೇಖರ ಇಮ್ರಾಪೂರ ಅವರು ಬರೆದ ‘ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ’ ಎಂಬ ಕವನ ನಿಮ್ಮ ಓದಿಗಾಗಿ ಇಲ್ಲಿದೆ. ಪ್ರತೀ ಗುರುವಾರ ಹೀಗೊಂದು ಕವನದ ಪುಟವಿಲ್ಲಿ ಅರಳಿಕೊಳ್ಳಲಿದೆ.

Read More

‘ಏನು ಜನ, ಎಂಥ ಗಾನ’ ಪುಸ್ತಕದ ಕುರಿತು ಶ್ರೀಮತಿ ದೇವಿ ಬರಹ

ಸಂಗೀತದಲ್ಲಿ ವ್ಯಕ್ತಿಗಳ ಬಗ್ಗೆ ಬರೆಯುವ ಪ್ರಸಂಗ ಬಂದಾಗೆಲ್ಲಾ ಅದು ಆತನ ಸಂಗೀತ-ಸಾಧನೆಯನ್ನು ಹೊಗಳುವುದಕ್ಕಷ್ಟೇ ಸೀಮಿತವಾಗುವ ಅಪಾಯ ಎದುರಾಗುತ್ತದೆ. ಆದರೆ ‘ಏನು ಜನ, ಎಂಥ ಗಾನ’ ಪುಸ್ತಕವೂ ಸಂಗೀತ ಮತ್ತು ಸಂಗೀತಗಾರರ ಕುರಿತೇ ಆಗಿದ್ದರೂ ಈ ಅಪಾಯಕ್ಕೆ ಎಲ್ಲಿಯೂ ಈಡಾಗಿಲ್ಲ. ಇಲ್ಲಿ ಹೇಳಲ್ಪಡುವ ಘಟನೆಗಳೇ ಅಲ್ಲಿನ ‘ವಸ್ತು ಮತ್ತು ವ್ಯಕ್ತಿ’ಯ ಹಿರಿತನವನ್ನು, ಸರಳತೆಯನ್ನು, ಸಂಗೀತ ಅವರನ್ನು ಆವರಿಸಿಕೊಂಡ ಪರಿಯನ್ನು, ಅವರ ಜೀವನ ಪ್ರೀತಿಯನ್ನು ಮನಸ್ಸಿನಾಳಕ್ಕೆ ಇಳಿಸಿ ಬಿಡುತ್ತವೆ.
ಅರವಿಂದ ಗಜೇಂದ್ರಗಡಕರ್ ಅವರ ಮರಾಠಿ ಕೃತಿಯನ್ನು ದಮಯಂತಿ ನರೇಗಲ್ಲ “ಏನು ಜನ ಎಂಥಾ ಗಾನ” ಶೀರ್ಷಿಕೆಯಡಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು ಅದರ ಕುರಿತು ಶ್ರೀಮತಿ ದೇವಿ ಬರೆದಿದ್ದಾರೆ

Read More

ಮಂಡಲಗಿರಿ ಪ್ರಸನ್ನ ಬರೆದ ಗಜಲ್

“ಇರುಳ ನಿದಿರೆಯನು ದೂರವಿರಿಸಿ ನಕ್ಷತ್ರವೆಣಿಸುತ ಕುಳಿತೆ
ಸವಿಗನಸ ನೆಮ್ಮದಿಗೂ ಕನ್ನವಿರಿಸಿದ ನಿನಗೆ ಕೃತಜ್ಞತೆಗಳು

ಮಾಸಿದ ಮುಖದಲೂ ಚೆಲುವು ಮೂಡಿಸುವ ಹುಂಬತನ
ನನ್ನೊಳಗಿನ ಕಾರಂಜಿ ನಗೆನುಂಗಿದ ನಿನಗೆ ಕೃತಜ್ಞತೆಗಳು”- ಮಂಡಲಗಿರಿ ಪ್ರಸನ್ನ ಬರೆದ ಗಜಲ್

Read More

ಕಾಳಪ್ಪಬ್ಲಾಕಿನಲ್ಲಿ ಟೆಸ್ಟ್ ಕ್ರಿಕೆಟಿಗರು!

ಈ ಕ್ರಿಕೆಟ್ ಹುಚ್ಚು ಬರೆ ಹುಡುಗರಿಗಲ್ಲ, ಹುಡುಗಿಯರಿಗೂ ಇದ್ದಿತು. ನಮ್ಮ ಮನೆಯಲ್ಲೂ ರಾಮೇಶ್ವರಿ, ಎದಿರು ಮನೆಯ ಸ್ವರ್ಣ, ವಿಜಯ, ಪುಷ್ಪರಿಗೂ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ ಇದ್ದು ಅವರೂ ಕ್ರಿಕೆಟ್ ನೋಡಲು ಹೋಗುತ್ತಿದ್ದರು. 1953 ಜನವರಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರಿಕೆಟ್‌ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯಿತು. ಅದರ ಹೆಸರು ರೋಹಿಂಗಟನ್ ಬೇರಿಯಾ ಟ್ರೋಫಿ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ