Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ನೆಗಟೀವ್ ಮತ್ತು ಪಾಸಿಟೀವ್ : ಕುರಸೋವ ಆತ್ಮಕತೆಯ ಪುಟ

“ನನ್ನ ಕುರಿತಾದ ಈ ಆವಿಷ್ಕಾರದಿಂದ ನನಗೇನು ಅಚ್ಚರಿಯಾಗಲಿಲ್ಲ. ಸ್ವಂತ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಹರೆಯದ ಯುವಕನಾಗಿದ್ದಾಗ ಈ ಅಸಾಮಾರ್ಥ್ಯ ನನ್ನೊಳಗೊಂದು ಅಸಹನೆ, ಅತೃಪ್ತಿಯನ್ನು ಹುಟ್ಟುಹಾಕಿತ್ತು. ನನ್ನದೇ ರೀತಿಯಲ್ಲಿ ಎಲ್ಲವನ್ನೂ ನೋಡಬೇಕು ಎನ್ನುವ ಹಠ ನನ್ನಲ್ಲಿ ಅಸಹನೆಯನ್ನು ಬೆಳೆಸಿತ್ತು. ಪ್ರತಿಯೊಂದು ಚಿತ್ರಪ್ರದರ್ಶನಕ್ಕೆ ಹೋದಾಗಲೂ ಜಪಾನಿನ ಪ್ರತಿ ಚಿತ್ರಕಲಾವಿದನು ತನ್ನದೇ ಆದ ಶೈಲಿ ಹಾಗೂ ಸ್ವಂತ ದೃಷ್ಟಿಕೋನವನ್ನು ಹೊಂದಿದ್ದಾನೆ ಅನ್ನಿಸುತ್ತಿತ್ತು.”

Read More

ಹೇಳಲು ಕಷ್ಟ ಎನಿಸುವ ಕತೆ: ಕುರಸೋವ ಆತ್ಮಕತೆಯ ಮತ್ತೊಂದು ಪುಟ

“ನಾವಿಬ್ಬರೂ ಆಡಿದ ಕಡೆಯ ಮಾತುಗಳು ನೆನಪಿದ್ದರೂ ಯಾವುದನ್ನು ಮೊದಲು ಮಾತಾಡಿದೆವು ಯಾವುದನ್ನು ಆಮೇಲೆ ಅನ್ನುವುದು ನೆನಪಿಲ್ಲ. ಶಿನ್ ಒಕುಬೊ ನಿಲ್ದಾಣದ ಹತ್ತಿರ ಪರಸ್ಪರ ವಿದಾಯ ಹೇಳಿದೆವು. ಟ್ಯಾಕ್ಸಿಯಲ್ಲಿ ಆ ನಿಲ್ದಾಣಕ್ಕೆ ಬಂದೆವು. ನನ್ನಣ್ಣ ಟ್ಯಾಕ್ಸಿ ಇಳಿದು ರೈಲು ನಿಲ್ದಾಣದ ಮೆಟ್ಟಿಲುಗಳನ್ನು ಹತ್ತುತ್ತಾ ಮನೆಯವರೆಗೂ ಟ್ಯಾಕ್ಸಿಯಲ್ಲೇ ಹೋಗು ಅಂತ ಹೇಳಿದ. ಕಾರು ಚಲಿಸುತ್ತಿದ್ದಂತೆ ಮತ್ತೆ ಮೆಟ್ಟಿಲಿಳಿದು ಬಂದು ಚಾಲಕನಿಗೆ ಕಾರು ನಿಲ್ಲಿಸುವಂತೆ ಕೈಯಾಡಿಸಿದ. ಟ್ಯಾಕ್ಸಿಯಿಂದಿಳಿದು ಅವನ ಹತ್ತಿರ ಹೋಗಿ “ಏನು?” ಅಂದೆ.”

Read More

ಮಿಲಿಟರಿ ಸರ್ವೀಸ್ ಗೆ ಸೇರುವ ಹಾದಿಯಲ್ಲಿ: ಕುರಸೋವಾನ ಆತ್ಮಕತೆಯ ಪುಟ

“ಬಹುಶಃ ಸುಮಾರು ಹೊತ್ತಿನಿಂದ ಒಂದೇ ಕಡೆ ಕೂತಿದ್ದರಿಂದ ಕೈಕಾಲು ಜೋಮು ಹಿಡಿದಂತೆನಿಸಿ ಆ ಅಧಿಕಾರಿಗೂ ಸ್ವಲ್ಪ ವಿರಾಮ ಬೇಕೆನ್ನಿಸಿರಬಹುದು. ನನ್ನ ದೈಹಿಕ ಪರೀಕ್ಷೆಯ ಕಡೆಯ ಹಂತದಲ್ಲಿ ವಾರೆಂಟ್ ಆಫೀಸರ್ ಮುಂದೆ ನಿಂತೆ. ಆತನ ಮುಂದಿದ್ದ ಮೇಜಿನಲ್ಲಿ ಪೇರಿಸಿಟ್ಟ ಅರ್ಜಿಗಳಿದ್ದವು. ಆತ ನನ್ನನ್ನು ತೀಕ್ಷ್ಣವಾಗಿ ನೋಡಿ “ನಿನ್ನಿಂದ ಮಿಲಿಟರಿ ಸೇವೆಗೆ ಏನೂ ಆಗಬೇಕಾದ್ದಿಲ್ಲ” ಎಂದರು. ಅದು ನಿಜ ಕೂಡ ಆಗಿತ್ತು. “

Read More

ಚಕ್ರವ್ಯೂಹ: ಕುರಸೋವ ಆತ್ಮಕತೆಯ ಕಂತು

“ಸಾಹಿತ್ಯ ಮತ್ತು ಸಿನೆಮಾ ಕುರಿತ ಒಳನೋಟಗಳನ್ನು ನನಗೆ ಒದಗಿಸಿದ್ದು ನನ್ನ ದೊಡ್ಡಣ್ಣ. ಅವನು ಹೇಳುತ್ತಿದ್ದ ಪ್ರತಿ ಸಿನಿಮಾವನ್ನು ತಪ್ಪದೇ ನೋಡುತ್ತಿದ್ದೆ. ಅವನು ಚೆನ್ನಾಗಿದೆ ಎಂದು ಹೇಳಿದ ಸಿನಿಮಾ ಎಷ್ಟೇ ದೂರವಿರಲಿ ಹೋಗಿ ನೋಡುತ್ತಿದ್ದೆ. ಅಸೂಕಾವರೆಗೂ ನಡೆದು ಸಿನಿಮಾ ನೋಡಿಬರುತ್ತಿದ್ದೆ. ಅಲ್ಲಿ ಏನು ನೋಡಿದೆ ಎನ್ನುವುದು ನೆನಪಿಲ್ಲ. ಆದರೆ ಅದೊಂದು ಒಪೆರ ಥಿಯೇಟರ್ ಅನ್ನುವುದು ನೆನಪಿದೆ. ತಡರಾತ್ರಿಯ ಶೋಗಳಿಗೆ ಸಿಗುತ್ತಿದ್ದ ರಿಯಾಯ್ತಿ ಟಿಕೇಟು ಕೊಳ್ಳಲು ಉದ್ದ ಸಾಲುಗಳಲ್ಲಿ ನಿಲ್ಲುತ್ತಿದ್ದದ್ದು ನೆನಪಿದೆ.”

Read More

ನನ್ನ ಮೆಚ್ಚಿನ ಓಹರಾ ಯೋಯಿಚಿ ಗುರುಗಳು: ಕುರಸೋವ ಆತ್ಮಕತೆಯ ಕಂತು

“ನಮ್ಮ ಕಾಲದಲ್ಲಿ ವ್ಯಕ್ತಿಯ ಸ್ವತಂತ್ರ ಚೇತನಕ್ಕೆ ಹಾಗೂ ವೈಯುಕ್ತಿಕ ವಿಶಿಷ್ಟತೆಗಳಿಗೆ ಮನ್ನಣೆ ನೀಡುವ ಶಿಕ್ಷಕರಿದ್ದರು. ಇವತ್ತಿನ ಶಿಕ್ಷಕರಿಗೆ ಅವರನ್ನು ಹೋಲಿಸಿದಾಗ ಇಂದು ಬಹಳ ಮಂದಿ ಕೇವಲ “ಸಂಬಳ”ಕ್ಕಾಗಿ ಶಿಕ್ಷಕರಾದವರಿದ್ದಾರೆ. ಈ ರೀತಿಯ ಬ್ಯೂರೊಕ್ರೆಸಿಯ ಸ್ವಭಾವದವರು ಶಿಕ್ಷಕರಾಗಿ ಮಾಡುವ ಪಾಠ ನಿಜಕ್ಕೂ ಏನನ್ನೂ ಕಲಿಸುವುದಿಲ್ಲ. ಆ ಪಾಠಗಳಲ್ಲಿ ಸತ್ವವಿರುವುದಿಲ್ಲ. ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕಾಮಿಕ್ ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ