Advertisement
ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

ಕರೆಂಟು ಬಂದರೆ ಆರೋಗ್ಯ ಹಾಳಾಗುತ್ತಾ?

‘ಜಬ್ ವಿ ಮೆಟ್’ ಸಿನೆಮಾ ನೋಡಿದಾಗಲಿಂದ ಕೂಡ ಆ ಕರೀನ ಕಪೂರ್‌ಳ ಸ್ಟೈಲ್‌ನಲ್ಲೇ ಶಾಹಿದ್‌ನಂತಹ ಬೆಣ್ಣೆ ಹುಡುಗನೊಬ್ಬನ ಜೊತೆ ಒಂದು ರಾತ್ರಿ ಹಳ್ಳಿಯೊಂದರಲ್ಲಿ ಎಗ್ಸ್ಯಾಕ್ಟ್ಲೀ ಹಾಗೇ ಕಳೆಯಬೇಕೆನ್ನುವ ಬಯಕೆ ಉಂಟಾಗಿದ್ದದ್ದು ಸುಳ್ಳಲ್ಲ. ಅದೇ ಆಸೆಯಲ್ಲಿ ಹೊಕ್ಕೆ ರತ್ನಾಲ್ ಎನ್ನುವ ಹಳ್ಳಿಯೊಂದನ್ನು. ಕಚ್ ಎನ್ನುವ ಬಿಳಿ ಮರಳುಗಾಡಿನ ಪುಟ್ಟದಾದ ಚೊಕ್ಕವಾದ ಹಳ್ಳಿಯದು. ಆ ಬೆಳದಿಂಗಳಲ್ಲಿ ಸಿನೆಮಾದಲ್ಲಿ ಆಗೋ ಹಾಗೆ ಬೆಂಕಿಗೆ ಬೆಣ್ಣೆ ಕರಗಲೇ ಇಲ್ಲ ಕಾರಣ ನನ್ನ ವಾಚಾಳಿತನ!

Read More

ಮಹಿಳಾ ಯುದ್ಧಸ್ಮಾರಕಗಳ ಹುಡುಕುತ್ತಾ ಕಂಡ ಸತ್ಯಗಳು

ಯುದ್ಧಗಳೇಕೆ ನಡೆಯುತ್ತವೆ ಎಂದು ಯೋಚಿಸುತ್ತಾ, ಸ್ಕಾಟ್‍ ಲ್ಯಾಂಡ್‍ನಲ್ಲಿ  ಯಾಂತ್ರಿಕವಾಗಿ ಆ ವಸ್ತು ಸಂಗ್ರಹಾಲಯವನ್ನು ನೋಡುತ್ತಿದ್ದಾಗ ‘ಹಾಲ್ ಆಫ್ ಆನರ್’ ಎನ್ನುವ ಇಪ್ಪತ್ತು ಅಡಿ ಉದ್ದ ಅಗಲವಿದ್ದ ಕೋಣೆಯಲ್ಲಿ ಕೆಂಪು ಬಣ್ನದ ಲೆದರ್ ಬೈಂಡಿಂಗ್ ಹೊಂದಿದ್ದ ವಿಪರೀತ ದಪ್ಪವಾದ ಒಂದು ಪುಸ್ತಕ ಕಂಡಿತು. ಅದರ ಹಿಂದೆಯೇ ಅದಕ್ಕೇ ಆತುಕೊಂಡಿದ್ದಂತೆ ನಿಂತಿದ್ದ ಗಾಜಿನ ಗೋಡೆ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದರೆ ಅದರಲ್ಲಿದ್ದ ಅಕ್ಷರಗಳನ್ನು ಓದಿ ಒಂದು ಕ್ಷಣ ದಂಗುಬಿಡಿದೆ.

Read More

ಶಿವನೆನ್ನಿ…. ಶಂಕರನೆನ್ನಿ.. ಎಲ್ಲವೂ ಅವನೇ!

ಶಿವ ಪಾರ್ವತಿಯರು ಸಪ್ತಪದಿ ತುಳಿದುದರ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅದೇ ಅಗ್ನಿಯನ್ನು ಅಂದಿನಿಂದ ಈ ಘಳಿಗೆಯವರೆಗೂ ಆರದಂತೆ ಕಾಯುತ್ತಿರುವ ಭಕ್ತರ ನಂಬಿಕೆ ಮತ್ತು ಕೈಂಕರ್ಯಗಳು ಹಾಗು ಅಲ್ಲಿ ಆವರಿಸಿಕೊಂಡಿದ್ದ ಮುಡಿವಾಳದ ಘಮ. ಅಲ್ಲಿಂದ ಮುಖ ಮಾಡಿದ್ದೆ ಕೇದಾರನಾಥನ ತಪ್ಪಲಿಗೆ. ಕಪರ್ದಿಯ ದರ್ಶನಕ್ಕೆ ಮೊದಲು ಭಕ್ತರನ್ನು ಮೀಯಿಸಿ ಶುಚಿಗೊಳಿಸುವ ಬಿಸಿನೀರಿನ ಬುಗ್ಗೆಯ ಗೌರಿಕುಂಡ ಈ ತಪ್ಪಲಿಗೆ ಆತುಕೊಂಡಿದೆ. ರಸ್ತೆ ಯಾನ ಕೊನೆಯಾಗುವುದು ಇಲ್ಲೇ.

Read More

ಒಬರಮೆರ್ಗಾವ್ ನಗರದಲ್ಲಿ ‘ಸಾತ್ವಿಕತೆ’ಯ ವ್ಯಾಖ್ಯಾನ

ಮೇರಿ ಮಾತೆಯ ಪಾತ್ರದಲ್ಲಿ ನಟಿಸಲು ಆಯ್ಕೆಯಾಗ ಬೇಕಾದರೆ ಆಕೆ ಕನ್ಯೆಯಾಗಿರಬೇಕು. ಗಂಡುಗಳ ಸ್ನೇಹ ಬೆಳೆಸದೆ, ಹೆಚ್ಚಿನ ಗೆಳತಿಯರೊಡನೆ ಸೇರದೆ, ನಾಟಕ ಸಿನೆಮಾಗಳನ್ನು ನೋಡದೆ, ಉಪ್ಪು ರಹಿತ ಊಟ ಮಾಡುತ್ತಾ, ಸದಾ ಕಾಲವೂ ಆಧ್ಯಾತ್ಮಿಕವಾಗಿ ಜೀವನ ನಡೆಸುತ್ತಾ, ಬೈಬಲ್ ಓದುತ್ತಾ, ರಸ್ತೆಗಳಲ್ಲಿ ನಡೆಯುವಾಗ ತಲೆಯೆತ್ತದೆ ಸಾತ್ವಿಕವಾಗಿ 10 ವರ್ಷಗಳನ್ನು ಕಳೆದರೆ ಆಕೆ ಆಯ್ಕೆ ಪ್ರಕ್ರಿಯೆಯ ಸರದಿಗೆ ಬರಲು ಅರ್ಹಳಾಗುತ್ತಾಳೆ.

Read More

ಶ್ರೀಕೃಷ್ಣ ದೇವರು ತಂದ ಪಾರಿಜಾತದ ಗಿಡವಿದು

ಲಕ್ನೋಗೆ ಹೊರಟು ನಿಂತಾಗ ಒಂದು ವಿಷಯವನ್ನು ಗೂಗಲ್ ಹೇಳಿತು: ಕೃಷ್ಣ ಸ್ವರ್ಗದಿಂದ ಸತ್ಯಭಾಮೆಗೆಂದೇ ಭೂಮಿಗೆ ತಂದ ಪಾರಿಜಾತದ ಗಿಡ ಈಗಲೂ ಇದೆ ಎಂದು ಸೂಚಿಸಿತು.  ಲಕ್ನೋದಿಂದ ಕೇವಲ 40 ಕಿಲೋಮೀಟರ‍್ಗಳ ದೂರದಲ್ಲಿ ದೊಡ್ಡ ಬಲುದೊಡ್ಡ ಮರವಾಗಿ ಎಂದು ಗೊತ್ತಾಯಿತು.  ಸರಿ ಮತ್ತೆ, ಇಬ್ಬರು ಹೆಂಡಿರ ಜಗಳದಲ್ಲಿ ಭೂಲೋಕಕ್ಕೆ ಇಳಿದು ಬಂದ ವಿಷಯ ಎಂದರೆ ಕುತುಹಲ ಇರದಿರಲು ಸಾಧ್ಯವೇ ? ಆ ಪುರಾತನ ಮರವನ್ನು ನೋಡಿದರೆ ಅದರ ಪಕ್ಕ ಸತ್ಯಭಾಮೆಯ ಮಂದಿರಕ್ಕೆ ಬದಲಾಗಿ ರುಕ್ಮಿಣಿದೇವಿ ಮಂದಿರವಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ