Advertisement
ರಾಮಪ್ರಸಾದ್ ಬಿ.ವಿ.

ರಾಮಪ್ರಸಾದ್ ಬಿ.ವಿ. ಯವರು ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಶ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕೆಲವು ಕತೆಗಳನ್ನು ಹಾಗೂ ಲೇಖನಗಳನ್ನು ಪ್ರಕಟಿಸಿದ್ದಾರೆ.

ಪ್ರೀತಿಯ ಅರ್ಥವಾದರೂ ಏನು ಹೇಳು?: ಆಶಾ ಜಗದೀಶ್ ಅಂಕಣ

ಏನೆಲ್ಲಾ ನಮ್ಮ ಆಕಾಂಕ್ಷೆಗಳನ್ನು ನಮ್ಮ ಮಕ್ಕಳ ತಲೆ ಮೇಲೆ ಹೇರಿ ಬೆಳೆಸುತ್ತಾ ಹೋಗುತ್ತೇವೆ. ಆದರೆ ಮುಖ್ಯವಾಗಿ ಏನನ್ನು ಕಲಿಸಬೇಕಿತ್ತೋ ಅದನ್ನೇ ಕಲಿಸದೆ ಹೋಗುತ್ತೇವೆ. ನಾವು ಕಲಿಸಲೇ ಬೇಕಾದದ್ದು ಎನ್ನುವ ಎಷ್ಟೋ ಇದೆ. ನಮ್ಮನ್ನು ಜೋಪಾನ ಮಾಡುವ ಅದಷ್ಟೋ ಗುಣಗಳಿವೆ. ಒಬ್ಬರನ್ನು ನಿಷ್ಕಲ್ಮಷವಾಗಿ ಇಷ್ಟಪಡುವುದನ್ನು, ಪ್ರೀತಿಸುವುದನ್ನು ಕಲಿಸುವುದೇ ಇಲ್ಲ ಯಾಕೆ… ಹುಟ್ಟಂದಿನಿಂದ ಬಂದ ಮುಗ್ಧತೆಯನ್ನ ಕೊಂದು ಅಲ್ಲಿ ಸ್ವಾರ್ಥ ಮತ್ತು ಲೋಭವನ್ನ ಮಾತ್ರ ತುಂಬಿ ನೀರೆರೆದು ಬೆಳೆಸುತ್ತಾ ಹೋಗುತ್ತೇವೆ ಯಾಕೆ…
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಎಷ್ಟು ಬೆರಗು ಈ ಪ್ರಕೃತಿಯಲಿ…: ಆಶಾ ಜಗದೀಶ್ ಅಂಕಣ

ನಾವೆಲ್ಲಾ ನೀರಿನಲ್ಲಿ ನುಣುಪಾದ ಕಲುಗಳನ್ನು ಎಸೆಯುತ್ತಾ ಆಡುತ್ತೇವೆ. ಚಪ್ಪಟೆಯಾದ ನುಣುಪುಗಲ್ಲುಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ, ಅದಕ್ಕೇನೋ ಶಕ್ತಿ ಬಂತೆಂದು ಭಾವಿಸಿ, ‘ನಾವು ಆದಷ್ಟು ಬೇಗ ತಲೆ ಮೇಲೊಂದು ಸೂರು ಮಾಡಿಕೊಳ್ಳುವಂತಾಗಲಿ ಶಕ್ತಿಯೇ’ ಎಂದು ಬೇಡಿ, “ಮತ್ತೊಮ್ಮೆ ಬರುವವರೆಗೂ ಹೀಗೆ ಇರಲಿ” ಎಂದು ಕೇಳಿಕೊಂಡು ಪ್ರಾರ್ಥನೆಯನ್ನು ಕೊನೆಗೊಳ್ಳಿಸಿಕೊಳ್ಳುತ್ತೇವೆ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಒಂದು ಸುಳ್ಳು ಒಂದು ಸತ್ಯ: ಆಶಾ ಜಗದೀಶ್ ಅಂಕಣ

ಬಹುಶಃ ಕತೆಗಳ ಅವಶ್ಯಕತೆಯಿಲ್ಲ ಆ ವನಸಿರಿಗೆ. ಜೀವಂತ ಕತೆ ಹೊತ್ತು ಓಡಾಡುವ ಅದೆಷ್ಟು ಜನ ಇಲ್ಲೊಮ್ಮೆ ಬಂದು ತಮ್ಮ ಜೋಡಿ ಹೆಜ್ಜೆಗಳ ಗುರುತು ಮಾಡಿ ಹೋಗಿದ್ದರೋ… ಕತೆಗಳು ನಮಗೆ ಬೇಕು. ನಮ್ಮೊಳಗಿನ ಕತೆಗಿಂತ ಭಿನ್ನವಾದ ಕತೆಯ ಕುರಿತಾದ ಹುಚ್ಚು ಕೂತೂಹಲವನ್ನ ತಣಿಸಿಕೊಳ್ಳಲಿಕ್ಕಾಗಿ… ಸುಳ್ಳೇ ಆದರೂ ನಂಬಲು ಸಿದ್ಧರಿರುತ್ತೇವಲ್ಲ ಹೇಗಿದ್ದರೂ… ಕತೆ ಕಟ್ಟುವುದರಲ್ಲಿ ನಿಸ್ಸೀಮರು ನಾವು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣ

Read More

ಅವನ ಸಂಗೀತದ ಸರಪಳಿಯಲ್ಲಿ…: ಆಶಾ ಜಗದೀಶ್ ಅಂಕಣ

ಒಂದು ತಾನ್ ನಿಂದ ಮತ್ತೊಂದಕ್ಕೆ ಸಂಚರಿಸುವಾಗ ಒಂದು ಸೆಕೆಂಡ್ ಮಾತ್ರದಲ್ಲಿ ನಿನ್ನ ಧ್ವನಿ ಹೊರಳುತ್ತದಲ್ಲ ಆ ನಾದ ಅದೆಷ್ಟು ಚಂದ… ಅದಕ್ಕೆ ಮುಲಾಮಿನ ಗುಣವಿದೆ. ಕ್ಷಣ ಮಾತ್ರದಲ್ಲಿ ಭಾರವಾದ ಎದೆಯನ್ನು ಹಾರಿ ನಲಿಯುವಂತೆ ಮಾಡಿಬಿಡಬಲ್ಲ ಶಕ್ತಿಯಿದೆ ಅಂತಲೇ ನನಗೆ ಬಲವಾಗಿ ಅನಿಸುತ್ತದೆ. ಆ ಕ್ಷಣ ನಾನು ಯಾರು ಎನ್ನುವುದು ನನಗೆ ಮರೆತು ಹೋಗುತ್ತದೆ. ಯಾವ ವಿಳಾಸ, ನಾಮಧೇಯವಿರದ ಶಕ್ತಿಯ ಸಣ್ಣದೊಂದು ಚೂರಿನಂತೆ ಹೊಳೆಯುತ್ತಿದ್ದೇನೆ ಎಂದು ಭಾಸವಾಗುತ್ತದೆ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಯಾವುದು ಪ್ರೀತಿ?! ಯಾಕಾದರೂ ಈ ಪ್ರೀತಿ…: ಆಶಾ ಜಗದೀಶ್ ಅಂಕಣ

ಕಲ್ಲೆಸೆಯುವ ಕೈಗಳಿಗೆ ಆತ್ಮಸಾಕ್ಷಿ ಏಕೆ ಕಾಡುವುದಿಲ್ಲ?! ಕೊಂದು ಬದುಕುವುದು ಮನುಷ್ಯತ್ವವೇ ಅಲ್ಲ ಎಂದ ಮೇಲೆ ನೋಯಿಸಿ ನಗುವ ಮನಃಸ್ಥಿತಿ ಹುಟ್ಟಿದ್ದು ಎಲ್ಲಿಂದ… ಎಲ್ಲ ಪಾಠಗಳನ್ನೂ ನಮ್ಮ ಬದುಕಿನಿಂದಲೇ ಕಲಿಯುವ ಅಗತ್ಯವಿಲ್ಲ. ನಮ್ಮವರ ಬದುಕಿನಿಂದಲೂ ಕಲಿಯಬಹುದು…ಇಲ್ಲಿ ಮಲ್ಲಿಗೆ ಬಳ್ಳಿಯಂತೆ ತಬ್ಬಿ ಹಬ್ಬಿ ಬೆಳೆಯುವ ಹೊತ್ತಿನಲ್ಲೇ ಗುಲಾಬಿಯಂತೆ ಮುಳ್ಳುಗಳ ನಡುವೆಯೇ ಜಾಗ್ರತೆಯಾಗಿ ಅರಳುವುದನ್ನೂ ಕಲಿಯಬೇಕು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ