Advertisement
ಆಶಾ ಜಗದೀಶ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."

ದೂರ ದೂರ ಹೋದರೆ…

ನಾಯಕಿ ನೇಯ್ಗೆ ಮಾಡಿದ ಕೆಂಪು ವಸ್ತ್ರವನ್ನು ಶಾಲಾ ಕಟ್ಟಡದಲ್ಲಿ ಕಟ್ಟಲಾಗುತ್ತದೆ. ಈ ಎಲ್ಲ ಘಟನೆಗಳು ಜರುಗಿದರೂ ಒಮ್ಮೆಯೂ ನಾಯಕ-ನಾಯಕಿಯರ ಮುಖಾಮುಖಿಯಾಗಿರುವುದಿಲ್ಲ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದರಿಂದ ಉಂಟಾಗುವ ಕಲರವವನ್ನು ಮನೆಯಲ್ಲಿರುವ ನಾಯಕಿ ತನ್ನಜ್ಜಿಯ ಜೊತೆಗೆ ಕೇಳಿಸಿಕೊಳ್ಳುತ್ತ ತನ್ನಷ್ಟಕ್ಕೆ ಸಂಭ್ರಮಿಸುತ್ತಾಳೆ. ಶಿಕ್ಷಕ ನಾಯಕನಿಗೆ ಪ್ರತಿದಿನ ಮಕ್ಕಳ ಜೊತೆ ಊರಾಚೆ ಓಡಾಡುವುದು ವಾಡಿಕೆ. ಅವನು ಹೀಗೆ ಮಾಡುವುದನ್ನು ನಿರೀಕ್ಷೆಯಿಂದ ಕಾಯುವ ಆತಂಕ, ಲಜ್ಜೆ ಸಂತೋಷ ಇವುಗಳನ್ನು ಒಳಗೊಂಡ ನಾಯಕಿಗೆ ನಾಯಕನ ಪ್ರಥಮ ಭೇಟಿಯಾಗುತ್ತದೆ.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ಸರಣಿ

Read More

ಕರುಳಬಳ್ಳಿಯೋ… ಕೊರಳ ಉರುಳೋ…

ಅಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಂಡು ಟೊಮೇಟೊ ಕೆಂಪು ರಸವನ್ನು ಒಬ್ಬರಿಗೊಬ್ಬರು ಮೆತ್ತುತ್ತಿರುತ್ತಾರೆ. ಮುಂದುವರಿದ ಹಾಗೆ ಚಿತ್ರ ಬದಲಾಗಿ ಅವರ ತಲೆಯ ಮೇಲೆ ಅಂಗಾತ ಮಲಗಿದ ಟಿಲ್ಡಾಳನ್ನು ದಾಟಿಸುತ್ತಿರುತ್ತಾರೆ. ಅವಳ ಮೈ ಮೇಲೆ ಟೊಮ್ಯಾಟೋ ರಸ ಹರಿಯುತ್ತಿರುತ್ತದೆ. ಕೆಂಪು ಬಣ್ಣ ಸೂಸುವ ಅಹಿತಕರವಾದ ಭಾವನೆಗಳಿಗೆ ಮತ್ತು ಚಿತ್ರದ ಅಂತರಾಳಕ್ಕೂ ಸಂಬಂಧವಿರುವುದು ವಿಶೇಷ. ಅಲ್ಲದೆ ಟೊಮ್ಯಾಟೊ ರಸದಲ್ಲಿ ಮುಳುಗಿರುವ ಟಿಲ್ಡಾಳ ಮುಖದಲ್ಲಿ ನಗುವಿರುವುದು ಆಶ್ಚರ್ಯವೇ. ಅಲ್ಲದೆ ಇದು ಸಾಕಷ್ಟು ಗೊಂದಲಗಳನ್ನೂ ಹುಟ್ಟಿಸುತ್ತದೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇಂಗ್ಲೆಂಡ್‌ನ ʻವಿ ನೀಡ್‌ ಟು ಟಾಕ್‌ ಅಬೌಟ್‌ ಕೆವಿನ್‌ʼ ಸಿನಿಮಾದ ವಿಶ್ಲೇಷಣೆ

Read More

ನಿಂಬೆಗಿಡಕ್ಕೇನು ಮನಸ್ಸಿದೆಯೇ?

ಆ ಭವ್ಯ ಮನೆಗೆ ಇಸ್ರೇಲಿನ ರಕ್ಷಣಾ ಮಂತ್ರಿಯ ಜೊತೆಗೆ ಅವನ ಹೆಂಡತಿ ಮೀರಾ ನವಾನ್‌  ಮತ್ತು ಅವನ ಅಧಿಕಾರಿ ವರ್ಗದಲ್ಲಿ, ರಕ್ಷಣಾ ಮಂತ್ರಿಯಲ್ಲಿ ಅನುರಾಗದಲೆಗಳನ್ನು ಹುಟ್ಟಿಸುವ ಸುಂದರಿಯೊಬ್ಬಳು ಇರುತ್ತಾಳೆ. ಜೊತೆಗೆ ಹತ್ತಾರು ಜನ ಸಹಾಯಕ ವರ್ಗದವರು. ನೋಡನೋಡುತ್ತಿದ್ದಂತೆ ತಾನು ಅತ್ತಿತ್ತ ಓಡಾಡಿ ಇಟ್ಟಿದ್ದ ಹೆಜ್ಜೆಗಳ ಮೇಲೆ ಬೇರೆ ಬೇರೆ ಹೆಜ್ಜೆಗಳು ಕಾಣುತ್ತವೆ. ಜೊತೆಗೆ ಅಷ್ಟುದ್ದಕ್ಕೂ ಬೇಲಿ ಹಬ್ಬಲು ಪ್ರಾರಂಭವಾಗುತ್ತದೆ. ಇಸ್ರೇಲಿನ ಸೀಕ್ರೆಟ್‌ ಪೊಲೀಸ್‌ನವರು ರಕ್ಷಣಾ ಮಂತ್ರಿಯ ಹಿತ ದೃಷ್ಟಿಯಿಂದ ಮತ್ತು ಉಗ್ರರ ಆಕ್ರಮಣದ ಸಂಭಾವ್ಯದ ಕಾರಣ ಇಡೀ ನಿಂಬೆ ಗಿಡದ ತೋಟವನ್ನು ಕಡಿಯಬೇಕೆಂದು ಯೋಚಿಸುತ್ತಾರೆ.

Read More

ಚೆಗೆವಾರನನ್ನು ನೆನಪಿಸುವ ʻಮೋಟಾರ್ ಸೈಕಲ್ ಡೈರೀಸ್ʼ

1952ರಲ್ಲಿ ಅದೊಂದು ದಿನ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಒಂದಾದ ಅರ್ಜಂಟೀನಾದಲ್ಲಿ ಮೆಡಿಕಲ್ ಓದುತ್ತಿದ್ದ ಸ್ನೇಹಿತರಾದ ಅರ್ನೆಸ್ಟೋ ಚೆಗೆವಾರ ಮತ್ತು ಆಲ್ಬರ್ಟೋ ಗ್ರೆನಾಡೋಗೆ ಒಂದು ಅಪೂರ್ವವಾದ ಉಮೇದು ಉಂಟಾಗುತ್ತದೆ. ಅದು ಎಂಥವರನ್ನೂ ಬೆಚ್ಚಿಬೀಳಿಸುವಂಥಾದ್ದು. ಸುಮಾರು ಎಂಟು ಸಾವಿರ ಮೈಲಿ ವಿಸ್ತಾರದ ಇಡೀ ದಕ್ಷಿಣ ಅಮೆರಿಕವನ್ನು 1939ನೇ ಮಾಡೆಲ್ಲಿನ ಮೋಟಾರ್ ಬೈಕಿನಲ್ಲಿ ಸುತ್ತಾಡಿಕೊಂಡು ಬರಬೇಕು, ಎಂದು. ಹಾಗೆಂದೇ ಪ್ರಯಾಣ ಹೊರಟ ಗೆಳೆಯರಿಬ್ಬರ ಸ್ವಭಾವ, ನಡವಳಿಕೆ ಒಂದಕ್ಕೊಂದು ತಾಳಮೇಳವಿಲ್ಲದ್ದು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಬ್ರೆಜಿ಼ಲ್‌ನ ʻಮೋಟಾರ್ ಸೈಕಲ್ ಡೈರೀಸ್ʼ ಸಿನಿಮಾದ ವಿಶ್ಲೇಷಣೆ

Read More

ರಾಜಕೀಯ ಸ್ಥಿತಿಗೊಂದು ಪ್ರತಿಕ್ರಿಯೆ ಇರಾನ್‌ ನ ʻಕಾಂದಹಾರ್ʼ

ಮೊಹಿಸಿನ್ ಮಕ್ಬಲ್‌ಬಫ್ ಆಫ್ಘಾನಿಸ್ತಾನದ ಬಗ್ಗೆ ತಯಾರಿಸಿದ ಇತರ ಚಿತ್ರಗಳಿಗಿಂತ ಆಫ್ಘಾನಿಸ್ತಾನದಲ್ಲಿಯೇ ಚಿತ್ರೀಕರಣಗೊಂಡು ವಿಶೇಷ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ʻಕಾಂದಹಾರ್ʼ. ನರಕದಲ್ಲಿರುವವರ ಬಗ್ಗೆ ಅಲ್ಲಿಯೇ ಹೋಗಿ ಚಿತ್ರೀಕರಣ ಮಾಡುತ್ತೇನೆ ಎನ್ನುವ ಎದೆಗಾರಿಕೆ ಮಕ್ಬಲ್‌ಬಫ್‌ನದು. ತಾನು ಅಲ್ಲಿರುವಷ್ಟು ಕಾಲ ಪ್ರತಿದಿನವೂ ಒಂದು ಪರೀಕ್ಷೆಯಾಗಿತ್ತು, ಜೀವವನ್ನು ಎಡಗೈಯಲ್ಲಿ ಹಿಡಿದಿರಬೇಕಾಗಿತ್ತು. ಅಲ್ಲಿನ ಜನರ ಅನುಮಾನ, ಆತಂಕಗಳನ್ನು ತೀರ ಪ್ರಯಾಸದಿಂದ ನಿವಾರಿಸಬೇಕಾಗಿತ್ತು. ಚಿತ್ರದಲ್ಲಿ ನಟಿಸಲು ಅಲ್ಲಿನವರನ್ನೇ ಅವಲಂಬಿಸಬೇಕಾದ ಪ್ರಸಂಗವಿತ್ತು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇರಾನ್‌ ನ ʻಕಾಂದಹಾರ್ʼ ಸಿನಿಮಾದ ವಿಶ್ಲೇಷಣೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ