Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಸಾಕ್ಷರತೆಯ ರೂಪವಾಗಿ ಅಕ್ಷರ: ಚಂದ್ರಮತಿ ಸೋಂದಾ ಸರಣಿ

ಶಾಲೆಯ ಪಠ್ಯದ ಭಾಗವಾಗಿ ಪತ್ರಲೇಖನ ಇರುತ್ತಿತ್ತು. ಮಕ್ಕಳ ಪತ್ರಕ್ಕಾಗಿ ಹೆತ್ತವರು, ಹೆತ್ತವರ ಪತ್ರಕ್ಕಾಗಿ ಮಕ್ಕಳು ಕಾಯುತ್ತಿದ್ದರು. ಹಬ್ಬ ಅಥವಾ ವಿಶೇಷ ಸಂದರ್ಭಗಳ್ಲಿ ಶುಭಾಶಯ ಅಥವಾ ಹಾರೈಕೆಯ ಪತ್ರಗಳಿಗೆ ಹೆಚ್ಚಿನ ಮಾನ್ಯತೆ ಇತ್ತು. ಕಳಿಸುವವರು ಮತ್ತು ಪಡೆಯುವವರ ನಡುವೆ ಇದೊಂದು ಸ್ನೇಹಸೇತುವಾಗಿತ್ತು. ಈಗಿನಂತೆ ದೂರವಾಣಿಯ ಸಂಪರ್ಕ ಇಲ್ಲದಿದ್ದುದರಿಂದ ಪತ್ರವೇ ಸರ್ವಸ್ವವಾಗಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಆಧುನಿಕ ಮನೋಧರ್ಮದ ಭರತನ ಚರಿತ್ರೆ: ಚಂದ್ರಮತಿ ಸೋಂದಾ ಬರಹ

ಪಿತೃಪ್ರಧಾನ ವ್ಯವಸ್ಥೆಯ ದೌರ್ಬಲ್ಯಗಳನ್ನು ಸೂಕ್ಷ್ಮವಾಗಿ ಎತ್ತಿ ತೋರಿಸುತ್ತಲೇ ಅದಕ್ಕೆ ವಿಭಿನ್ನವಾದ ಇನ್ನೊಂದು ಮುಖವೂ ಸಾಧ್ಯವಿದೆ ಎನ್ನುವ ಪಿಸುನುಡಿಯೊಂದಿಗೆ ಹೊರಡುವ ಕೃತಿ ನಿಧಾನವಾಗಿ ಅದರ ಸಾಧ್ಯತೆಯನ್ನು ಅನಾವರಣಗೊಳಿಸುತ್ತ, ಸರಿಯಾದ ದಾರಿ ಹೀಗಿರಬೇಕು ಎನ್ನುವಂತೆ ಮುಂದುವರಿಯುತ್ತದೆ. ರಾಜಸತ್ತೆಯಲ್ಲಿ ಹಿರಿಮಗನಿಗೆ ಪಟ್ಟಗಟ್ಟಿದ ಮೇಲೆ ಉಳಿದ ಅಣ್ಣತಮ್ಮಂದಿರು, ಪರಿವಾರದವರು ರಾಜನನ್ನು ಅವಲಂಬಿಸಿಯೇ ಇರಬೇಕೆನ್ನುವ ತಥಾಗತ ನಂಬಿಕೆಯಲ್ಲಿ ಉಳಿದವರ ಮನಃಸ್ಥಿತಿ ಏನಿದ್ದೀತು? ಹೇಗಿದ್ದೀತು?
ಡಾ. ಆರ್ ಸುನಂದಮ್ಮ ಬರೆದ “ಭರತಕಲ್ಪ” ಕೃತಿಯ ಕುರಿತು ಡಾ. ಚಂದ್ರಮತಿ ಸೋಂದಾ ಬರಹ ನಿಮ್ಮ ಓದಿಗೆ

Read More

ಸೀರೆ ಎನ್ನುವ ಬೆರಗು: ಚಂದ್ರಮತಿ ಸೋಂದಾ ಸರಣಿ

ಜಗಳಕ್ಕೂ ಸೀರೆಗೂ ಏನು ಸಂಬಂಧ? ಸೀರೆಯ ಪ್ರಸ್ತಾಪ ಯಾಕಾಗಿ ಆಗುತ್ತದೆ? ಅವರಿಬ್ಬರ ಜಗಳಕ್ಕೆ ಮಾತ್ರ ಸೀರೆಯ ಪ್ರಸ್ತಾಪ ಸೀಮಿತವಲ್ಲ. ಕೆಲವೊಮ್ಮೆ ರಾಜಕಾರಣಿಗಳೂ ಹೀಗೆ ʻನಾನೇನು ಸೀರೆಯುಟ್ಟಿಲ್ಲʼ ಎಂದು ಹೇಳುವುದಿದೆ. ಹಾಗಾದರೆ ಸೀರೆ ಉಡುವುದು ಅವಮಾನವೇ? ಸೀರೆಗೂ ಪೌರುಷಕ್ಕೂ ಪರಸ್ಪರ ವಿರೋಧವೇ?
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೈದನೆಯ ಕಂತಿನಲ್ಲಿ ಸೀರೆಯ ಕುರಿತ ಬರಹ ನಿಮ್ಮ ಓದಿಗೆ

Read More

ಊರೆಂಬ ಹರಿಗೋಲು: ಚಂದ್ರಮತಿ ಸೋಂದಾ ಸರಣಿ

ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂದು ನಮಗೆಲ್ಲ ಸಂಭ್ರಮವೋ ಸಂಭ್ರಮ. ಹಿಂದಿನ ದಿನವೇ ನಮ್ಮ ಮೇಷ್ಟ್ರು ಯಾರ‍್ಯಾರಿಗೆ ಏನೇನು ಕೆಲಸ ಎಂದು ತಿಳಿಸುತ್ತಿದ್ದರು. ಸ್ವಲ್ಪ ದೊಡ್ಡ ಮಕ್ಕಳು ಹಿಂದಿನ ಸಂಜೆಯೇ ತಮ್ಮನೆಯ ಹಿತ್ತಲಿನಲ್ಲಿರುವ ಮಾವಿನ ಗಿಡದಿಂದ ಮಾವಿನ ಸೊಪ್ಪನ್ನು ತಂದು ಅದನ್ನು ದಾರದಲ್ಲಿ ಪೋಣಿಸಿ ಶಾಲೆಯ ಬಾಗಿಲಿಗೆ ಕಟ್ಟುತ್ತಿದ್ದರು. ಹೆಚ್ಚಾಗಿ ಇದು ಗಂಡುಮಕ್ಕಳ ಕೆಲಸವಾಗಿತ್ತು. ಆಗ ನಮಗೆ ಸಮವಸ್ತ್ರದ ಕಟ್ಟುಪಾಡಿರಲಿಲ್ಲ. ಹಾಗಾಗಿ ನಮ್ಮ ಬಳಿ ಇರುವ ಒಳ್ಳೆಯ ಬಟ್ಟೆಯನ್ನು ಧರಿಸಿ, ಎಂಟುಗಂಟೆಗೆ ನಾವು ಶಾಲೆಯಲ್ಲಿರುತ್ತಿದ್ದೆವು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಮಲಗು ಮಲಗೆನ್ನ ಮಗುವೆ…: ಚಂದ್ರಮತಿ ಸೋಂದಾ ಸರಣಿ

ನನಗೆ ಈಗಲೂ ನೆನಪಿದೆ, ನನ್ನ ತಮ್ಮಂದಿರನ್ನು, ಅಕ್ಕನ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವಂತೆ ಅಮ್ಮ ಹೇಳುತ್ತಿದ್ದಳು. ಸುಮ್ಮನೆ ತೂಗಿದರೆ ಮಕ್ಕಳು ಅಳುತ್ತಿದ್ದವು. ಲಾಲಿಪದ ಹೇಳಿದರೆ ಸಾಕು ಕೆಲವೇ ಹೊತ್ತಿನಲ್ಲಿ ಅವು ಮಲಗುತ್ತಿದ್ದವು. ಆಗೆಲ್ಲ ನಾವು ದೊಡ್ಡವರು ಹೇಳುತ್ತಿದ್ದ ಜೋಗುಳ, ಲಾಲಿಪದಗಳನ್ನು ಕೇಳಿ ಕಲಿಯುತ್ತಿದ್ದೆವು. ʻಅಳದಿರು ತಮ್ಮಯ್ಯ ಅಳಿರ ಕಣ್ಣಿಗೆ ನಿದ್ದೆ ಬೆಳಗಾದರೆ ಬಕ್ಕು ನಿನ ಮಾವ ತಮ್ಮಯ್ನ ಮಡಿಲಿಗೆ ತಕ್ಕು ಕಡಲೆಯʼ ಅಂತಲೋ ನಮ್ಮದೇ ಆದ ರಾಗದಲ್ಲಿ ಹಾಡುವುದಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿಮೂರನೆಯ ಕಂತಿನಲ್ಲಿ ಲಾಲಿಹಾಡುಗಳ ಕುರಿತ ಬರಹ ನಿಮ್ಮ ಓದಿಗೆ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ